AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಚಿತ ವಿದ್ಯುತ್​ಗೆ ಹಣ ನೀಡುವ ಬದಲು, ಮಾಲೂರಿನ ಈ ಕಾಲೇಜಿನಂತೆ ಸ್ವಾವಲಂಬನೆಗೆ ಒತ್ತು ನೀಡಿದ್ರೆ ಸೂರ್ಯ ಇರುವವರೆಗೆ ವಿದ್ಯುತ್ ಫ್ರೀ!

ಒಂದೆಡೆ ಸರ್ಕಾರ ಉಚಿತ ವಿದ್ಯುತ್​ ಮೂಲಕ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸ್ಥಿತಿ ಇದ್ದರೆ, ಇಲ್ಲಿ ಸರ್ಕಾರಿ ಕಾಲೇಜು ವಿದ್ಯುತ್​ ಸ್ವಾವಲಂಬನೆಯ ಮೂಲಕ ಆರ್ಥಿಕ ಸಂತೃಷ್ಟಿಯನ್ನು ಅನುಭವಿಸುತ್ತಿದೆ, ಸದ್ಯ ಸರ್ಕಾರ ಉಚಿತ ವಿದ್ಯುತ್​ಗೆ ಕೋಟಿ ಕೋಟಿ ಹಣ ನೀಡುವ ಬದಲು ಈ ಕಾಲೇಜಿನಂತೆ ವಿದ್ಯುತ್​ ಸ್ವಾವಲಂಬನೆಗೆ ಒತ್ತು ನೀಡಿದ್ರೆ ಸೂರ್ಯನಿರುವವರೆಗೆ ವಿದ್ಯುತ್​ ಉಚಿತವಾಗಿ ಸಿಗೋದರಲ್ಲಿ ಅನುಮಾನವಿಲ್ಲ!

ಉಚಿತ ವಿದ್ಯುತ್​ಗೆ ಹಣ ನೀಡುವ ಬದಲು, ಮಾಲೂರಿನ ಈ ಕಾಲೇಜಿನಂತೆ ಸ್ವಾವಲಂಬನೆಗೆ ಒತ್ತು ನೀಡಿದ್ರೆ ಸೂರ್ಯ ಇರುವವರೆಗೆ ವಿದ್ಯುತ್ ಫ್ರೀ!
ಮಾಲೂರಿನ ಈ ಕಾಲೇಜಿನಂತೆ ಸ್ವಾವಲಂಬನೆಗೆ ಒತ್ತು ನೀಡಿದ್ರೆ ವಿದ್ಯುತ್​ ಉಚಿತವಾಗಿ ಸಿಗುತ್ತೆ!
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Edited By: |

Updated on: Aug 26, 2023 | 12:54 PM

Share

ರಾಜ್ಯದಲ್ಲಿ ಗೃಹಜ್ಯೋತಿ ಅನ್ನೋ ಯೋಜನೆ ಮೂಲಕ ಮನೆ ಮನೆಗೂ ಸರ್ಕಾರ ಉಚಿತ ವಿದ್ಯುತ್ (free electricity)​ ನೀಡುತ್ತಿದೆ, ಈ ನಡುವೆ ಉಚಿತ ವಿದ್ಯುತ್​ ನೀಡಿ ಅದರ ಹೊರೆಯನ್ನು ಹೇಗೆ ನಿಭಾಯಿಸೋದು ಎಂದು ಸರ್ಕಾರ ಯೋಚಿಸುವ ಸ್ಥಿತಿ ಇದೆ, ಆದರೆ ಇಲ್ಲೊಂದು ಸರ್ಕಾರಿ ಕಾಲೇಜು ಆ ರೀತಿಯ ಆಲೋಚನೆಯಿಂದ ಹೊರತಾಗಿದೆ, ವಿದ್ಯುತ್​ ಸ್ವಾವಲಂಬನೆ ಮೂಲಕ ಸದಾ ವಿದ್ಯುತ್​ ಬೆಳಗುತ್ತಲೇ ಇದೆ. ಸರ್ಕಾರಿ ಕಾಲೇಜು ಕಟ್ಟಡದ ಮೇಲೆ ಅಳವಡಿಸಲಾಗಿರುವ ವಿದ್ಯುತ್​ ಪ್ಯಾನಲ್​ಗಳು, ಕಾಲೇಜಿನಲ್ಲಿ ನಿರಂತವಾಗಿ ಸರಬರಾಜಾಗುತ್ತಿರುವ ವಿದ್ಯುತ್​, ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಪ್ಯಾನ್​ ಹಾಗೂ ಕಂಪ್ಯೂಟರ್​ಗಳು, ಈ ಎಲ್ಲಾ ದೃಶ್ಯಗಳು ನಮಗೆ ಕಂಡು ಬಂದಿದ್ದು ಕೋಲಾರ ಜಿಲ್ಲೆ ಮಾಲೂರು ಸರ್ಕಾರಿ ಪಿ.ಯು. ಕಾಲೇಜಿನಲ್ಲಿ. ಹೌದು ಮಾಲೂರು ಪಟ್ಟಣದ ಸರ್ಕಾರಿ ಪಿಯು ಕಾಲೇಜು (Malur college) ಕಳೆದ ಹಲವು ವರ್ಷಗಳಿಂದ ವಿದ್ಯುತ್​ ಸ್ವಾವಲಂಬನೆಯನ್ನು (self reliance) ಸಾಧನೆ ಮಾಡುವ ಮೂಲಕ ಇಡೀ ಜಿಲ್ಲೆಗೆ ಮಾದರಿಯಾಗಿದೆ (Solar Energy).

