AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

10ಕ್ಕಿಂತ ಹೆಚ್ಚು ಹಸು ಸಾಕುತ್ತಿದ್ದೀರಾ.. ಜಾರಿಗೆ ಬರಲಿದೆ ಹೊಸ ಮಹತ್ವದ ಆದೇಶ

ಬೆಂಗಳೂರು: ಡೈರಿ ಫಾರ್ಮ್​ಗಳು ಮತ್ತು ಗೋಶಾಲೆಗಳಿಗೆ ಎನ್.ಜಿ.ಟಿ. ಹೊಸ ಆದೇಶ ಹೊರಡಿಸಲಿದೆ. ಹತ್ತಕ್ಕಿಂತ ಹೆಚ್ಚು ಹಸುಗಳನ್ನ ಸಾಕುವವರಿಗೆ ಈ ಆದೇಶ ಅನ್ವಯವಾಗಲಿದೆ. ನೀವು ಜೀವನೋಪಾಯಕ್ಕಾಗಿ ಹಸು ಸಾಕೋದಾದರೆ 9 ರವರೆಗೆ ಮಾತ್ರ ಸಾಕಿ. 10 ಕ್ಕಿಂತ ಹೆಚ್ಚು ಸಾಕಿದ್ರೆ ನೋಂದಣಿ ಮಾಡಿಸಲೇ ಬೇಕು ಇಲ್ಲವಾದ್ರೆ ಕ್ರಮ ಕೈಗೊಳ್ಳಲಾಗುತ್ತೆ. ಹತ್ತಕ್ಕಿಂತ ಹೆಚ್ಚು ಹಸು ಸಾಕ್ಬೇಕು ಅಂದ್ರೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯಬೇಕು ಮತ್ತು ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ. ಹಸು ಸಾಕುವವರು ಸ್ವಚ್ಛತೆ ಕಾಪಾಡಬೇಕು. ಪ್ರತಿದಿನ ಸ್ಯಾನಿಟೈಸಿಂಗ್, […]

10ಕ್ಕಿಂತ ಹೆಚ್ಚು ಹಸು ಸಾಕುತ್ತಿದ್ದೀರಾ.. ಜಾರಿಗೆ ಬರಲಿದೆ ಹೊಸ ಮಹತ್ವದ ಆದೇಶ
ಆಯೇಷಾ ಬಾನು
|

Updated on:Oct 20, 2020 | 3:00 PM

Share

ಬೆಂಗಳೂರು: ಡೈರಿ ಫಾರ್ಮ್​ಗಳು ಮತ್ತು ಗೋಶಾಲೆಗಳಿಗೆ ಎನ್.ಜಿ.ಟಿ. ಹೊಸ ಆದೇಶ ಹೊರಡಿಸಲಿದೆ. ಹತ್ತಕ್ಕಿಂತ ಹೆಚ್ಚು ಹಸುಗಳನ್ನ ಸಾಕುವವರಿಗೆ ಈ ಆದೇಶ ಅನ್ವಯವಾಗಲಿದೆ. ನೀವು ಜೀವನೋಪಾಯಕ್ಕಾಗಿ ಹಸು ಸಾಕೋದಾದರೆ 9 ರವರೆಗೆ ಮಾತ್ರ ಸಾಕಿ. 10 ಕ್ಕಿಂತ ಹೆಚ್ಚು ಸಾಕಿದ್ರೆ ನೋಂದಣಿ ಮಾಡಿಸಲೇ ಬೇಕು ಇಲ್ಲವಾದ್ರೆ ಕ್ರಮ ಕೈಗೊಳ್ಳಲಾಗುತ್ತೆ.

ಹತ್ತಕ್ಕಿಂತ ಹೆಚ್ಚು ಹಸು ಸಾಕ್ಬೇಕು ಅಂದ್ರೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯಬೇಕು ಮತ್ತು ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ. ಹಸು ಸಾಕುವವರು ಸ್ವಚ್ಛತೆ ಕಾಪಾಡಬೇಕು. ಪ್ರತಿದಿನ ಸ್ಯಾನಿಟೈಸಿಂಗ್, ಡಿಸಿನ್ಫೆಕ್ಟ್ ಮಾಡೋದು ಕಡ್ಡಾಯ.

