AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Schools Reopen: ಇಂದಿನಿಂದ 6, 7, 8 ನೇ ತರಗತಿಗಳು ಆರಂಭ, ಹೊಸ ಗೈಡ್‌ಲೈನ್ಸ್‌ನೊಂದಿಗೆ ಕ್ಲಾಸ್ ಆರಂಭಕ್ಕೆ ತಯಾರಿ

9, 10ಮತ್ತು ಪಿಯು ಕ್ಲಾಸಸ್ ಶುರು ಆದ್ವು. ವಿದ್ಯಾರ್ಥಿಗಳು ಶಾಲೆಗೂ ಹೋಗ್ತಿದ್ದಾರೆ. ಆದ್ರೆ, 6, 7, 8 ನೇ ತರಗತಿ ಯಾವಾಗ ಶುರು ಆಗುತ್ತೋ? ನಮ್ಮ ಮಕ್ಕಳು ಯಾವಾಗ ಶಾಲೆಗೆ ಹೋಗಿ ಪಾಠ ಕೇಳ್ತಾರೋ ಅಂತಾ ಫುಲ್ ಟೆನ್ಷನ್​ನಲ್ಲಿದ್ದ ಪೋಷಕರಿಗೀಗ ಗುಡ್​ನ್ಯೂಸ್. ಅದೇನಂದ್ರೆ, 6, 7, 8 ನೇ ತರಗತಿ ಓಪನ್ ಮಾಡೋಕೆ ಮುಹೂರ್ತ ಫಿಕ್ಸ್ ಆಗಿದೆ. ಜೊತೆಗೆ ಗೈಡ್‌ಲೈನ್ಸ್ ಕೂಡ ರಿಲೀಸ್ ಆಗಿದೆ.

Schools Reopen: ಇಂದಿನಿಂದ 6, 7, 8 ನೇ ತರಗತಿಗಳು ಆರಂಭ, ಹೊಸ ಗೈಡ್‌ಲೈನ್ಸ್‌ನೊಂದಿಗೆ ಕ್ಲಾಸ್ ಆರಂಭಕ್ಕೆ ತಯಾರಿ
ಸಾಂದರ್ಭಿಕ ಚಿತ್ರ
ಆಯೇಷಾ ಬಾನು
| Updated By: Digi Tech Desk|

Updated on:Feb 22, 2021 | 8:59 AM

Share

ಬೆಂಗಳೂರು: ಕೊರೊನಾ ಮತ್ತು ಲಾಕ್​ಡೌನ್​ನಿಂದಾಗಿ ಶಾಲೆಗಳ ಬಾಗಿಲು ಬಂದ್ ಆಗಿತ್ತು. ಬರೋಬ್ಬರಿ 1 ವರ್ಷ ಸ್ಕೂಲ್​ಗಳು ಬಂದ್ ಆಗಿದ್ವು. ಆದ್ರೀಗ ಕೊರೊನಾ ಕಡಿಮೆ ಆಗಿದ್ರಿಂದ ಹಂತ ಹಂತವಾಗಿ ಶಾಲೆ ಬಾಗಿಲು ತೆರೆಯಲಾಗುತ್ತಿದೆ. ಈಗಾಗ್ಲೇ 9, 10, ಪ್ರಥಮ ಮತ್ತು ದ್ವಿತೀಯ ಪಿಯು ಕ್ಲಾಸ್ ಓಪನ್ ಆಗಿದೆ. ಇಂದಿನಿಂದ 6, 7, 8ನೇ ತರಗತಿಗಳು ಪ್ರಾರಂಭವಾಗಲಿವೆ. 6, 7, 8ನೇ ತರಗತಿಗಳನ್ನ ಆರಂಭಿಸಲು ನಿರ್ಧರಿಸಿರೋ ಶಿಕ್ಷಣ ಇಲಾಖೆ, ಮಾರ್ಗಸೂಚಿಗಳನ್ನೂ ಪ್ರಕಟಿಸಿದೆ. ಆ ಗೈಡ್​ಲೈನ್ಸ್​ನ್ನು ಕಡ್ಡಾಯವಾಗಿ ಪಾಲಿಸಬೇಕು ಅಂತಾ ಖಡಕ್ ಆಗಿ ಹೇಳಿದೆ.

ಕ್ಲಾಸ್​ಗೆ ಗೈಡ್​ಲೈನ್ಸ್ ವಿದ್ಯಾರ್ಥಿಗಳು ಶಾಲೆಗೆ ಬರುವುದು ಕಡ್ಡಾಯವಲ್ಲ ಅಂತಾ ಶಿಕ್ಷಣ ಇಲಾಖೆ ಮಾರ್ಗಸೂಚಿಯಲ್ಲಿ ಹೇಳಿದೆ. ಅಲ್ದೆ, ಕೊವಿಡ್ ನೆಗೆಟಿವ್ ರಿಪೋರ್ಟ್ ಇದ್ರಷ್ಟೇ ವಿದ್ಯಾರ್ಥಿಗಳಿಗೆ ತರಗತಿಗೆ ಬರಲು ಅವಕಾಶ ಇರುತ್ತೆ. ಆದ್ರೆ, ಕೊರೊನಾ ಲಕ್ಷಣಗಳಿದ್ರೆ ಅವಕಾಶ ಇರಲ್ಲ. ಇದ್ರ ಜೊತೆಗೆ ವಿದ್ಯಾರ್ಥಿಗಳು ಆನ್​ಲೈನ್​ನಲ್ಲೂ ಪಾಠ ಕೇಳಬಹುದು. ಆದ್ರೆ, ಶಾಲೆಗೆ ಬರುವ ಮಕ್ಕಳಿಗೆ ಪೋಷಕರ ಅನುಮತಿ ಕಡ್ಡಾಯವಾಗಿರಬೇಕು ಅಂತಾ ಶಿಕ್ಷಣ ಇಲಾಖೆ ಗೈಡ್​ಲೈನ್ಸ್​ನಲ್ಲಿ ತಿಳಿಸಿದೆ.

