AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ಲಾಸ್ಟಿಕ್​ ಬಾಟಲ್, ಒಡೆದ ಕೋಳಿ ಮೊಟ್ಟೆಯಲ್ಲಿ ಅರಳಿದ ಹಸಿರು; ಮನೆಯಲ್ಲಿಯೇ ನಿರ್ಮಾಣವಾಗಿದೆ ಸುಂದರ ಉದ್ಯಾನವನ

ಸಾಮಾನ್ಯವಾಗಿ ಎಲ್ಲರ ಮನೆಯ ಅಂಗಳದಲ್ಲಿ ಗಿಡಗಳನ್ನು ನೋಡಬಹುದು. ಆದರೆ ಇವರ ಮನೆಯ ಬೆಡ್​ರೂಂ ನಿಂದ ಹಿಡಿದು ಅಡುಗೆ ಮನೆಯವರೆಗೆ, ಹಾಲ್​ನಿಂದ ಮನೆಯ ಗೋಡೆಗಳ ಮೇಲೆಲ್ಲಾ ವಿಭಿನ್ನ ರೀತಿಯ ಗಿಡಗಳನ್ನು ನೋಡಬಹುದು.

ಪ್ಲಾಸ್ಟಿಕ್​ ಬಾಟಲ್, ಒಡೆದ ಕೋಳಿ ಮೊಟ್ಟೆಯಲ್ಲಿ ಅರಳಿದ ಹಸಿರು; ಮನೆಯಲ್ಲಿಯೇ ನಿರ್ಮಾಣವಾಗಿದೆ ಸುಂದರ ಉದ್ಯಾನವನ
ಮನೆಯಲ್ಲಿಯೇ ನಿರ್ಮಾಣವಾಗಿದೆ ಸುಂದರ ಉದ್ಯಾನವನ
TV9 Web
| Edited By: |

Updated on: Jul 21, 2021 | 3:41 PM

Share

ಕೋಲಾರ: ಹಸಿರೇ ಉಸಿರು ಎನ್ನುವ ಮಾತು ಇತ್ತೀಚೆಗೆ ದೂರವಾಗುತ್ತಿದೆ. ಆದರೆ ಕೋಲಾರ ಜಿಲ್ಲೆಯ ಮನೆಯೊಂದರಲ್ಲಿ ಈ ವಾಕ್ಯವನ್ನೇ ಧ್ಯೇಯ ಮಾಡಿಕೊಂಡಿದ್ದಾರೆ. ಕೋಲಾರ ನಗರದ ಕಾಳಿದಾಸ ಬಡಾವಣೆಯ ರವಿಕುಮಾರ್​ ಹಾಗೂ ಮೋನಿಕಾ ಅವರ ಮನೆಯಲ್ಲಿ ಹಸಿರು ತುಂಬಿ ತುಳುಕುತ್ತಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ರವಿಕುಮಾರ್​ ಅವರಿಗೆ ಹಸಿರು ಗಿಡಗಳನ್ನು ಬೆಳೆಸುವುದು ಎಂದರೆ ಎಲ್ಲಿಲ್ಲದ ಪ್ರೀತಿ. ತಮ್ಮ ದೊಡ್ಡಮ್ಮನವರಿಂದ ಪ್ರೇರೇಪಿತರಾದ ರವಿಕುಮಾರ್​ ತಮ್ಮ ಮನೆಯಲ್ಲಿ ಹತ್ತಾರು ಬಗೆಯ ಗಿಡಗಳನ್ನು ಬೆಳೆಸುವ ಹವ್ಯಾಸ ಮಾಡಿಕೊಂಡಿದ್ದಾರೆ.

ತಮಗೆ ಸಿಗುವ ಯಾವುದೇ ಪ್ಲಾಸ್ಟಿಕ್​ ಬಾಟಲ್​ಗಳು, ಗಾಜಿನ ಬಾಟಲ್​ಗಳು, ವಾಹನದ ಟಯರ್​, ಖಾಲಿ ಕೋಳಿ ಮೊಟ್ಟೆ, ನೀರಿನ ಗ್ಲಾಸ್​, ಪಾಟ್​ಗಳು, ಹೀಗೆ ಸಿಕ್ಕ ವಸ್ತುಗಳನ್ನು ಬಳಸಿಕೊಂಡು ವಿಭಿನ್ನವಾಗಿ ಗಿಡಗಳನ್ನು ಬೆಳೆಸುವುದು ಇವರ ಹವ್ಯಾಸ. ಬಿಡುವಿನ ವೇಳೆಯಲ್ಲಿ ಹೆಚ್ಚಾಗಿ ಮನೆಯಲ್ಲಿನ ತಮ್ಮ ಗಿಡಗಳೊಂದಿಗೆ ಕಾಲ ಕಳೆಯುವ ರವಿಕುಮಾರ್​ ದಂಪತಿ ತಮ್ಮ ಮನೆಯನ್ನೇ ಒಂದು ಸುಂದರ ಪಾರ್ಕ್​ನ್ನಾಗಿ ಮಾಡಿಕೊಂಡಿದ್ದಾರೆ. ಇವರು ಅರಿಶಿಣ, ಅಲೋವೇರಾ, ಮರಗೆಣಸು, ತುಳಸಿ, ಒಂದೆಲಗ ಹೀಗೆ ಹಲವಾರು ಔಷಧೀಯ ಗಿಡಗಳ ಜತೆಗೆ, ಇಂಗಾಲವನ್ನು ಹೀರಿಕೊಂಡು ಆಕ್ಸಿಜನ್​ ಕೊಡುವ ಗಿಡಗಳನ್ನು ಬೆಳೆಸಿದ್ದಾರೆ. ಇವರ ಮನೆಯ ಒಳಗೆ ಹಾಗೂ ಹೊರಗೆ ಎಲ್ಲೆಡೆ ಗಿಡಗಳೇ ತುಂಬಿಕೊಂಡಿದೆ.