ಬಯೋಮೆಡಿಕಲ್‌ ವೇಸ್ಟ್ ಮ್ಯಾನೇಜ್ಮೆಂಟ್ ರೂಲ್ಸ್ 2016 ಪ್ರಕಾರ ಹಸುಗಳ ತ್ಯಾಜ್ಯ ವಿಲೇವಾರಿ ಮಾಡಬೇಕು. ಹಸುಗಳಿಗೆ ಕುಡಿಯಲು, ತೊಳೆಯಲು ಹಾಗೂ ಫ್ಲೋರ್ ಕ್ಲೀನ್ ಮಾಡಲು ದಿನಕ್ಕೆ 150 ಲೀಟರ್ ನೀರನ್ನ ಮಾತ್ರ ಬಳಕೆ ಮಾಡಬೇಕು. ಗೋಶಾಲೆ ನಡೆಸುವವರು ಹೆಚ್ಚು ಮರ ಗಿಡ ಬೆಳೆಸಬೇಕು. ಗೋಶಾಲೆಗಳು ವಿಶಾಲವಾಗಿರಬೇಕು. ಗೋಶಾಲೆಗಳು ಸಿಟಿಯಿಂದ ಹಾಗೂ ಶಾಲಾ-ಕಾಲೇಜುಗಳಿಂದ, ಆಸ್ಪತ್ರೆಗಳಿಂದ ದೂರ ಇರಬೇಕು ಹೇಗೆ ಕೆಲವೊಂದು ನಿಯಮಗಳನ್ನು ಹೊರಡಿಸಲು ಎನ್.ಜಿ.ಟಿ. ಚಿಂತನೆ ನಡೆಸಿದೆ.

ಜೊತೆಗೆ ಗೋಶಾಲೆಗಳು ಕಾಲುವೆಯಿಂದ 200 ಮೀಟರ್ ದೂರ ಹಾಗೂ ನದಿ-ಸರೋವರದಿಂದ‌ 500 ಮೀಟರ್ ದೂರ ಇರಬೇಕು. ಅಲ್ಲದೆ ಶುದ್ಧ ಕುಡಿಯುವ ನೀರಿನ ಘಟಕಗಳಿಂದ 500 ಮೀಟರ್ ಹಾಗೂ ರಾಜ್ಯ ಹೆದ್ದಾರಿಯಿಂದ 100, ರಾಷ್ಟೀಯ ಹೆದ್ದಾರಿಯಿಂದ 200 ಮೀಟರ್ ದೂರದಲ್ಲಿರಬೇಕು. ಎನ್.ಜಿ.ಟಿ. ಆದೇಶದನ್ವಯ ನಿಯಮಗಳನ್ನ ಜಾರಿ ಮಾಡೋ ಬಗ್ಗೆ ಪಿ.ಸಿ.ಬಿ. ಚರ್ಚೆ ನಡೆಸುತ್ತಿದೆ. ಆದಷ್ಟು ಬೇಗ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅಧಿಕೃತ ಆದೇಶ ಹೊರಬೀಳಲಿದೆ.

