ನಂಜನಗೂಡು ನಂಜುಂಡೇಶ್ವರನ ಸನ್ನಿಧಿಯಲ್ಲಿ ನೆರವೇರಿದ ಉಚಿತ ಸಾಮೂಹಿಕ ವಿವಾಹ

ನಂಜನಗೂಡು ನಂಜುಂಡೇಶ್ವರನ ಸನ್ನಿಧಿಯಲ್ಲಿ ಉಚಿತ ಸಾಮೂಹಿಕ ವಿವಾಹ ನೆರವೇರಿತು. ಚಾಮರಾಜನಗರ ಜಿಲ್ಲೆಯ  63 ಜೋಡಿಗಳು ಸಪ್ತಪದಿ ತುಳಿದಿದ್ದಾರೆ. 

ನಂಜನಗೂಡು ನಂಜುಂಡೇಶ್ವರನ ಸನ್ನಿಧಿಯಲ್ಲಿ ನೆರವೇರಿದ ಉಚಿತ ಸಾಮೂಹಿಕ ವಿವಾಹ
ಸಾಮೂಹಿಕ ವಿವಾಹ ನಂಜನಗೂಡು
Updated By: ವಿವೇಕ ಬಿರಾದಾರ

Updated on: May 26, 2022 | 2:05 PM

ನಂಜನಗೂಡು:  ನಂಜನಗೂಡು (Nanjangudu) ನಂಜುಂಡೇಶ್ವರನ ಸನ್ನಿಧಿಯಲ್ಲಿ ಉಚಿತ ಸಾಮೂಹಿಕ ವಿವಾಹ ನೆರವೇರಿತು. ಚಾಮರಾಜನಗರ (Chamrajnagar) ಜಿಲ್ಲೆಯ  63 ಜೋಡಿಗಳು ಸಪ್ತಪದಿ ತುಳಿದಿದ್ದಾರೆ.  ಈ ಸಾಮೂಹಿಕ ವಿವಾಹವನ್ನು ಮೈಸೂರು ಜಿಲ್ಲಾಡಳಿತ, ಧಾರ್ಮಿಕ ದತ್ತಿ ಇಲಾಖೆಯಿಂದ ಆಯೋಜಿಸಲಾಗಿತ್ತು. ಜಿಲ್ಲಾಡಳಿತದಿಂದ ವಧು-ವರರಿಗೆ ಉಚಿತ ವಸ್ತ್ರ, ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ನಂಜನಗೂಡು ನಂಜುಂಡೇಶ್ವರನ ದೇಗುಲ ಆಡಳಿತ ಮಂಡಳಿಯಿಂದ 55 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಯಿತು.  ವಧು-ವರರಿಗೆ ಪಂಚೆ, ಶರ್ಟ್, ಶಲ್ಯ, ಹೂವಿನ ಹಾರ, ಧಾರೆ ಸೀರೆ ಕೊಳ್ಳಲು ಹಣ ನೀಡಲಾಗಿದೆ. ವಧುಗೆ ತಾಳಿ, ಚಿನ್ನದ 2 ಗುಂಡು ಸೇರಿ 8 ಗ್ರಾಂ ತೂಕದ ಚಿನ್ನ ವಿತರಣೆ ಮಾಡಲಾಗಿದೆ.

ಇದನ್ನು ಓದಿ: ತಿಹಾರ್ ಜೈಲು ಸಂಖ್ಯೆ 7ರಲ್ಲಿ ಯಾಸಿನ್ ಮಲಿಕ್; ಪಿ ಚಿದಂಬರಂ, ಡಿಕೆ ಶಿವಕುಮಾರ್ ಕೂಡಾ ಇದೇ ಜೈಲು ಸಂಖ್ಯೆ 7ರಲ್ಲಿ ಶಿಕ್ಷೆ ಅನುಭವಿಸಿದ್ದರು

ಕುಸಿದು ಬಿದ್ದ ಶಿಥಿಲಗೂಂಡಿದ್ದ ಅಂಗಡಿಯ ಗೋಡೆ

ಇದನ್ನೂ ಓದಿ
Redmi Note 11SE: ಬಜೆಟ್ ಬೆಲೆಗೆ ಬಂಪರ್ ಸ್ಮಾರ್ಟ್​ಫೋನ್: ಶವೋಮಿಯಿಂದ ರೆಡ್ಮಿ ನೋಟ್‌ 11SE ಬಿಡುಗಡೆ
ಚೈತ್ರಾ ಹಳ್ಳಿಕೇರಿ ಹಣಕ್ಕಾಗಿ ಮೆಂಟಲಿ ಟಾರ್ಚರ್ ಮಾಡುತ್ತಿದ್ದಾರೆ; ಪತಿ ಬಾಲಾಜಿ ಪೋತರಾಜ್ ಆರೋಪ
SR Vishwanath: ಬಿಡಿಎ ಅಧ್ಯಕ್ಷರಾಗಿ ಲಾಭದಾಯಕ ಹುದ್ದೆ! ಶಾಸಕ ಎಸ್.ಆರ್. ವಿಶ್ವನಾಥ್ ಗೆ ಹೈಕೋರ್ಟ್ ನೋಟಿಸ್
Uttar Pradesh Budget: ಯೋಗಿ ಆದಿತ್ಯನಾಥ್ ಸರ್ಕಾರದಿಂದ 6.1 ಲಕ್ಷ ಕೋಟಿ ಬಜೆಟ್; ಮಹಿಳಾ ಸುರಕ್ಷೆಗೆ 523 ಕೋಟಿ ಮೀಸಲು

