AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Peanuts: ಪ್ರತಿಭಟನೆ ವೇಳೆ ತಿಂದು ತಿಂದು ಕಡ್ಲೆಕಾಯಿ ಸಿಪ್ಪೆ ಗುಡ್ಡೆ ಹಾಕಿದ ರೇವಣ್ಣ, ಸಾತ್ ನೀಡಿದ ಶಾಸಕ ಶಿವಲಿಂಗೇಗೌಡ!

HD Revanna Protest: ಪ್ರತಿಭಟನೆ ವೇಳೆ ಮಾಜಿ ಸಚಿವ, ಹೊಳೆನರಸೀಪುರ ಶಾಸಕ ಹೆಚ್​ ಡಿ ರೇವಣ್ಣ ಮತ್ತು ಅರಸೀಕೆರೆ ಕ್ಷೇತ್ರದ ಜೆಡಿಎಸ್​ ಶಾಸಕ ಕೆ ಎಂ ಶಿವಲಿಂಗೇಗೌಡ ಕಡ್ಲೆಕಾಯಿ ಸವಿದು ಟೈಂ ಪಾಸ್ ಮಾಡಿದ ಘಟನೆ ಹಾಸನದಲ್ಲಿ ನಡೆದಿದೆ.

Peanuts: ಪ್ರತಿಭಟನೆ ವೇಳೆ ತಿಂದು ತಿಂದು ಕಡ್ಲೆಕಾಯಿ ಸಿಪ್ಪೆ ಗುಡ್ಡೆ ಹಾಕಿದ ರೇವಣ್ಣ, ಸಾತ್ ನೀಡಿದ ಶಾಸಕ ಶಿವಲಿಂಗೇಗೌಡ!
ಪ್ರತಿಭಟನೆ ವೇಳೆ ತಿಂದು ತಿಂದು ಕಡ್ಲೆಕಾಯಿ ಹೊಟ್ಟು ಗುಡ್ಡೆ ಹಾಕಿದ ರೇವಣ್ಣ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jun 23, 2021 | 3:45 PM

ಹಾಸನ: ಪ್ರತಿಭಟನೆ ವೇಳೆ ಮಾಜಿ ಸಚಿವ, ಹೊಳೆನರಸೀಪುರ ಶಾಸಕ ಹೆಚ್​ ಡಿ ರೇವಣ್ಣ ಮತ್ತು ಅರಸೀಕೆರೆ ಕ್ಷೇತ್ರದ ಜೆಡಿಎಸ್​ ಶಾಸಕ ಕೆ ಎಂ ಶಿವಲಿಂಗೇಗೌಡ ಕಡ್ಲೆಕಾಯಿ ಸವಿದು ಟೈಂ ಪಾಸ್ ಮಾಡಿದ ಘಟನೆ ಹಾಸನದಲ್ಲಿ ನಡೆದಿದೆ. ಕೈ ನಾಯಕರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳದಲ್ಲಿ ಬಡವರ ಬಾದಾಮಿ ಮಾರುತ್ತ ಬಂದವರ ಬಳಿ ಕಡ್ಲೆಕಾಯಿ ಖರೀದಿಸಿ ರೇವಣ್ಣ ಮತ್ತು ಶಿವಲಿಂಗೇಗೌಡ ಕುರ್ಚಿ ಮೇಲೆ ಕೂತು ಕಡ್ಲೆಕಾಯಿ ತಿನ್ನುತ್ತ ಸಿಪ್ಪೆಯನ್ನು ರಾಶಿ ರಾಶಿ ಗುಡ್ಡೆ ಹಾಕಿದ್ದಾರೆ. ಕಡ್ಲೆಕಾಯಿ ತಿಂದು ನೀರು ಕುಡಿದು ಪ್ರತಿಭಟನೆಯ ಬ್ರೇಕ್ ಮಾಡಿದ್ದಾರೆ.

