ಮಂಗಳೂರು ಮೂಲದ ಹೋಟೆಲ್ ಉದ್ಯಮಿ ವಿಜಯಪುರದಲ್ಲಿ ನೇಣು‌ ಬಿಗಿದುಕೊಂಡು ಆತ್ಮಹತ್ಯೆ

ಹೋಟೆಲ್​ ಉದ್ಯಮಿ ನೇಣು‌ ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದಿದೆ.

ಮಂಗಳೂರು ಮೂಲದ ಹೋಟೆಲ್ ಉದ್ಯಮಿ ವಿಜಯಪುರದಲ್ಲಿ ನೇಣು‌ ಬಿಗಿದುಕೊಂಡು ಆತ್ಮಹತ್ಯೆ
ಅತ್ತೆ ಸೊಸೆ ಕಿತ್ತಾಟ: ಸೊಸೆಗೆ ಚಾಕುವಿನಿಂದ ಚುಚ್ಚಿದ್ದ ಅತ್ತೆ, ಸೊಸೆ ಸತ್ತಳೆಂದು ಅಂಜಿ ನೇಣಿಗೆ ಶರಣು
Edited By:

Updated on: Mar 31, 2021 | 3:49 PM

ವಿಜಯಪುರ: ಹೋಟೆಲ್​ ಉದ್ಯಮಿ ನೇಣು‌ ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದಿದೆ. ಪಟ್ಟಣದಲ್ಲಿ ಬಾಡಿಗೆ ಆಧಾರದಲ್ಲಿ ಅಮರ್ ಹೋಟೆಲ್‌ ನಡೆಸುತ್ತಿದ್ದ ಗಣೇಶ್ ನೇಣಿಗೆ ಶರಣಾಗಿರುವುದು ತಿಳಿದು ಬಂದಿದೆ.

ಗಣೇಶ ಮೂಲತಃ ಮಂಗಳೂರು ಮೂಲದ ವ್ಯಕ್ತಿ. ಹಣಕ್ಕಾಗಿ 30 ಲಕ್ಷ ಸಾಲ ಮಾಡಿಕೊಂಡಿದ್ದರು. ಹಣವನ್ನು ಮರು ಪಾವತಿ ಮಾಡಿಕೊಳ್ಳಲಾಗದೇ ಹೋಟೆಲ್​ನ ಕೋಣೆಯೊಂದರಲ್ಲಿ ನೇಣು‌ ಹಾಕಿಕೊಂಡಿದ್ದಾರೆ. ಈ ಕುರಿತಂತೆ ಇಂಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಯಚೂರಿನ ಕಲ್ಲು ಕ್ವಾರಿಯಲ್ಲಿ ಈಜಲು ಹೋಗಿದ್ದ ಯುವಕ ಸಾವು
ಕಲ್ಲು ಕ್ವಾರಿಯಲ್ಲಿ ಮುಳುಗಿ ಶಿವರಾಜ (25) ಮರಣ ಹೊಂದಿದ್ದಾನೆ. ಘಟನೆ ದೇವದುರ್ಗ ತಾಲೂಕಿನ ಗಬ್ಬೂರ ಗ್ರಾಮದ ಬಳಿ ನಡೆದಿದೆ. ಈಜಾಡಲೆಂದು ನೀರಿಗೆ ಜಿಗಿದು ನೀರಿನಲ್ಲಿ ಮುಳುಗಿ ಶಿವರಾಜ ಸಾವನ್ನಪ್ಪಿದ್ದಾರೆ. ಗಬ್ಬೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಭೀಕರ ರಸ್ತೆ ಅಪಘಾತ: ನಜ್ಜುಗುಜ್ಜಾದ ಕಾರು, ಖ್ಯಾತ ಗಾಯಕ ಸ್ಥಳದಲ್ಲೇ ಸಾವು

ಕೇರಳದಲ್ಲಿ ಮತ್ತೆ ಕಾಣಿಸಿಕೊಂಡ ಶೀಗೆಲ್ಲಾ ಸೋಂಕು: ಓರ್ವ ಬಾಲಕ ಸಾವು