AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಳಿ ಸ್ವಿಫ್ಟ್​​ ಕಾರಿನಲ್ಲಿ ಬಂದು, ಸಮ್ಮೋಹನಗೊಳಿಸಿ ಗೂಗಲ್ ಪೇ ಮೂಲಕ ಹಣ ದೋಚುತ್ತಿದ್ದಾರೆ ಸ್ವಾಮೀಜಿ ವೇಷಧಾರಿಗಳು!

ಕೆಎ 02 ಎಹೆಚ್ 3717 ನೋಂದಣಿಯ ಬಿಳಿ ಸ್ವಿಫ್ಟ್​​ ಕಾರಿನಲ್ಲಿ ಬಂದಿರುವ ವಂಚಕರು ಸಮ್ಮೋಹನಗೊಳಿಸಿ ಹಣ ಪಡೆಯುತ್ತಿದ್ದಾರೆ. ಜನ ಎಚ್ಚರದಿಂದ ಇರುವಂತೆ ಕೋರಲಾಗಿದೆ. ಕಾರು ಮತ್ತು ಗೂಗಲ್ ಪೇ ನಂಬರ್​ ಜಾಡು ಹಿಡಿದು ತನಿಖೆ ನಡೆಸುವಂತೆ ಜನ ಪೊಲೀಸರನ್ನು ಒತ್ತಾಯಿಸಿದ್ದಾರೆ.

ಬಿಳಿ ಸ್ವಿಫ್ಟ್​​ ಕಾರಿನಲ್ಲಿ ಬಂದು, ಸಮ್ಮೋಹನಗೊಳಿಸಿ ಗೂಗಲ್ ಪೇ ಮೂಲಕ ಹಣ ದೋಚುತ್ತಿದ್ದಾರೆ ಸ್ವಾಮೀಜಿ ವೇಷಧಾರಿಗಳು!
ಜನರಿಗೆ ಸಮ್ಮೋಹನಗೊಳಿಸಿ ಹಣ ಪಡೆದ ಸ್ವಾಮೀಜಿ -ಕೊಡಗು ಜಿಲ್ಲೆಯಲ್ಲಿ ವಂಚನೆ
Gopal AS
| Updated By: ಸಾಧು ಶ್ರೀನಾಥ್​|

Updated on: Jan 10, 2024 | 11:44 AM

Share

ಮಡಿಕೇರಿ: ಸ್ವಾಮೀಜಿ ವೇಷಧಾರಿಯಾಗಿ ಬಂದ ಇಬ್ಬರು ಸಮ್ಮೋಹನಗೊಳಿಸಿ ಹಲವರಿಂದ ಹಣ ದೋಚಿರುವ ಆರೋಪ ಕೊಡಗು ಜಿಲ್ಲೆಯಲ್ಲಿ ಕೇಳಿ ಬಂದಿದೆ. ಕುಶಾಲನಗರ ತಾಲ್ಲೂಕಿನ ವಾಲ್ನೂರು ಗ್ರಾಮನದ ಮನೆಯೊಂದಕ್ಕೆ ಬಂದ ಸ್ವಾಮೀಜಿ ಮತ್ತು ಕಾರು ಚಾಲಕ ಆ ಮನೆಯಲ್ಲಿ ಹಲವು ಸಮಸ್ಯೆಗಳಿದ್ದು ಅದನ್ನು ಪರಿಹರಿಸುವುದಾಗಿಯೂ ಮತ್ತು ಅದಕ್ಕೆ ಹಣ ನೀಡುವಂತೆ ಕೇಳಿದ್ದಾರೆ. ಮನೆಯವರು ಪರಿಹಾರ ಏನೂ ಬೇಡ ಈ ಹಣ ತೆಗೆದುಕೊಂಡು ಹೋಗಿ ಎಂದು ನೂರು ರೂಪಾಯಿ ಕೊಡಲು ಮುಂದಾಗಿದ್ದಾರೆ. ಆದ್ರೆ ಅದಕ್ಕೆ ಒಪ್ಪದ ಆಗಂತುಕರು ಮತ್ತಷ್ಟು ಹಣ ಕೇಳಿದ್ದಾರೆ. ಈ ಸಂದರ್ಭ ಮನೆ ಮಾಲೀಕ ಒಂದು ಸಾವಿರ ರೂ ಕೊಟ್ಟು ಕಳುಹಿಸಿದ್ದಾರೆ. ಆದ್ರೆ ದಾರಿಯಲ್ಲಿ ಮನೆ ಮಾಲೀಕನ ಪುತ್ರ ಎದುರಾಗಿದ್ದು ಆತನಿಗೆ ಸ್ವಾಮೀಜಿ ಆಶೀರ್ವಾದ ಮಾಡುವಂತೆ ಹೂವೊಂದನ್ನು ನೀಡಿದ್ದಾರೆ ಅಷ್ಟೆ. ಹೂ ಪಡೆದ ವ್ಯಕ್ತಿ ಮಂತ್ರ ಮುಗ್ದರಾದಂತೆ ತಮ್ಮ ಮೊಬೈಲ್​ ಮೂಲಕ 4 ಸಾವಿರ ರೂ ಗೂಗಲ್ ಪೇ ಮಾಡಿದ್ದಾರೆ!

