AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಡಗು: ಪ್ರವಾಸಿಗರಿಗೆ ಖುಷಿಯ ಸುದ್ದಿ; ಮಡಿಕೇರಿಯ ರಾಜಾಸೀಟ್ ಅಪ್​ಗ್ರೇಡ್​ ಆಗಿದೆ ಒಮ್ಮೆ ಭೇಟಿ ನೀಡಿ

ಬೆಟ್ಟದ ತುತ್ತ ತುದಿಯ ವೀವ್​ ಪಾಯಿಂಟ್​ನಲ್ಲಿ ನಿಂತು ಸನ್​ ಸೆಟ್​ ನೋಡುವುದಕ್ಕೆ ಅಂತಾನೇ ಅದೆಷ್ಟೋ  ಪ್ರವಾಸಿಗರು ಸಂಜೆ ವೇಳೆಗೆ ಇಲ್ಲಿಗೆ ಆಗಮಿಸ್ತಾರೆ. ಆ ಮೂಲಕ ಸುಂದರ ನೆನಪುಗಳೊಂದಿಗೆ ಮರಳುತ್ತಾರೆ. ಇದೀಗ ಇವರ ಸವಿ ನೆನಪುಗಳನ್ನು ಮತ್ತಷ್ಟು ಸಿಹಿಯಾಗಿಸಲು ತೊಟಗಾರಿಕಾ ಇಲಾಖೆ ಹೊಸ ಯೋಜನೆ ಜಾರಿಗೊಳಿಸಿದೆ.

ಕೊಡಗು: ಪ್ರವಾಸಿಗರಿಗೆ ಖುಷಿಯ ಸುದ್ದಿ; ಮಡಿಕೇರಿಯ ರಾಜಾಸೀಟ್ ಅಪ್​ಗ್ರೇಡ್​ ಆಗಿದೆ ಒಮ್ಮೆ ಭೇಟಿ ನೀಡಿ
ಸಂಗೀತ ಕಾರಂಜಿ
TV9 Web
| Edited By: |

Updated on:Jan 12, 2022 | 1:07 PM

Share

ಕೊಡಗು: ವೀಕೆಂಡ್​ನಲ್ಲಿ ಪ್ರವಾಸ ಹೋಗುವವರಿಗೆ ಖುಷಿಯ ವಿಚಾರವೊಂದು ಸಿಕ್ಕಂತಾಗಿದೆ. ಕೊಡಗು ಜಿಲ್ಲೆಯ ಮಡಿಕೇರಿಯ ರಾಜಾಸೀಟ್ ಅಪ್​ಗ್ರೇಡ್​ ಆಗಿದೆ. ಮಡಿಕೇರಿ ರಾಜಾಸೀಟ್ (Raja seat) ಸದ್ಯ ಮಂಜಿನ ನಗರಿಗೆ ಬರುವ ಪ್ರವಾಸಿಗಳ ನೆಚ್ಚಿನ ತಾಣವಾಗಿದೆ​. ಸಂಜೆಯ ವೇಳೆ ಇಲ್ಲಿ ಬಂದು ಆಕರ್ಷಕ ಉದ್ಯಾನವನದಲ್ಲಿ ಕಾಲ ಕಳೆಯುವುದು ಬೇರೆಯೇ ಅನುಭವ ನೀಡುತ್ತದೆ. ಇದೀಗ ಇಲ್ಲಿನ ಬೆಟ್ಟದ ಮೇಲಿನ ವೀವ್​ ಪಾಯಿಂಟ್ (view point)​ ಬಳಿ  ಸಂಗೀತದ ಅಲೆಗಳಿಗೆ ತಕ್ಕಂತೆ ಬಳುಕುತ್ತಾ ಲಾಸ್ಯವಾಡುವ ನೀರಿನ ಕಾರಂಜಿ ಮತ್ತಷ್ಟು ಪ್ರವಾಸಿಗರನ್ನು ಸೆಳೆಯುತ್ತಿದೆ. 

ಬೆಟ್ಟದ ತುತ್ತ ತುದಿಯ ವೀವ್​ ಪಾಯಿಂಟ್​ನಲ್ಲಿ ನಿಂತು ಸನ್​ ಸೆಟ್​ ನೋಡುವುದಕ್ಕೆ ಅಂತಾನೇ ಅದೆಷ್ಟೋ  ಪ್ರವಾಸಿಗರು ಸಂಜೆ ವೇಳೆಗೆ ಇಲ್ಲಿಗೆ ಆಗಮಿಸ್ತಾರೆ. ಆ ಮೂಲಕ ಸುಂದರ ನೆನಪುಗಳೊಂದಿಗೆ ಮರಳುತ್ತಾರೆ. ಇದೀಗ ಇವರ ಸವಿ ನೆನಪುಗಳನ್ನು ಮತ್ತಷ್ಟು ಸಿಹಿಯಾಗಿಸಲು ತೊಟಗಾರಿಕಾ ಇಲಾಖೆ ಹೊಸ ಯೋಜನೆ ಜಾರಿಗೊಳಿಸಿದೆ.

