AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

10ಕ್ಕಿಂತ ಹೆಚ್ಚು ಹಸು ಸಾಕುತ್ತಿದ್ದೀರಾ.. ಜಾರಿಗೆ ಬರಲಿದೆ ಹೊಸ ಮಹತ್ವದ ಆದೇಶ

ಬೆಂಗಳೂರು: ಡೈರಿ ಫಾರ್ಮ್​ಗಳು ಮತ್ತು ಗೋಶಾಲೆಗಳಿಗೆ ಎನ್.ಜಿ.ಟಿ. ಹೊಸ ಆದೇಶ ಹೊರಡಿಸಲಿದೆ. ಹತ್ತಕ್ಕಿಂತ ಹೆಚ್ಚು ಹಸುಗಳನ್ನ ಸಾಕುವವರಿಗೆ ಈ ಆದೇಶ ಅನ್ವಯವಾಗಲಿದೆ. ನೀವು ಜೀವನೋಪಾಯಕ್ಕಾಗಿ ಹಸು ಸಾಕೋದಾದರೆ 9 ರವರೆಗೆ ಮಾತ್ರ ಸಾಕಿ. 10 ಕ್ಕಿಂತ ಹೆಚ್ಚು ಸಾಕಿದ್ರೆ ನೋಂದಣಿ ಮಾಡಿಸಲೇ ಬೇಕು ಇಲ್ಲವಾದ್ರೆ ಕ್ರಮ ಕೈಗೊಳ್ಳಲಾಗುತ್ತೆ. ಹತ್ತಕ್ಕಿಂತ ಹೆಚ್ಚು ಹಸು ಸಾಕ್ಬೇಕು ಅಂದ್ರೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯಬೇಕು ಮತ್ತು ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ. ಹಸು ಸಾಕುವವರು ಸ್ವಚ್ಛತೆ ಕಾಪಾಡಬೇಕು. ಪ್ರತಿದಿನ ಸ್ಯಾನಿಟೈಸಿಂಗ್, […]

10ಕ್ಕಿಂತ ಹೆಚ್ಚು ಹಸು ಸಾಕುತ್ತಿದ್ದೀರಾ.. ಜಾರಿಗೆ ಬರಲಿದೆ ಹೊಸ ಮಹತ್ವದ ಆದೇಶ
ಆಯೇಷಾ ಬಾನು
ಆಯೇಷಾ ಬಾನು|

Updated on:Oct 20, 2020 | 3:00 PM

Share

ಬೆಂಗಳೂರು: ಡೈರಿ ಫಾರ್ಮ್​ಗಳು ಮತ್ತು ಗೋಶಾಲೆಗಳಿಗೆ ಎನ್.ಜಿ.ಟಿ. ಹೊಸ ಆದೇಶ ಹೊರಡಿಸಲಿದೆ. ಹತ್ತಕ್ಕಿಂತ ಹೆಚ್ಚು ಹಸುಗಳನ್ನ ಸಾಕುವವರಿಗೆ ಈ ಆದೇಶ ಅನ್ವಯವಾಗಲಿದೆ. ನೀವು ಜೀವನೋಪಾಯಕ್ಕಾಗಿ ಹಸು ಸಾಕೋದಾದರೆ 9 ರವರೆಗೆ ಮಾತ್ರ ಸಾಕಿ. 10 ಕ್ಕಿಂತ ಹೆಚ್ಚು ಸಾಕಿದ್ರೆ ನೋಂದಣಿ ಮಾಡಿಸಲೇ ಬೇಕು ಇಲ್ಲವಾದ್ರೆ ಕ್ರಮ ಕೈಗೊಳ್ಳಲಾಗುತ್ತೆ.

ಹತ್ತಕ್ಕಿಂತ ಹೆಚ್ಚು ಹಸು ಸಾಕ್ಬೇಕು ಅಂದ್ರೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯಬೇಕು ಮತ್ತು ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ. ಹಸು ಸಾಕುವವರು ಸ್ವಚ್ಛತೆ ಕಾಪಾಡಬೇಕು. ಪ್ರತಿದಿನ ಸ್ಯಾನಿಟೈಸಿಂಗ್, ಡಿಸಿನ್ಫೆಕ್ಟ್ ಮಾಡೋದು ಕಡ್ಡಾಯ.

