AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

10ಕ್ಕಿಂತ ಹೆಚ್ಚು ಹಸು ಸಾಕುತ್ತಿದ್ದೀರಾ.. ಜಾರಿಗೆ ಬರಲಿದೆ ಹೊಸ ಮಹತ್ವದ ಆದೇಶ

ಬೆಂಗಳೂರು: ಡೈರಿ ಫಾರ್ಮ್​ಗಳು ಮತ್ತು ಗೋಶಾಲೆಗಳಿಗೆ ಎನ್.ಜಿ.ಟಿ. ಹೊಸ ಆದೇಶ ಹೊರಡಿಸಲಿದೆ. ಹತ್ತಕ್ಕಿಂತ ಹೆಚ್ಚು ಹಸುಗಳನ್ನ ಸಾಕುವವರಿಗೆ ಈ ಆದೇಶ ಅನ್ವಯವಾಗಲಿದೆ. ನೀವು ಜೀವನೋಪಾಯಕ್ಕಾಗಿ ಹಸು ಸಾಕೋದಾದರೆ 9 ರವರೆಗೆ ಮಾತ್ರ ಸಾಕಿ. 10 ಕ್ಕಿಂತ ಹೆಚ್ಚು ಸಾಕಿದ್ರೆ ನೋಂದಣಿ ಮಾಡಿಸಲೇ ಬೇಕು ಇಲ್ಲವಾದ್ರೆ ಕ್ರಮ ಕೈಗೊಳ್ಳಲಾಗುತ್ತೆ. ಹತ್ತಕ್ಕಿಂತ ಹೆಚ್ಚು ಹಸು ಸಾಕ್ಬೇಕು ಅಂದ್ರೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯಬೇಕು ಮತ್ತು ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ. ಹಸು ಸಾಕುವವರು ಸ್ವಚ್ಛತೆ ಕಾಪಾಡಬೇಕು. ಪ್ರತಿದಿನ ಸ್ಯಾನಿಟೈಸಿಂಗ್, […]

10ಕ್ಕಿಂತ ಹೆಚ್ಚು ಹಸು ಸಾಕುತ್ತಿದ್ದೀರಾ.. ಜಾರಿಗೆ ಬರಲಿದೆ ಹೊಸ ಮಹತ್ವದ ಆದೇಶ
ಆಯೇಷಾ ಬಾನು
ಆಯೇಷಾ ಬಾನು|

Updated on:Oct 20, 2020 | 3:00 PM

Share

ಬೆಂಗಳೂರು: ಡೈರಿ ಫಾರ್ಮ್​ಗಳು ಮತ್ತು ಗೋಶಾಲೆಗಳಿಗೆ ಎನ್.ಜಿ.ಟಿ. ಹೊಸ ಆದೇಶ ಹೊರಡಿಸಲಿದೆ. ಹತ್ತಕ್ಕಿಂತ ಹೆಚ್ಚು ಹಸುಗಳನ್ನ ಸಾಕುವವರಿಗೆ ಈ ಆದೇಶ ಅನ್ವಯವಾಗಲಿದೆ. ನೀವು ಜೀವನೋಪಾಯಕ್ಕಾಗಿ ಹಸು ಸಾಕೋದಾದರೆ 9 ರವರೆಗೆ ಮಾತ್ರ ಸಾಕಿ. 10 ಕ್ಕಿಂತ ಹೆಚ್ಚು ಸಾಕಿದ್ರೆ ನೋಂದಣಿ ಮಾಡಿಸಲೇ ಬೇಕು ಇಲ್ಲವಾದ್ರೆ ಕ್ರಮ ಕೈಗೊಳ್ಳಲಾಗುತ್ತೆ.

ಹತ್ತಕ್ಕಿಂತ ಹೆಚ್ಚು ಹಸು ಸಾಕ್ಬೇಕು ಅಂದ್ರೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯಬೇಕು ಮತ್ತು ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ. ಹಸು ಸಾಕುವವರು ಸ್ವಚ್ಛತೆ ಕಾಪಾಡಬೇಕು. ಪ್ರತಿದಿನ ಸ್ಯಾನಿಟೈಸಿಂಗ್, ಡಿಸಿನ್ಫೆಕ್ಟ್ ಮಾಡೋದು ಕಡ್ಡಾಯ.