ರಾಜಸೀಟ್​ ಉದ್ಯಾನವನದಲ್ಲಿ ನೂತನ ಸಂಗೀತ ಕಾರಂಜಿ ಅಳವಡಿಸಲಾಗಿದೆ. ಸುಮಾರು 20 ಲಕ್ಷ ರೂಪಾಯಿ ವೆಚ್ಚದಲ್ಲಿ ಆಧುನಿಕ ಸಾಫ್ಟ್​ವೇರ್​ಗಳನ್ನು ಅಳವಡಿಸಿ ಈ ಕಾರಂಜಿ ಸಿದ್ಧಗೊಳಿಸಲಾಗಿದೆ. ಬಣ್ಣ ಬಣ್ಣದ ಬೆಳಕಿನಡಿಯಲ್ಲಿ ಸಂಗೀತಕ್ಕೆ ತಕ್ಕಂತೆ ಮುಗಿಲೆತ್ತರಕ್ಕೆ ಚಿಮ್ಮುವ ಕಾರಂಜಿ ಇದೀಗ ರಾಜಾಸೀಟ್​ನ ವಿಶೇಷ ಆಕರ್ಷಣೆ ಎನಿಸಿದೆ ಎಂದು ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಪ್ರಮೋದ್ ಹೇಳಿದ್ದಾರೆ.

ಸದ್ಯ ಪ್ರಯೋಗಾತ್ಮಕವಾಗಿ ಈ ಕಾರಂಜಿಯನ್ನು ಹಾರಿಸಲಾಗುತ್ತಿದೆ. ಪ್ರತಿದಿನ ಸಂಜೆ 7 ಗಂಟೆಗೆ ಆರಂಭವಾಗುವ ಇದು 20 ನಿಮಿಷಗಳ ಕಾಲ ಪ್ರವಾಸಿಗರ ಮನ ತಣಿಸಲಿದೆ. ವೀವ್ ಪಾಯಿಂಟ್​ನಲ್ಲಿ ಸೂರ್ಯಾಸ್ತವಾಗುತ್ತಿದ್ದಂತೆಯೇ ಇತ್ತ ಮೇಲ್ಭಾಗದ ಉದ್ಯಾನವನದಲ್ಲಿ ನೀರಿನ ವೈಯಾರ ಆರಂಭವಾಗುತ್ತದೆ. ವಿಶೇಷ ಅಂದರೆ ಈ ಕಾರಂಜಿಗೆ ಕೊಡಗಿನ ವಿಶೇಷ ವಾಲಗದ ಸಂಗೀತವನ್ನು ಅಳವಡಿಸಲಾಗಿದ್ದು, ಪ್ರವಾಸಿಗರಿಗೆ ವಿಶೇಷ ಮುದ ನೀಡುತ್ತಿದೆ.

ಈ ಕಾರಂಜಿಗೆ ಅತ್ಯಾಧುನಿಕ ಸಾಫ್ಟ್​ವೇರ್​ ಅಳವಡಿಸಲಾಗಿದೆ. ಕೇವಲ ಮೊಬೈಲ್​ನಲ್ಲೇ ಇದನ್ನು ನಿರ್ವಹಣೆ ಮಾಡಬಹುದಾಗಿದೆ. ಇನ್ನು ಕೆಲವು ದಿನಗಳ ಪ್ರಯೋಗದ ಬಳಿಕ ಶಾಶ್ವತವಾಗಿ ಇದನ್ನು ಜಾರಿಗೆ ತರಲಾಗುತ್ತದೆ. ಹಾಗಾಗಿ ಕೊಡಗು ಜಿಲ್ಲೆಗೆ ಅದರಲ್ಲೂ ಮಡಿಕೇರಿಗೆ ಪ್ರವಾಸ ಅಂತ ಬರುವವರಿಗೆ ಇನ್ನು ರಾಜಾಸೀಟ್​ನ ಸೂರ್ಯಾಸ್ತದ ಜೊತೆ ಸಂಗೀತ ಕಾರಂಜಿ ಮತ್ತಷ್ಟು​ ಖುಷಿ ನೀಡಲಿದೆ.

ವರದಿ: ಗೋಪಾಲ್ ಸೋಮಯ್ಯ

ಇದನ್ನೂ ಓದಿ: ಮಂಗಳೂರು: ಪಿಲಿಕುಳ ಉದ್ಯಾನವನದಲ್ಲಿ 9 ವರ್ಷದ ಒಲಿವರ್ ಹೆಸರಿನ ಹುಲಿ ಏಕಾಏಕಿ ಸಾವು

ಪ್ರವಾಸಕ್ಕೆ ಹೋಗಿ ಹಿಮಪಾತಕ್ಕೆ ಬಲಿಯಾದ 16ಕ್ಕೂ ಹೆಚ್ಚು ಮಂದಿ; ಹಿಮದಡಿ ಸಿಲುಕಿದ ಕಾರಿನಲ್ಲಿ ಶವಗಳು, ಸೇನೆಯಿಂದ ರಕ್ಷಣಾ ಕಾರ್ಯಾಚರಣೆ

