ಕೊಪ್ಪಳ ಎಸ್​​ಪಿ ವರ್ಗಾವಣೆಗೆ ಕಾಂಗ್ರೆಸ್​ ಶಾಸಕರಿಂದಲೇ ವಿರೋಧ: ಶಿವರಾಜ್ ತಂಗಡಗಿ ವಿರುದ್ಧ ಆಕ್ರೋಶ

| Updated By: ವಿವೇಕ ಬಿರಾದಾರ

Updated on: Jul 05, 2024 | 11:57 AM

2023ರ ಫೆಬ್ರವರಿ 24ರಿಂದ ಕೊಪ್ಪಳ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಯಶೋಧಾ ಎಸ್​. ವಂಟಗೋಡಿ ಅವರನ್ನು ಕರ್ನಾಟಕ ಸರ್ಕಾರ ಗುರುವಾರ ವರ್ಗಾವಣೆ ಮಾಡಿದೆ. ಆದರೆ, ಈ ವರ್ಗಾವಣೆಗೆ ಕಾಂಗ್ರೆಸ್​ ಶಾಸಕರಿಂದಲೇ ವಿರೋಧ ವ್ಯಕ್ತವಾಗಿದೆ.

ಕೊಪ್ಪಳ ಎಸ್​​ಪಿ ವರ್ಗಾವಣೆಗೆ ಕಾಂಗ್ರೆಸ್​ ಶಾಸಕರಿಂದಲೇ ವಿರೋಧ: ಶಿವರಾಜ್ ತಂಗಡಗಿ ವಿರುದ್ಧ ಆಕ್ರೋಶ
ಎಸ್​ಪಿ ಯಶೋಧಾ ಎಸ್​. ವಂಟಗೋಡಿ
Follow us on

ಕೊಪ್ಪಳ, ಜುಲೈ 05: ಕರ್ನಾಟಕ ಸರ್ಕಾರ (Karnataka Government) ಗುರುವಾರ (ಜು.04) ರಂದು ಕೊಪ್ಪಳ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ (Koppal SP) ಯಶೋಧಾ ಎಸ್​. ವಂಟಗೋಡಿ ಅವರನ್ನು ಲೋಕಾಯುಕ್ತದ (Lokayukta) ಎಸ್​ಪಿ ಸ್ಥಾನಕ್ಕೆ ಮಾಡಿ ಆದೇಶ ಹೊರಡಿಸಿದೆ. ಜಿಲೆಯ ನೂತನ ಎಸ್​​ಪಿಯಾಗಿ ರಾಮ್​ ಎಲ್​​. ಅರಸಿದ್ದಿ ಅವರನ್ನು ನೇಮಕ ಮಾಡಿದೆ. ಆದರೆ, ಯಶೋಧಾ ಎಸ್​. ವಂಟಗೋಡಿ ವರ್ಗಾವಣೆ ವಿಚಾರವಾಗಿ ಜಿಲ್ಲೆಯ ಕಾಂಗ್ರೆಸ್ (Congress)​ ಶಾಸಕರ ಮಧ್ಯೆ ಮುಸುಕಿನ ಗುದ್ದಾಟ ನಡೆದಿದೆ.

ಯಶೋಧಾ ಎಸ್​. ವಂಟಗೋಡಿ ವರ್ಗಾವಣೆಗೆ ಜಿಲ್ಲೆಯ ಕೆಲ ಕಾಂಗ್ರೆಸ್​ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ಕೂಡಲೆ ವರ್ಗಾವಣೆಯನ್ನು ತಡೆಹಿಡಿಯಬೇಕೆಂದು, ಹಾಲಿ ಎಸ್ಪಿಯವರನ್ನೇ ಮುಂದುವರಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ ಪರಮೇಶ್ವರ್​ ಅವರಿಗೆ ಮನವಿ ಮಾಡಿದ್ದಾರೆ. ಹೀಗಾಗಿ, ರಾಮ್​ ಎಲ್. ಅರಸಿದ್ದಿ ಅವರು ಅಧಿಕಾರ ಸ್ವೀಕಾರ ಮಾಡದಂತೆ ಗೃಹ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಮುಡಾ ಹಗರಣ ಬಯಲು ಮಾಡಿದ ಮೈಸೂರು ಡಿಸಿ ಕೆವಿ ರಾಜೇಂದ್ರ ವರ್ಗ

ಯಾವುದೇ ಕಾರಣಕ್ಕೂ ಹಾಲಿ ಎಸ್​ಪಿ ಅವರನ್ನು ಬದಲಾವಣೆ ಮಾಡಬಾರದು. ಹಾಲಿ ಎಸ್​ಪಿ ಅವರ ವರ್ಗಾವಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಮಾಡಿಸಿದ್ದಾರೆ. ತಮ್ಮ ತವರು ಕ್ಷೇತ್ರ ಇಲಕಲ್ ಮೂಲದವರನ್ನು ಎಸ್ಪಿಯಾಗಿ ಕರೆತಂದಿದ್ದಾರೆ ಅಂತ ಶಾಸಕರು ಅಸಮಾಧಾನ ಹೊರಹಾಕಿದ್ದಾರೆ.

ಇತ್ತೀಚಿಗೆ ರಾಜ್ಯ ಸರ್ಕಾರ ಪೊಲೀಸ್​ ಇಲಾಖೆಯಲ್ಲಿ ಮೇಜರ್​ ಸರ್ಜರಿ ನಡೆಸಿತ್ತು. ಬುಧವಾರ (ಜು.03) ರಂದು 25 ಐಪಿಎಸ್​ ಅಧಿಕಾರಿಗಳುನ್ನು ವರ್ಗಾವಣೆಗೊಳಿಸಿತ್ತು. ಹುಬ್ಬಳ್ಳಿ-ಧಾರವಾಡ ಪೊಲೀಸ್​ ಆಯುಕ್ತೆಯಾಗಿದ್ದ ರೇಣುಕಾ ಸುಕುಮಾರ್​ ಅವರನ್ನು ವರ್ಗಾವಣೆ ಮಾಡಿತ್ತು. ಈ ಜಾಗಕ್ಕೆ ಎನ್​. ಶಶಿಕುಮಾರ್​ ಅವರನ್ನು ನೇಮಕ ಮಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