AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನನ್ನು ರೌಡಿ ಶೀಟರ್‌ ಎಂದು ಬಿಂಬಿಸಲಾಗುತ್ತಿದೆ: ಪೊಲೀಸರ ಮೇಲೆ ವಕೀಲ ಜಗದೀಶ್ ನೇರ ವಾಗ್ದಾಳಿ

ಇನ್ನು ಫೇಸ್​ಬುಕ್ ಲೈವ್ ಬಳಿಕ ಟಿವಿ9 ಜೊತೆ ಮಾತನಾಡಿದ ವಕೀಲ ಜಗದೀಶ್ ಕುಮಾರ್ ಬೇಸತ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳಲ್ಲಿ ಸಂತ್ರಸ್ತೆ ವಿಡಿಯೋ ಪ್ರಸಾರ ಆಗಿದ್ದರ ಬಗ್ಗೆ ಬೇಸರ ಇದೆ. ಆರೋಪಿ ವಿರುದ್ದ ಸಾಕಷ್ಟು ಸಾಕ್ಷಿ ಇದೆ. ಕೆಲ ಸಾಕ್ಷ್ಯಾಧಾರಗಳನ್ನ ಕೊಟ್ಟಿದ್ದೀವಿ.

ನನ್ನನ್ನು ರೌಡಿ ಶೀಟರ್‌ ಎಂದು ಬಿಂಬಿಸಲಾಗುತ್ತಿದೆ: ಪೊಲೀಸರ ಮೇಲೆ ವಕೀಲ ಜಗದೀಶ್ ನೇರ ವಾಗ್ದಾಳಿ
ವಕೀಲ ಕೆ.ಎನ್.ಜಗದೀಶ್ ಕುಮಾರ್
ಆಯೇಷಾ ಬಾನು
| Edited By: |

Updated on: Mar 31, 2021 | 12:04 PM

Share

ಬೆಂಗಳೂರು: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಕೇಸ್​ಗೆ ಸಂಬಂಧಿಸಿ ಸಿಡಿ ಯುವತಿ ಪರ ವಕೀಲ ಕೆ ಎನ್ ಜಗದೀಶ್ ಕುಮಾರ್ ಇದೀಗತಾನೆ​ ಫೇಸ್‌ಬುಕ್‌ ಲೈವ್ ಮಾಡಿದ್ದಾರೆ. ಯುವತಿಯನ್ನು ಆಕೆಯ ಕುಟುಂಬದವರೇ ಕೈಬಿಟ್ಟಿದ್ದಾರೆ. ನಾನೇ ಸಹೋದರನಾಗಿ ಯುವತಿಗೆ‌‌ ನ್ಯಾಯ ಕೊಡಿಸುತ್ತಿದ್ದೇನೆ. ಈ ಹೋರಾಟದಲ್ಲಿ ನಾನು ಡೆಸ್ಟ್ರಾಯ್ ಆಗಲೂ ಸಿದ್ಧನಿದ್ದೇನೆ ಎಂದು ವಕೀಲ ಜಗದೀಶ್ ಫೇಸ್‌ಬುಕ್‌ ಲೈವ್​ ವೇಳೆ ತಿಳಿಸಿದ್ದಾರೆ.

ಈ ವೇಳೆ ಫೇಸ್​ಬುಕ್ ಲೈವ್​ನಲ್ಲಿ ಮಾತನಾಡುತ್ತ ಎಸ್ಐಟಿ ಅಧಿಕಾರಿಗಳು ನನ್ನ ಕಕ್ಷಿದಾರರ ತನಿಖೆ ಮಾಡಿ, ನಿಮಗೆ ಸಂಪೂರ್ಣ ಅಧಿಕಾರವಿದೆ. ಪೋಲಿಸರು ಆರೋಪಿಗೆ ಸಹಾಯ ಮಾಡುತ್ತಿದೆ ಅನ್ನೋದಕ್ಕೆ ನನ್ನ ಬಳಿ ಸಾಕ್ಷ್ಯವಿದೆ. ಆದ್ರೆ ಈ ಬಗ್ಗೆ ಎಸ್ಐಟಿ ಉತ್ತರ ಕೊಡುತ್ತಾ? ಹೆಣ್ಣು ಮಗುವನ್ನ ಖಾಸಗಿಯಾಗಿ ಕಾಪಾಡಲು ಸಾಕಷ್ಟು ಕಷ್ಟ ಪಟ್ಟಿದ್ದೇವೆ. ಯಾವುದೋ ಒಂದು ಫಾರಿನ್ ಮೂವಿ ರೀತಿ ರಕ್ಷಣೆ ನೀಡಿ ಕೋರ್ಟ್​ಗೆ ಕರೆದುಕೊಂಡು ಬಂದಿದ್ದೇವೆ. ನಿನ್ನೆ ಕೋರ್ಟ್​ನಲ್ಲಿ 500 ಕ್ಕೂ ಹೆಚ್ಚು ಲಾಯರ್​ಗಳು ಭಾಗಿಯಾಗಿದ್ರು. ನಾವು ಯಾರನ್ನೂ ಕರೆದಿರಲಿಲ್ಲ. ನಮ್ಮ ಸೀನಿಯರ್ಸ್ ಬಂದು ನಮ್ಮ ಸಪೋರ್ಟ್​ಗೆ ನಿಂತಿದ್ರು. ನಾವು ವಕಾಲತ್ತು ಹಾಕಿದ್ದಕ್ಕೆ ಯಾಕೆ ಆರೋಪಿಗಳಾಗುತ್ತೇವೆ. ನಾನು ಆಕೆಯನ್ನ ವಿಚಾರಣೆ ಮಾಡುವ ಸ್ಥಳದ ಮಾಹಿತಿ ಬಿಟ್ಟು ಕೊಟ್ಟಿರಲಿಲ್ಲ. ಕೆಲವು ಭ್ರಷ್ಟ ಪೊಲೀಸ್ ಅಧಿಕಾರಿಗಳೇ ವಿಡಿಯೋ ಮಾಡಿ ಮಾಧ್ಯಮಕ್ಕೆ ನೀಡಿದ್ದಾರೆ ಎಂದು ವಕೀಲ ಜಗದೀಶ್ ಫೇಸ್​ಬುಕ್ ಲೈವ್​ನಲ್ಲಿ ಆರೋಪಿಸಿದ್ದಾರೆ.

