AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಲಿಪಿಲಿ ಹಕ್ಕಿಗಳಿಗೆ ಕುಡಿಯುವ ನೀರು – ಸೆಲ್ಫಿ ವಿಡಿಯೋ ಸಂದೇಶದ ಮೂಲಕ ಯುವಕರಿಂದ ವಿನೂತನ ಅಭಿಯಾನ

Summer 2024: ಅತ್ತ ಕಾಡುಗಳ ನಾಶ, ಅರಣ್ಯಕ್ಕೆ ಬೆಂಕಿಬಿಳೋದ್ರಿಂದ ಆಹಾರ ಸಿಗದೆ ಪ್ರಾಣಿಪಕ್ಷಿಗಳು ನಾಡಿನತ್ತ ಬರುತ್ತಿವೆ. ಅದೇ ಇತ್ತ ಸೆಲ್ಫೀ, ರೀಲ್ಸ್​​​ ಎಂದು ರೀಲು ಬಿಡುತ್ತಾ ಅಂತರ್ಜಾಲದಲ್ಲಿ ಸಿಲುಕಿರುವ ಇಂದಿನ ಜನತೆಗೆ ನಾವು ಪ್ರತಿಷ್ಠಾನದ ಸೆಲ್ಫಿ ವಿಡಿಯೋ ಸಂದೇಶ ಅಭಿಯಾನ ಬಡಿದೆಬ್ಬಿಸುವಂತಿದೆ.

Gopal AS
| Edited By: |

Updated on: Feb 09, 2024 | 11:03 AM

Share

ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು, ನದಿ ತೊರೆ ಹಳ್ಳ ಕೊಳ್ಳಗಳು ಬತ್ತುತ್ತಿವೆ. ಇದರಿಂದ ನೀರಿಗಾಗಿ (Drinking water) ಹಾಹಾಕಾರ ಎದುರಾಗಿದೆ. ಮನುಷ್ಯ ಜೀವಿ ದಣಿವಾದ್ರೆ ನೀರನ್ನ ಕುಡಿದು ದಣಿವಾರಿಸಿಕೊಳ್ಳುತ್ತಾನೆ. ಆದ್ರೆ ಮೂಕ ಜೀವಿಗಳು ಏನು ಮಾಡಬೇಕು ಹೇಳಿ. ಈ ಚಿಲಿಪಿಲಿ ಹಕ್ಕಿಗಳ (animals, birds) ಸಮಸ್ಯೆ ಅರಿತ ಕೊಡಗಿನ ತಂಡವೊಂದು ಪಕ್ಷಿಗಳ ದಣಿವಾರಿಸುವ ಪ್ರಯತ್ನಕ್ಕೆ ಕೈ ಹಾಕಿದೆ. ಹಾಗಾದ್ರೆ ಯಾವುದು ಆ ತಂಡ? ಆ ತಂಡದ ವಿನೂತನ ಪ್ರಯತ್ನ ಏನು? ಅಂತ್ತೀರಾ ಇಲ್ಲಿದೆ ಸ್ಪೇಷಲ್ ರಿಪೋರ್ಟ್. ಹೌದು ಹಿಗೊಂದು ಚಿತ್ರಣ (selfie video message) ಕಂಡುಬಂದಿದ್ದು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕಿರಗಂದೂರು ಎಂಬ ಒಂದು ಗ್ರಾಮದಲ್ಲಿ.