ಮೈಸೂರು: ಶಿಥಿಲಗೂಂಡಿದ್ದ ಅಂಗಡಿಯ ಗೋಡೆ ಕುಸಿದು ಬಿದ್ದಿದೆ. ಮೈಸೂರಿನ  ತ್ರಿಪುರ ಭೈರವಿ ಮಠಕ್ಕೆ ಸೇರಿದ ಜಾಗದಲ್ಲಿದ್ದ ಅಂಗಡಿ ಇತ್ತು. ಅಂಗಡಿಯ ಗೋಡೆ  ಶಿಥಿಲಗೊಂಡಿದ್ದರು ಅಂಗಡಿಯನ್ನು ಖಾಲಿ ಮಾಡಿರಲಿಲ್ಲ. ಈ ಸಂಬಂಧ ಮಠ ಹಾಗೂ ಅಂಗಡಿ ಮಾಲೀಕರ ನಡುವೆ ಕಾನೂನು ಸಮರ ನಡೆದಿತ್ತು. ಶಿಥಿಲಗೊಂಡ ಕಟ್ಟಡವನ್ನು ತೆರವುಗೊಳಿಸಲು ಮಠದ ಸಿಬ್ಬಂದಿ ನಗರ ಪಾಲಿಕೆಗೂ ದೂರು ನೀಡಿದ್ದರು.  ತಡರಾತ್ರಿ ಅಂಗಡಿಯ ಹಿಂಭಾಗದ ಗೋಡೆ ಕುಸಿದು ಬಿದ್ದಿದೆ. ಯಾರು ಇಲ್ಲದ ಕಾರಣ ಅನಾಹುತ ತಪ್ಪಿದೆ. ಇನ್ನು ಶಿಥಿಲಗೊಂಡಿದ್ದ ಉಳಿದ ಕಟ್ಟಡವನ್ನು ತೆರವುಗೊಳಿಸುವಂತೆ ನಗರ ಪಾಲಿಕೆ ಮನವಿ ಮಾಡಿದ್ದಾರೆ.

ಇದನ್ನು ಓದಿ: ಶಾಲಾ ಬಸ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ ಬಾಲಕಿ; ಕಿಮ್ಸ್ ಆಸ್ಪತ್ರೆ ಬಳಿ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ 

ಘಟನಾ ಸ್ಥಳಕ್ಕೆ ಪಾಲಿಕೆ ಅಧಿಕಾರಿಗಳೊಂದಿಗೆ ಶಾಸಕ ಎಲ್.ನಾಗೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.    ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿ ಕಟ್ಟಡ ಸಂಪೂರ್ಣ ತೆರವಿಗೆ ಸೂಚನೆ ನೀಡಿದ್ದಾರೆ. ಚಾಮರಾಜ ಕ್ಷೇತ್ರದ ಅಪಾಯಕಾರಿ ಕಟ್ಟಡಗಳ ಪಟ್ಟಿಮಾಡುವಂತೆ ಅಧಿಆಕರಿಗಳಿಗೆ  ಆದೇಶ ನೀಡಿದ್ದಾರೆ.  ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡಗಳ ಮಾಲೀಕರಿಗೆ ನೋಟಿಸ್ ನೀಡುವಂತೆ ಸೂಚನೆ ನೀಡಿದ್ದಾರೆ. ಈವರೆಗೆ ಮೈಸೂರಿನಲ್ಲಿ 70 ರಿಂದ 80 ಕಟ್ಟಡ ಗುರುತು ಮಾಡಲಾಗಿದೆ. ಪಾಲಿಕೆ ಮೂಲಕ ಅವುಗಳಿಗೆ ನೋಟೀಸ್ ನೀಡಲಾಗುತ್ತೆ.ಅಪಾಯದಲ್ಲಿ ಇರುವ ಕಟ್ಟಡ ತೆರವು ಮಾಡುವಂತೆ ತಿಳಿಸಲಾಗುತ್ತೆ. ಶಿಥಿಲಾವಸ್ಥೆಯ ಕಟ್ಟಡ ತೆರವು ಮಾಡದೆ ಅಪಾಯ ಸಂಭವಿಸಿದರೆ ನೀವೆ ಹೊಣೆಯಾಗುತ್ತೀರಾ. ಈ ಬಗ್ಗೆ ಗಮನಹರಿಸದ ಅಧಿಕಾರಿಗಳ ವಿರುದ್ಧ ಶಾಸಕ ಎಲ್.ನಾಗೇಂದ್ರ ಗರಂ ಆಗಿದ್ದಾರೆ. ಘಟನಾ ಸ್ಥಳಕ್ಕೆ ತಡವಾಗಿ ಬಂದ ಪಾಲಿಕೆ ಆಯುಕ್ತರ ವಿರುದ್ಧವೂ ಶಾಸಕ‌ರು ಗರಂ ಆಗಿದ್ಧಾರೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:05 pm, Thu, 26 May 22