ರಾಜ್ಯದಲ್ಲೇನೋ 6ರಿಂದ 8ನೇ ತರಗತಿ ಶುರು ಆಗ್ತಿವೆ. ಆದ್ರೆ, ಬೆಂಗಳೂರಿಗೆ ಮಾತ್ರ ಈ ಆದೇಶ ಅನ್ವಯ ಆಗಲ್ಲ. ಯಾಕಂದ್ರೆ, ಬೆಂಗಳೂರು ನಗರವನ್ನ ವಿಶೇಷವಾಗಿ ಪರಿಗಣಿಸಲಾಗ್ತಿದೆ. ಹೀಗಾಗೇ, ರಾಜಧಾನಿಯಲ್ಲಿ 6 ಮತ್ತು 7ನೇ ತರಗತಿ ಆರಂಭ ಆಗಲ್ಲ. ಕೇವಲ 8ನೇ ತರಗತಿ ಮಾತ್ರ ಶುರು ಆಗುತ್ತಿದೆ.

ಬೆಂಗಳೂರಲ್ಲಿ ಶುರುವಾಗಲ್ಲ 6 ಮತ್ತು 7ನೇ ತರಗತಿ! ಹೌದು.. ಬೆಂಗಳೂರು ನಗರವನ್ನು ಸರ್ಕಾರ ವಿಶೇಷವಾಗಿ ಪರಿಗಣಿಸಿದೆ. ಯಾಕಂದ್ರೆ, ಬೆಂಗಳೂರಿನ ನೆತ್ತಿ ಮೇಲೆ ಕೊರೊನಾ 2ನೇ ಅಲೆಯ ತೂಗುಗತ್ತಿ ನೇತಾಡುತ್ತಿರೋ ಅನುಮಾನ ಇದೆ. ಇದೇ ಕಾರಣಕ್ಕಾಗಿ ಬೆಂಗಳೂರು ನಗರ, ಕೇರಳ ಗಡಿ ಭಾಗದಲ್ಲಿ 6, 7ನೇ ತರಗತಿ ಶುರು ಮಾಡದಿರಲು ಸರ್ಕಾರ ನಿರ್ಧರಿಸಿದ್ದು, 8ನೇ ಕ್ಲಾಸ್ ಮಾತ್ರ ಶುರು ಮಾಡಲಾಗುತ್ತೆ ಅಂತಾ ಶಿಕ್ಷಣ ಸಚಿವ ಸುರೇಶ್​ಕುಮಾರ್ ತಿಳಿಸಿದ್ದಾರೆ. ಒಟ್ನಲ್ಲಿ ಇಂದಿನಿಂದ 6ರಿಂದ 8ನೇ ಕ್ಲಾಸಸ್ ಆರಂಭಿಸಲು ನಿರ್ಧಾರ ಮಾಡಿದೆ. ಆದ್ರೆ, ಕೊರೊನಾ ಮಧ್ಯೆ ಸರ್ಕಾರದ ಗೈಡ್​ಲೈನ್ಸ್ ಎಷ್ಟರ ಮಟ್ಟಿಗೆ ಪಾಲನೆ ಆಗುತ್ತೆ ಅನ್ನೋದೇ ಸದ್ಯದ ಕುತೂಹಲ.

ಇದನ್ನೂ ಓದಿ: School Reopen: ಫೆ. 22ರಿಂದ 6-8 ತರಗತಿಗಳಿಗೆ ಪೂರ್ಣ ಶಾಲೆ ಆರಂಭ -ಶಿಕ್ಷಣ ಸಚಿವ ಸುರೇಶ್ ಕುಮಾರ್ ಘೋಷಣೆ

ಶಾಲೆ ಆರಂಭಿಸಿದರೆ ಮಕ್ಕಳೇ Super Spreaders.. ಹಾಗಾದ್ರೆ ತಜ್ಞರ ಪ್ರಕಾರ ಶಾಲೆ ರಿಓಪನ್ ಯಾವಾಗ ಗೊತ್ತಾ?

Published On - 6:49 am, Mon, 22 February 21

ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ
ರಾಜಕಾರಣಿಯಾಗಿರದಿದ್ದರೆ ಪರಮೇಶ್ವರ್ ಹೋಟೆಲ್ ಉದ್ಯಮಿಯಾಗುತ್ತಿದ್ದರೇ?
ರಾಜಕಾರಣಿಯಾಗಿರದಿದ್ದರೆ ಪರಮೇಶ್ವರ್ ಹೋಟೆಲ್ ಉದ್ಯಮಿಯಾಗುತ್ತಿದ್ದರೇ?