ಇದೇ ರೀತಿ ಗುಹ್ಯ ಗ್ರಾಮದಲ್ಲಿ 50 ಸಾವಿ ರೂ ವಂಚನ:

ಇನ್ನು ಇದೇ ಸ್ವಾಮೀಜಿ ಮತ್ತು ಆತನ ಕಾರು ಚಾಲಕ ವಿರಾಜಪೇಟೆ ತಾಲ್ಲೂಕಿನ ಗುಹ್ಯ ಗ್ರಾಮದ ಮಹಿಳೆಯೊಬ್ಬರ ಮನೆಗೆ ತೆರಳಿದ್ದಾರೆ. ಅಲ್ಲಿಯೂ ಆಶೀರ್ವಾದ ಮಾಡುವಂತೆ ಮಹಿಳೆಯ ಕೈಗೆ ಹೂವೊಂದನ್ನು ನೀಡಿದ್ದಾರೆ… ಅಷ್ಟೆ. ಮಂತ್ರಮುಗ್ದರಾದ ಮಹಿಳೆಯು ತಮಗೇ ಅರಿವಿಲ್ಲದಂತೆ 50 ಸಾವಿರ ರೂ ಗೂಗಲ್ ಪೇ ಮಾಡಿದ್ದಾರೆ. ಹಣ ಪಡೆದ ಸ್ವಾಮೀಜಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಇದನ್ನೂ ಓದಿ: ಹಣಕ್ಕಾಗಿ ವೃದ್ಧ ದೊಡ್ಡಪ್ಪ-ದೊಡ್ಡಮ್ಮನನ್ನೆ ಕೊಂದಿದ್ದವನಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ ಕೋರ್ಟ್, ಸಮಾಧಾನಗೊಂಡ ಕುಟುಂಬಸ್ಥರು 

ಕೆಲ ಸಮಯದ ಬಳಿಕ ತಾವು ಹೇಗೆ ಅಷ್ಟೊಂದು ಹಣ ಸ್ವಾಮೀಜಿಗೆ ನೀಡಿದೆ ಎಂದೇ ಅರಿವಾಗುತ್ತಿಲ್ಲ ಎಂದು ಆ ಮಹಿಳೆ ಕಣ್ಣೀರಿಡುತ್ತಿದ್ದಾರೆ. ಸದ್ಯ ಸಿದ್ದಾಪುರ ಪೊಲೀಸರಿಗೆ ದೂರು ನೀಡಲು ಆ ಮಹಿಳೆ ಮುಂದಾಗಿದ್ದಾರೆ. ಜಿಲ್ಲೆಯ ಇತರ ಕಡೆಗಳಲ್ಲೂ ಸ್ವಾಮೀಜಿ ವೇಷಧಾರಿಗಳು ಹಲವರಿಂದ ಇದೇ ರೀತಿ ಹಣ ಪಡೆದಿರುವ ಸಾಧ್ಯತೆ ಇದೆ. ಆದರೆ ಮರ್ಯಾದೆಗೆ ಅಂಜಿ ಬಹಳಷ್ಟು ಜನ ಮುಂದೆ ಬರುತ್ತಿಲ್ಲ ಎನ್ನಲಾಗಿದೆ.

ಬಿಳಿ ಬಣ್ಣ ಸ್ವಿಫ್ಟ್​​ ಕಾರಿನಲ್ಲಿ ಬಂದಿರುವ ಇವರ ದೃಶ್ಯ ಎರಡು ಮನೆಗಳ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೆಎ 02 ಎಹೆಚ್ 3717 ನೋಂದಣಿ ಸಂಖ್ಯೆಯ ಕಾರಿನಲ್ಲಿ ಇವರು ಆಗಮಿಸಿದ್ದು ಜನರು ಎಚ್ಚರದಿಂದ ಇರುವಂತೆ ಕೋರಲಾಗಿದೆ. ಈ ಕಾರು ಮತ್ತು ಗೂಗಲ್ ಪೇ ನಂಬರ್​ನ ಜಾಡು ಹಿಡಿದು ತನಿಖೆ ನಡೆಸುವಂತೆ ಜನರು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಸಿದ್ದರಾಮಯ್ಯಗೆ ಈಗ ಅದರ ಮೇಲೆಯೇ ಶಂಕೆ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಸಿದ್ದರಾಮಯ್ಯಗೆ ಈಗ ಅದರ ಮೇಲೆಯೇ ಶಂಕೆ
ಬಿಜೆಪಿಯಲ್ಲಿ ಮೊದಲ ಹಂತದ ಶುದ್ಧೀಕರಣ ಕಾರ್ಯ ಮುಗಿದಿದೆ: ಸದಾನಂದಗೌಡ
ಬಿಜೆಪಿಯಲ್ಲಿ ಮೊದಲ ಹಂತದ ಶುದ್ಧೀಕರಣ ಕಾರ್ಯ ಮುಗಿದಿದೆ: ಸದಾನಂದಗೌಡ