ತಮ್ಮದೆ ಆದ ನಾವು ಮತ್ತು ಪ್ರತಿಷ್ಠಾನ ಎಂಬ ತಂಡವನ್ನ ಕಟ್ಟಿಕೊಂಡ ಕಿರಗಂದೂರಿನ ಗೌತಮ್ ಈ ಬೇಸಿಗೆಗಾಲದಲ್ಲಿ ಪಕ್ಷಿಗಳಿಗೆ ನೀರಿಡುವ ಒಂದು ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಒಂದಿಲ್ಲೊಂದು ಸಮಾಜಮುಖಿ ಕೆಲಸಗಳನ್ನ ಮಾಡಿಕೊಂಡು ಬರುತ್ತಿರುವ ಗೌತಮ್ ಆ ಊರಿನಲ್ಲಿ ಫೇಮಸ್. ಕಳೆ ಮೂರು ವರ್ಷಗಳ ಹಿಂದೆ ಹಕ್ಕಿಗೊಂದು ಗುಟುಕು ಅಭಿಯಾನ ಎಂಬ ಒಂದು ಕಾರ್ಯಕ್ರಮವನ್ನ ಆರಂಭಿಸಿದ ಇವರು‌ ವರ್ಷದಿಂದ ವರ್ಷಕ್ಕೆ ವಿನೂತನವಾಗಿ ಪಕ್ಷಿಗಳಿಗೆ ನೀರು ಮತ್ತು ಆಹಾರವನ್ನ ಇಡುವ ಕೆಲಸಕ್ಕೆ ಮುಂದಾಗಿದ್ದಾರೆ.

ಮೊದಲ ವರ್ಷ ಪಕ್ಷಿಗಳಿಗೆ ನೀರಿಟ್ಟು ಅದನ್ನ ಸೆಲ್ಫಿ ಕಳುಹಿಸುವ ಅಭಿಯಾನ, ಎರಡನೇ ವರ್ಷ ಶಾಲಾ ಮಕ್ಕಳಿಗೆ ಪಕ್ಷಿತಜ್ಞರಿಂದ ಪಕ್ಷಿಗಳ ಬಗ್ಗೆ ಮಾಹಿತಿ ಹಾಗೂ ಪ್ರಬಂಧ ಸ್ಪರ್ಧೆಯನ್ನ ಏರ್ಪಡಿಸಿದ್ರು. ಮೂರನೇ ವರ್ಷ ಅಂದ್ರೆ ಈ ಬಾರಿ ಮನೆಯ ಮುಂದೆ, ತಾರಸಿಯ ಮೇಲೆ ಹಾಗೂ ತೋಟದಲ್ಲಿ ಪಕ್ಷಿಗಳಿಗೆ ನೀರು ಹಾಗೂ ಆಹಾರ ಧಾನ್ಯಗಳನ್ನ ಇಡಬೇಕು ಹಾಗೂ ಹಾಗೆ ಇಟ್ಟ ಒಂದು ವಿಡಿಯೋ ಅಥವ ಛಾಯಾಚಿತ್ರವನ್ನ ಇವರಿಗೆ ಕಳುಹಿಸಿಕೊಟ್ಟರೆ ಅದರಲ್ಲಿ ಉತ್ತಮ ಛಾಯಾಚಿತ್ರಕ್ಕೆ ಬಹುಮಾನವನ್ನ ನೀಡುವ ಕೆಲಸಕ್ಕೆ ಗೌತಮ್ ಕಿರಗಂದ್ದೂರು ಮತ್ತವರ ತಂಡ ಮುಂದಾಗಿದೆ‌.

ಇದನ್ನೂ ಓದಿ: ಇನ್ನು ಒಂದೇ ದೂರುವಾಣಿ: ರೈಲ್ವೆ ದೂರುಗಳಿಗಾಗಿ ಒಂದೇ ಟೋಲ್ ಫ್ರೀ ಹೆಲ್ಪ್​​ಲೈನ್​​ ದೂರವಾಣಿ ಲಭ್ಯ