Published On - 1:03 pm, Wed, 12 January 22

Follow Us
ಕಾಂಗ್ರೆಸ್​​ನಲ್ಲಿ ಸ್ಫೋಟಕ ಬೆಳವಣಿಗೆ: 30 ಹಿರಿಯ ಶಾಸಕರು ದಿಢೀರ್ ಸಭೆ
ಕಾಂಗ್ರೆಸ್​​ನಲ್ಲಿ ಸ್ಫೋಟಕ ಬೆಳವಣಿಗೆ: 30 ಹಿರಿಯ ಶಾಸಕರು ದಿಢೀರ್ ಸಭೆ
ನಟಿ ಚೈತ್ರಾ ಜೆ. ಆಚಾರ್ ಕಂಠದಲ್ಲಿ ಕೇಳಿ ‘ಕರಿಮಾಯಿ ತಾಯೆ’ ಹಾಡು
ನಟಿ ಚೈತ್ರಾ ಜೆ. ಆಚಾರ್ ಕಂಠದಲ್ಲಿ ಕೇಳಿ ‘ಕರಿಮಾಯಿ ತಾಯೆ’ ಹಾಡು
ದೆಹಲಿಗೆ ಹೋಗಿ ಡಯೆಟ್ ಮರೆತ ರಾಗಿಣಿ ದ್ವಿವೇದಿ; ಭರ್ಜರಿ ಊಟ ಸವಿದ ನಟಿ
ದೆಹಲಿಗೆ ಹೋಗಿ ಡಯೆಟ್ ಮರೆತ ರಾಗಿಣಿ ದ್ವಿವೇದಿ; ಭರ್ಜರಿ ಊಟ ಸವಿದ ನಟಿ
ಪಾಕ್ ಆಟಗಾರನನ್ನು ಖರೀದಿಸಿದ ಕಾವ್ಯ ಮಾರನ್​ಗೆ ಭಾರತೀಯರಿಂದ ಹಿಡಿಶಾಪ
ಪಾಕ್ ಆಟಗಾರನನ್ನು ಖರೀದಿಸಿದ ಕಾವ್ಯ ಮಾರನ್​ಗೆ ಭಾರತೀಯರಿಂದ ಹಿಡಿಶಾಪ
ಪುಟ್ಟ ಬಾಲಕಿಯ ಕೈಯಲ್ಲೇ ಮೊಬೈಲ್ ಸ್ಫೋಟ; ಇಲ್ಲಿದೆ ವಿಡಿಯೋ
ಪುಟ್ಟ ಬಾಲಕಿಯ ಕೈಯಲ್ಲೇ ಮೊಬೈಲ್ ಸ್ಫೋಟ; ಇಲ್ಲಿದೆ ವಿಡಿಯೋ
ಲಕ್ಕುಂಡಿ ನಿಧಿ ರಹಸ್ಯ ಕೊನೆಗೂ ಬಯಲು, ಚಿನ್ನ ಎಷ್ಟು ಕೋಟಿ ಮೌಲ್ಯದ್ದು?
ಲಕ್ಕುಂಡಿ ನಿಧಿ ರಹಸ್ಯ ಕೊನೆಗೂ ಬಯಲು, ಚಿನ್ನ ಎಷ್ಟು ಕೋಟಿ ಮೌಲ್ಯದ್ದು?
ಮಧ್ಯಪ್ರಾಚ್ಯ ಯುದ್ಧದಿಂದ ಅಕ್ಕಿ ಉದ್ಯಮಕ್ಕೂ ಹೊಡೆತ!
ಮಧ್ಯಪ್ರಾಚ್ಯ ಯುದ್ಧದಿಂದ ಅಕ್ಕಿ ಉದ್ಯಮಕ್ಕೂ ಹೊಡೆತ!
ವಾಣಿಜ್ಯ ಸಿಲಿಂಡರ್ ಕೊರತೆ: ಕಟ್ಟಿಗೆ ಒಲೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​
ವಾಣಿಜ್ಯ ಸಿಲಿಂಡರ್ ಕೊರತೆ: ಕಟ್ಟಿಗೆ ಒಲೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​
ರೈಲಿನ ಕಿಟಕಿಯ ಸರಳುಗಳ ಮಧ್ಯೆ ಎಳನೀರು ಒಳಗೆಳೆಯಲು ವ್ಯಕ್ತಿಯ ಹರಸಾಹಸ
ರೈಲಿನ ಕಿಟಕಿಯ ಸರಳುಗಳ ಮಧ್ಯೆ ಎಳನೀರು ಒಳಗೆಳೆಯಲು ವ್ಯಕ್ತಿಯ ಹರಸಾಹಸ
ಸಿಲಿಂಡರ್ ಶಾರ್ಟೇಜ್; ರಾಜ್​​ಕುಮಾರ್ ನೆಚ್ಚಿನ ಹೋಟೆಲ್​​ಗೆ ಬೀಗ
ಸಿಲಿಂಡರ್ ಶಾರ್ಟೇಜ್; ರಾಜ್​​ಕುಮಾರ್ ನೆಚ್ಚಿನ ಹೋಟೆಲ್​​ಗೆ ಬೀಗ