RSS ದೇಣಿಗೆ ಕುರಿತಾದ ಭಾಗವತ್ ಮಾತಿಗೆ ಪ್ರಿಯಾಂಕ್ ಖರ್ಗೆ ಟ್ವೀಟ್: 11 ಪ್ರಶ್ನೆ ಮುಂದಿಟ್ಟ ಸಚಿವ
ಆರ್ಎಸ್ಎಸ್ ನೋಂದಣಿ, ಹಣಕಾಸಿನ ಮೂಲಗಳ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಇತ್ತೀಚೆಗೆ ಆಕ್ಷೇಪಣೆ ಎತ್ತಿದ್ದರು. ಇದೀಗ ಮತ್ತೊಮ್ಮೆ ಧ್ವನಿ ಎತ್ತಿರುವ ಅವರು, ಆರ್ಎಸ್ಎಸ್ಗೆ ದೇಣಿಗೆ ಕೊಡುವ ಸ್ವಯಂಸೇವಕರು ಯಾರು, ಪ್ರಚಾರಕರಿಗೆ ಯಾರು ವೇತನ ನೀಡುತ್ತಾರೆ? ಎಂದು ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದಾರೆ.

ಬೆಂಗಳೂರು, ನವೆಂಬರ್ 09: ನಗದರಲ್ಲಿ ನಿನ್ನೆ ಮತ್ತು ಇಂದು ಆರ್ಎಸ್ಎಸ್ (RSS) ಶತಮಾನೋತ್ಸವದ ಅಂಗವಾಗಿ ನಡೆದ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾಗಿಯಾಗಿ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇಷ್ಟೇ ಅಲ್ಲ RSSನ ಹಣಕಾಸಿನ ಮೂಲ ಕೇಳಿದವರಿಗೆ, ಗುರುದಕ್ಷಿಣೆಯ ಕುರಿತು ಸ್ಪಷ್ಟನೆ ನೀಡಿದ್ದಾರೆ. ಈ ಮಧ್ಯೆ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) 11 ಪ್ರಶ್ನೆಗಳನ್ನು ಮೋಹನ್ ಭಾಗವತ್ ಮುಂದಿಟ್ಟಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಆರ್ಎಸ್ಎಸ್ ತನ್ನ ಸ್ವಯಂಸೇವಕರು ನೀಡುವ ದೇಣಿಗೆ ಮೂಲಕ ಕಾರ್ಯನಿರ್ವಹಿಸುತ್ತದೆ ಎಂದು ಮೋಹನ್ ಭಾಗವತ್ ಹೇಳಿದ್ದಾರೆ. ಆದಾಗ್ಯೂ, ಈ ಬಗ್ಗೆ ಹಲವಾರು ಕಾನೂನುಬದ್ಧ ಪ್ರಶ್ನೆಗಳು ಉದ್ಭವಿಸುತ್ತವೆ ಎಂದಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್
Mr. Bhagwat has stated that the RSS functions through donations made by its volunteers.
However, several legitimate questions arise regarding this claim:
•Who are these volunteers and how are they identified?
•What is the scale and nature of the donations made?
•Through…
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) November 9, 2025
ಸಚಿವ ಪ್ರಿಯಾಂಕ್ ಖರ್ಗೆ ಕೇಳಿದ 11 ಪ್ರಶ್ನೆಗಳು
- ಈ ಸ್ವಯಂಸೇವಕರು ಯಾರು, ಹೇಗೆ ಗುರುತಿಸಲಾಗುತ್ತದೆ?
- ನೀಡಲಾದ ದೇಣಿಗೆಗಳ ಪ್ರಮಾಣ ಮತ್ತು ಸ್ವರೂಪ ಏನು?
- ಈ ಕೊಡುಗೆಗಳನ್ನು ಯಾವ ಕಾರ್ಯವಿಧಾನಗಳು ಅಥವಾ ಯಾವ ಮಾರ್ಗಗಳ ಮೂಲಕ ಕೊಡುಗೆ ಸ್ವೀಕರಿಸಲಾಗುತ್ತೆ?
