ಕೋಲಾರ: ಜೀವಂತ ರೈತನಿಗೆ ಮರಣ ಪ್ರಮಾಣಪತ್ರ! ಇದು ಅಧಿಕಾರಿಗಳ ಎಡವಟ್ಟೋ ದುರುದ್ದೇಶದ ಕೃತ್ಯವೋ?

ನ್ಯಾಯಬೆಲೆ ಅಂಗಡಿಯಲ್ಲಿ ಪ್ರತಿ ತಿಂಗಳಿನಂತೆ ಪಡಿತರ ಆಹಾರ ಪಡೆಯಲು ಹೋದ ವೇಳೆ ರೈತ ಶಿವರಾಜ್​ಗೆ ಆಘಾತ ಕಾರಿ ಅಂಶ ಹೊರಬಿದ್ದಿದೆ. ಶಿವರಾಜ್ ಮೃತರಾಗಿದ್ದು ಅವರನ್ನು ಪಡಿತರ ಚೀಟಿಯಿಂದ‌ ಹೆಸರನ್ನು ಕೈ‌ ಬಿಡಲಾಗಿದೆ ಅನ್ನೋ ವಿಷಯ ಗೊತ್ತಾಗಿದೆ. ಇದರಿಂದ‌ ಈಡೀ ಕುಟುಂಬ‌ ಅಘಾತಕ್ಕೊಳಗಾಗಿದ್ದಾರೆ.

ಕೋಲಾರ: ಜೀವಂತ ರೈತನಿಗೆ ಮರಣ ಪ್ರಮಾಣಪತ್ರ! ಇದು ಅಧಿಕಾರಿಗಳ ಎಡವಟ್ಟೋ ದುರುದ್ದೇಶದ ಕೃತ್ಯವೋ?
ಜೀವಂತ ರೈತನಿಗೆ ಮರಣ ಪ್ರಮಾಣಪತ್ರ!
Follow us
| Updated By: ganapathi bhat

Updated on: Jan 30, 2022 | 6:16 PM

ಕೋಲಾರ: ವ್ಯಕ್ತಿ ಸತ್ತ ಮೇಲೆ ನೀಡುವ ಮರಣ ಪ್ರಮಾಣಪತ್ರ ಅಧಿಕಾರಿಗಳ ಎಡವಟ್ಟಿನಿಂದಾಗಿ ವ್ಯಕ್ತಿಯೊಬ್ಬನಿಗೆ ಜೀವಂತ ಇದ್ದಾಗಲೇ ಸಿಕ್ಕಿದ ಘಟನೆ ನಡೆದಿದೆ. ಕೋಲಾರ ಜಿಲ್ಲೆಯ ಮುಳಬಾಗಲು ತಾಲ್ಲೂಕು ಕಚೇರಿಯಲ್ಲಿ ನಡೆಯಬಾರದ್ದೊಂದು ಘಟನೆ ನಡೆದು ಹೋಗಿದೆ. ಇದರಲ್ಲಿ ಅಧಿಕಾರಿಗಳ ಎಡವಟ್ಟು ಅನ್ನೋದು ಒಂದು ಅಂಶವಾದರೆ, ತಾಲ್ಲೂಕು ಕಚೇರಿಯಲ್ಲಿ ಹಣ ಕೊಟ್ಟರೆ ಯಾರನ್ನು ಬೇಕಾದರೂ ಸಾಯಿಸಬಹುದು, ಯಾರನ್ನು ಬೇಕಾದ್ರು ಬದುಕಿಸಬಹುದು ಅನ್ನೋದು ಸಾಬೀತಾಗಿದೆ. ಹೌದು. ಮುಳಬಾಗಿಲು ತಾಲೂಕಿನ ಎಂ. ಹೊಸಹಳ್ಳಿ ಗ್ರಾಮದ ರೈತ ಶಿವರಾಜ್ ಇನ್ನೂ ಜೀವಂತವಾಗಿ ಇರುವಾಗಲೇ ಅವರನ್ನು ದಾಖಲೆಗಳಲ್ಲಿ ಸಾಯಿಸಲಾಗಿದೆ.

