ಹೋಳಿ ಆಚರಿಸಿ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದವ ವಾಪಸ್ ಬರಲೇ ಇಲ್ಲ..
ಹೋಳಿ ಆಚರಿಸಿ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದವ ನೀರುಪಾಲಾಗಿರುವ ಘಟನೆ ಯಾದಗಿರಿ ಜಿಲ್ಲೆ ವಡಗೇರ ತಾಲೂಕಿನ ಗುರುಸಣಗಿ ಗ್ರಾಮದಲ್ಲಿ ನಡೆದಿದೆ. ಗುರುಸಣಗಿ ಬಳಿ ಭೀಮಾ ನದಿಯಲ್ಲಿ ಯುವಕ ನೀರುಪಾಲಾಗಿದ್ದಾನೆ.

ಹೋಳಿ ಆಚರಿಸಿ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದವ ನೀರುಪಾಲಾಗಿರುವ ಘಟನೆ ಯಾದಗಿರಿ ಜಿಲ್ಲೆ ವಡಗೇರ ತಾಲೂಕಿನ ಗುರುಸಣಗಿ ಗ್ರಾಮದಲ್ಲಿ ನಡೆದಿದೆ. ಗುರುಸಣಗಿ ಬಳಿ ಭೀಮಾ ನದಿಯಲ್ಲಿ ಯುವಕ ನೀರುಪಾಲಾಗಿದ್ದಾನೆ. ಮುದ್ನಾಳ ನಿವಾಸಿ ಶಂಕರ್ ಪವಾರ್(24) ನೀರುಪಾಲಾದ ಯುವಕ. ವಡಗೇರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಸಿಂಗನಳ್ಳಿಯಲ್ಲಿ ಸಿಡಿಲು ಬಡಿದು 17 ಕುರಿಗಳು ಸಾವು ಸಿಂಗನಳ್ಳಿಯಲ್ಲಿ ಸಿಡಿಲು ಬಡಿದು 17 ಕುರಿಗಳು ಸಾವನ್ನಪ್ಪಿರುವ ಘಟನೆ ಉತ್ತರಕನ್ನಡ ಜಿಲ್ಲೆ ಮುಂಡಗೋಡ ತಾಲೂಕಿನ ಸಿಂಗನಳ್ಳಿಯಲ್ಲಿ ವರದಿಯಾಗಿದೆ. ಮಾನು ನಾಗು ಶಳಕೆ ಎಂಬುವವರ 17 ಕುರಿಗಳು ಸಿಡಿಲು ಬಡಿದು ಸಾವಿಗೀಡಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಸಿಡಿಲು ಬಡಿದು ಒಂದು ಎತ್ತು ಮತ್ತು ಒಂದು ಆಕಳು ಸಾವು ಅತ್ತ, ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಶಿಂಗಾಪುರದಲ್ಲಿ ಸಿಡಿಲು ಬಡಿದು ಒಂದು ಎತ್ತು ಮತ್ತು ಒಂದು ಆಕಳು ಸಾವಿಗೀಡಾಗಿದೆ. ಶಿವನಗೌಡ ಪಾಟೀಲ್ ಎಂಬುವವರಿಗೆ ಸೇರಿದ ಎತ್ತು ಮತ್ತು ಆಕಳು ಸಾವನ್ನಪ್ಪಿದೆ. ಬಂಕಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಲಬುರಗಿಯ ಸುಂದರನಗರದಲ್ಲಿ ಪುಡಿ ರೌಡಿಗಳ ಅಟ್ಟಹಾಸ
ಕಲಬುರಗಿಯ ಸುಂದರನಗರದಲ್ಲಿ ಪುಡಿ ರೌಡಿಗಳು ಅಟ್ಟಹಾಸ ಮೆರೆದಿದ್ದಾರೆ. ಹಾಡಹಗಲೇ ಮನೆಗಳಿಗೆ ನುಗ್ಗಿ ಹಲವರ ಮೇಲೆ ಹಲ್ಲೆ ಮಾಡಿರುವ ಕಿಡಿಗೇಡಿಗಳು ನೂರಾರು ಬೈಕ್ ಹಾಗೂ ಕಾರುಗಳನ್ನ ಜಖಂ ಮಾಡಿದ್ದಾರೆ. ನೂರಾರು ದುಷ್ಕರ್ಮಿಗಳು ಏಕಕಾಲಕ್ಕೆ ಬಡಾವಣೆಗೆ ನುಗ್ಗಿ ಕೃತ್ಯ ಎಸಗಿದ್ದಾರೆ. ಅಷ್ಟೇ ಅಲ್ಲ, ಜಿಮ್ಸ್ ಆಸ್ಪತ್ರೆಗೆ ಸಹ ನುಗ್ಗಿ ಗಲಾಟೆ ಮಾಡಿರುವ ಪುಂಡರು ವ್ಯಕ್ತಿಯೊಬ್ಬನ ಕೊಲೆ ಹಿನ್ನೆಲೆಯಲ್ಲಿ ಅಟ್ಟಹಾಸ ಮೆರೆದಿದ್ದಾರೆ. ಇದೀಗ, ಸುಂದರನಗರದಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.