ಸರ್ಕಾರಿ ಪಿಯು ಕಾಲೇಜಿಗೆ ಬೇಕಾದ ಅಷ್ಟೂ ವಿದ್ಯುತ್​ನ್ನು ಇದೇ ಕಾಲೇಜಿನಲ್ಲೇ ಉತ್ಪಾದನೆ ಮಾಡಿಕೊಳ್ಳ ಲಾಗುತ್ತದೆ, ತಿಂಗಳ ತಿಂಗಳು ಬಿಲ್​ ಕಟ್ಟಬೇಕು ಎನ್ನುವ ಆತಂಕವಿಲ್ಲ, ಯಾವಾಗ ವಿದ್ಯುತ್​ ಸಂಪರ್ಕ ಕಡಿತವಾಗುತ್ತದೋ ಅನ್ನೋ ಭಯವೂ ಇಲ್ಲ, ನಿರಂತರವಾಗಿ ಈ ಕಾಲೇಜಿನಲ್ಲಿ ವಿದ್ಯುತ್​ ಸರಬರಾಜಾಗುತ್ತದೆ. ಇನ್ನು ಶಾಲೆಯಲ್ಲಿ ಮಕ್ಕಳೂ ಅಷ್ಟೇ ಕ್ಲಾಸ್​ ನಡೆಯುವ ವೇಳೆಯಲ್ಲಿ ಸೆಖೆಯಾದರೆ ಫ್ಯಾನ್ ಹಾಕಿ ಕೊಂಡು ಕ್ಲಾಸ್​ ಕೇಳುತ್ತಾರೆ, ಇನ್ನು ಯಾವಾಗ ಬೇಕಾದರೂ ಕಂಪ್ಯೂಟರ್ ಲ್ಯಾಬ್​ನಲ್ಲಿ ಕಂಪ್ಯೂಟರ್ ಬಳಸುತ್ತಾರೆ, ಅಲ್ಲದೆ ಇಡೀ ಕಾಲೇಜು ಕಟ್ಟಡಕ್ಕೆ ಬೇಕಾಗುವ ವಿದ್ಯುತ್​ ಇದೇ ಕಾಲೇಜಿನಲ್ಲೇ ಉತ್ಪಾದನೆ ಮಾಡಲಾಗುತ್ತದೆ. ಈ ಮೂಲಕ ಕೋಲಾರ ಜಿಲ್ಲೆಗೆ ಮಾಲೂರು ಸರ್ಕಾರಿ ಪಿಯು ಕಾಲೇಜು ವಿದ್ಯುತ್​ ಸ್ವಾವಲಂಬನೆಗೆ ಮಾದರಿಯಾಗಿದೆ ಎನ್ನುತ್ತಾರೆ ಉಪನ್ಯಾಸಕರಾದ ಚಂದ್ರಪ್ಪ.

ಇನ್ನು ಮಾಲೂರಿನ ಈ ಸರ್ಕಾರಿ ಪಿಯು ಕಾಲೇಜಿನಲ್ಲಿ ಈ ರೀತಿಯ ವಿದ್ಯುತ್​ ಸ್ವಾವಲಂಬನೆ ಸಾಧ್ಯವಾಗಿದ್ದು ಹೇಗೆ ಅಂತ ನೋಡೋದಾದ್ರೆ, ಮಾಲೂರಿನ ಇದೇ ಮಾಲೂರಿನ ಕಾಲೇಜಿನಲ್ಲಿ ಜೀವಶಾಸ್ತ್ರದ ಉಪನ್ಯಾಸಕರಾದ ದಿವಾಕರ್​ ಎಂಬುವರ ಸ್ನೇಹಿತರೊಬ್ಬರು ಟೆರಿ ಸೋಲಾರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರಂತೆ. ಅವರನ್ನು ನಮ್ಮ ಕಾಲೇಜಿಗೆ ಸೋಲಾರ್​ ವಿದ್ಯುತ್​ ದಾನವಾಗಿ ನೀಡುವಂತೆ ಕೇಳಿದಾಗ ಅವರು 2016 ಮತ್ತು 2017 ರಲ್ಲಿ ಮೊದಲು ಎರಡು ಪ್ಯಾನಲ್​ ಸೋಲಾರ್ ನೀಡಿ, ಸ್ವಲ್ಪಮಟ್ಟಿಗೆ ಸಹಾಯ ಮಾಡಿದ್ದರಂತೆ.