ಎಂ. ಹೊಸಹಳ್ಳಿ ಗ್ರಾಮದ ರೈತ ಶಿವರಾಜ್​ ಎಂಬುವರು ತಮಗಿರುವ ಒಂದಷ್ಟು ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಅದರ ಜೊತೆಗೆ ಸಣ್ಣದೊಂದು ಅಂಗಡಿ ಹಾಕಿಕೊಂಡು ಜೀವನ ಮಾಡಿಕೊಂಡು ಬದುಕುತ್ತಿದ್ದಾರೆ. ಹೀಗಿರುವಾಗಲೇ ಅವರಿಗೆ ಕಳೆದ 2021 ನೇ ಜುಲೈ 7 ರಂದು ರೈತ ಶಿವರಾಜ್​ ಮರಣ ಹೊಂದಿದ್ದಾರೆಂದು ಮರಣ ಪ್ರಮಾಣ ಪತ್ರ ನೀಡಿ ಅಧಿಕಾರಿಗಳು ಎಡವಟ್ಟು ಮಾಡಿಕೊಂಡಿದ್ದಾರೆ.

ಅದು ಶಿವರಾಜ್​ ಅವರಿಗೆ ಗೊತ್ತಾಗಿಲ್ಲ, ಶಿವರಾಜ್ ಕುಟುಂಬ ಎಂ.ಹೊಸಹಳ್ಳಿ ಗ್ರಾಮದ ಹೊರಗೆ ಸಣ್ಣದೊಂದು ಚಿಲ್ಲರೆ ಅಂಗಡಿ‌ ಹಾಕಿಕೊಂಡು‌ ಜೀವನ ಮಾಡುತ್ತಿದ್ದಾರೆ ಜೊತೆಗೆ ಗ್ರಾಮದ ಯಾರ ವಿಷಯಕ್ಕೂ ಹೋಗದೆ ತಾವಾಯಿತು ತಮ್ಮ ಬದುಕುಯಾಯಿತೆಂದು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದಾರೆ. ಹೀಗಿರುವಾಗಲೇ ಗ್ರಾಮದಲ್ಲಿನ ನ್ಯಾಯಬೆಲೆ ಅಂಗಡಿಯಲ್ಲಿ ಪ್ರತಿ ತಿಂಗಳಿನಂತೆ ಪಡಿತರ ಆಹಾರ ಪಡೆಯಲು ಹೋದ ವೇಳೆ ರೈತ ಶಿವರಾಜ್​ಗೆ ಆಘಾತ ಕಾರಿ ಅಂಶ ಹೊರಬಿದ್ದಿದೆ. ಶಿವರಾಜ್ ಮೃತರಾಗಿದ್ದು ಅವರನ್ನು ಪಡಿತರ ಚೀಟಿಯಿಂದ‌ ಹೆಸರನ್ನು ಕೈ‌ ಬಿಡಲಾಗಿದೆ ಅನ್ನೋ ವಿಷಯ ಗೊತ್ತಾಗಿದೆ. ಇದರಿಂದ‌ ಈಡೀ ಕುಟುಂಬ‌ ಅಘಾತಕ್ಕೊಳಗಾಗಿದ್ದಾರೆ.

ಮರಣ ಪ್ರಮಾಣ ಪತ್ರ ಕೊಟ್ಟಿರೋದು ಹೇಗೆ? ಯಾರಿದ್ದಾರೆ ಇದರ ಹಿಂದೆ?

