AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾವಿನ ಹಣ್ಣಿಗೆ ಪ್ರಸಿದ್ಧವಾದ ಕೋಲಾರದಲ್ಲಿ ಭರ್ಜರಿ ಸ್ಟ್ರಾಬೆರಿ ಫಸಲು, ಬಿಸಿಲು ಕಡಿಮೆ ಇರೋ ಜಾಗದಲ್ಲಿ ಬೆಳೆಯುವ ಬೆಳೆ ಬೆಳೆದು ಯಶಸ್ವಿಯಾದ ರೈತ

ಸಂತೇಕಲ್ಲಹಳ್ಳಿಯಲ್ಲಿ ರೈತನೊಬ್ಬ ಈಗ ಸ್ಟ್ರಾಬೆರೆ ಮೊರೆ ಹೋಗಿದ್ದಾನೆ. ಬಿಸಿಲು ಕಡಿಮೆ ಇರೋ ಕಡೆ ಈ ಬೆಳೆ ಬೆಳೆಯಲಾಗುತ್ತೆ. ಆದ್ರೆ ಬಿಸಿಲು ಹೆಚ್ಚಿರೋ ಕೋಲಾರದಲ್ಲೂ ಈ ಬೆಳೆಯ ಮೊರೆ ಹೋದ ಸಂತೆಕಲ್ಲಹಳ್ಳಿಯ ರೈತ ಮಂಜುನಾಥ್‌, ತನ್ನ ಒಂದು ಎಕರೆ ಜಮೀನಿನಲ್ಲಿ ಈ ಬೆಳೆ ಬೆಳೆದು ಈಗ ಭರ್ಜರಿ ಫಸಲು ತೆಗೆದಿದ್ದಾರೆ.

ಮಾವಿನ ಹಣ್ಣಿಗೆ ಪ್ರಸಿದ್ಧವಾದ ಕೋಲಾರದಲ್ಲಿ ಭರ್ಜರಿ ಸ್ಟ್ರಾಬೆರಿ ಫಸಲು, ಬಿಸಿಲು ಕಡಿಮೆ ಇರೋ ಜಾಗದಲ್ಲಿ ಬೆಳೆಯುವ ಬೆಳೆ ಬೆಳೆದು ಯಶಸ್ವಿಯಾದ ರೈತ
ಸ್ಟ್ರಾಬೆರಿ
TV9 Web
| Edited By: |

Updated on: Jan 12, 2022 | 7:24 AM

Share

ಕೋಲಾರ: ಅದು ತರಕಾರಿ ಬೆಳೆಗೆ ಫೇಮಸ್‌ ಆಗಿರೋ ಜಿಲ್ಲೆ. ಮಾವಿನ ಹಣ್ಣಿಗೂ ಅಷ್ಟೇ ಪ್ರಸಿದ್ದಿ ಪಡೆದಿದೆ. ಆದ್ರೆ ಅದೇ ಜಿಲ್ಲೆಯ ರೈತನೊಬ್ಬ ಈಗ ಹೊಸ ಹಣ್ಣಿನ ಬೆಳೆ ಬೆಳೆದಿದ್ದಾನೆ. ಬಿಸಿಲಿನಲ್ಲೂ ಉತ್ತಮ ಫಸಲು ತೆಗೆದಿದ್ದಾನೆ. ಅಷ್ಟಕ್ಕೂ ಸ್ಟ್ರಾಬೆರಿಯಲ್ಲಿ ಶ್ರೀಮಂತನಾಗೋಕೆ ಹೊರಟಿರೋ ರೈತನ ಕತೆ ಇಲ್ಲಿದೆ.

ತರಕಾರಿ ಬಿಟ್ಟು ಹಣ್ಣಿನ ಮೊರೆಹೋದ ರೈತ ಟೋಮ್ಯಾಟೊ, ಕ್ಯಾರೆಟ್‌, ಬೀನ್ಸ್‌, ಹೂಕೋಸು ಹೀಗೆ ತರಕಾರಿ ಬೆಳೆಗಳೇ ಬೆಳೆಯುತ್ತಿದ್ದ ಅಲ್ಲಿನ ರೈತರು ಮಾವು ಬೆಳೆಯಲ್ಲೂ ಎತ್ತಿದ ಕೈ. ಆದ್ರೆ ಅದೇ ಜಿಲ್ಲೆಯ ರೈತರು ಈಗ ಮತ್ತೊಂದು ಹಣ್ಣಿನ ಬೆಳೆಯ ಮೊರೆ ಹೋಗಿದ್ದಾರೆ. ಟೊಮ್ಯಾಟೋ ಸೇರಿದಂತೆ ಹತ್ತಾರು ಬಗೆಯ ತರಕಾರಿಗಳನ್ನು ಬೆಳೆದು ಇಡೀ ದೇಶ-ವಿದೇಶಕ್ಕೆ ರಪ್ತು ಮಾಡುವ ಹೆಗ್ಗಳಿಗೆ ಕೋಲಾರ ಜಿಲ್ಲೆಯ ರೈತರಿಗಿದೆ. ಆದ್ರೆ ಅದೇ ಜಿಲ್ಲೆಯ ಸಂತೇಕಲ್ಲಹಳ್ಳಿಯಲ್ಲಿ ರೈತನೊಬ್ಬ ಈಗ ಸ್ಟ್ರಾಬೆರೆ ಮೊರೆ ಹೋಗಿದ್ದಾನೆ. ಬಿಸಿಲು ಕಡಿಮೆ ಇರೋ ಕಡೆ ಈ ಬೆಳೆ ಬೆಳೆಯಲಾಗುತ್ತೆ. ಆದ್ರೆ ಬಿಸಿಲು ಹೆಚ್ಚಿರೋ ಕೋಲಾರದಲ್ಲೂ ಈ ಬೆಳೆಯ ಮೊರೆ ಹೋದ ಸಂತೆಕಲ್ಲಹಳ್ಳಿಯ ರೈತ ಮಂಜುನಾಥ್‌, ತನ್ನ ಒಂದು ಎಕರೆ ಜಮೀನಿನಲ್ಲಿ ಈ ಬೆಳೆ ಬೆಳೆದು ಈಗ ಭರ್ಜರಿ ಫಸಲು ತೆಗೆದಿದ್ದಾರೆ.

