ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿನ್ನು ಕೆಎಸ್​ಆರ್​ಟಿಸಿ ಬಸ್​​ಗಳು ಎಡ ಬದಿಯ ಲೇನ್​ನಲ್ಲೇ ಸಂಚರಿಸಬೇಕು

| Updated By: ಗಣಪತಿ ಶರ್ಮ

Updated on: Aug 05, 2023 | 1:29 PM

ಕೆಎಸ್‌ಆರ್‌ಟಿಸಿ ಬಸ್ ಚಾಲಕರು ಸೈಡ್ ವ್ಯೂ ಮಿರರ್‌ಗಳ ಮೇಲೆ ಕಣ್ಣಿಡಬೇಕು ಮತ್ತು ಲೇನ್ ಬದಲಾಯಿಸುವಾಗ ಮತ್ತು ತಿರುವುಗಳನ್ನು ತೆಗೆದುಕೊಳ್ಳುವಾಗ ಇಂಡಿಕೇಟರ್‌ಗಳನ್ನು ಕಡ್ಡಾಯವಾಗಿ ಬಳಸಬೇಕು ಎಂದು ಸೂಚಿಸಲಾಗಿದೆ.

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿನ್ನು ಕೆಎಸ್​ಆರ್​ಟಿಸಿ ಬಸ್​​ಗಳು ಎಡ ಬದಿಯ ಲೇನ್​ನಲ್ಲೇ ಸಂಚರಿಸಬೇಕು
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KSRTC) ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ (Bengaluru Mysuru Expressway) ಪ್ರಯಾಣಿಸುವ ಬಸ್ ಚಾಲಕರಿಗೆ ಅಪಘಾತಗಳನ್ನು ತಪ್ಪಿಸಲು ಹಲವಾರು ಮಾರ್ಗಸೂಚಿಗಳನ್ನು ನೀಡಿದೆ. ಮೈಸೂರು-ಬೆಂಗಳೂರು ನಡುವಿನ 118 ಕಿಮೀ ದೂರವನ್ನು ಕ್ರಮಿಸಲು ಚಾಲಕರು ಗಂಟೆಗೆ 80 ಕಿಮೀ ವೇಗವನ್ನು ಮೀರದಂತೆ ಸೂಚಿಸಲಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳು ವೇಗವಾಗಿ ಚಲಿಸುವ ವಾಹನಗಳಿಗೆ ಓವರ್‌ಟೇಕ್ ಮಾಡಲು ಅನುಕೂಲವಾಗುವಂತೆ ಎಡಭಾಗದ 2 ಲೇನ್‌ಗಳಲ್ಲಿಯೇ ಸಂಚರಿಸಬೇಕು ಎಂದೂ ಸೂಚನೆ ನೀಡಲಾಗಿದೆ.

ಕೆಎಸ್‌ಆರ್‌ಟಿಸಿ ಬಸ್ ಚಾಲಕರು ಸೈಡ್ ವ್ಯೂ ಮಿರರ್‌ಗಳ ಮೇಲೆ ಕಣ್ಣಿಡಬೇಕು ಮತ್ತು ಲೇನ್ ಬದಲಾಯಿಸುವಾಗ ಮತ್ತು ತಿರುವುಗಳನ್ನು ತೆಗೆದುಕೊಳ್ಳುವಾಗ ಇಂಡಿಕೇಟರ್‌ಗಳನ್ನು ಕಡ್ಡಾಯವಾಗಿ ಬಳಸಬೇಕು ಎಂದು ಸೂಚಿಸಲಾಗಿದೆ. ಎಡಿಜಿಪಿ (ಸಂಚಾರ ಮತ್ತು ಸುರಕ್ಷತೆ) ಅಲೋಕ್ ಕುಮಾರ್ ಅವರು ಎಕ್ಸ್‌ಪ್ರೆಸ್‌ವೇ ಉದ್ದಕ್ಕೂ ಗುರುತಿಸಿರುವ 25 ಬ್ಲಾಕ್ ಸ್ಪಾಟ್‌ಗಳಲ್ಲಿ ಎಚ್ಚರಿಕೆ ವಹಿಸುವಂತೆ ಬಸ್ ಚಾಲಕರಿಗೆ ತಿಳಿಸಿದ್ದಾರೆ.

ಈ ವಿಚಾರವಾಗಿ ಅಲೋಕ್ ಕುಮಾರ್ ಅವರು ಟ್ವೀಟ್ ಕೂಡ ಮಾಡಿದ್ದು, ಬಸ್ ಚಾಲಕರು ಲೇನ್ ಶಿಸ್ತನ್ನು ಕಾಪಾಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ: ಜುಲೈ ತಿಂಗಳಲ್ಲಿ ಅಪಘಾತಗಳಿಂದ ಸಾವಿನ ಸಂಖ್ಯೆ ಇಳಿಕೆ -ಎಡಿಜಿಪಿ ಅಲೋಕ್ ಕುಮಾರ್

ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತಗಳನ್ನು ತಡೆಗಟ್ಟಲು ಸಂಚಾರ ಪೊಲೀಸ್ ಇಲಾಖೆ ಜುಲೈನಲ್ಲಿ 100 ಕಿಮೀ ವೇಗದ ಮಿತಿಯನ್ನು ವಿಧಿಸಿತ್ತು. ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಲು ಅತಿ ವೇಗ ಮತ್ತು ಅತ್ಯಂತ ನಿಧಾನವಾಗಿ ಚಲಿಸುವ ವಾಹನಗಳು ಪ್ರಮುಖ ಕಾರಣ ಎಂದು ಪೊಲೀಸರು ಈ ಹಿಂದೆ ಹೇಳಿದ್ದರು. ಆಗಸ್ಟ್ 1 ರಿಂದ, ಬೈಕ್‌ಗಳು, ಆಟೋಗಳು ಮತ್ತು ಇತರ ನಿಧಾನಗತಿಯ ವಾಹನಗಳಾದ ಟ್ರ್ಯಾಕ್ಟರ್ ಮತ್ತು ಇತರ ವಾಹನಗಳು ಎಕ್ಸ್‌ಪ್ರೆಸ್‌ವೇಯ ಮುಖ್ಯ ಮಾರ್ಗಗಳನ್ನು ಬಳಸಲು ಅನುಮತಿಸಲಾಗುತ್ತಿಲ್ಲ. ಈ ವಾಹನಗಳು ಸರ್ವೀಸ್ ರಸ್ತೆಗಳಲ್ಲಿ ಮಾತ್ರ ಚಲಿಸಲು ಅನುಮತಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:26 pm, Sat, 5 August 23