ಮರಣ ಪ್ರಮಾಣಪತ್ರ ನೀಡಲು ಸರ್ಕಾರದಲ್ಲಿ ಹಲವಾರು ನಿಯಮಗಳಿವೆ. ಮರಣ ಪ್ರಮಾಣಪತ್ರ ಪಡೆಯಲು ಮೃತರ ಸಂಬಂಧಿಕರು ಅರ್ಜಿ ಹಾಕಬೇಕು, ಅದನ್ನು ಅಂಗನವಾಡಿ ಕಾರ್ಯಕರ್ತೆಯರು ಅಥವಾ ಗ್ರಾಮ ಲೆಕ್ಕಿಗಗರು, ಅಥವಾ ಗ್ರಾಮ ಪಂಚಾಯ್ತಿಗೆ ಸಂಬಂಧಿಸಿದ ಅಧಿಕಾರಿಗಳು ಖಚಿತಪಡಿಸಿ ನಂತರ ಅವರಿಗೆ ಮರಣ ಪ್ರಮಾಣ ಪತ್ರ ನೀಡುವ ಪ್ರಕ್ರಿಯೆಗೆ ಕ್ರಮ ಕೈಗೊಳ್ಳುತ್ತಾರೆ. ಆದರೆ ಇದ್ಯಾವುದನ್ನೂ ಪಾಲಿಸದೆ ಹೀಗೆ ರೈತ ಶಿವರಾಜ್​ ಬದುಕಿರುವಾಗಲೇ ಮರಣ ಪ್ರಮಾಣ ಪತ್ರ ನೀಡಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಯಾರಾದರೂ ಕೇಳದೆ ಇದ್ದರೆ ಮರಣ ಪತ್ರ ಕೊಟ್ಟಿದ್ದಾದರೂ ಏಕೆ ಅನ್ನೋ ಪ್ರಶ್ನೆ ಶುರುವಾಗಿದೆ. ಯಾರಾದರೂ ಮರಣ ಪ್ರಮಾಣ ಪತ್ರಕ್ಕೆ ಅರ್ಜಿ ಹಾಕಿದ್ದರೆ ಯಾರು ಹಾಕಿರೋದು ಅದರ ಹಿಂದಿನ ಉದ್ದೇಶ ಏನು ಅನ್ನೋ ಸಾಕಷ್ಟು ಪ್ರಶ್ನೆಗಳಿಗೆ ಅಧಿಕಾರಿಗಳು ಉತ್ತರ ಕೊಡಬೇಕಿದೆ.

ತಹಶೀಲ್ದಾರ್​ ಸೇರಿ ನಾಲ್ವರು ಅಧಿಕಾರಿಗಳ ವಿರುದ್ದ ದೂರು

ಇಷ್ಟೆಲ್ಲಾ ಎಡವಟ್ಟು ಮಾಡಿರುವ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ರೈತ ಶಿವರಾಜ್​ ಪೊಲೀಸ್​ ಠಾಣೆಗೆ ದೂರು ನೀಡಿದ್ದು ಈ ಹಿಂದೆ ಇದ್ದ ತಹಶಿಲ್ದಾರ್ ಜಿ.ರಾಜಶೇಖರ್, ಗ್ರಾಮ ಲೆಕ್ಕಿಗ ಅರವಿಂದ, ಕಂದಾಯ ನಿರೀಕ್ಷಿಕ ಸಾದತ್ ವುಲ್ಲಾ ಖಾನ್, ನಾಡಕಚೇರಿ ಶಿರೇಸ್ತೆದಾರ್ ಜಯರಾಂ ವಿರುದ್ದ ಮುಳಬಾಗಲು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಜೊತೆಗೆ ಇದರ ಹಿಂದಿನ ವ್ಯಕ್ತಿಗಳು ಯಾರು ಅನ್ನೋದನ್ನು ಹುಡುಕಿ ಅವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Kolar Farmer Death Certificate

