
ಬೆಂಗಳೂರು, (ಸೆಪ್ಟೆಂಬರ್ 02): ಕೆಪಿಎಸ್ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಹಗರಣ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದರ ಮಧ್ಯೆ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ RDPR ಇಂಜಿನಿಯರ್ಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣದ ಬಗ್ಗೆ ಹೊಸ ಬಾಂಬ್ ಸಿಡಿಸಿದ್ದು, ಸಚಿವ ಪ್ರಿಯಾಂಕ್ ಖರ್ಗೆಯತ್ತ ಒದೊಂದೇ ಬಾಣ ಬಿಡುತ್ತಿದ್ದಾರೆ. ಹೌದು…ಅಕ್ರಮವನ್ನು ಪ್ರಿಯಾಂಕ ಖರ್ಗೆ ಮಾಡಿದ್ಧಾರೆ ಅಂತ ಹೇಳಲ್ಲ. Rdpr ಅಧಿಕಾರಿಗಳು ಏನ್ ಮಾಡಿದ್ರು? RDPR ಮಂತ್ರಿ ಪ್ರಿಯಾಂಕ ಖರ್ಗೆ ಆಗಿರ್ಲಿಲ್ವಾ? ಎಕ್ಸಾಮ್ ನಡೆಸೋದು ಕೆಪಿಎಸ್ಸಿ, ಆದರೆ ಆದೇಶ ಮಾಡೋದು ಸರ್ಕಾರ. RDPR ಇಲಾಖೆ ಯಾರ್ ಕೈಯಲ್ಲಿ ಇತ್ತು. ಮಂತ್ರಿ ಗೊತ್ತಿಲ್ಲದೇ 24 ಜನರಿಗೆ ಅಪಾಯಿಂಟ್ ಮೆಂಟ್ ಹೇಗೆ ಕೊಡ್ತಾರೆ? ಆದೇಶ ಪತ್ರ ಕೊಟ್ಟವರು ನಿಮ್ಮ ಇಲಾಖೆ ಅಲ್ವಾ? ಇದನ್ನು ಪತ್ತೆ ಹಚ್ಚೋಕೆ ಒಂದುವರೆ ವರ್ಷಗಳ ಕಾಲ ಬೇಕಾ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಣ್ಣು ಇಲ್ಲದ ಒಬ್ಬ ವ್ಯಕ್ತಿ ಪರೀಕ್ಷೆ ಬರೆದು ತಹಶಿಲ್ದಾರ್ ಆಗಿದ್ದ. ಆತನ ಕೆಲಸ ರದ್ದು ಮಾಡಿದ್ದು ನಿಮ್ಮ ಸರ್ಕಾರ. ಅದಕ್ಕೆ ದೇವೇಗೌಡರು ಪತ್ರ ಬರೆದಿದ್ದು. ನಮ್ಮ ಸಂಬಂಧಿಕರ ಬಗ್ಗೆ ನೋಡಿ ಎಂದು ಪತ್ರ ಬರೆದಿರಲಿಲ್ಲ ಪ್ರಿಯಾಂಕ್ ಖರ್ಗೆ ಅವರೇ. ನಾನು ಕೆಪಿಎಸ್ಸಿ ಮಾಜಿ ಅಧ್ಯಕ್ಷರನ್ನ ಜೈಲಿನಲ್ಲಿ ಭೇಟಿ ಮಾಡಿದ್ದು ನಿಜ. ನಾನು ಅವರನ್ನ ಭೇಟಿಯಾದಗ ಅವರು ಅಧ್ಯಕ್ಷ ಸ್ಥಾನದಲ್ಲಿ ಇರಲಿಲ್ಲ.ಆ ಅಭ್ಯರ್ಥಿ ಕಾಲದಲ್ಲಿ 13 ಸಾವಿರ ಅಭ್ಯರ್ಥಿಗಳಿಗೆ ಕೆಲಸ ಕೊಟ್ಟಿದ್ದಾರೆ. ಯಾವುದೇ ರೀತಿ ಒಂದು ರೂ ಹಣ ತೆಗೆದುಕೊಂಡಿಲ್ಲ. ಪ್ರಾಮಾಣಿಕ ಕೆಲಸ ಮಾಡಿದ್ದಾರೆ. ಈ ಸಂದರ್ಭದಲ್ಲಿ ಯಡಿಯೂರಪ್ಪ ಮನೆಗೆ ಹೋಗಿದ್ದ. ನಮ್ಮ ಮೇಲಿನ ವಿಚಾರಕ್ಕೆ ಮಾಜಿ ಅಧ್ಯಕ್ಷರನ್ನ ದ್ವೇಷ ಮಾಡುಬೇಡಿ ಎಂದು ಹೇಳಿದ್ದೆ. ಯಾವ ರೀತಿ ಅಧ್ಯಕ್ಷರ ಆಯ್ಕೆ ಆಯ್ತು ಅಂತ ನಿಮ್ಮ ತಂದೆ ಕೇಳಿ ತಿಳಿದುಕೊಳ್ಳಿ ಖರ್ಗೆ ಅವರೇ ಎಂದು ತಿರುಗೇಟು ನೀಡಿದ್ದಾರೆ.