ಜಾಲಗೇರಿ ತಾಂಡಾ 1ರಲ್ಲಿ ಕಳ್ಳಬಟ್ಟಿ ಕುಡಿದು ಯುವಕ ಸಾವು? ಜಾಲಗೇರಿ ತಾಂಡಾ 1ರಲ್ಲಿ ಕಳ್ಳಬಟ್ಟಿ ಕುಡಿದು ಯುವಕ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಜಾಲಗೇರಿ ತಾಂಡಾ 1ರಲ್ಲಿ ಕಳ್ಳಬಟ್ಟಿ ಕುಡಿದು ಸಹದೇವ ಜುಮ್ಮನ್ನಗೊಳ ಎಂಬಾತ ಸಾವಿಗೀಡಾಗಿದ್ದಾನೆ ಎಂದು ಆರೋಪಿಸಲಾಗಿದೆ. ಹೋಳಿ ಹಬ್ಬದ ಹಿನ್ನೆಲೆ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿತ್ತು. ಈ ವೇಳೆ ಕಳ್ಳಬಟ್ಟಿ ಕುಡಿದು ಮೃತಪಟ್ಟಿದ್ದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ.
ಫೈನಾನ್ಸ್ ಕಂಪನಿಗಳಿಗೆ ಕನ್ನ ಹಾಕುತ್ತಿದ್ದ 10 ಜನರ ಬಂಧನ
ಫೈನಾನ್ಸ್ ಕಂಪನಿಗಳಿಗೆ ಕನ್ನ ಹಾಕುತ್ತಿದ್ದ 10 ಜನರ ಬಂಧನವಾಗಿದೆ. ಬೆಂಗಳೂರಿನ ಹೆಚ್ಎಎಲ್ ಠಾಣೆ ಪೊಲೀಸರಿಂದ ಆರೋಪಿಗಳ ಬಂಧನವಾಗಿದೆ. ಖಮರುದ್ದೀನ್, ರಫೀಕ್, ಬದರುದ್ದೀನ್, ಅಯಾಸ್ ಸೇರಿ 10 ಆರೋಪಿಗಳ ಬಂಧನವಾಗಿದೆ.
ಅಂದ ಹಾಗೆ, ಈ ಕಿಲಾಡಿಗಳು ಸೆಕ್ಯುರಿಟಿ ಏಜೆನ್ಸಿ ನಡೆಸುವುದಾಗಿ ಅಂಗಡಿ ಬಾಡಿಗೆ ಪಡೀತಿದ್ರು. ಆರೋಪಿ ಖಮರುದ್ದೀನ್ ಫೈನಾನ್ಸ್ ಕಂಪನಿಗಳ ಪಕ್ಕದಲ್ಲೇ ಅಂಗಡಿ ಬಾಡಿಗೆಗೆ ಪಡೀತಿದ್ದ. ಬಳಿಕ, ಉತ್ತರ ಭಾರತದ ವಿವಿಧೆಡೆಯಿಂದ ಉಳಿದವರನ್ನ ಕರೆಸಿಕೊಳ್ತಿದ್ದ. ರಾತ್ರಿ ವೇಳೆ ಫೈನಾನ್ಸ್ ಕಂಪನಿಗಳಿಗೆ ಕನ್ನ ಹಾಕಿ ದೋಚುತ್ತಿದ್ದರು. ಲಾಕರ್ ಮುರಿದು ಆರೋಪಿಗಳು ಚಿನ್ನಾಭರಣ ದೋಚುತ್ತಿದ್ದರು. ಸದ್ಯ, ಇವೆಲ್ಲರು ಅರೆಸ್ಟ್ ಆಗಿದ್ದಾರೆ.
ಇದನ್ನೂ ಓದಿ: ಫಸ್ಟ್ ಟೈಂ: ಮೆಗಾ ಲೋಕ ಅದಾಲತ್ನಲ್ಲಿ ದಾಖಲೆ ಪ್ರಮಾಣದ ಕೇಸ್ ಇತ್ಯರ್ಥ; ರಾಜ್ಯ ಸರ್ಕಾರಕ್ಕೆ 140 ಕೋಟಿ ಉಳಿತಾಯ