ಶಿವರಾಜ್​ ತಂದೆಯ ಜಮೀನು ಲಪಟಾಯಿಸುವ ಸಂಚಿನ ಅನುಮಾನ

ಯಾವುದೇ ಲಾಭವಿಲ್ಲದೆ ಹೀಗೊಂದು ದಾಖಲಾತಿಗಳನ್ನು ನಕಲು ಮಾಡಲು ಸಾಧ್ಯವಿಲ್ಲ ಇದರ ಹಿಂದೆ ಬಹುದೊಡ್ಡ ಉದ್ದೇಶ ಇರಬಹುದು ಎನ್ನಲಾಗಿದೆ. ಒಂದು ಮಾಹಿತಿ ಪ್ರಕಾರ ಇದರ ಹಿಂದೆ ಭೂ ಮಾಫಿಯಾದವರ ಕೈವಾಡ ಇದೆಯೆಂದು ಅನುಮಾನಿಸಲಾಗಿದೆ. ಶಿವರಾಜ್ ತಂದೆ ಮೃತಪಟ್ಟಿದ್ದು, ಅವರ ತಂದೆ ವೆಂಕಟೇಶಪ್ಪ ಹೆಸರಲ್ಲಿದ್ದ ಜನೀನನ್ನು ಸುಳ್ಳುದಾಖಲಾತಿ ನೀಡಿ ಅದನ್ನು ಬೇರೆಯವರಿಗೆ ವರ್ಗಾವಣೆ ಮಾಡಲು ತಂತ್ರ ಹೆಣೆದಿರಬಹುದು. ಅಷ್ಟರಲ್ಲಿ ಪ್ರಕರಣ ಬಯಲಾಗಿದೆ ಎನ್ನಲಾಗಿದೆ. ಅದು ನಿಜವಾ ಸುಳ್ಳಾ ಅನ್ನೋದು ಸದ್ಯ ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ. ಸದ್ಯ ಈಬಗ್ಗೆ ಮುಳಬಾಗಿಲು ತಹಶೀಲ್ದಾರ್​ ಶೋಭಿತಾ ಕೂಡಾ ತನಿಖೆ ನಡೆಸಿ ಸಂಬಂಧಿಸಿದವರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಒಟ್ಟಾರೆ ಜೀವಂತವಾರುವ ರೈತನಿಗೆ ಮರಣ ಪತ್ರ ನೀಡಿ ಅಧಿಕಾರಿಗಳು ಮಹಾ‌ ಎಡವಟ್ಟು ಮಾಡಿದ್ದಾರೆ. ಆದರೆ ಎಡವಟ್ಟು ಮಾಡಿದವರು ಅಧಿಕಾರಿಗಳಾ ಅಥವಾ ಇದರ ಹಿಂದೆ ಯಾರಿದ್ದಾರೆ ಅನ್ನೋದನ್ನು ಪತ್ತೆಹಚ್ಚಿ ರೈತನಿಗೆ ಮೋಸ ಮಾಡಲು ಹೊರಟ್ಟಿದ್ದವರು ಯಾರು ಅನ್ನೋದನ್ನು ತನಿಖೆ ಮಾಡಿ ತಪ್ಪಿತಸ್ಥರಿಗೆ ಸರಿಯಾದ ಶಿಕ್ಷಯಾಗಬೇಕು ಅನ್ನೋದು ನೊಂದವರ ಆಗ್ರಹ.

ವರದಿ : ರಾಜೇಂದ್ರ ಸಿಂಹ, ಟಿವಿ9 ಕೋಲಾರ

ಇದನ್ನೂ ಓದಿ: ಕೋಲಾರ: ರೈತರೂ ಇಷ್ಟೊಂದು ಸಾಧನೆ, ಸಂಪಾದನೆ ಮಾಡಬಹುದು; ಮಾದರಿ ಕೃಷಿಕನ ಯಶಸ್ವಿ ಬದುಕು!

ಇದನ್ನೂ ಓದಿ: ಕೋಲಾರ: ಹೋಟೆಲ್​ನಲ್ಲಿ ಸಿಲಿಂಡರ್ ಸ್ಫೋಟ; ಎದುರಿನ ಅಂಗಡಿಯ ಇಬ್ಬರಿಗೆ ಗಾಯ

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು