
ಬೆಂಗಳೂರು, ಮೇ 03: ಪಹಲ್ಗಾಮ್ (Pahalgam) ಉಗ್ರ ದಾಳಿಯ ಪ್ರಕರಣದ ತನಿಖೆ ಚುರುಕುಗೊಂಡಿದೆ. ಉಗ್ರರ ರಣಬೇಟೆಗೆ ಇಳಿದಿರುವ ಎನ್ಐಎ ಪ್ರಕರಣದ ಒಂದೊಂದೇ ಮಾಹಿತಿ ಬಯಲಿಗೇಳೆಯುತ್ತಿದೆ. ಭಾರತ ವಾಯುಸೇನೆ, ಗಡಿಯಲ್ಲಿ ಪಾಕ್ಗೆ ಖಡಕ್ ಎಚ್ಚರಿಕೆ ರವಾನಿಸಲಾಗಿದೆ. ಈ ಮಧ್ಯೆ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿರುವ ಶ್ರೀ ಆದಿ ಶಂಕರಾಚಾರ್ಯ ಮಠದಲ್ಲಿ ಇಂದು ಕನ್ನಡಿಗರಿಂದ (Kannadigaru) ವಿಶೇಷ ಪೂಜೆ ಮಾಡಲಾಗಿದೆ. ಜಮ್ಮು-ಕಾಶ್ಮೀರದಲ್ಲಿ ಶಾಂತಿ, ನೆಮ್ಮದಿ ನೆಲೆಸುವಂತೆ ಪ್ರಾರ್ಥಿಸಲಾಗಿದೆ.
ಮೈಸೂರು ಮತ್ತು ಬೆಂಗಳೂರಿನಿಂದ ತೆರಳಿದ್ದ 13 ಜನರ ತಂಡ ಶ್ರೀ ಆದಿ ಶಂಕರಾಚಾರ್ಯ ಮಠದಲ್ಲಿ ಶಂಕರಾಚಾರ್ಯ ಜಯಂತಿ ಆಚರಣೆ ಮಾಡಲಾಗಿದೆ. ದೇಶ ರಕ್ಷಣೆಗಾಗಿ, ಯೋಧರ ಆರೋಗ್ಯ ಶಕ್ತಿ ವೃದ್ಧಿ ಮತ್ತು ಜಮ್ಮು ಕಾಶ್ಮೀರಿನ ಸುರಕ್ಷತೆಗಾಗಿ ಸಿಆರ್ಪಿಎಫ್ ಮತ್ತು ಆರ್ಮಿ ತಂಡದ ಸಹಾಯದಿಂದ ವಿಶೇಷ ರುದ್ರಾಭಿಷೇಕ, ಮೃತ್ಯುಂಜಯ ಜಪ, ಹೋಮ-ಹವನ ಮಾಡಲಾಗಿದೆ.
ಇದನ್ನೂ ಓದಿ: ನನ್ನಲ್ಲಿ ಧೈರ್ಯ ತುಂಬಲು ಅಷ್ಟು ದೂರದಿಂದ ಬಂದ ಅಜ್ಜಿಗೆ ಹೇಗೆ ಕೃತಜ್ಞತೆ ಸಲ್ಲಿಸುವುದು? ಪಲ್ಲವಿ ರಾವ್
ಡಾ. ನಾಗಲಕ್ಷ್ಮಿ ನಾಗಾರ್ಜುನ್ ಮೈಸೂರು ತಂಡದಿಂದ ಆದಿ ಶಂಕರಾಚಾರ್ಯ ಜೀವನವನ್ನು ಭರತನಾಟ್ಯ ಮೂಲಕ ಪ್ರಸ್ತುತ ಪಡಿಸಿದ್ದಾರೆ. ಕಳೆದ 13 ವರ್ಷಗಳಿಂದ ಬೆಂಗಳೂರು ಮತ್ತು ಮೈಸೂರು ತಂಡಗಳಿಂದ ಜಮ್ಮು ಕಾಶ್ಮೀರನ ಶ್ರೀನಗರದ ಆದಿ ಶಂಕರಾಚಾರ್ಯ ಮಠದಲ್ಲಿ ಶ್ರೀ ಆದಿಶಂಕರ ಜಯಂತಿಯನ್ನು ನಡೆಸುತ್ತಾ ಬಂದಿವೆ.
ಇದೇ ವೇಳೆ ಪಾಕ್ ಆಕ್ರಮಿತಿ ಕಾಶ್ಮೀರ್ ಹಾಗೂ ಶಾರದಾ ಪೀಠ ವಾಪಸ್ ಭಾರತಕ್ಕೆ ಬರುವ ಹಾಗೆ ಎಲ್ಲಾ ಶಕ್ತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸಲಾಗಿದೆ. ಈ ವೇಳೆ ಸಾಧು ಸಂತರಾದ ಸುಬೇಂದ್ರ ಬಾನಿ, ಸ್ವಾಮಿ ವಿಶ್ವನಾಥನಂದ ಸರಸ್ವತಿ ಸುಬೇಂದ್ರ ಬಾನಿ, ಮಹಾ ಮಂಡಲೇಶ್ವರ ಶ್ರೀ ಅಕ್ಷಗಾನನಂದ ಜಿ ಉಪಸ್ಥಿತರಿದ್ದರು.
ಇದನ್ನೂ ಓದಿ: ಪಹಲ್ಗಾಮ್ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಜಮ್ಮು-ಕಾಶ್ಮೀರದ ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಈಗಾಗಲೇ ಕರ್ನಾಟಕದ ಇಬ್ಬರು ಸೇರಿದಂತೆ 26 ಪ್ರವಾಸಿಗರು ಸಾವಪ್ಪಿದ್ದಾರೆ. ಅಷ್ಟೇ ಅಲ್ಲದೆ ಕರ್ನಾಟಕದ ಸಾಕಷ್ಟು ಕುಟುಂಬಗಳು ಉಗ್ರರ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿ ಬಂದಿದ್ದಾರೆ. ಪಹಲ್ಗಾಮ್ನ ದಾಳಿ ಕಣ್ಣಾರೆ ಕಂಡು ಬೆಚ್ಚಿಬಿದ್ದಿದ್ದರು. ಹಾಗಾಗಿ 26 ಪ್ರವಾಸಿಗರ ರಕ್ತದೋಕುಳಿ ಹರಿಸಿದ್ದ ಉಗ್ರರಿಗೆ ತಕ್ಕ ಪಾಠ ಕಲಿಸುವ ನಿಟ್ಟಿನಲ್ಲಿ ಭಾರತ ಸರ್ವಸನ್ನದ್ಧವಾಗಿದೆ. ಪಾಕಿಸ್ತಾನಕ್ಕೆ ಮುಟ್ಟಿಕೊಳ್ಳುವ ರೀತಿ ಭಾರತ ಪ್ರತೀಕಾರ ಕೊಡುವುದಕ್ಕೆ ಮುಂದಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.