AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೀತಿಯ ಶ್ವಾನಕ್ಕೆ ಶಾಸಕರಿಂದ ಕಣ್ಣೀರಿನ ವಿದಾಯ ಹೇಳಿದ ಶಾಸಕ ನಾರಾಯಣಸ್ವಾಮಿ

ಪಗ್​ ಜಾತಿಗೆ ಸೇರಿದ ಲಿಯೋ ಕಳೆದ ಹನ್ನೊಂದು ವರ್ಷಗಳಿಂದ ಶಾಸಕ ನಾರಾಯಣಸ್ವಾಮಿಯವರ ಮನೆಯ ಸದಸ್ಯನಂತೆ ಇತ್ತು ಮುಂಜಾನೆಯಿಂದ ಸಂಜೆವರೆಗೂ ಮನೆಯಲ್ಲಿ ಮನೆಯ ಸದಸ್ಯರ ಜೊತೆಗೆ ಆಟವಾಡಿಕೊಂಡು ಎಲ್ಲರ ಪ್ರೀತಿ ಸಂಪಾದಿಸಿತ್ತು.

ಪ್ರೀತಿಯ ಶ್ವಾನಕ್ಕೆ ಶಾಸಕರಿಂದ ಕಣ್ಣೀರಿನ ವಿದಾಯ ಹೇಳಿದ ಶಾಸಕ ನಾರಾಯಣಸ್ವಾಮಿ
ಪ್ರೀತಿಯ ಶ್ವಾನದ ಸಮಾಧಿ ಬಳಿ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Nov 22, 2021 | 10:41 PM

Share

ಕೋಲಾರ: ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಅವರ ಮನೆಯಲ್ಲಿದ್ದ ಪ್ರೀತಿಯ ನಾಯಿ ಲಿಯೋ ಸೋಮವಾರ ಅನಾರೋಗ್ಯದಿಂದ ನಿಧನವಾಗಿದೆ. ತಮ್ಮ ಕುಟುಂಬದ ಸದಸ್ಯನಂತೆ ಇದ್ದ ಲಿಯೋ ಭಾನುವಾರ ಮಧ್ಯಾಹ್ನ ಮೃತಪಟ್ಟಿದೆ. ವಾತಾವರಣದಲ್ಲಿನ ಏರುಪೇರು ಹಾಗೂ ಹೃದಯಾಘಾತದಿಂದ ನಾಯಿ ಸಾವನ್ನಪ್ಪಿರಬಹುದು ಎಂದು ಪಶುವೈದ್ಯರು ತಿಳಿಸಿದ್ದಾರೆ. ಪಗ್​ ಜಾತಿಗೆ ಸೇರಿದ ಲಿಯೋ ಕಳೆದ ಹನ್ನೊಂದು ವರ್ಷಗಳಿಂದ ಶಾಸಕ ನಾರಾಯಣಸ್ವಾಮಿಯವರ ಮನೆಯ ಸದಸ್ಯನಂತೆ ಇತ್ತು ಮುಂಜಾನೆಯಿಂದ ಸಂಜೆವರೆಗೂ ಮನೆಯಲ್ಲಿ ಮನೆಯ ಸದಸ್ಯರ ಜೊತೆಗೆ ಆಟವಾಡಿಕೊಂಡು ಎಲ್ಲರ ಪ್ರೀತಿ ಸಂಪಾದಿಸಿತ್ತು.

ಮನೆಯ ಸದಸ್ಯರಂತೆ ಇದು ಕೂಡಾ ಬೆಡ್​ ರೂಂ, ಹಾಲ್​, ಕಿಚನ್​ ಎಲ್ಲೆಡೆ ಓಡಾಡಿಕೊಂಡು ತುಂಬಾ ಮನೆಯ ಸದಸ್ಯರ ಪ್ರೀತಿ ಗಳಿಸಿದ್ದ ನಾಯಿ ಇಂದು ಅಚಾನಕ್ಕೆ ಮೃತಪಟ್ಟ ಹಿನ್ನೆಲೆ ಇಡೀ ಕುಟುಂಬ ನಾಯಿಗೆ ಶಾಸ್ತ್ರೋಕ್ತವಾಗಿ ಅಂತ್ಯ ಸಂಸ್ಕಾರ ಮಾಡಿ ಕಣ್ಣೀರಿನ ವಿದಾಯ ಹೇಳಿದ್ದಾರೆ.

