AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಂಡೋಸಲ್ಫಾನ್ ಪೀಡಿತನಾದ್ರೂ ಬುದ್ಧಿ ಚುರುಕು.. ಏನೇ ಕೇಳಿದ್ರೂ ಫಟಾಫಟ್ ಅಂತ ಉತ್ತರ ಕೊಡ್ತಾನೆ, ಉಲ್ಟಾನೂ ಹೇಳ್ತಾನೆ

ಕೆಲವರಿಗೆ ಎಲ್ಲಾ ಸರಿ ಇದ್ದರೂ ಬುದ್ಧಿ ಶಕ್ತಿ ಕಮ್ಮಿಯಾಗಿರುತ್ತೆ. ಆದ್ರೆ ಆ ವಿಶೇಷ ಬಾಲಕ ಎಂಡೋಸಲ್ಫಾನ್ ಆಗಿದ್ರೂ ವಿಶೇಷ ಶಕ್ತಿ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ. ಲೌಕ್​ಡೌನ್ ಟೈಂನಲ್ಲಿ ಆತನ ಟ್ಯಾಲೆಂಟ್ ಹೊರ ಬಿದ್ದಿದ್ದು, ಮನೆ ಮಾತಾಗಿದ್ದಾನೆ.

ಎಂಡೋಸಲ್ಫಾನ್ ಪೀಡಿತನಾದ್ರೂ ಬುದ್ಧಿ ಚುರುಕು.. ಏನೇ ಕೇಳಿದ್ರೂ ಫಟಾಫಟ್ ಅಂತ ಉತ್ತರ ಕೊಡ್ತಾನೆ, ಉಲ್ಟಾನೂ ಹೇಳ್ತಾನೆ
ಅಬ್ದುಲ್ ಮಥೀನ್
ಆಯೇಷಾ ಬಾನು
ಆಯೇಷಾ ಬಾನು|

Updated on: Dec 25, 2020 | 3:00 PM

Share

ಕಾರವಾರ: ಈತ ಇಂಗ್ಲಿಷ್ ಪದಗಳ ಸ್ಪೆಲಿಂಗ್ ಉಲ್ಟಾ ಹೇಳೋದ್ರಲ್ಲಿ ಪರಿಣಿತ. ನಿಮಿಷಕ್ಕೆ 40ರಿಂದ 50 ಶಬ್ದಗಳನ್ನ ಫಟಾಫಟ್ ಅಂತಾ ಅರಳು ಹುರಿದಂತೆ ಹೇಳುವ ಚಾಣಾಕ್ಷ. 11 ವರ್ಷ ವಯಸ್ಸಿನ ಅಬ್ದುಲ್ ಮಥೀನ್.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದ ಶಾರದಗಲ್ಲಿಯ ಶೇಖ್ ಸಲೀಮ್ ಮತ್ತು ಮುಮ್ತಾಜ್ ಬೇಗಂ ಅವರ ಮಗ. ಹುಟ್ಟುತ್ತಲೇ ಎಂಡೋಸಲ್ಫಾನ್ ಪೀಡಿತನಾಗಿರುವ ಈ ಬಾಲಕ ಎಂದೂ ಅದನ್ನ ಒಂದು ಶಾಪ ಅಂತಾ ಪರಿಗಣಿಸದೇ ತನ್ನ ಬುದ್ಧಿ ಮೂಲಕ ಎಲ್ಲರ ಗಮನವನ್ನ ತನ್ನತ್ತ ಸೆಳೆಯುತ್ತಿದ್ದಾನೆ. ಈ ಮಥಿನ್, ಇಂಗ್ಲೀಷ್‌ನ ಎಂಥಾ ಕಷ್ಟಕರ ಪದಗಳನ್ನೇ ಕೇಳಲಿ ಅದನ್ನ ಸಲೀಸಾಗಿ ಸ್ಪೆಲ್ ಮಾಡ್ತಾನೆ. ಅಷ್ಟೇ ಅಲ್ಲ ಅದೇ ಸ್ಪೆಲಿಂಗ್ ವರ್ಡ್ ಗಳನ್ನ ಉಲ್ಟಾ ಕೂಡ ಹೇಳುತ್ತಾನೆ.

ಇನ್ನು ಈತನ ಪಾಲಕರಿಗೆ ಮೊದಲು ಈತನ ವಿಶಿಷ್ಟತೆ ಬಗ್ಗೆ ಗೊತ್ತಿರಲಿಲ್ಲ. ಕಳೆದ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಆದ ಲಾಕ್​ಡೌನ್ ವೇಳೆ ಪ್ರತಿದಿನ ಸಂಜೆ ತಂದೆ ಈತನನ್ನ ವಾಕಿಂಗ್ ಕರೆದುಕೊಂಡು ಹೋಗುತ್ತಿದ್ದರು. ಆಗ ರಸ್ತೆ ಬದಿಯ ಅಂಗಡಿಗಳ ಬೋರ್ಡುಗಳನ್ನ ಓದುತ್ತಿದ್ದ ಮಥಿನ್ ಉಲ್ಟಾ ಹೇಳಲು ಪ್ರಾರಂಭಿಸಿದನಂತೆ . ನಂತರ ಈತನ ಬುದ್ಧಿ ಶಕ್ತಿ ಬಗ್ಗೆ ಗೊತ್ತಾಗಿದೆ.

ಒಟ್ನಲ್ಲಿ ಈ ಬಾಲಕನಿಗೆ ಎಂಡೋಸಲ್ಪಾನ್ ಬಾಧಿಸಿದ್ರೂ ತನ್ನ ಬುದ್ಧಿ ಶಕ್ತಿ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ. ಈತನ ಈ ಪ್ರತಿಭೆಗೆ ಮತ್ತಷ್ಟು ಬೆಂಬಲ ಸಿಕ್ಕಿ ಮತ್ತಷ್ಟು ಸಾಧನೆ ಮಾಡಲಿ ಅನ್ನೋದೆ ಎಲ್ಲರ ಆಶಯ.

4 ವರ್ಷದ ಪುಟ್ಟ ಪೋರನಿಗೆ ಕ್ರೀಡೆ ಬಗ್ಗೆ ಎಲ್ಲಿಲ್ಲದ ಆಸಕ್ತಿ, ನಿತ್ಯ ಬೆಳಗ್ಗೆ 8 ಕಿಲೋಮೀಟರ್ ರನ್ನಿಂಗ್, ಜಾಗಿಂಗ್

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?