ಇದರ ಒಂದು ಮುಖ್ಯ ಉದ್ದೇಶ ಅಂದ್ರೆ ಬೇಸಗೆಯ ಮೂರು ತಿಂಗಳು ಪಕ್ಷಿಗಳಿಗೆ ನೀರಿನ ಸಮಸ್ಯೆ ಎದುರಾಗುತ್ತೆ ಇದನ್ನ ಹೊಗಲಾಡಿಸುವ ನಿಟ್ಟಿನಲ್ಲಿ ಈ ರೀತಿಯ ಕೆಲಸಕ್ಕೆ ಮುಂದಾಗಿರೋದು. ಬೇಸಿಗೆ ಶುರುವಾದ್ರೆ ಸಾಕು ರಾಜ್ಯದಲ್ಲಿ ನೀರಿಗಾಗಿ ಆಹಾಕಾರ ಶುರುವಾಗುತ್ತೆ.‌ ಮನುಷ್ಯರು ಹಾಗೊ ಹೀಗೊ ಧಣಿವನ್ನ ಆರಿಸಿಕೊಳ್ತಾನೆ. ಆದ್ರೆ ಮೂಕ ಜೀವಿಗಳ ಪಾಡು ಯಾರಿಗೂ ಬೇಡ. ಗುಬ್ಬಿ, ಕೋಗಿಲೆ, ಕಾಡು ಪಾರಿವಾಳ (Nilgiri wood pigeon), ಮರಕುಟುಕ, ಹೀಗೆ ವಿವಿಧ ಜಾತಿಯ ಪಕ್ಷಿಗಳು ಮಳೆಗಾಲ ಚಳಿಗಾಲದಲ್ಲಿ ಹೇಗೋ ಬದುಕಿಬಿಡ್ತವೆ. ಆದ್ರೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಆದಾಗ ಅವುಗಳ ಪರಿಸ್ಥಿತಿ ಹೇಳತೀರದು.

ಕಾಡುಗಳ ನಾಶ, ಅರಣ್ಯಕ್ಕೆ ಬೆಂಕಿಬಿಳೋದ್ರಿಂದ ಆಹಾರ ಸಿಗದೆ ನಾಡಿನತ್ತ ಬರುತ್ವೆ. ಈ ಪಕ್ಷಿಗಳ ದಣಿವಾರಿಸಲು ಮನೆಯ ಸುತ್ತಾ ತೋಟಗಳಲ್ಲಿ, ಮನೆಯ ತಾರಾಸಿಯ ಮೇಲೆ ತೆಂಗಿನ ಚಿಪ್ಪುಗಳಲ್ಲಿ, ಹಳೆಯ ಬಾಟಲ್ ಗಳಲ್ಲಿ, ಅಡಿಕೆ ಹಾಳೆಗಳಲ್ಲಿ ನೀರು ಹಾಗೂ ಆಹಾರ ಇಡೊದ್ರಿಂದ ಅವು ಅಲ್ಲಿಯೇ ಬಂದು ದಣಿವಾರಿಸಿಕೊಂಡು ಹೋಗುತ್ವೆ. ಹಾಗೂ ಮುಂಜಾನೆ ಎದ್ದಾಗಲೂ ಕೂಡ ಹಕ್ಕಿಗಳ ಚಿಲಿಪಿಲಿ ಶಬ್ದದಿಂದ ಒಂದಷ್ಟು ಮನಸಿಗೂ ಕೂಡ ಮುದ ನೀಡುತ್ತದೆ. ನಾವು ಮತ್ತು ಪ್ರತಿಷ್ಠಾನವು ಅಭಿಯಾನವನ್ನ ವಿನೂತನವಾಗಿ ನಾಡಿನ ಜನತೆಗೆ ಮುಟ್ಟಿಸುತ್ತಿರೋದ್ರಿಂದ ಜಿಲ್ಲೆಯ ವಿವಿಧ ಭಾಗಗಳಿಂದ ಅವರ ಕಾರ್ಯಕ್ಕೆ ಉತ್ತಮ ರೆಸ್ಪಾನ್ಸ್ ಕೂಡ ಸಿಕ್ಕಿದೆ ಎನ್ನುತ್ತಾರೆ ಸವಿತಾ, ಪಕ್ಷಿ ಪ್ರೇಮಿ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