Published On - 2:55 pm, Tue, 20 October 20

ರಾಯರ ಸನ್ನಿಧಿಯಲ್ಲಿ ತಂದೆಗೆ ಗೌರವ ಡಾಕ್ಟರೇಟ್: ಯುವ ರಾಜ್​ಕುಮಾರ್ ಸಂತಸ
ರಾಯರ ಸನ್ನಿಧಿಯಲ್ಲಿ ತಂದೆಗೆ ಗೌರವ ಡಾಕ್ಟರೇಟ್: ಯುವ ರಾಜ್​ಕುಮಾರ್ ಸಂತಸ
ಜ್ಯುವೆಲರಿ ಶಾಪ್‌ ದರೋಡೆ: ಕಳ್ಳರು ಸಿಕ್ಕಿಬಿದ್ದ ರೋಚಕತೆ ಬಿಚ್ಚಿಟ್ಟ ಎಸ್ಪಿ
ಜ್ಯುವೆಲರಿ ಶಾಪ್‌ ದರೋಡೆ: ಕಳ್ಳರು ಸಿಕ್ಕಿಬಿದ್ದ ರೋಚಕತೆ ಬಿಚ್ಚಿಟ್ಟ ಎಸ್ಪಿ
ರಾಹುಲ್ ಗಾಂಧಿ ನಾಯಕನ ಸ್ಥಾನ ತ್ಯಾಗ ಮಾಡಬೇಕು; AIUDF ನಾಯಕ ಪ್ರತಿಕ್ರಿಯೆ
ರಾಹುಲ್ ಗಾಂಧಿ ನಾಯಕನ ಸ್ಥಾನ ತ್ಯಾಗ ಮಾಡಬೇಕು; AIUDF ನಾಯಕ ಪ್ರತಿಕ್ರಿಯೆ
ಬೆಂಗಳೂರಿನಲ್ಲಿ ಮತ್ತೊಂದು ಬ್ಯಾಂಕ್ ದರೋಡೆಗೆ ಯತ್ನ
ಬೆಂಗಳೂರಿನಲ್ಲಿ ಮತ್ತೊಂದು ಬ್ಯಾಂಕ್ ದರೋಡೆಗೆ ಯತ್ನ
ತಂಬಾಕು ಬೆಲೆ ಕುಸಿತ: ಬೆಂಬಲ ಬೆಲೆ ನೀಡುವ ಕುರಿತು ಮೈಸೂರಲ್ಲಿ ಮಹತ್ವದ ಸಭೆ
ತಂಬಾಕು ಬೆಲೆ ಕುಸಿತ: ಬೆಂಬಲ ಬೆಲೆ ನೀಡುವ ಕುರಿತು ಮೈಸೂರಲ್ಲಿ ಮಹತ್ವದ ಸಭೆ
ಧೋನಿ ಆಪ್ತನ ಜೊತೆ ಸುತ್ತಾಡುತ್ತಿರುವ ಪರಮ ಸುಂದರಿ ಕೃತಿ ಸನನ್
ಧೋನಿ ಆಪ್ತನ ಜೊತೆ ಸುತ್ತಾಡುತ್ತಿರುವ ಪರಮ ಸುಂದರಿ ಕೃತಿ ಸನನ್
ಗಾಂಧೀಜಿ ಭಾರತದ ರಾಷ್ಟ್ರಪಿತ ಅಲ್ಲ; ನೆಹರು ಮೊದಲ ಪ್ರಧಾನಿಯಲ್ಲ: ಯತ್ನಾಳ್
ಗಾಂಧೀಜಿ ಭಾರತದ ರಾಷ್ಟ್ರಪಿತ ಅಲ್ಲ; ನೆಹರು ಮೊದಲ ಪ್ರಧಾನಿಯಲ್ಲ: ಯತ್ನಾಳ್
ಅವಧಿ ಮೀರಿದ ಔಷಧಿ ವಿತರಣೆ ಪ್ರಶ್ನಿಸಿದ್ದಕ್ಕೆ ಬೆದರಿಕೆ ಆರೋಪ
ಅವಧಿ ಮೀರಿದ ಔಷಧಿ ವಿತರಣೆ ಪ್ರಶ್ನಿಸಿದ್ದಕ್ಕೆ ಬೆದರಿಕೆ ಆರೋಪ
ತಿನ್ನುವ ತರಕಾರಿಯಲ್ಲಿ ವಿಷ: ಸದ್ದಿಲ್ಲದೇ ಮನಷ್ಯರ ದೇಹ ಸೇರುತ್ತಿದೆ ಕೀಟನಾಶಕ
ತಿನ್ನುವ ತರಕಾರಿಯಲ್ಲಿ ವಿಷ: ಸದ್ದಿಲ್ಲದೇ ಮನಷ್ಯರ ದೇಹ ಸೇರುತ್ತಿದೆ ಕೀಟನಾಶಕ
ಮಣ್ಣು ತುಂಬಿದ ಬುಟ್ಟಿ ಹೊತ್ತ ಸಿದ್ದರಾಮಯ್ಯ, ಡಿಕೆಶಿ:ವಿಡಿಯೋ ನೋಡಿ
ಮಣ್ಣು ತುಂಬಿದ ಬುಟ್ಟಿ ಹೊತ್ತ ಸಿದ್ದರಾಮಯ್ಯ, ಡಿಕೆಶಿ:ವಿಡಿಯೋ ನೋಡಿ