AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದಲ್ಲಿ 1500 ಬಸ್ ಖರೀದಿ, ಖಾಲಿ ಹುದ್ದೆ ಭರ್ತಿಗೆ ನಿರ್ಧಾರ -ಸಾರಿಗೆ ಸಚಿವ ಶ್ರೀರಾಮುಲು ಘೋಷಣೆ

B Sriramulu: ಸಾರಿಗೆ ಇಲಾಖೆಯಲ್ಲಿ 635 ಹುದ್ದೆಗಳ ಪೈಕಿ 165 ಜನ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗುತ್ತಿದೆ ಎಂದು ಸಾರಿಗೆ ಮತ್ತು ಪರಿಶಿಷ್ಡ ಪಂಗಡ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

ರಾಜ್ಯದಲ್ಲಿ 1500 ಬಸ್ ಖರೀದಿ, ಖಾಲಿ ಹುದ್ದೆ ಭರ್ತಿಗೆ ನಿರ್ಧಾರ -ಸಾರಿಗೆ ಸಚಿವ ಶ್ರೀರಾಮುಲು ಘೋಷಣೆ
ರಾಜ್ಯದಲ್ಲಿ 1500ಕ್ಕೂ ಹೆಚ್ಚು ಬಸ್ ಖರೀದಿ, ಖಾಲಿ ಹುದ್ದೆ ಭರ್ತಿಗೆ ನಿರ್ಧಾರ -ಸಾರಿಗೆ ಸಚಿವ ಶ್ರೀರಾಮುಲು
TV9 Web
| Updated By: ಸಾಧು ಶ್ರೀನಾಥ್​|

Updated on: Jul 19, 2022 | 6:16 PM

Share

ಕಲಬುರಗಿ: ರಾಜ್ಯದಲ್ಲಿನ ಸಾರಿಗೆ ವ್ಯವಸ್ಥೆಯನ್ನು ಮತ್ತಷು ಉತ್ತಮಪಡಿಸಲು ಬಿ.ಎಸ್-6 ಮಾದರಿಯ 665 ಮತ್ತು 900 ಎಲೆಕ್ಟ್ರಿಕ್ ಬಸ್ ಸೇರಿ 1500ಕ್ಕೂ ಹೆಚ್ಚು ಬಸ್‍ಗಳನ್ನು ಖರೀದಿ ಮಾಡಲಾಗುತ್ತಿದೆ ಎಂದು ಸಾರಿಗೆ ಮತ್ತು ಪರಿಶಿಷ್ಡ ಪಂಗಡ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ. ಕಲಬುರಗಿ ನಗರದಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಚಿವ ಶ್ರೀರಾಮುಲು (transport minister b sriramulu), ರಾಜ್ಯದಲ್ಲಿ ಓಡಾಟ ನಡೆಸೋ ಅನೇಕ ಬಸ್ ಗಳು ಹಳೆಯದಾಗಿವೆ. ಹೀಗಾಗಿ ಹೊಸದಾಗಿ ಬಸ್ ಖರೀದಿಗೆ ನಿರ್ಧರಿಸಿದೆ ಎಂದಿದ್ದಾರೆ.

ಸಾರಿಗೆ ಇಲಾಖೆಯಲ್ಲಿನ ಖಾಲಿ ಹುದ್ದೆ ಭರ್ತಿಗೆ ಕ್ರಮ

ಸಾರಿಗೆ ಇಲಾಖೆಯಲ್ಲಿ 635 ಹುದ್ದೆಗಳ ಪೈಕಿ 165 ಜನ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗುತ್ತಿದೆ. 8500 ಕೋಟಿ ರೂ. ರಾಜಸ್ವ ಸಂಗ್ರಹ ಗುರಿ ಹೊಂದಲಾಗಿದೆ. ಇದರ ಮಧ್ಯೆ ಆರ್.ಟಿ.ಓ. ಕಚೇರಿಯಲ್ಲಿ ಕಲಿಕಾ ಪರವಾನಿಗೆ, ನವೀಕರಣ ಹೀಗೆ 30 ಸೇವೆಗಳನ್ನು ಆನ್‍ಲೈನ್ ಮೂಲಕ ವ್ಯವಹರಿಸಲಾಗುತ್ತಿದ್ದು, ಸಾರ್ವಜನಿಕರು ಮನೆಯಲ್ಲಿ ಕುಳಿತು ಆನ್‍ಲೈನ್ ಮೂಲಕ ಸೇವೆ ಪಡೆಯಬಹುದಾಗಿದೆ. ಇಂತಹ ಸುಧಾರಣಾ ಕ್ರಮ ತಮದಿರುವುದಕ್ಕೆ ತಮಗೆ ತೃಪ್ತಿ ಇದೆ ಎಂದು ಸಚಿವರು ಹೇಳಿದರು.

ಸಾರಿಗೆ ನೌಕರರ ವೇತನ ಪರಿಷ್ಕರಣೆ

ಸಾರಿಗೆ ನೌಕಕರ ವೇತನ ಪರಿಷ್ಕರಣೆ ಕುರಿತಂತೆ ಮಾತನಾಡಿದ ಸಚಿವರು, ನೌಕರರ ಬಹುದಿನಗಳ ಬೇಡಿಕೆ ಇದಾಗಿದೆ. ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದು, ಅವರು ಪರಿಷ್ಕರಣೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ನೌಕರರ ನ್ಯಾಯಯುತ ಬೇಡಿಕೆಯನ್ನು ಈಡಿರಿಸುತ್ತೇವೆ‌ ಅಂತ ಹೇಳಿದ್ದಾರೆ. ಹಳದಿ ಬೋರ್ಡ್ ವುಳ್ಳ ಟ್ಯಾಕ್ಸಿ ಚಾಲಕರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಮುಖ್ಯಮಂತ್ರಿಗಳ ಒಪ್ಪಿಗೆ ಸೂಚಿಸಿದ್ದಾರೆ ಎಂದರು.