ಕೋಲಾರ: ಹೆದ್ದಾರಿ ಪ್ರಾಧಿಕಾರದಿಂದ ಸಿಗದ ಪರಿಹಾರ, ವಿಷ ಸೇವಿಸಿದ ರೈತರು

ಜಮೀನು ವಶಪಡಿಸಿಕೊಂಡ ನಂತರ ಹೆದ್ದಾರಿ ಪ್ರಾಧಿಕಾರ ಪರಿಹಾರ ನೀಡಿದ ಹಿನ್ನೆಲೆ ಎರಡು ರೈತ ಕುಟುಂಬದ ಮೂವರು ಸದಸ್ಯರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೋಲಾರದಲ್ಲಿ ನಡೆದಿದೆ. ಇನ್ನೊಂದೆಡೆ, ಹಾವೇರಿಯಲ್ಲಿ ಸಾಲ ಬಾಧೆಯಿಂದ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೋಲಾರ: ಹೆದ್ದಾರಿ ಪ್ರಾಧಿಕಾರದಿಂದ ಸಿಗದ ಪರಿಹಾರ, ವಿಷ ಸೇವಿಸಿದ ರೈತರು
ಹೆದ್ದಾರಿ ಪ್ರಾಧಿಕಾರ ಪರಿಹಾರ ನೀಡದ ಹಿನ್ನೆಲೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಕೋಲಾರದ ರೈತರು
Edited By:

Updated on: Aug 05, 2023 | 6:58 PM

ಕೋಲಾರ, ಆಗಸ್ಟ್ 5: ಜಮೀನು ವಶಪಡಿಸಿಕೊಂಡ ನಂತರ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (National highways authority of India- NHAI) ಪರಿಹಾರ ನೀಡಿದ ಹಿನ್ನೆಲೆ ಎರಡು ರೈತ ಕುಟುಂಬದ ಮೂವರು ಸದಸ್ಯರು ಆತ್ಮಹತ್ಯೆಗೆ ಯತ್ನಿಸಿದ (Suicide Attempt) ಘಟನೆ ತಾಲೂಕಿನ ಎಸ್.ಗೊಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಆರೋಹಳ್ಳಿ ಬಡಾವಣೆ ನಿವಾಸಿಗಳಾದ ಕೃಷ್ಣಮೂರ್ತಿ, ವೆಂಕಟೇಶಪ್ಪ ಹಾಗೂ ಲಕ್ಷ್ಮೀಸಾಗರ ಗ್ರಾಮದ ಅಭಿಗೌಡ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ರೈತರು.

ಚೆನೈ – ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೇ ಕಾರಿಡಾರ್ ಯೋಜನೆಗಾಗಿ ರೈತರ ನಾಲ್ಕು ಎಕರೆ ಭೂಮಿಯನ್ನು ಹೆದ್ದಾರಿ ಪ್ರಾಧಿಕಾರವು ಸ್ವಾದೀನ ಮಾಡಿಕೊಂಡಿತ್ತು. ಆದರೆ ಪರಿಹಾರ ನೀಡದ ಹಿನ್ನೆಲೆ ರೈತರು ಇಂದು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಎರಡು ಕುಟುಂಬದ ಮೂವರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಮೂವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: Crime News: ಇಬ್ಬರು ಹೆಣ್ಣುಮಕ್ಕಳನ್ನು ಕೊಂದು ತಾವೂ ಆತ್ಮಹತ್ಯೆಗೆ ಶರಣಾದ ತಂದೆ-ತಾಯಿ

ಹಾವೇರಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಸಾವು

ಹಾವೇರಿ: ಸಾಲಭಾದೆ ತಾಳಲಾರದೆ ಆತ್ಮಹತ್ಯೆಗೆ ಯತ್ನಿಸಿದ್ದ ಸವಣೂರು ತಾಲ್ಲೂಕಿನ ಕಳಸೂರು ಗ್ರಾಮದ ರೈತ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಅಜಿತಕುಮಾರ ಬನ್ನಿಕೊಪ್ಪ (73) ಮೃತ ರೈತ. ಎಸ್​ಬಿಐ ಬ್ಯಾಂಕ್​ನಲ್ಲಿ 6 ಲಕ್ಷ ಮತ್ತು ಕೈ ಸಾಲ‌ ಮಾಡಿಕೊಂಡಿದ್ದ ಅಜಿತಕುಮಾರ, ಜೂನ್ ತಿಂಗಳಲ್ಲಿ ಮಳೆ ಬಾರದ ಕಾರಣ ಐದು ಏಕರೆ ಭೂಮಿಯಲ್ಲಿ ಬಿತ್ತನೆ ಮಾಡಿರಲಿಲ್ಲ.

ಬಿತ್ತನೆ ಮಾಡದೆ ಆತಂಕದಲ್ಲಿದ್ದ ಅಜೀತಕುಮಾರ ಅವರಿಗೆ ಜುಲೈ 4 ರಂದು ಬ್ಯಾಂಕ್​ನಿಂದ ನೋಟಿಸ್ ಬಂದಿದೆ. ಇದನ್ನು ನೋಡಿ ತೀವ್ರ ಮಾನಸಿಕವಾಗಿದ್ದ ಅವರು ಜುಲೈ 5 ರಂದು ವಿಷ ಸೇವಿಸಿದ್ದರು. ಕೂಡಲೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು (ಆಗಸ್ಟ್ 5) ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

ಐದು ಏಕರೆ ಜಮೀನು ಇದ್ದರೂ ಅಜಿತಕುಮಾರ ಅವರು ಕಳೆದ ಮೂರು ವರ್ಷದಿಂದ ಸತತ ನಷ್ಟ ಅನಿಭವಿಸಿದ್ದರು. ಇದರಿಂದಾಗಿ ಸಾಲದ ಹೊರೆಯೂ ಹೆಚ್ಚಾಗುತ್ತಿತ್ತು. ಸದ್ಯ ಅಜಿತಕುಮಾರ ಆತ್ಮಹತ್ಯೆ ಸಂಬಂಧ ಸವಣೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