ಇಷ್ಟಕ್ಕೂ ರೇವಣ್ಣ ಪ್ರತಿಭಟನೆ ಮಾಡಿದ್ದೇಕೆ ಗೊತ್ತಾ?: ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕರು ಮತ್ತು ಜೆಡಿಎಸ್ ಶಾಸಕರು ಇಂದು ಹಾಸನ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ, ಕಡ್ಲೆಕಾಯಿ ಮಾರುತ್ತ ಬಂದವ ಬಳಿ ಕಡ್ಲೆಕಾಯಿ ಖರೀದಿಸಿ ರೇವಣ್ಣ ಕಡ್ಲೆಕಾಯಿ ತಿನ್ನಲು ಶುರು ಮಾಡಿದ್ರು. ಈ ವೇಳೆ ಅವರ ಬೆಂಬಲಿಗರು, ಹಿತೈಶಿಗಳು ಅವರಿಗೆ ಕಡ್ಲೆಕಾಯಿ ತಂದು ಕೊಟ್ಟರು. ಪ್ರತಿಭಟನೆ ಮಗಿಯುವ ವರೆಗೂ ರೆವಣ್ಣ ಕಡ್ಲೆಕಾಯಿ ತಿಂದು ಎಂಜಾಯ್ ಮಾಡಿದ್ದಾರೆ. ಜೊತೆಗೆ ತಮ್ಮ ಅಕ್ಕ ಪಕ್ಕದ ಶಾಸಕರಿಗೂ ಕಡ್ಲೆಕಾಯಿ ಹಂಚಿ ಖುಷಿ ಖುಷಿಯಾಗಿ ಪ್ರತಿಭಟನೆ ನಡೆಸಿದರು.

ರೇವಣ್ಣರಿಗೆ ಕೊರೊನಾ ಬರದಿರಲು ನಿಂಬೆ ಹಣ್ಣು ಸಹಾಯ ಮಾಡುತ್ತಂತೆ

ಹಾಸನ ಜಿಲ್ಲೆಯ ಅಧಿಪತಿ ರೇವಣ್ಣ ಅವರು ಈ ಹಿಂದೆ ಕೊರೊನಾ ಟೆಸ್ಟ್ ಮಾಡಿಸಿದಾಗ ಅವರು ವರದಿ ನೆಗೆಟಿವ್ ಬಂದಿತ್ತು. ಹಾಗಂತ ರೇವಣ್ಣ ಅವರೇ ಹೇಳಿದ್ದರು. ಜೊತೆಗೆ ತಮ್ಮ ಕಚೇರಿಯ ಸಿಬ್ಬಂದಿಯ ವರದಿಯೂ ನೆಗಟಿವ್‌ ಆಗಿದೆ. ಆದ್ರೂ ಸ್ವಲ್ಪ ರೆಸ್ಟ್‌ ಪಡೀಲಿ ಅಂತಾ ರಜೆ ಮೇಲೆ ಕಳಿಸಿದ್ದೇನೆ ಎಂದು ರೇವಣ್ಣ ತಿಳಿಸಿದ್ದರು.

ಹೌದು, ದೇವೆಗೌಡರ ಪುತ್ರ ಹೆಚ್‌ ಡಿ ರೇವಣ್ಣ ಅಂದ್ರೆ ಎರಡು ವಿಷ್ಯಗಳು ತಟ್ಟನೆ ನೆನಪಾಗುತ್ತವೆ. ಒಂದು ಅವರು ಹಾಸನವನ್ನ ರಿಪಬ್ಲಿಕ್‌ ಆಫ್‌ ರೇವಣ್ಣಾಸ್‌ ಹಾಸನ ಮಾಡಿಕೊಂಡಿರೋದು, ಮತ್ತೊಂದು ಯಾವಾಗಲೂ ಕೈಯಲ್ಲಿ ಲಿಂಬೆ ಹಣ್ಣು ಹಿಡಿದುಕೊಂಡಿರೋದು. ಹೀಗಾಗಿ ರೇವಣ್ಣ ಅವರಿಗೆ ಕೊರೊನಾ ನೆಗಟಿವ್‌ ಬರೋಕ್ಕೆೇನಾದ್ರೂ ಲಿಂಬೆ ಹಣ್ಣಿನ ಜಾದು ಕಾರಣವಿರಬಹುದು ಅಂತಾ ಯಾರಾದ್ರೂ ಅಂದುಕೊಂಡ್ರು ಅಂದುಕೊಳ್ಳಬಹುದು.

ರೇವಣ್ಣಗೆ ಕೊರೊನಾ ಇಲ್ವಂತೆ.. ನಿಂಬೆ ಹಣ್ಣಿನ ಜಾದು ವರ್ಕೌಟ್‌ ಆಯ್ತಾ?

