ಸಿದ್ದರಾಮಯ್ಯ ಅತ್ಯಾಪ್ತ ಸಚಿವ ಕೆ ವೆಂಕಟೇಶ್ ಕ್ಷೇತ್ರದಲ್ಲಿ ತಾಂಡವವಾಡುತ್ತಿದೆ ದ್ವೇಷದ ರಾಜಕಾರಣ! ರೈತರು ಹೈರಾಣ

| Updated By: ಸಾಧು ಶ್ರೀನಾಥ್​

Updated on: Feb 06, 2024 | 6:11 PM

ಈ ಪಟ್ಟಿಯನ್ನು ಈ ಹಿಂದೆ ಶಾಸಕರಾಗಿದ್ದ ಕೆ.ಮಹದೇವ್ ಆಯ್ಕೆ ಮಾಡಿದ್ದರಂತೆ. ಬದಲಾದ ರಾಜಕೀಯದಲ್ಲಿ ಕಾಂಗ್ರೆಸ್ ನಿಂದ ಕೆ.ವೆಂಕಟೇಶ್ ಶಾಸಕರಾಗಿ ಸಚಿವರು ಆಗಿದ್ದಾರೆ. ಕೆ.ವೆಂಕಟೇಶ್ ಶಾಸಕರಾಗುತ್ತಿದ್ದಂತೆ ಗಂಗಾ ಕಲ್ಯಾಣ ಯೋಜನೆ ಪಟ್ಟಿಯನ್ನ ತಡೆ ಹಿಡಿದಿರುವ ಗಂಭೀರವಾದ ಆರೋಪ ಕೇಳಿ ಬಂದಿದೆ.

ಸಿದ್ದರಾಮಯ್ಯ ಅತ್ಯಾಪ್ತ ಸಚಿವ ಕೆ ವೆಂಕಟೇಶ್ ಕ್ಷೇತ್ರದಲ್ಲಿ ತಾಂಡವವಾಡುತ್ತಿದೆ ದ್ವೇಷದ ರಾಜಕಾರಣ! ರೈತರು ಹೈರಾಣ
ಸಿದ್ದರಾಮಯ್ಯ ಅತ್ಯಾಪ್ತ ವೆಂಕಟೇಶ್ ಕ್ಷೇತ್ರದಲ್ಲಿ ದ್ವೇಷದ ರಾಜಕಾರಣ!
Follow us on

ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಬಂದು ಸರ್ಕಾರ ರಚನೆಯಾದಾಗಲಿಂದಲೂ ದ್ವೇಷದ ರಾಜಕಾರಣ ಆರೋಪ ಕೇಳಿ ಬರುತ್ತಲೆ‌ ಇದೆ. ಅದರಲ್ಲೂ ಮೈಸೂರಿನ ಪಿರಿಯಾಪಟ್ಟಣದ ಕ್ಷೇತ್ರದಲ್ಲಿ ಇಂತಹ ಆರೋಪ ಪದೇ ಪದೇ ಕೇಳಿ ಬರುತ್ತಿದೆ. ಇದೀಗ ಕ್ಷೇತ್ರದಲ್ಲಿನ ರೈತರೂ ಇದೇ ಆರೋಪ ಮಾಡುತ್ತಿದ್ದು, ಗಂಗಾಕಲ್ಯಾಣ ಯೋಜನೆ ವಿಚಾರವಾಗಿ ಸಚಿವರ ವಿರುದ್ಧ ರೈತರು ದ್ವೇಷದ ರಾಜಕಾರಣ ಆರೋಪ ಮಾಡಿದ್ದಾರೆ.

ಹೌದು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಕ್ಷೇತ್ರ ರಾಜಕೀಯ ಜಿದ್ದಾಜಿದ್ದಿಗೆ ಹೆಸರುವಾಸಿ. ಪಿರಿಯಾಪಟ್ಟಣ ಕ್ಷೇತ್ರ ಮಾಜಿ ಶಾಸಕ ಕೆ. ಮಹದೇವ್ ಹಾಗೂ ಸಚಿವರೂ ಆಗಿರುವ ಹಾಲಿ ಶಾಸಕ ಕೆ. ವೆಂಕಟೇಶ್ ನಡುವೆ ಸಾಕಷ್ಟು ಜಿದ್ದಾಜಿದ್ದಿನ ರಾಜಕಾರಣಕ್ಕೆ ಸಾಕ್ಷಿಯಾಗಿದೆ. ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ಅಧಿಕಾರಕ್ಕೆ ಬರುತ್ತಿದ್ದಂತೆ ಹಾಲಿನ ಡೈರಿ ವಿಚಾರಕ್ಕೆ ದ್ವೇಷ ರಾಜಕಾರಣ ಮಾಡ್ತಿದ್ದಾರೆ ಅಂತ ಹಾಲನ್ನ ನೆಲಕ್ಕೆ ಚೆಲ್ಲುವ ಮೂಲಕ ಹಾಲು ಉತ್ಪಾದಕರು ಆಕ್ರೋಶ ಹೊರಹಾಕಿದ್ದರು.

