Sign In

By signing in or creating an account, you agree with Associated Broadcasting Company's Terms & Conditions and Privacy Policy.

Melukote: ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಗುರಿಯಾದ ತಂಗಿ ಕೊಳ, ಮೇಲುಕೋಟೆಯಲ್ಲಿ ಭಕ್ತರಿಗೆ ಭಾರಿ ನಿರಾಸೆ

Akka Tangi Kola: ರಕ್ಕಸ ಮಳೆಗೆ ಪುರಾಣ ಪ್ರಸಿದ್ದ ತಂಗಿ ಕೊಳದ ತಡೆ ಗೋಡೆಗಳು ಕುಸಿದಿತ್ತು.. ಆದ್ರೆ ಈಗ ಮಳೆ ನಿಂತು ತಿಂಗಳುಗಳೇ ಆಗಿವೆ.. ಆದರೂ ಸಹ ಕಲ್ಯಾಣಿಯನ್ನ ದುರಸ್ಥಿ ನಡೆಸಲು ಅಧಿಕಾರಿಗಳು ಮುಂದಾಗಿಲ್ಲ..

Melukote: ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಗುರಿಯಾದ ತಂಗಿ ಕೊಳ, ಮೇಲುಕೋಟೆಯಲ್ಲಿ ಭಕ್ತರಿಗೆ ಭಾರಿ ನಿರಾಸೆ
ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಗುರಿಯಾದ ತಂಗಿ ಕೊಳ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jan 07, 2023 | 6:06 AM

ಮಂಡ್ಯ ಜಿಲ್ಲೆಗೆ ಹೆಮ್ಮೆಯ ಕೀರೀಟ ಅಂದ್ರೆ ಅದು ಪುರಾಣ ಪ್ರಸಿದ್ದ ಮೇಲುಕೋಟೆ (Melukote).. ಚಲುವನಾರಾಯಣನ (cheluvanarayana swamy) ದರ್ಶನ ಪಡೆಯಲು ಹೊರ ರಾಜ್ಯಗಳಿಂದ ಯಾತ್ರಾತ್ರಿಗಳು ಬರ್ತಾರೆ.. ಪವಿತ್ರ ತಂಗಿ ಕೊಳದ ಕಲ್ಯಾಣಿ ನೀರನ್ನ ಸ್ಪರ್ಶಿಸಿ ಪುನೀತರಾಗ್ತಾರೆ.. ಆದ್ರೆ ಇಂತಹ ಪ್ರಸಿದ್ದ ಸ್ಥಳದ ಸ್ಥಿತಿ ಹೇಗಿದೆ ಗೊತ್ತಾ..? ಈ ರಿಪೋರ್ಟ್ ನೋಡಿ… `ಅಲ್ಲಿನ ಪಾರ್ಕಿಂಗ್ ಲಾಟ್ ಸದಾ ವಾಹನಗಳಿಂದ ಭರ್ತಿಯಾಗಿರುತ್ತದೆ. ಕಣ್ಣಾಡಿಸಿದ ಕಡೆಯಲ್ಲಾ ಪ್ರವಾಸಿಗರ ದಂಡು ತುಂಬಿರುತ್ತದೆ. ಹೊರ ಜಿಲ್ಲೆ ಹೊರ ರಾಜ್ಯಗಳಿಂದ ಆಗಮಿಸುತ್ತಿರುವ ಯಾತ್ರಿಗಳು ಭಕ್ತಗಣ ಅಲ್ಲಿ ಕಾಣಬರುತ್ತಾರೆ.. ಈ ಎಲ್ಲಾ ದೃಶ್ಯ ಕಣ್ಣಿಗೆ ಬೀಳುವುದು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ. ಆದರೆ ಇಂತಹ ಪುರಾಣ ಪ್ರಸಿದ್ದ ಮೇಲುಕೋಟೆಯ ಪ್ರವಾಸಿ ತಾಣದಲ್ಲಿ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ.. ಮಳೆಯಿಂದ ತಂಗಿ ಕೊಳದ ತಡೆ ಗೋಡೆ (Akka Tangi Kola) ಕುಸಿದಿದ್ದು ಆರು ತಿಂಗಳು ಕಳೆದ್ರು ತಡೆ ಗೋಡೆ ನಿರ್ಮಾಣ ಮಾಡದೆ ಅಸಡ್ಡೆ ತೋರಿದ್ದಾರೆ ಎಂದು ಸ್ಥಳೀಯರಾದ ನಿಂಗೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಲ್ಲೇನಾಗಿದೆಯೆಂದರೆ ಕಳೆದ ವರ್ಷ ಮಂಡ್ಯ ಜಿಲ್ಲಾದ್ಯಂತ ಭಾರಿ ಮಳೆ ಸುರಿದಿತ್ತು.. ಮಳೆರಾಯನ ಆರ್ಭಟಕ್ಕೆ ಎಲ್ಲೆಡೆ ಪ್ರವಾಹ ಸೃಷ್ಟಿಯಾಗಿತ್ತು.. ಅದೇ ರೀತಿ ಮೇಲುಕೋಟೆ ಹಾಗೂ ಸುತ್ತಮುತ್ತ ಉಧೋ ಎಂದು ಮಳೆ ಸುರಿದಿತ್ತು. ರಣ ರಕ್ಕಸ ಮಳೆಗೆ ಪುರಾಣ ಪ್ರಸಿದ್ದ ತಂಗಿ ಕೊಳದ ತಡೆ ಗೋಡೆಗಳು ಕುಸಿದು ಆತಂಕ ಸೃಷ್ಟಿಯಾಗಿತ್ತು.. ಆದ್ರೆ ಈಗ ಮಳೆ ನಿಂತು ತಿಂಗಳುಗಳೇ ಕಳೆದು ಹೋಗಿದೆ.. ಆದರೂ ಸಹ ಕಲ್ಯಾಣಿಯನ್ನ ದುರಸ್ಥಿ ನಡೆಸಲು ಅಧಿಕಾರಿಗಳು ಮುಂದಾಗಿಲ್ಲ..