ನನ್ನನ್ನು ರೌಡಿ ಶೀಟರ್‌ ಎಂದು ಬಿಂಬಸಲಾಗುತ್ತಿದೆ ನನ್ನನ್ನು ರೌಡಿ ಶೀಟರ್‌ ಎಂದು ಬಿಂಬಿಸಲಾಗುತ್ತಿದೆ ಎಂದು ವಕೀಲ ಜಗದೀಶ್ ಅವರು ಮಾಜಿ ಸಚಿವ, ಎಸ್‌ಐಟಿ ಹಾಗೂ ಪೊಲೀಸರ ಮೇಲೆ ವಾಗ್ದಾಳಿ ನಡೆಸಿದ್ದಾರೆ. ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ನಾನು ಎಲ್ಲದಕ್ಕೂ ಸಿದ್ಧನಾಗಿದ್ದೇನೆ. ನಾನು ನಂದಿ ಅಲ್ಲ ನಾನು ಜಗದೀಶ್. ಸರ್ಕಾರ ಬಿದ್ದು ಹೋಗುತ್ತದೆ ಎಂಬುದನ್ನು ನಾನು ಹೇಳ್ತಿಲ್ಲ. ನಿಮಗೇ ಗೊತ್ತಾಗುತ್ತೆ ಎಂದದು ಹೇಳಿದ ಜಗದೀಶ್, ಕಾಂಗ್ರೆಸ್‌ ವಕೀಲ ಇದ್ದ ಯುವತಿ ವಿಡಿಯೋವನ್ನು ಮಾಧ್ಯಮಗಳಿಗೆ ಪೊಲೀಸರೇ ನೀಡಿದ್ದಾರೆ. ತನಿಖೆ ನಡೆಸುತ್ತಿರುವ ಪೊಲೀಸರೇ ವಿಡಿಯೋ ಮಾಡಿದ್ದಾರೆ ಎಂದು ಪೊಲೀಸರ ವಿರುದ್ಧವೂ ವಕೀಲ ಜಗದೀಶ್‌ ಕುಮಾರ್ ವಾಗ್ದಾಳಿ ನಡೆಸಿದ್ದಾರೆ. ನಿಮ್ಮ ಕೈಯಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಪೂಲೀಸರ ವಿರುದ್ದ ಏಕವಚನ ಪ್ರಯೋಗ ಮಾಡಿದ್ರು.

ಸಂತ್ರಸ್ತೆಯ ಫೋಟೋ ವಿಡಿಯೋ ವೈರಲ್ ಬಗ್ಗೆ ಬೇಸರವಿದೆ ಇನ್ನು ಫೇಸ್​ಬುಕ್ ಲೈವ್ ಬಳಿಕ ಟಿವಿ9 ಜೊತೆ ಮಾತನಾಡಿದ ವಕೀಲ ಜಗದೀಶ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳಲ್ಲಿ ಸಂತ್ರಸ್ತೆ ವಿಡಿಯೋ ಪ್ರಸಾರ ಆಗಿದ್ದರ ಬಗ್ಗೆ ಬೇಸರ ಇದೆ. ಆರೋಪಿ ವಿರುದ್ದ ಸಾಕಷ್ಟು ಸಾಕ್ಷಿ ಇದೆ. ಕೆಲ ಸಾಕ್ಷ್ಯಾಧಾರಗಳನ್ನ ಕೊಟ್ಟಿದ್ದೀವಿ. ವಿಚಾರಣೆ ನಡೆಸುತ್ತಿದ್ದ ಭ್ರಷ್ಟ ಪೊಲೀಸ್ ಅಧಿಕಾರಿ ವಿಡಿಯೋ ಶೂಟ್ ಮಾಡಿದ್ದಾರೆ ಎಂದು ಜಗದೀಶ್ ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಸಿಡಿ ಲೇಡಿ ಮೆಡಿಕಲ್ ಟೆಸ್ಟ್ ಬಳಿಕ.. ರಮೇಶ್​ ಜಾರಕಿಹೊಳಿಗೂ ಮೆಡಿಕಲ್ ಟೆಸ್ಟ್? ರಮೇಶ್ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ

ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್