ಬಯೋಮೆಡಿಕಲ್‌ ವೇಸ್ಟ್ ಮ್ಯಾನೇಜ್ಮೆಂಟ್ ರೂಲ್ಸ್ 2016 ಪ್ರಕಾರ ಹಸುಗಳ ತ್ಯಾಜ್ಯ ವಿಲೇವಾರಿ ಮಾಡಬೇಕು. ಹಸುಗಳಿಗೆ ಕುಡಿಯಲು, ತೊಳೆಯಲು ಹಾಗೂ ಫ್ಲೋರ್ ಕ್ಲೀನ್ ಮಾಡಲು ದಿನಕ್ಕೆ 150 ಲೀಟರ್ ನೀರನ್ನ ಮಾತ್ರ ಬಳಕೆ ಮಾಡಬೇಕು. ಗೋಶಾಲೆ ನಡೆಸುವವರು ಹೆಚ್ಚು ಮರ ಗಿಡ ಬೆಳೆಸಬೇಕು. ಗೋಶಾಲೆಗಳು ವಿಶಾಲವಾಗಿರಬೇಕು. ಗೋಶಾಲೆಗಳು ಸಿಟಿಯಿಂದ ಹಾಗೂ ಶಾಲಾ-ಕಾಲೇಜುಗಳಿಂದ, ಆಸ್ಪತ್ರೆಗಳಿಂದ ದೂರ ಇರಬೇಕು ಹೇಗೆ ಕೆಲವೊಂದು ನಿಯಮಗಳನ್ನು ಹೊರಡಿಸಲು ಎನ್.ಜಿ.ಟಿ. ಚಿಂತನೆ ನಡೆಸಿದೆ.

ಜೊತೆಗೆ ಗೋಶಾಲೆಗಳು ಕಾಲುವೆಯಿಂದ 200 ಮೀಟರ್ ದೂರ ಹಾಗೂ ನದಿ-ಸರೋವರದಿಂದ‌ 500 ಮೀಟರ್ ದೂರ ಇರಬೇಕು. ಅಲ್ಲದೆ ಶುದ್ಧ ಕುಡಿಯುವ ನೀರಿನ ಘಟಕಗಳಿಂದ 500 ಮೀಟರ್ ಹಾಗೂ ರಾಜ್ಯ ಹೆದ್ದಾರಿಯಿಂದ 100, ರಾಷ್ಟೀಯ ಹೆದ್ದಾರಿಯಿಂದ 200 ಮೀಟರ್ ದೂರದಲ್ಲಿರಬೇಕು. ಎನ್.ಜಿ.ಟಿ. ಆದೇಶದನ್ವಯ ನಿಯಮಗಳನ್ನ ಜಾರಿ ಮಾಡೋ ಬಗ್ಗೆ ಪಿ.ಸಿ.ಬಿ. ಚರ್ಚೆ ನಡೆಸುತ್ತಿದೆ. ಆದಷ್ಟು ಬೇಗ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅಧಿಕೃತ ಆದೇಶ ಹೊರಬೀಳಲಿದೆ.

Published On - 2:55 pm, Tue, 20 October 20

Follow Us
ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ
ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ
‘ಕರಾವಳಿ’ ಸಿನಿಮಾ ನೋಡಿದ ಶಿವಮೊಗ್ಗ ಮಂದಿ ಹೇಳಿದ್ದೇನು?
‘ಕರಾವಳಿ’ ಸಿನಿಮಾ ನೋಡಿದ ಶಿವಮೊಗ್ಗ ಮಂದಿ ಹೇಳಿದ್ದೇನು?
‘ಜನ ನಾಯಗನ್’ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದು ಹೀಗೆ...
‘ಜನ ನಾಯಗನ್’ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದು ಹೀಗೆ...
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು
ಪ್ರವಾಹ: ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋದ ಅಂಗಡಿ ಮುಂಗಟ್ಟುಗಳು
ಪ್ರವಾಹ: ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋದ ಅಂಗಡಿ ಮುಂಗಟ್ಟುಗಳು