ತಮ್ಮ ಮನೆಗೆ ನಿಸರ್ಗವನ ಎಂದು ಹೆಸರಿಟ್ಟಿರುವ ಈ ದಂಪತಿಗಳಿಗೆ ಮನೆಯಲ್ಲಿ ಗಿಡಗಳನ್ನು ಬೆಳೆಸುವುದೇ ಒಂದು ಹವ್ಯಾಸ. ಸಾಮಾನ್ಯವಾಗಿ ಎಲ್ಲರ ಮನೆಯ ಅಂಗಳದಲ್ಲಿ ಗಿಡಗಳನ್ನು ನೋಡಬಹುದು. ಆದರೆ ಇವರ ಮನೆಯ ಬೆಡ್​ರೂಂ ನಿಂದ ಹಿಡಿದು ಅಡುಗೆ ಮನೆಯವರೆಗೆ, ಹಾಲ್​ನಿಂದ ಮನೆಯ ಗೋಡೆಗಳ ಮೇಲೆಲ್ಲಾ ವಿಭಿನ್ನ ರೀತಿಯ ಗಿಡಗಳನ್ನು ನೋಡಬಹುದು.

ಮನೆಯಲ್ಲಿ ವಿವಿಧ ರೀತಿಯ ಆಟಿಕೆಗಳ ರೀತಿಯಲ್ಲಿ ಪಾಟ್​ಗಳನ್ನು ಮಾಡಿ, ಅದರಲ್ಲೂ ವಿವಿಧ ರೀತಿಯ ಶೋ ಗಿಡಗಳನ್ನು ಬೆಳೆಸುವುದು, ಖಾಲಿ ಬಾಟಲ್​ಗಳನ್ನು ವಿಭಿನ್ನವಾಗಿ ಕತ್ತರಿಸಿ ಅದರಲ್ಲಿ ಗಿಡ ಬೆಳೆಸಿ ಅಲಂಕಾರವಾಗಿ ನೇತಾಕುವುದು ಹೀಗೆ ಹಲವು ರೀತಿಯಲ್ಲಿ ಗಿಡಗಳನ್ನು ಬೆಳೆಸಿದ್ದೇವೆ ಎಂದು ರವಿಕುಮಾರ್ ತಿಳಿಸಿದ್ದಾರೆ.

ಇನ್ನು ಇವರ ಮನೆಯನ್ನು ನೋಡಿದ ಇವರ ಸ್ನೇಹಿತರುಗಳು ಕೂಡಾ ಇವರಿಗೆ ಗಿಡಗಳನ್ನು ಉಡುಗೋರೆಯಾಗಿ ನೀಡುತ್ತಿದ್ದಾರೆ. ಅಲ್ಲದೆ ರವಿಕುಮಾರ್​ ತಮ್ಮ ಮದುವೆಯಲ್ಲಿ 1000 ಗಿಡಗಳನ್ನು ಮದುವೆಗೆ ಬಂದಿದ್ದ ಜನರಿಗೆ ಕೊಟ್ಟು ಗಿಡಗಳನ್ನು ಬೆಳೆಸಲು ಪ್ರೇರೇಪಣೆ ಮಾಡಿದ್ದಾರೆ. ಹೀಗೆ ಪರಿಸರ ರಕ್ಷಣೆಗಾಗಿ ಈ ದಂಪತಿ ವಿಭಿನ್ನವಾಗಿ ತಮ್ಮ ಮನೆಯನ್ನೇ ಪಾರ್ಕ್​ ರೀತಿ ಪರಿವರ್ತಿಸಿದ್ದಾರೆ.

ಇದನ್ನೂ ಓದಿ: ಮನೆ ಮೇಲೆ ಬಗೆಬಗೆ ತರಕಾರಿ, ನಗುತಿವೆ ಹತ್ತಾರು ಬಗೆಯ ಸೊಪ್ಪು, ಹೂ ಗಿಡಗಳು; ತಾರಸಿ ಕೃಷಿಯ ಯಶೋಗಾಥೆಯಿದು

ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿವೆ ನೀಳಕೊಂಬಿನ ಕೃಷ್ಣ ಮೃಗಗಳು

Follow Us
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು