ಸಿದ್ದರಾಮಯ್ಯರನ್ನ ಮೂಲೆಗುಂಪಾಗಿಸಿದ್ದ ಜಾತಿಗಣತಿ ಬ್ರಹ್ಮಾಸ್ತ್ರ ಮತ್ತೆ ಮುನ್ನೆಲೆಗೆ; 2023ರ ಚುನಾವಣೆಗೆ ಬಿಜೆಪಿಯಿಂದ ಮಾಸ್ಟರ್ ಪ್ಲಾನ್!?

| Updated By: ಆಯೇಷಾ ಬಾನು

Updated on: Jun 29, 2021 | 1:31 PM

Socio Economic Caste Census 2011: 2023ರ ಚುನಾವಣೆಗೆ ಜಾತಿ ಗಣತಿ ವರದಿ ಪಾಲಿಟಿಕ್ಸ್ ಗೆ ಬಿಜೆಪಿ ಸೀಕ್ರೆಟ್ ಪ್ಲ್ಯಾನ್ ಮಾಡಿಕೊಂಡಿದೆ. ಸಿದ್ದರಾಮಯ್ಯ ಮೂಲೆಗುಂಪಾಗಿಸಿದ್ದ ಜಾತಿ ಗಣತಿ ವರದಿಗೆ ಜೀವಕೊಡುವ ಪ್ಲ್ಯಾನ್ ಮಾಡುತ್ತಿದೆ.

ಸಿದ್ದರಾಮಯ್ಯರನ್ನ ಮೂಲೆಗುಂಪಾಗಿಸಿದ್ದ ಜಾತಿಗಣತಿ ಬ್ರಹ್ಮಾಸ್ತ್ರ ಮತ್ತೆ ಮುನ್ನೆಲೆಗೆ; 2023ರ ಚುನಾವಣೆಗೆ ಬಿಜೆಪಿಯಿಂದ ಮಾಸ್ಟರ್ ಪ್ಲಾನ್!?
ಬಿ.ಎಸ್.ಯಡಿಯೂರಪ್ಪ
Follow us on

ಬೆಂಗಳೂರು: 2023ರ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇದ್ದರೂ ಈಗಿನಿಂದಲೇ ಚುನಾವಣೆಗೆ ತಯಾರಿ ಶುರುವಾಗಿದೆ. ಕಾಂಗ್ರೆಸ್, ಬಿಜೆಪಿ ಒಳಗೊಳಗೆ ಕಸರತ್ತು ಮಾಡುತ್ತಿದೆ. ಬಿಜೆಪಿ ಸರ್ಕಾರ ಕಾಂಗ್ರೆಸ್ ವಿರುದ್ಧ ಜಾತಿ ಗಣತಿ ವರದಿಯನ್ನೇ (Socio Economic Caste Census 2011) ಬ್ರಹ್ಮಾಸ್ತ್ರ ಮಾಡಿಕೊಳ್ಳಲು ಸಿದ್ಧತೆ ನಡೆಸಿದೆ.

2023ರ ಚುನಾವಣೆಗೆ ಜಾತಿ ಗಣತಿ ವರದಿ ಪಾಲಿಟಿಕ್ಸ್ ಗೆ ಬಿಜೆಪಿ ಸೀಕ್ರೆಟ್ ಪ್ಲ್ಯಾನ್ ಮಾಡಿಕೊಂಡಿದೆ. ಸಿದ್ದರಾಮಯ್ಯ ಮೂಲೆಗುಂಪಾಗಿಸಿದ್ದ ಜಾತಿ ಗಣತಿ ವರದಿಗೆ ಜೀವಕೊಡುವ ಪ್ಲ್ಯಾನ್ ಮಾಡುತ್ತಿದೆ. ಸಿದ್ದರಾಮಯ್ಯ ಅವಧಿಯಲ್ಲಿ ನಡೆಸಲಾಗಿದ್ದ ಜಾತಿ ಗಣತಿ ವರದಿ ಸ್ವೀಕಾರಕ್ಕೆ ಸರ್ಕಾರ ರೆಡಿಯಾಗಿದೆ. ಕಾಂಗ್ರೆಸ್ ನ ಅಹಿಂದ ಹಾಗೂ ದಲಿತ ಸಮಾವೇಶಗಳ ಚಿಂತನೆಗೆ ಬಿಜೆಪಿ ಕೌಂಟರ್ ನೀಡಲಿದೆ.

ಜಾತಿ ಗಣತಿ ವರದಿ ಸ್ವೀಕರಿಸಿ ಸರ್ವ ಸಮುದಾಯಗಳ ಮೆಚ್ಚುಗೆ ಪಡೆಯಲು ಸರ್ಕಸ್ ನಡೆಸುತ್ತಿದೆ. ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ನಡೆಸಿದ್ದ ಜಾತಿ ಸರ್ವೆ ರಿಪೋರ್ಟ್ ಮೇಲೆ ಬಿಜೆಪಿ ಸರ್ಕಾರ ಕಣ್ಣಿಟ್ಟಿದೆ. ನಾವು ವರದಿ ಸ್ವೀಕರಿಸಿದ್ದೇವೆ ಅಂತಾ ಸಿದ್ದುಗೆ ಗುದ್ದು ಕೊಡಲು ಬಿಜೆಪಿ ರಣತಂತ್ರ ಹೆಣೆಯುತ್ತಿದೆ. ಹಿಂದುಳಿದ ವರ್ಗಗಳ ಆಯೋಗ ವರದಿ ಸಲ್ಲಿಕೆ ಬಗ್ಗೆ ಈಗಾಗಲೇ 3 ಬಾರಿ ಸಭೆ ಮಾಡಿದೆ.

ನಿನ್ನೆ ಮುಖ್ಯ ಕಾರ್ಯದರ್ಶಿ, ಆಯೋಗದ ಅಧ್ಯಕ್ಷರ ಸಭೆ ಕೊನೇ ಕ್ಷಣದಲ್ಲಿ ರದ್ದಾಗಿತ್ತು. ವರದಿ ಅನುಷ್ಠಾನದ ಐಡಿಯಾ ಇಲ್ಲದಿದ್ದರೂ ಶೀಘ್ರವೇ ವರದಿ ಸ್ವೀಕರಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಮುಂದಿನ ಚುನಾವಣೆ ಮೇಲೆ ಬೆಂಕಿ ಬಿರುಗಾಳಿ ಎಬ್ಬಿಸುತ್ತಾ ಜಾತಿ ಗಣತಿ (SECC 2011) ಬ್ರಹ್ಮಾಸ್ತ್ರ? ಎಂಬ ಬಲವಾದ ಅನುಮಾನ ವ್ಯಕ್ತವಾಗಿದೆ.

(karnataka-bjp-plans-to-play-caste-census-2021-report-politics-to-win-2023-general-elections-ayb)

ಇದನ್ನೂ ಓದಿ: Siddaramaiah | ಅಹಿಂದ ಸಮಾವೇಶ: ಸಿದ್ದರಾಮಯ್ಯ ಪ್ರಸ್ತಾಪಕ್ಕೆ ರಾಹುಲ್ ಗಾಂಧಿ ಗ್ರೀನ್ ಸಿಗ್ನಲ್