ಕೆಪಿಎಸ್ಸಿ ಸಂಸ್ಥೆ ಆರಂಭ ಆಗಿದ್ದು ಒಳ್ಳೆಯ ಉದ್ದೇಶಕ್ಕೆ. ಈಗ ಸಂಸ್ಥೆಯಲ್ಲಿ ಬೇರೆಯ ರೀತಿ ನೆಡೆಯುತ್ತಿದೆ. ಇತ್ತೀಚೆಗೆ ರಾಜ್ಯ ಸರ್ಕಾರದಿಂದ ಕಾರ್ಯದರ್ಶಿ ನೇಮಕ ಮಾಡುತ್ತಾರೆ. ಪರೀಕ್ಷೆ ನೆಡೆಸಲು ಸರ್ಕಾರದಿಂದ ಒಬ್ಬ ಕಂಟ್ರೋಲರ್ ನೇಮಕ ಮಾಡುತ್ತಾರೆ. ರೆಸಾರ್ಟ್ ನಲ್ಲಿ ಕರೆದುಕೊಂಡು ಹೋಗಿ ಪರೀಕ್ಷೆ ಬರೆಸುತ್ತಿದ್ದಾರೆ. ಈ ವಿಚಾರದಲ್ಲಿ ಪ್ರಿಯಾಂಕ್ ಖರ್ಗೆ ಅವರು ಒಂದು ಮಾತು ಹೇಳಿದ್ದಾರೆ, ಮಾಜಿ ಕೆಪಿಎಸ್ಸಿ ಅಧ್ಯಕ್ಷರನ್ನ ಜೈಲಿನಲ್ಲಿ ಭೇಟಿ ಮಾಡಿರುವ ಬಗ್ಗೆ ಮತನಾಡಿದ್ದಾರೆ. ಅದೇ ರೀತಿ 2011 ಕೆಪಿಎಸ್ಸಿ ಬ್ಯಾಜ್ ಬಗ್ಗೆ ಮತನಾಡಿದ್ದಾರೆ. ಆ ಸಂದರ್ಭದಲ್ಲಿ ಸರ್ಕಾರ ತಡೆ ಹಿಡಿದ ಆದೇಶ ರದ್ದು ಪಡೆಸಲು ಕೋರ್ಟ್ ಗೆ ಅಭ್ಯರ್ಥಿಗಳು ಹೋಗಿದ್ರು. 362 ಪರೀಕ್ಷೆ ಬರೆದ ಅಭ್ಯರ್ಥಿಗಳು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಆಯ್ತು. ಇದು ಇಡೀ ರಾಜ್ಯದಲ್ಲಿ ದೊಡ್ಡ ಸುದ್ದಿ ಆಯ್ತು ಎಂದರು.
ಪುಡ್ ಡಿಪಾರ್ಟ್ಮೆಂಟ್ನಲ್ಲಿ ಜ್ಞಾನೇಂದ್ರ ಇದ್ರು. ಪೊಲೀಸ್ ಆಫಿಸರ್ ಮಕ್ಕಳನ್ನ ಸೆಲೆಕ್ಟ್ ಮಾಡಲು ಏನು ಮಾಡಿದ್ರು? ರೆಸಾರ್ಟ್ನಲ್ಲಿ ಪರೀಕ್ಷೆ ಬರೆಸಿದ್ದಾರೆ. ಮೊನ್ನೆ ನಡೆದ ಕೆಎಎಸ್ ಪರೀಕ್ಷೆಯಲ್ಲಿ ನಡೆದಿದೆ
ಸಿಐಡಿ ತನಿಖೆ ನಡೆಯುತ್ತಿದೆ ಅಲ್ವಾ ಅದನ್ನ ನ್ಯಾಯಯುತವಾಗಿ ನಡೆಸಿ. ತೋರಿಕೆಗೆ ತನಿಖೆ ಮಾಡಿ ಮುಚ್ಚಾಕಬೇಡಿ. 2011ರಲ್ಲಿನ ಕೆಎಎಸ್ ಪರೀಕ್ಷೆಯನ್ನ ಯಾಕೆ ಬರ್ಕಾಸ್ ಮಾಡಿದ್ರಿ. ಯಾವ ಆಧಾರದ ಮೇಲೆ ಮಾಡಿದ್ರಿ. ಸಿಐಡಿ ತನಿಖಾ ವರದಿ ಏನಿತ್ತು? ಮಧ್ಯಂತರ ವರದಿಯಲ್ಲಿ ಏನಿತ್ತು ಹೇಳಿ. ಅಕ್ರಮವಾಗಿದೆ ಎಂದು ನಾನು ಹೇಳುತ್ತಿಲ್ಲ. ಅಕ್ರಮವಾಗಿದೆ ಎಂದು ಪೇಪರ್ ಹೇಳುತ್ತಿದೆ. ಪ್ರಿಯಾಂಕ್ ಖರ್ಗೆ ಅವರು ಇನ್ವಾಲ್ ಆಗಿದ್ದಾರೋ ಬಿಟ್ಟಿದ್ದಾರೋ ಗೊತ್ತಿಲ್ಲ. ಆದ್ರೆ ಇವರು ಜವಾಬ್ದಾರಿ ಏನಿತ್ತು. ಕುಮಾರಸ್ವಾಮಿ ಅವರನ್ನ ಹೆದರಿಸೋಕೆ ಆಗಲ್ಲ. ಆದೇಶ ಪ್ರತಿ ಕೊಟ್ಟಿರೋದು ಯಾರು ಖರ್ಗೆ ಅವರೆ ನಿಮ್ಮ ಇಲಾಖೆ ಅವರು. ಇಷ್ಟೆಲ್ಲಾ ಆಗಿದ್ದಾಗ ರಾಜೀನಾಮೆ ಕೇಳ್ಬೇಕೋ ಬೇಡವೋ. ತಪ್ಪಿದೆ ಎನ್ನುವ ಕಾರಣಕ್ಕೆ ಕಂಡಿಷನಲ್ ಆದೇಶ ಕೊಟ್ಟಿರೋದು. ಅದರ ತನಿಖೆ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದರು.
Published On - 4:27 pm, Wed, 2 September 26