ಲಿಯೋ ಕುರಿತು ಮಾತನಾಡಿದ ಶಾಸಕ ನಾರಾಯಣಸ್ವಾಮಿ ಮನೆಯಿಂದ ಹೊರಗೆ ಹೋಗುವಾಗ ಮನೆಯ ಗೇಟ್​ವರೆಗೂ ಬಂದು ನನ್ನನ್ನು ಕಳಿಸಿಕೊಟ್ಟು ಬರುತ್ತಿತ್ತು. ಇನ್ನು ಮನೆಗೆ ಬಂದಾಗಲೂ ಅಷ್ಟೇ ನನ್ನ ಕಾರ್​ ಹಾರ್ನ್​​ ಕೇಳಿದ ತಕ್ಷಣ ಬಾಗಿಲಲ್ಲಿ ಬಂದು ನಿಂತು ನನ್ನನ್ನು ಸ್ವಾಗತ ಮಾಡುತ್ತಿತ್ತು. ಇನ್ನು ನಾನು ಮುಂಜಾನೆ ವಾಕಿಂಗ್ ಹೋಗಿ ಬಂದಾಗ ನನ್ನ ಸಾಕ್ಸ್​ ಹಿಡಿದುಕೊಂಡು ನನ್ನನ್ನು ಆಟವಾಡಿಸುತ್ತಿತ್ತು. ನನ್ನ ಜೊತೆಗೆ ನಾನು ರಾತ್ರಿ ಮಲಗುವವರೆಗೂ ನನ್ನ ಜೊತೆಗೆ ಆಟವಾಡಿಕೊಂಡು ನನ್ನನ್ನು ಸಂತೋಷದಿಂದ ನೋಡಿಕೊಳ್ಳುತ್ತಿದ್ದ ಲಿಯೋ ಕಳೆದುಕೊಂಡಿರುವುದು ನನಗೆ ತುಂಬಾ ನೋವಾಗಿದೆ ಎಂದು ನಾರಾಯಣಸ್ವಾಮಿ ಪ್ರತಿಕ್ರಿಯಿಸಿದರು.

ನಾನು ನನ್ನ ಕುಟುಂಬ ಸದಸ್ಯರೊಬ್ಬರನ್ನು ಕಳೆದುಕೊಂಡಷ್ಟು ನೋವಾಗುತ್ತಿದೆ. ಇನ್ನು ನಮ್ಮ ಮನೆಯ ಸದಸ್ಯರು ಕೂಡಾ ಲಿಯೋನ ಸಾವಿನಿಂದ ಕಣ್ಣೀರಿನಲ್ಲಿ ಮುಳುಗಿದ್ದಾರೆ ಎಂದಿದ್ದಾರೆ. ಮೃತ ಶ್ವಾನ ಲಿಯೋಗೆ ಶಾಸ್ತ್ರೋಕ್ತವಾಗಿ ಅಂತ್ಯ ಸಂಸ್ಕಾರ ಮಾಡಿ ತಮ್ಮ ತೋಟದಲ್ಲಿ ಅದನ್ನು ಸಮಾದಿ ಮಾಡಲಾಗಿದ್ದು ಅದು ನಾವು ಎಂದು ಮರೆಯಲಾಗದ ನಮ್ಮ ಮನೆಯ ಸದಸ್ಯ ಎಂದು ಅವರು ಹೇಳಿದರು.

ಇದನ್ನೂ ಓದಿ: ಅಪಾರ್ಟ್​ಮೆಂಟ್ ಜನರ ಜೀವ ಉಳಿಸಿದ ನಾಯಿ! ಮೂಕಪ್ರಾಣಿಯ ಸಮಯಪ್ರಜ್ಞೆಗೆ ಜನ ಬೆರಗು ಇದನ್ನೂ ಓದಿ: Viral Video: ಪುಟ್ಟ ಮಗುವಿಗೆ ತೆವಳಲು ಕಲಿಸುತ್ತಿರುವ ನಾಯಿ ಮರಿ; ಕ್ಯೂಟ್ ವಿಡಿಯೊ ವೈರಲ್

ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್