Officials yet to repair collapsed Wall Of Akka Tangi Kola In Melukote in Mandya

ದಿನ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಹಾಗೂ ಯಾತಾತ್ರಿಗಳು ಮೇಲುಕೋಟೆ ಚಲುವನಾರಾಯಣನ ದರ್ಶನ ಪಡೆಯುತ್ತಾರೆ. ಬಳಿಕ ಅಕ್ಕ ತಂಗಿ ಕೊಳ ಧನುಷ್ ಕೋಟಿ ತಾಣವನ್ನ ವೀಕ್ಷಣೆ ಮಾಡ್ತಾರೆ.. ಇಂತ ಪವಿತ್ರ ಪುರಾಣ ಪ್ರಸಿದ್ದ ತಾಣಗಳನ್ನ ಉಳಿಸಿಕೊಂಡು ಹೋಗುವುದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಾಗೂ ಸ್ಥಳೀಯ ಜಿಲ್ಲಾಡಳಿತದ ಜವಾಬ್ದಾರಿ.. ಆದ್ರೆ ದುರಸ್ಥಿ ಕಾರ್ಯ ಮಾಡದೆ ನಿರ್ಲಕ್ಷ ವಹಿಸಿದ್ದಾರೆ.. ಈ ಹಿನ್ನೆಲೆಯಲ್ಲಿ ಮೇಲುಕೋಟೆ ಗ್ರಾಮಸ್ಥರು ಹಾಗೂ ಪ್ರವಾಸಿಗರು ಅಧಿಕಾರಿಗಳ ನಡೆ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವರದಿ: ಸೂರಜ್ ಪ್ರಸಾದ್, ಟಿವಿ 9, ಮಂಡ್ಯ