ಬಯೋಮೆಡಿಕಲ್‌ ವೇಸ್ಟ್ ಮ್ಯಾನೇಜ್ಮೆಂಟ್ ರೂಲ್ಸ್ 2016 ಪ್ರಕಾರ ಹಸುಗಳ ತ್ಯಾಜ್ಯ ವಿಲೇವಾರಿ ಮಾಡಬೇಕು. ಹಸುಗಳಿಗೆ ಕುಡಿಯಲು, ತೊಳೆಯಲು ಹಾಗೂ ಫ್ಲೋರ್ ಕ್ಲೀನ್ ಮಾಡಲು ದಿನಕ್ಕೆ 150 ಲೀಟರ್ ನೀರನ್ನ ಮಾತ್ರ ಬಳಕೆ ಮಾಡಬೇಕು. ಗೋಶಾಲೆ ನಡೆಸುವವರು ಹೆಚ್ಚು ಮರ ಗಿಡ ಬೆಳೆಸಬೇಕು. ಗೋಶಾಲೆಗಳು ವಿಶಾಲವಾಗಿರಬೇಕು. ಗೋಶಾಲೆಗಳು ಸಿಟಿಯಿಂದ ಹಾಗೂ ಶಾಲಾ-ಕಾಲೇಜುಗಳಿಂದ, ಆಸ್ಪತ್ರೆಗಳಿಂದ ದೂರ ಇರಬೇಕು ಹೇಗೆ ಕೆಲವೊಂದು ನಿಯಮಗಳನ್ನು ಹೊರಡಿಸಲು ಎನ್.ಜಿ.ಟಿ. ಚಿಂತನೆ ನಡೆಸಿದೆ.

ಜೊತೆಗೆ ಗೋಶಾಲೆಗಳು ಕಾಲುವೆಯಿಂದ 200 ಮೀಟರ್ ದೂರ ಹಾಗೂ ನದಿ-ಸರೋವರದಿಂದ‌ 500 ಮೀಟರ್ ದೂರ ಇರಬೇಕು. ಅಲ್ಲದೆ ಶುದ್ಧ ಕುಡಿಯುವ ನೀರಿನ ಘಟಕಗಳಿಂದ 500 ಮೀಟರ್ ಹಾಗೂ ರಾಜ್ಯ ಹೆದ್ದಾರಿಯಿಂದ 100, ರಾಷ್ಟೀಯ ಹೆದ್ದಾರಿಯಿಂದ 200 ಮೀಟರ್ ದೂರದಲ್ಲಿರಬೇಕು. ಎನ್.ಜಿ.ಟಿ. ಆದೇಶದನ್ವಯ ನಿಯಮಗಳನ್ನ ಜಾರಿ ಮಾಡೋ ಬಗ್ಗೆ ಪಿ.ಸಿ.ಬಿ. ಚರ್ಚೆ ನಡೆಸುತ್ತಿದೆ. ಆದಷ್ಟು ಬೇಗ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅಧಿಕೃತ ಆದೇಶ ಹೊರಬೀಳಲಿದೆ.

