AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

KUDA Golamal: ಕಲಬುರಗಿ ನಗರಾಭಿವೃದ್ಧಿ ಅಧಿಕಾರಿಯಿಂದಲೇ ಉದ್ಯಾನವನ ಜಾಗ ಅತಿಕ್ರಮಣ, ಅಕ್ರಮವಾಗಿ ಮನೆ ನಿರ್ಮಾಣ!?

Kalburgi Urban Development Authority Golamal: ನಂದಿಕೂರ್ ಗ್ರಾ.ಪಂ, ಕೂಡಾ ಮತ್ತು ಕಲಬುರಗಿ ಪಾಲಿಕೆ ಅಧಿಕಾರಿಗಳು ಮಾಡಿರುವ ಯಡವಟ್ಟಿನಿಂದ ಬಡಾವಣೆ ನಿವಾಸಿಗಳು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ಒಟ್ನಲ್ಲಿ ಕಲಬುರಗಿ ಮಹಾನಗರದಲ್ಲಿ ಗಾರ್ಡನ್ ಜಾಗ ದಿನೆ ದಿನೆ ಅಕ್ರಮಕ್ಕೆ ಬಲಿಯಾಗುತ್ತಿದೆ. ಇನ್ನಾದ್ರು ಸಂಬಂಧಿಸಿದ ಅಧಿಕಾರಿಗಳು ಕ್ರಮಕ್ಕೆ ಮುಂದಾಗ್ತಾರಾ ನೋಡಬೇಕು.

KUDA Golamal: ಕಲಬುರಗಿ ನಗರಾಭಿವೃದ್ಧಿ ಅಧಿಕಾರಿಯಿಂದಲೇ ಉದ್ಯಾನವನ ಜಾಗ ಅತಿಕ್ರಮಣ, ಅಕ್ರಮವಾಗಿ ಮನೆ ನಿರ್ಮಾಣ!?
ಕಲಬುರಗಿ ನಗರಾಭಿವೃದ್ಧಿ ಅಧಿಕಾರಿಯಿಂದಲೇ ಉದ್ಯಾನವನ ಜಾಗ ಅತಿಕ್ರಮಣ
ದತ್ತಾತ್ರೇಯ ಪಾಟೀಲ, ಕಲಬುರಗಿ
| Edited By: |

Updated on:Feb 20, 2024 | 7:17 PM

Share

ಆ ಜಿಲ್ಲೆಯಲ್ಲಿ ಉದ್ಯಾನವನಕ್ಕೆ ಮೀಸಲಿಟ್ಟಿರೋ ಜಾಗವನ್ನ ಕೂಡಾ ಭೂಗಳ್ಳರು ಬಿಡ್ತಿಲ್ಲ. ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ (Kalburgi Urban Development Authority) ಲೇಔಟ್ ನಲ್ಲಿನ ಗಾರ್ಡನ್ ಜಾಗದಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ವಿಪರ್ಯಾಸವೆಂದ್ರೆ ಜಿಡಿಎ ಅಧಿಕಾರಿಯೇ ಗಾರ್ಡನ್ ಜಾಗ ಕಬಳಿಸಿರೋ ಗಂಭೀರ ಆರೋಪ ಕೇಳಿ ಬಂದಿದೆ. ಹೌದು. ಉದ್ಯಾನವನಕ್ಕೆ ಮೀಸಲಿಟ್ಟಿರುವ ಸ್ಥಳವದು, ಗಾರ್ಡನ್ ಜಾಗದಲ್ಲೇ ಅಕ್ರಮವಾಗಿ ತಲೆ ಎತ್ತಿರೋ ಮನೆಗಳು ಹೀಗೆ… ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಉದ್ಯಾನವನ ಜಾಗಕ್ಕೆ ನಿರಂತರವಾಗಿ ಕನ್ನ ಬೀಳ್ತಿದೆ. ಕಲಬುರಗಿ ನಗರದ ವರ್ಧಾ ಲೇಔಟ್ ನಲ್ಲಿ ಮೀಸಲಿಟ್ಟಿರುವ ಉದ್ಯಾನವನ ಜಾಗ ಕಬಳಿಸಲಾಗಿದೆ. ಗಾರ್ಡನ್ ಜಾಗದಲ್ಲೇ ಅಕ್ರಮವಾಗಿ ಮನೆಗಳನ್ನ ನಿರ್ಮಿಸಲಾಗಿದೆ. ಉದ್ಯಾನವನ ಜಾಗದಲ್ಲಿ ನಾಲ್ಕು ಮನೆಗಳನ್ನ ಅಕ್ರಮವಾಗಿ ನಿರ್ಮಿಸಿ ಜನ ವಾಸ ಮಾಡ್ತಿದ್ದಾರೆ!