ಮನೆಗೆ ಬೆಂಕಿ ಬಿದ್ದಾಗ ಮಕ್ಕಳನ್ನು ಕಾಪಾಡಲು ಅಮ್ಮ ಮಾಡಿದ ಸಾಹಸ ನೀವೇ ನೋಡಿ
ಮನೆಗೆ ಬೆಂಕಿ ಬಿದ್ದಾಗ ಮಕ್ಕಳನ್ನು ಕಾಪಾಡಲು ಅಮ್ಮ ಮಾಡಿದ ಸಾಹಸ ನೀವೇ ನೋಡಿ
ಬೆಂಗಳೂರು ನಗರದ ಹಲವೆಡೆ ಏಕಾಏಕಿ ಮಳೆ
ಬೆಂಗಳೂರು ನಗರದ ಹಲವೆಡೆ ಏಕಾಏಕಿ ಮಳೆ
ಶಿವಾಜಿ ಸಿನಿಮಾ ಈಗಲೇ ನಿಲ್ಲಿಸಿ: ರಿಷಬ್ ಶೆಟ್ಟಿಗೆ ವಾಟಾಳ್ ವಾರ್ನಿಂಗ್
ಶಿವಾಜಿ ಸಿನಿಮಾ ಈಗಲೇ ನಿಲ್ಲಿಸಿ: ರಿಷಬ್ ಶೆಟ್ಟಿಗೆ ವಾಟಾಳ್ ವಾರ್ನಿಂಗ್
ಬೆಳಗ್ಗೆ ಮಂಗಳೂರಲ್ಲೂ ಜೋರು ಮಳೆ, ಜನರಲ್ಲಿ ಕೊಂಚ ನಿರಾಳತೆ
ಬೆಳಗ್ಗೆ ಮಂಗಳೂರಲ್ಲೂ ಜೋರು ಮಳೆ, ಜನರಲ್ಲಿ ಕೊಂಚ ನಿರಾಳತೆ
ದಶಕಗಳಿಂದ ಯತ್ನಾಳ್ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬಲ್ಲೆ: ಕಾಶಪ್ಪನವರ್
ದಶಕಗಳಿಂದ ಯತ್ನಾಳ್ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬಲ್ಲೆ: ಕಾಶಪ್ಪನವರ್
ವಾರಂಗಲ್​ನ ಉದ್ಯೋಗ ಮೇಳದಲ್ಲಿ ಕಾಲ್ತುಳಿತ; ಮೂವರು ಮಹಿಳೆಯರಿಗೆ ಗಾಯ
ವಾರಂಗಲ್​ನ ಉದ್ಯೋಗ ಮೇಳದಲ್ಲಿ ಕಾಲ್ತುಳಿತ; ಮೂವರು ಮಹಿಳೆಯರಿಗೆ ಗಾಯ
ತಾನೊಬ್ಬನೇ ಸಮಾಜದ ಪ್ರತಿನಿಧಿ ಅಂತ ಹೇಳೋದನ್ನ ಯತ್ನಾಳ್ ನಿಲ್ಲಿಸಬೇಕು: ಶಾಸಕ
ತಾನೊಬ್ಬನೇ ಸಮಾಜದ ಪ್ರತಿನಿಧಿ ಅಂತ ಹೇಳೋದನ್ನ ಯತ್ನಾಳ್ ನಿಲ್ಲಿಸಬೇಕು: ಶಾಸಕ
ಮಧ್ಯಪ್ರದೇಶದ ಆನಂದಪುರ ಧಾಮದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ಮಧ್ಯಪ್ರದೇಶದ ಆನಂದಪುರ ಧಾಮದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ಗಂಭೀರವಾಗಿ ಗಾಯಗೊಂಡಿರುವ ಪತಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು
ಗಂಭೀರವಾಗಿ ಗಾಯಗೊಂಡಿರುವ ಪತಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು
ಉತ್ತರ ಕರ್ನಾಟಕದಲ್ಲಿ ನೀರು ಪೋಲಾಗಲು ಬಿಡೋದು ಕ್ರಿಮಿನಲ್ ಅಪರಾಧ
ಉತ್ತರ ಕರ್ನಾಟಕದಲ್ಲಿ ನೀರು ಪೋಲಾಗಲು ಬಿಡೋದು ಕ್ರಿಮಿನಲ್ ಅಪರಾಧ