ನಂತರದಲ್ಲಿ ಹಲವು ಜನ ದಾನಿಗಳ ನೆರವಿನಿಂದ ಇವತ್ತು ಮಾಲೂರು ಸರ್ಕಾರಿ ಪಿಯು ಕಾಲೇಜು ತಮ್ಮ ಕಾಲೇಜಿಗೆ ಅಗತ್ಯವಾದ ವಿದ್ಯುತ್​ನ್ನು ತಾವೇ ಉತ್ಪಾದನೆ ಮಾಡಿಕೊಂಡು ಇನ್ನಷ್ಟು ವಿದ್ಯುತ್​ನ್ನು ಬೆಸ್ಕಾಂಗೆ ನೀಡುವಷ್ಟು ಸ್ವಾವಲಂಬಿಯಾಗಿದೆ. ಸದ್ಯ ಈ ಕಾಲೇಜಿನ​ ವಿದ್ಯುತ್ ಸ್ವಾವಲಂಬನೆಯ ಯಶೋಗಾಥೆಯನ್ನು ಕಂಡ ನಂತರ ಸರ್ಕಾರ ರಾಜ್ಯದ ಎಲ್ಲಾ ಸರ್ಕಾರಿ ಪಿಯು ಕಾಲೇಜುಗಳು ಕೂಡಾ ದಾನಿಗಳ ನೆರವಿನಿಂದ ಸೌರವಿದ್ಯುತ್​​ನ್ನು ಅಳವಡಿಸಿಕೊಳ್ಳಲು ಸೂಚನೆ ನೀಡಿತ್ತು. ಆದರೆ ಈವರೆಗೆ ಜಿಲ್ಲೆಯ ಹಲವು ಕಾಲೇಜುಗಳಿಗೆ ಸೌರ ವಿದ್ಯುತ್​ ಅಳವಡಿಸಿಕೊಡುವಂತೆ ಹಲವಾರು ದಾನಿಗಳನ್ನು ಮನವಿ ಮಾಡಲಾಗಿದೆಯಾದರೂ ಜಿಲ್ಲೆಯಲ್ಲಿ ಯಾವುದೇ ಸರ್ಕಾರಿ ಕಾಲೇಜುಗಳಲ್ಲಿ ಸೌರವಿದ್ಯುತ್ ಅಳವಡಿಸಲು ಸಾಧ್ಯವಾಗಿಲ್ಲ​, ಆದರೆ ಜಿಲ್ಲೆಯಲ್ಲಿ ಹಲವು ದಾನಿಗಳನ್ನು ನಿರಂತವಾಗಿ ಸಂಪರ್ಕ ಮಾಡಲಾಗುತ್ತಿದೆ ಅನ್ನೋದು ಪಿಯು ಉಪನಿರ್ದೇಶಕರಾದ ರಾಮಚಂದ್ರಪ್ಪ ಅವರ ಮಾತು.

ಒಟ್ಟಾರೆ ಒಂದೆಡೆ ಸರ್ಕಾರ ಉಚಿತ ವಿದ್ಯುತ್​ ಮೂಲಕ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸ್ಥಿತಿ ಇದ್ದರೆ, ಇಲ್ಲಿ ಸರ್ಕಾರಿ ಕಾಲೇಜು ವಿದ್ಯುತ್​ ಸ್ವಾವಲಂಬನೆಯ ಮೂಲಕ ಆರ್ಥಿಕ ಸಂತೃಷ್ಟಿಯನ್ನು ಅನುಭವಿಸುತ್ತಿದೆ, ಸದ್ಯ ಸರ್ಕಾರ ಉಚಿತ ವಿದ್ಯುತ್​ಗೆ ಕೋಟಿ ಕೋಟಿ ಹಣ ನೀಡುವ ಬದಲು ಈ ಕಾಲೇಜಿನಂತೆ ವಿದ್ಯುತ್​ ಸ್ವಾವಲಂಬನೆಗೆ ಒತ್ತು ನೀಡಿದ್ರೆ ಸೂರ್ಯನಿರುವವರೆಗೆ ವಿದ್ಯುತ್​ ಉಚಿತವಾಗಿ ಸಿಗೋದರಲ್ಲಿ ಅನುಮಾನವಿಲ್ಲ!

Follow Us
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