ಇದೀಗಾ ಗಂಗಾ ಕಲ್ಯಾಣ ಯೋಜನೆ ವಿಚಾರವಾಗಿ ಇಂತಹ ಆರೋಪ ಕ್ಷೇತ್ರದಲ್ಲಿ ಪ್ರತಿಧ್ವನಿಸುತ್ತಿದೆ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ, ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದಿಂದ 2021 ರಿಂದ 23ರವರೆಗೆ 100 ಕ್ಕೂ ಹೆಚ್ಚು ರೈತರನ್ನ ಗಂಗಾ ಕಲ್ಯಾಣ ಯೋಜನೆಗೆ ಫಲಾನುಭವಿಗಳನ್ನಾಗಿ ಆಯ್ಕೆ ಮಾಡಲಾಗಿದೆಯಂತೆ.

ಈ ಪಟ್ಟಿಯನ್ನು ಈ ಹಿಂದೆ ಶಾಸಕರಾಗಿದ್ದ ಕೆ.ಮಹದೇವ್ ಆಯ್ಕೆ ಮಾಡಿದ್ದರಂತೆ. ಬದಲಾದ ರಾಜಕೀಯದಲ್ಲಿ ಕಾಂಗ್ರೆಸ್ ನಿಂದ ಕೆ.ವೆಂಕಟೇಶ್ ಶಾಸಕರಾಗಿ ಸಚಿವರು ಆಗಿದ್ದಾರೆ. ಕೆ.ವೆಂಕಟೇಶ್ ಶಾಸಕರಾಗುತ್ತಿದ್ದಂತೆ ಗಂಗಾ ಕಲ್ಯಾಣ ಯೋಜನೆ ಪಟ್ಟಿಯನ್ನ ತಡೆ ಹಿಡಿದಿರುವ ಗಂಭೀರವಾದ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: ಚಾಮರಾಜನಗರ ರಸ್ತೆ ಕಾಮಗಾರಿ ಆರಂಭವಾಗಿ 5 ವರ್ಷವೇ ಕಳೆದರೂ ಇನ್ನೂ ಕಂಪ್ಲೀಟ್ ಆಗಿಲ್ಲ, ವಾಹನ ಸವಾರರಿಗೆ ತ್ರಿಶಂಕು

ಇನ್ನು ಈ ಬಗ್ಗೆ ಮಾತನಾಡಿರುವ ರೈತರು ಸಚಿವ ಕೆ. ವೆಂಕಟೇಶ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚುನಾವಣೆ ವೇಳೆ ಜೆಡಿಎಸ್ ಪರವಾಗಿ ಕೆಲಸ ಮಾಡಿದ್ದೇವೆ. ಚುನಾವಣೆ ಮುಗಿದ ಬಳಿಕ ನಮ್ಮ ಕೆಲಸದಲ್ಲಿ ನಿರತರಾಗಿದ್ದೇವೆ. ಈಗಾಗಲೇ ಬರಗಾಲದಿಂದ ಸಾಕಷ್ಟು ಸಂಕಷ್ಟದಲ್ಲಿದ್ದೇವೆ. ಕೊಳವೆಬಾವಿ ಕೊರೆಸಿದರೆ ನಮಗೆ ಅನುಕೂಲವಾಗುತ್ತೆ. ಶಾಸಕರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆಂದು ಕಿಡಿ ಕಾರಿದ್ದಾರೆ. ಒಟ್ಟಾರೆ ರೈತರ ಜೊತೆ ನಾವಿದ್ದೇವೆ ಎನ್ನುವ ಜನಪ್ರತಿನಿಧಿಗಳು ಅಭಿವೃದ್ಧಿ ಹಾಗೂ ಸೌಲಭ್ಯ ಹಂಚಿಕೆ ವಿಚಾರದಲ್ಲಿ ರಾಜಕಾರಣ ಮಾಡುತ್ತಿರುವುದು ವಿಪರ್ಯಾಸವೇ ಸರಿ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