ಇನ್ನು ಒಂದು ಎಕರೆಯಲ್ಲಿ 8 ಸಾವಿರ ಸ್ಟ್ರಾಬೆರಿ ಗಿಡಗಳನ್ನ ಬೆಳೆಸಿದ್ದು ಮೂರು ತಿಂಗಳಿಗೆ ಹಣ್ಣು ಬಿಡೋಕೆ ಶುರುವಾಗಿದೆ. ಗಿಡ, ಔಷಧ, ಕೂಲಿ ಅಂತಾ ಈಗಾಗಲೇ ರೈತ ಮೂರು ಲಕ್ಷ ಹಣ ಖರ್ಚು ಮಾಡಿದ್ದು, ಈಗಷ್ಟು ಫಸಲು ಆರಂಭವಾಗಿರೋದ್ರಿಂದ ರೈತ ಮಂಜುನಾಥ್‌ ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದಾನೆ. ಕಳೆದ ಹದಿನೈದು ದಿನಗಳಿಂದ ಹಣ್ಣು ಬಿಡಲಾರಂಭಿಸಿದ್ದು, ದಿನವೊಂದಕ್ಕೆ ಸರಾಸರಿ 200 ರಿಂದ 500 ಬಾಕ್ಸ್ ಸ್ಟ್ರಾಬೆರಿ ಸಿಗ್ತ್ತಿದೆ. ಒಂದು ಬಾಕ್ಸ್ ನಲ್ಲಿ 200 ಗ್ರಾಂ ಸ್ಟ್ರಾಬೆರಿ ಹಣ್ಣುಗಳನ್ನು ಹಾಕಿ ಪ್ಯಾಕ್ ಮಾಡಲಾಗುತ್ತಿದೆ. ಸದ್ಯ ಒಂದು ಬಾಕ್ಸ್ ಸ್ಟ್ರಾಬೆರಿ ಬಾಕ್ಸ್‌ 50 ರಿಂದ 60 ರೂಪಾಯಿಗೆ ಮಾರಾಟವಾಗುತ್ತಿದೆ.

ಒಟ್ನಲ್ಲಿ ತರಕಾರಿಗಳಲ್ಲಿ ಹೊಸ ಹೊಸ ಪ್ರಯೋಗ ಮಾಡೋ ಕೋಲಾದ ರೈತರು ಈಗ ಸ್ಟ್ರಾಬೆರಿ ಬೆಳೆದು ಒಳ್ಳೆ ಫಸಲು ತೆಗೆದಿದ್ದಾರೆ. ಆರಂಭದಲ್ಲೇ ಉತ್ತಮ ಇಳುವರಿ ಬರ್ತಿರೋದ್ರಿಂದ ಲಾಭ ಸಿಗುತ್ತೇ ಅನ್ನೋ ಆಶಯ ರೈತನದ್ದು.

ವರದಿ: ರಾಜೇಂದ್ರಸಿಂಹ, ಟಿವಿ9 ಕೋಲಾರ

kolar strawberry

ಸ್ಟ್ರಾಬೆರಿ ಫಸಲು

kolar strawberry

ಸ್ಟ್ರಾಬೆರಿ ಬೆಳೆದ ರೈತ ಮಂಜುನಾಥ್‌

ಇದನ್ನೂ ಓದಿ: ಚಿಕ್ಕಮಗಳೂರು: ರಾಗಿ ಬೆಳೆದ ರೈತರಿಗೆ ಸರ್ಕಾರದ ನಿರ್ಧಾರದಿಂದ ಹೆಚ್ಚಿದ ಸಂಕಷ್ಟ; ವಿಶೇಷ ವರದಿ ಇಲ್ಲಿದೆ

ಬಿತ್ತಿದ್ದು ಆರು ಕೆಜಿ ಬೀಜ, ಬೆಳೆದಿದ್ದು 31 ಕ್ವಿಂಟಾಲ್ ಮೆಕ್ಕೆಜೋಳ; ಅಡಿಕೆ ತೋಟದಲ್ಲಿ ಬಂಪರ್ ಬೆಳೆಯಾಗಿ ಬಂದ ಮೆಕ್ಕೆಜೋಳ, ರೈತನ ವಿಶಿಷ್ಟ ಸಾಧನೆ

ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಪಾಕ್ ಆಟಗಾರನ ವಿರುದ್ಧ ಸಿಡಿದೆದ್ದ ವೈಭವ್ ಸೂರ್ಯವಂಶಿ
ಪಾಕ್ ಆಟಗಾರನ ವಿರುದ್ಧ ಸಿಡಿದೆದ್ದ ವೈಭವ್ ಸೂರ್ಯವಂಶಿ