AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರಿ ಸವಾಲ್​! ರಾಜ್ಯಪಾಲರು ಬಳಸಿದ ‘ಸೊನಾಟಾ ಗೋಲ್ಡ್’ ಕಾರು ಹರಾಜಿಗಿದೆ- ನೀವೂ ಒಂದ್ ಚಾನ್ಸ್ ನೋಡಿ..!

Used Car Sales: ಕರ್ನಾಟಕ ಭವನದಲ್ಲಿ ಈ ಹಿಂದೆಯೂ 2009 ಹಾಗೂ 2011ರ ಮಾಡೆಲ್​ಗಳ ಇನ್ನೂ 4 ಮಾರುತಿ ಸುಜುಕಿ SX4 ಕಾರುಗಳನ್ನು ಸಹ ಹರಾಜು ಮಾಡಲಾಗಿದ್ದು ಸರಕಾರ ನಿಗದಿ ಪಡಿಸಿದ ಬೆಲೆಗಿಂತ 2 ರಿಂದ 3 ಪಟ್ಟು ಹೆಚ್ಚು ಬೆಲೆಗೆ ಹರಾಜು ಪ್ರಕ್ರಿಯೆಯಲ್ಲಿ ಮಾರಾಟವಾಗಿವೆ.‌ ಅಂದಹಾಗೆ, ಸರ್ಕಾರ ಇವುಗಳನ್ನು ಮಾರಾಟ ಮಾಡಿ, ಈ ಕಾರುಗಳ ಬದಲಿಗೆ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿದೆ.

ಸರ್ಕಾರಿ ಸವಾಲ್​! ರಾಜ್ಯಪಾಲರು ಬಳಸಿದ ‘ಸೊನಾಟಾ ಗೋಲ್ಡ್' ಕಾರು ಹರಾಜಿಗಿದೆ- ನೀವೂ ಒಂದ್ ಚಾನ್ಸ್ ನೋಡಿ..!
Karnataka Bhavan: ಸರ್ಕಾರಿ ಸವಾಲ್​! ಹರಾಜಿಗಿದೆ ರಾಜ್ಯಪಾಲರು ಬಳಸಿದ ‘ಸೊನಾಟಾ ಗೋಲ್ಡ್' ಕಾರು - ನೀವೂ ಒಂದ್ ಚಾನ್ಸ್ ನೋಡಿ..!
TV9 Web
| Edited By: |

Updated on:Jun 23, 2021 | 1:58 PM

Share

ದೆಹಲಿ ಕರ್ನಾಟಕ ಭವನದಲ್ಲಿರುವ ‘ಸೊನಾಟಾ ಗೋಲ್ಡ್ ‘ ಕಾರು ಹರಾಜಿಗೆ ಸರಕಾರ ಆದೇಶ ಹೊರಡಿಸಿದೆ. ‘ಸೊನಾಟ ಗೋಲ್ಡ್ ‘ಕಾರು ಇದು ಕರ್ನಾಟಕ ರಾಜ್ಯದ ರಾಜ್ಯಪಾಲರು ಬಳಸಿರುವ ಸರಕಾರಿ ಕಾರು. ಈ ಹಿಂದೆ ರಾಜ್ಯಪಾಲರಾಗಿದ್ದ ಟಿ.ಎನ್ ಚತುರ್ವೇದಿ ಅವರು ಹೆಚ್ಚಾಗಿ ಬಳಸಿರುವ ಕಾರು ಇದಾಗಿದ್ದು, ಹೆಚ್ಚು ಕಿಲೋ ಮೀಟರ್ ಸಹ ಓಡಿಲ್ಲ. ಅಚ್ಚುಕಟ್ಟಾಗಿ ನಿರ್ವಹಿಸಿರುವ ಕಾರನ್ನು ಈಗ ಹರಾಜಿಗೆ ಇಡಲಾಗಿದೆ. ಸರಕಾರ ಲೈಸೆನ್ಸ್ ಹೊಂದಿರುವ ಗುಜರಿ ಸಂಸ್ಥೆಯವರಿಗೆ ಮಾತ್ರ ಕೊಂಡುಕೊಳ್ಳಲು ಅವಕಾಶವಿದೆ. ಕಳೆದ ವಾರ ದೆಹಲಿಯ ಕರ್ನಾಟಕ ಭವನದಲ್ಲಿ ಹರಾಜು ಪ್ರಕ್ರಿಯೆ ನಡೆದಿದೆ. ಸರ್ಕಾರಿ ಲೈಸೆನ್ಸ್ ಹೊಂದಿರುವವರು ಯಾರೂ ಮುಂದೆ ಬಾರದ ಕಾರಣ ಈ ಕಾರು ಹರಾಜು ಆಗಿಲ್ಲ.

ಸೊನಾಟಾ ಗೋಲ್ಡ್ 2003ರ ಮಾಡೆಲ್ ಆಗಿದ್ದು ಖರೀದಿಸಲು ದೆಹಲಿಯಲ್ಲಿ ಕೆಲವರು ಮುಂದೆ ಬಂದಿದ್ದರು. ಕೊಂಡು ಕೊಳ್ಳಲು ಬಂದ ಯಾರಲ್ಲೂ ಕೂಡ ಗುಜರಿ ಲೇಸೆನ್ಸ್ ಇಲ್ಲದ ಕಾರಣ ಕಾರು ಹರಾಜು ಆಗದೇ ಉಳಿದಿದೆ. ಗುಜರಿ ಲೈಸೆನ್ಸ್ ಇರುವವರು ಕಾರು ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಬಹುದಾಗಿದೆ. ಸರಕಾರ ಇದಕ್ಕೆ ಮೂಲ ಬೆಲೆಯಾಗಿ 25,000 ರೂಪಾಯಿ ನಿಗದಿಪಡಿಸಿದ್ದು, ಇದಕ್ಕಿಂತ ಹೆಚ್ಚು ಹರಾಜು ಕೂಗಿದವರಿಗೆ ಈ ಕಾರು ಸಿಗಲಿದೆ.

ಇದಿಷ್ಟೇ ಅಲ್ಲದೇ, ಕರ್ನಾಟಕ ಭವನದಲ್ಲಿ ಈ ಹಿಂದೆಯೂ 2009 ಹಾಗೂ 2011ರ ಮಾಡೆಲ್​ಗಳ ಇನ್ನೂ 4 ಮಾರುತಿ ಸುಜುಕಿ SX4 ಕಾರುಗಳನ್ನು ಸಹ ಹರಾಜು ಮಾಡಲಾಗಿದ್ದು ಸರಕಾರ ನಿಗದಿ ಪಡಿಸಿದ ಬೆಲೆಗಿಂತ 2 ರಿಂದ 3 ಪಟ್ಟು ಹೆಚ್ಚು ಬೆಲೆಗೆ ಹರಾಜು ಪ್ರಕ್ರಿಯೆಯಲ್ಲಿ ಮಾರಾಟ ಮಾಡಲಾಗಿದೆ.‌ ಅಂದಹಾಗೆ, ಸರ್ಕಾರ ಇವುಗಳನ್ನು ಮಾರಾಟ ಮಾಡಿ, ಈ ಕಾರುಗಳ ಬದಲಿಗೆ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿದೆ.

– ಜಿ.ಆರ್. ಹರೀಶ್, ನವದೆಹಲಿ

(Karnataka Bhavan in delhi want sell car used by governor to licensed sellers)

ತಿಹಾರ್ ಜೈಲಿನಲ್ಲಿ ನೆರವಿಗೆ ನಿಂತವನ ಕೈಬಿಡದ ಕಾಂಗ್ರೆಸ್ ನಾಯಕ; ಡಿ.ಕೆ‌. ಶಿವಕುಮಾರ್ ಮಾನವೀಯ ಮುಖ ಇಲ್ಲಿದೆ ನೋಡಿ!

Published On - 1:55 pm, Wed, 23 June 21

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್