Published On - 2:55 pm, Tue, 20 October 20

Follow Us
ರಾಮನಗರದ ಕಲ್ಯಾಣ ಮಂಟಪದಲ್ಲಿ SIR ಆರೋಪಕ್ಕೆ ಗೃಹ ಸಚಿವ ಖರ್ಗೆ ಏನಂದ್ರು ನೋಡಿ
ರಾಮನಗರದ ಕಲ್ಯಾಣ ಮಂಟಪದಲ್ಲಿ SIR ಆರೋಪಕ್ಕೆ ಗೃಹ ಸಚಿವ ಖರ್ಗೆ ಏನಂದ್ರು ನೋಡಿ
ಮಳೆಗಾಗಿ ವಿಭಿನ್ನ ಹರಕೆ: ದೇವಿ ದೇಗುಲದಲ್ಲಿ ರಾತ್ರಿಪೂರ್ತಿ ಭಜನೆ
ಮಳೆಗಾಗಿ ವಿಭಿನ್ನ ಹರಕೆ: ದೇವಿ ದೇಗುಲದಲ್ಲಿ ರಾತ್ರಿಪೂರ್ತಿ ಭಜನೆ
ಗೃಹಜ್ಯೋತಿ ಪರಿಷ್ಕರಣೆ ಅಲ್ಲ; ಇದು ಮಾಹಿತಿ ಸಂಗ್ರಹ ಅಷ್ಟೇ ಎಂದ ಚೆಸ್ಕಾಂ MD
ಗೃಹಜ್ಯೋತಿ ಪರಿಷ್ಕರಣೆ ಅಲ್ಲ; ಇದು ಮಾಹಿತಿ ಸಂಗ್ರಹ ಅಷ್ಟೇ ಎಂದ ಚೆಸ್ಕಾಂ MD
ಗೃಹ ಸಚಿವರ ತವರಲ್ಲೇ ಪೊಲೀಸ್ ಠಾಣೆಯಿಂದಲೇ ಪೋಕ್ಸೋ ಕೇಸ್ ಆರೋಪಿ ಪರಾರಿ!
ಗೃಹ ಸಚಿವರ ತವರಲ್ಲೇ ಪೊಲೀಸ್ ಠಾಣೆಯಿಂದಲೇ ಪೋಕ್ಸೋ ಕೇಸ್ ಆರೋಪಿ ಪರಾರಿ!
ಫುಟ್​ಪಾತ್ ವ್ಯಾಪಾರಿಗಳಿಗೆ ಮತ್ತೆ ಸಚಿವರ ಖಡಕ್ ವಾರ್ನಿಂಗ್
ಫುಟ್​ಪಾತ್ ವ್ಯಾಪಾರಿಗಳಿಗೆ ಮತ್ತೆ ಸಚಿವರ ಖಡಕ್ ವಾರ್ನಿಂಗ್
ಇಂದು ಈ ರಾಶಿಯವರು ಕೋಪ, ಆವೇಶಗಳನ್ನು ಬದಿಗಿಟ್ಟರೆ ಕೆಲಸ ಕಾರ್ಯಗಳಲ್ಲಿ ಶುಭ
ಇಂದು ಈ ರಾಶಿಯವರು ಕೋಪ, ಆವೇಶಗಳನ್ನು ಬದಿಗಿಟ್ಟರೆ ಕೆಲಸ ಕಾರ್ಯಗಳಲ್ಲಿ ಶುಭ
1800 ಕಿ.ಮೀ ಸೈಕಲ್ ಜರ್ನಿ; ಅಭಿಮಾನಿಯ ಅಭಿಮಾನಕ್ಕೆ ಹಾರ್ದಿಕ್ ಫಿದಾ
1800 ಕಿ.ಮೀ ಸೈಕಲ್ ಜರ್ನಿ; ಅಭಿಮಾನಿಯ ಅಭಿಮಾನಕ್ಕೆ ಹಾರ್ದಿಕ್ ಫಿದಾ
ಕಲ್ಲು ಕ್ವಾರಿ ದುರಂತ: ಗಾಯಾಳುಗಳ ಆರೋಗ್ಯ ವಿಚಾರಿಸಿ ಡಿಕೆಶಿ ಹೇಳಿದ್ದೇನು?
ಕಲ್ಲು ಕ್ವಾರಿ ದುರಂತ: ಗಾಯಾಳುಗಳ ಆರೋಗ್ಯ ವಿಚಾರಿಸಿ ಡಿಕೆಶಿ ಹೇಳಿದ್ದೇನು?
ಮಳೆಯಿಂದ ಅಪಾಯದ ಮಟ್ಟ ತಲುಪಿದ ಅಲಕಾನಂದ ನದಿ; ರುದ್ರಪ್ರಯಾಗದಲ್ಲಿ ಹೈ ಅಲರ್ಟ್
ಮಳೆಯಿಂದ ಅಪಾಯದ ಮಟ್ಟ ತಲುಪಿದ ಅಲಕಾನಂದ ನದಿ; ರುದ್ರಪ್ರಯಾಗದಲ್ಲಿ ಹೈ ಅಲರ್ಟ್
ನಟಿ ರಚಿತಾ ರಾಮ್ ನೋಡಲು ಮುಗಿಬಿದ್ದ ಫ್ಯಾನ್ಸ್; ಎಂಥಾ ಕ್ರೇಜ್ ನೋಡಿ..
ನಟಿ ರಚಿತಾ ರಾಮ್ ನೋಡಲು ಮುಗಿಬಿದ್ದ ಫ್ಯಾನ್ಸ್; ಎಂಥಾ ಕ್ರೇಜ್ ನೋಡಿ..