- ಆರ್ಎಸ್ಎಸ್ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದ್ದರೆ ತನ್ನದೇ ಆದ ನೋಂದಾಯಿತ ಗುರುತಿನಡಿಯಲ್ಲಿ ಸಂಸ್ಥೆಗೆ ನೇರವಾಗಿ ದೇಣಿಗೆಗಳನ್ನು ಯಾಕೆ ನೀಡಲಾಗುವುದಿಲ್ಲ?
- ನೋಂದಾಯಿತ ಘಟಕವಾಗದೆ ಆರ್ಎಸ್ಎಸ್ ಸಂಘಟನೆ ತನ್ನ ಹಣಕಾಸು, ಸಾಂಸ್ಥಿಕ ರಚನೆ ಹೇಗೆ ಉಳಿಸಿಕೊಳ್ಳುತ್ತೆ?
- ಪೂರ್ಣ ಸಮಯದ ಪ್ರಚಾರಕರಿಗೆ ಯಾರು ವೇತನ ನೀಡ್ತಾರೆ ಸಂಸ್ಥೆಯ ದಿನನಿತ್ಯದ ಕಾರ್ಯಾಚರಣೆಯ ವೆಚ್ಚ ಪೂರೈಸುತ್ತಾರೆ?
ಇದನ್ನೂ ಓದಿ: ಬಲಿಷ್ಠ ಭಾರತ ಕಟ್ಟುವುದೇ ಗುರಿ: 142 ಕೋಟಿ ಜನ ಮನಸ್ಸು ಮಾಡಿದ್ರೆ ನಾಳೆಯೇ ಹಿಂದೂ ರಾಷ್ಟ್ರವಾಗಬಹುದು; ಭಾಗವತ್
- ದೊಡ್ಡ ಪ್ರಮಾಣದ ಕಾರ್ಯಕ್ರಮಗಳು, ಅಭಿಯಾನಗಳು, ಪ್ರಚಾರ ಚಟುವಟಿಕೆಗಳಿಗೆ ಹೇಗೆ ಹಣಕಾಸು ಒದಗಿಸಲಾಗುತ್ತೆ?
- ಸ್ವಯಂಸೇವಕರು ‘ಸ್ಥಳೀಯ ಕಚೇರಿಗಳಿಂದ’ ಸಮವಸ್ತ್ರ ಅಥವಾ ವಸ್ತುಗಳನ್ನ ಖರೀದಿಸಿದಾಗ, ಈ ಹಣ ಎಲ್ಲಿ ಲೆಕ್ಕಹಾಕಲಾಗುತ್ತೆ?
- ಸ್ಥಳೀಯ ಕಚೇರಿಗಳು ಮತ್ತು ಇತರ ಮೂಲಸೌಕರ್ಯಗಳನ್ನು ನಿರ್ವಹಿಸುವ ವೆಚ್ಚವನ್ನು ಯಾರು ಭರಿಸುತ್ತಾರೆ?
- ರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕವಾದ ಪ್ರಭಾವ ಮತ್ತು ಉಪಸ್ಥಿತಿಯ ಹೊರತಾಗಿಯೂ ನೋಂದಣಿಯಾಗಿಲ್ಲ ಯಾಕೆ?
- ಭಾರತದಲ್ಲಿರುವ ಪ್ರತಿಯೊಂದು ಧಾರ್ಮಿಕ ಅಥವಾ ದತ್ತಿ ಸಂಸ್ಥೆಯು ಆರ್ಥಿಕ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕಾದಾಗ ಆರ್ಎಸ್ಎಸ್ಗೆ ಇದೇ ರೀತಿಯ ಹೊಣೆಗಾರಿಕೆ ಕಾರ್ಯವಿಧಾನಗಳ ಅನುಪಸ್ಥಿತಿ ಸಮರ್ಥಿಸುವುದು ಏನು?
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:17 pm, Sun, 9 November 25