ಅಂದಹಾಗೆ 1990 ರಲ್ಲಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ (ಕೂಡಾ) ದಿಂದ ಲೇಔಟ್ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಅದರಂತೆಯೇ ಕೂಡಾ ಲೇಔಟ್ ನಕಾಶೆ ಸಿದ್ದಪಡಿಸಿ, ಉದ್ಯಾನವನಕ್ಕೆ ಸ್ಥಳ ಮೀಸಲಿಟ್ಟಿತ್ತು. ಆದ್ರೆ ಗಾರ್ಡನ್ ಸ್ಥಳದಲ್ಲಿಯೇ ನಾಲ್ಕು ಮನೆಗಳು ತಲೆ ಎತ್ತಿವೆ. ವಿಪರ್ಯಾಸವೆಂದ್ರೆ ಕೂಡಾ ಪ್ರಾಧಿಕಾರದ ಎಇಇ ದೀಲಿಪ್ ಜಾಧವ್ ಮೇಲೆ ಗಾರ್ಡನ್ ಜಾಗ ಕಬಳಿಸಿರೋ ಆರೋಪ ಕೇಳಿ ಬಂದಿದೆ. ಆದ್ರೆ ಎಇಇ ಜಾಧವ್ ಮಾತ್ರ ನನಗೂ ಗಾರ್ಡನ್ ಜಾಗದಲ್ಲಿರುವ ಮನೆಗೂ ಸಂಬಂಧವೇ ಇಲ್ಲ, ಆ ಮನೆಯಲ್ಲಿ ನಾನು ಬಾಡಿಗೆಗೆ ಇದ್ದೇನೆ. ದುರುದ್ದೇಶದಿಂದ ನನ್ನ ಮೇಲೆ ಸುಳ್ಳು ದೂರು ನೀಡಲಾಗಿದೆ ಅಂತಾ ಆರೋಪ ತಳ್ಳಿ ಹಾಕಿದ್ದಾರೆ.

ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ಕಂದಾಯ ಇಲಾಖೆಯ ನೌಕರರ ಗೃಹ ನಿರ್ಮಾಣ ಸಂಘದಿಂದ ಲೇಔಟ್ ನಿರ್ಮಾಣ ಮಾಡಲಾಗಿದೆ. ನಂದಿಕೂರ್ ಗ್ರಾಮ ಪಂಚಾಯತಿ ಯಿಂದ ಲೇಔಟ್ ನಿರ್ಮಾಣ ಮಾಡಿ ಸೈಟ್ ಗಳನ್ನ ಮಾರಾಟ ಮಾಡಲಾಗಿದೆ. ಬಳಿಕ ೧೯೯೦ ರಲ್ಲಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ (ಕೂಡಾ) ಲೇಔಟ್ ಗಾಗಿ ಅರ್ಜಿ ಸಲ್ಲಿಸಲಾಗಿದೆ.

ಕೂಡಾ ಪ್ರಕಾರ ಲೇಔಟ್ ನಕಾಶೆ ನಿರ್ಮಾಣ ಮಾಡಲಾಗಿದೆ. ಕೂಡಾ ದಿಂದ ಲೇಔಟ್ ಅಪ್ರೂವಲ್ ಸಿಗೋದಕ್ಕೂ ಮುನ್ನವೇ ಮತ್ತೊಮ್ಮೆ ನಂದಿಕೂರ್ ಗ್ರಾಮ ಪಂಚಾಯತಿ ಯಿಂದ ಮತ್ತೊಮ್ಮೆ ಲೇಔಟ್ ನಕಾಶೆ ಸೃಷ್ಟಿಸಲಾಗಿದೆ. ಸಧ್ಯ ಗಾರ್ಡನ್ ಗೆ ಮೀಸಲಿಟ್ಟಿರುವ ಜಾಗದಲ್ಲಿ ಅಕ್ರಮವಾಗಿ ನಾಲ್ಕು ಮನೆಗಳು ತಲೆ ಎತ್ತಿವೆ. ಈ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನ ಕೇಳಿದ್ರೆ, ಕೂಡಾದಲ್ಲಿ ಸಾಕಷ್ಟು ಅಕ್ರಮಗಳು ನಡೆದಿವೆ. ಅದನ್ನ ಸರಿಮಾಡುವ ಕೆಲಸ ಮಾಡೋದಾಗಿ ಹೇಳಿದ್ದಾರೆ.

Published On - 7:10 pm, Tue, 20 February 24

Follow Us
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