Published On - 1:30 pm, Wed, 23 June 21

Weekly Horoscope: ಜೂನ್​ 30 ರಿಂದ ಜುಲೈ 6 ರವರೆಗಿನ ವಾರ ಭವಿಷ್ಯ
Weekly Horoscope: ಜೂನ್​ 30 ರಿಂದ ಜುಲೈ 6 ರವರೆಗಿನ ವಾರ ಭವಿಷ್ಯ
ಆಷಾಢ ಮಾಸದಲ್ಲಿ ಶುಭ ಕಾರ್ಯಗಳನ್ನ ಯಾಕೆ ಮಾಡಬಾರದು ತಿಳಿಯಿರಿ
ಆಷಾಢ ಮಾಸದಲ್ಲಿ ಶುಭ ಕಾರ್ಯಗಳನ್ನ ಯಾಕೆ ಮಾಡಬಾರದು ತಿಳಿಯಿರಿ
ಆಶ್ಲೇಷ ನಕ್ಷತ್ರದಲ್ಲಿ ಚಂದ್ರ ಸಂಚಾರ, ಈ ದಿನ ಯಾರಿಗೆಲ್ಲಾ ಶುಭ ತಿಳಿಯಿರಿ
ಆಶ್ಲೇಷ ನಕ್ಷತ್ರದಲ್ಲಿ ಚಂದ್ರ ಸಂಚಾರ, ಈ ದಿನ ಯಾರಿಗೆಲ್ಲಾ ಶುಭ ತಿಳಿಯಿರಿ
ಉತ್ತರಾಖಂಡದಲ್ಲಿ ಪ್ರವಾಹ; ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಸರಯೂ ನದಿ
ಉತ್ತರಾಖಂಡದಲ್ಲಿ ಪ್ರವಾಹ; ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಸರಯೂ ನದಿ
ಜೈನ ಮುನಿಗಳಿಂದ ಪ್ರಧಾನಿ ಮೋದಿಗೆ ಧರ್ಮ ಚಕ್ರವರ್ತಿ ಬಿರುದು ಪ್ರದಾನ
ಜೈನ ಮುನಿಗಳಿಂದ ಪ್ರಧಾನಿ ಮೋದಿಗೆ ಧರ್ಮ ಚಕ್ರವರ್ತಿ ಬಿರುದು ಪ್ರದಾನ
ಮಳೆಯಿಂದ ಚಾರ್ ಧಾಮ್ ಯಾತ್ರೆಗೆ ಅಡ್ಡಿ; ಕೇದಾರನಾಥ ಮಾರ್ಗದಲ್ಲಿ ಭೂಕುಸಿತ
ಮಳೆಯಿಂದ ಚಾರ್ ಧಾಮ್ ಯಾತ್ರೆಗೆ ಅಡ್ಡಿ; ಕೇದಾರನಾಥ ಮಾರ್ಗದಲ್ಲಿ ಭೂಕುಸಿತ
ಸ್ಕಂದಗಿರಿ ಮತ್ತು ಬಹುನಂದೀಶ್ವವರ ದೇವಸ್ಥಾನಕ್ಕೂ ನೋ ಎಂಟ್ರಿ: ಜಿಲ್ಲಾಡಳಿತ
ಸ್ಕಂದಗಿರಿ ಮತ್ತು ಬಹುನಂದೀಶ್ವವರ ದೇವಸ್ಥಾನಕ್ಕೂ ನೋ ಎಂಟ್ರಿ: ಜಿಲ್ಲಾಡಳಿತ
ಬೌಲಿಂಗ್ ಕೋಚ್ ಜೊತೆ WWE ಆಡಿ ಸೋತ ಅರ್ಷದೀಪ್, ಆಕಾಶ್
ಬೌಲಿಂಗ್ ಕೋಚ್ ಜೊತೆ WWE ಆಡಿ ಸೋತ ಅರ್ಷದೀಪ್, ಆಕಾಶ್
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮುಖಾಮುಖಿಯಾಗುವುದನ್ನು ತಪ್ಪಿಸಿದ ಪೊಲೀಸ್
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮುಖಾಮುಖಿಯಾಗುವುದನ್ನು ತಪ್ಪಿಸಿದ ಪೊಲೀಸ್
ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಿದ ಗೌತಮ್ ಅದಾನಿ
ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಿದ ಗೌತಮ್ ಅದಾನಿ