AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಡಾ ಹಗರಣ: 50-50 ನಿಯಮ ಎಂದರೇನು? ಸೈಟ್ ಹಂಚಿಕೆ ಹೇಗೆ? ಇಲ್ಲಿದೆ ಮಾಹಿತಿ

ಮುಡಾ ಹಗರಣ ಕರ್ನಾಟಕದಲ್ಲಿ ಬಹಳಷ್ಟು ಸದ್ದು ಮಾಡಿದೆ. ಇದೀಗ 50-50 ಅನುಪಾತದಲ್ಲಿ ಯಾರಿಗೆಲ್ಲ ಮುಡಾ ಸೈಟ್ ಹಂಚಿಕೆ ಮಾಡಿದೆ ಎಂಬ ಪಟ್ಟಿ ಲಭ್ಯವಾಗಿದೆ. ಹಾಗಾದರೆ, 50:50 ಅನುಪಾತದ ನಿಯಮ ಎಂದರೇನು? ಇದರಡಿಯಲ್ಲಿ ಸೈಟ್ ಹಂಚಿಕೆ ಹೇಗೆ ನಡೆಯುತ್ತದೆ? ಈಗ ವಿವಾದ ಸೃಷ್ಟಿಯಾಗಲು ಕಾರಣವೇನು? ಇಲ್ಲಿದೆ ಸಂಪೂರ್ಣ ವಿವರ.

ಮುಡಾ ಹಗರಣ: 50-50 ನಿಯಮ ಎಂದರೇನು? ಸೈಟ್ ಹಂಚಿಕೆ ಹೇಗೆ? ಇಲ್ಲಿದೆ ಮಾಹಿತಿ
ಮುಡಾ
ದಿಲೀಪ್​, ಚೌಡಹಳ್ಳಿ
| Updated By: Ganapathi Sharma

Updated on: Nov 09, 2024 | 2:38 PM

Share

ಮೈಸೂರು, ನವೆಂಬರ್ 9: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಗರಣ ವಿಚಾರಕ್ಕೆ ಸಂಬಂಧಿಸಿದ ಇದೀಗ 50:50 ಅನುಪಾತದಲ್ಲಿ ಯಾರಿಗೆಲ್ಲ ಮುಡಾ ಸೈಟ್​​ಗಳನ್ನು ಹಂಚಿಕೆ ಮಾಡಲಾಗಿತ್ತು ಎಂಬ ವಿವರ ಬಹಿರಂಗವಾಗಿದೆ. ಮುಡಾ ನಿವೇಶನ ಪಡೆದವರ ಪಟ್ಟಿ ‘ಟಿವಿ9’ಗೆ ಲಭ್ಯವಾಗಿದೆ. ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು 50:50 ಅನುಪಾತದಲ್ಲಿ ನಿವೇಶನ ಪಡೆದ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ನಂತರ ಅವರು ಸೈಟ್​ಗಳನ್ನು ಹಿಂದಿರುಗಿಸಿದ್ದರು. ಏತನ್ಮಧ್ಯೆ, ಸಿಎಂ ಸಿದ್ದರಾಮಯ್ಯ ಅವರನ್ನು ಲೋಕಾಯುಕ್ತ ವಿಚಾರಣೆಗೂ ಒಳಪಡಿಸಿದೆ. ಮತ್ತೊಂದೆಡೆ, ಜಾರಿ ನಿರ್ದೇಶನಾಲಯ ಕೂಡ ಹಗರಣದ ತನಿಖೆ ಆರಂಭಿಸಿದೆ.

ಹಾಗಾದರೆ, 50:50 ಅನುಪಾತದಲ್ಲಿ ಮುಡಾ ನಿವೇಶನಗಳ ಹಂಚಿಕೆ ಹೇಗೆ ನಡೆಯುತ್ತದೆ? ಅದಕ್ಕೆ ಸಂಬಂಧಿಸಿದ ನಿಯಮಗಳು ಹೇಳುವುದೇನು ಎಂಬ ವಿವರ ಇಲ್ಲಿದೆ.

50:50 ಅನುಪಾತದ ನಿಯಮ ಎಂದರೇನು?

ರೈತರರಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವಶಪಡಿಸಿಕೊಂಡ ಭೂಮಿಯಲ್ಲಿ ಪ್ರಾಧಿಕಾರವು ಅಭಿವೃದ್ಧಿಪಡಿಸಿದ ಜಾಗದ ಶೇ 50 ರಷ್ಟು ಪಾಲನ್ನು ರೈತರಿಗೆ ಹಿಂದಿರುಗಿಸುವುದಕ್ಕೆ ಸಂಬಂಧಿಸಿದ ನಿಯಮವೇ 50:50 ಅನುಪಾತದ ನಿಯಮ.

50:50 ಅನುಪಾತದ ನಿಯಮದಲ್ಲಿ ಏನೇನಿದೆ?

ಉದಾಹರಣೆಗೆ, ಒಬ್ಬ ರೈತನಿಂದ ಒಂದು ಎಕರೆ ಭೂಮಿಯನ್ನು ಪ್ರಾಧಿಕಾರ ಸ್ವಾಧೀನಪಡಿಸಿಕೊಂಡಿದೆ ಎಂದಿಟ್ಟುಕೊಳ್ಳೋಣ. ಅದರಲ್ಲಿ ಲೇಔಟ್ ನಿರ್ಮಿಸಿದರೆ ಸೃಷ್ಟಿಯಾಗುವ ನಿವೇಶನದಲ್ಲಿ ಅರ್ಧ ಪಾಲನ್ನು ರೈತನಿಗೆ ಬಿಟ್ಟುಕೊಡಬೇಕು ಎನ್ನುವುದು ನಿಯಮ‌ದ ಅರ್ಥ. (ಒಂದು ಎಕರೆ ಭೂಮಿಯಲ್ಲಿ ಚರಂಡಿ, ಸಿಎ ನಿವೇಶನ, ಪಾರ್ಕ್, ರಸ್ತೆ ಎಲ್ಲಾ ನಿರ್ಮಾಣವಾದ ಬಳಿಕ 10 ಸೈಟ್​​ಗಳು ಉಳಿದರೆ ಅದರಲ್ಲಿ 5 ಸೈಟ್ ರೈತನಿಗೆ ಮತ್ತು 5 ಸೈಟ್ ಪ್ರಾಧಿಕಾರ ಪಡೆದುಕೊಳ್ಳುತ್ತದೆ.)

2015 ರಲ್ಲಿ ರಾಜ್ಯ ಸರ್ಕಾರ 50:50 ಅನುಪಾತದ ಅಧಿಸೂಚನೆ ಹೊರಡಿಸಿದತ್ತು. ಅಧಿಸೂಚನೆ ಹೊರಡಿಸಿದ ದಿನದಿಂದ ನಂತರದ ದಿನಗಳಲ್ಲಿ ರಚನೆ ಮಾಡುವ ಬಡಾವಣೆಗಳಿಗೆ 50-50 ನಿಯಮ ಅಳವಡಿಸಿಕೊಳ್ಳಲು ಹೇಳಿದೆ. ಆದರೆ ಈ ನಿಯಮವೇ ತಪ್ಪು ಎನ್ನುವುದು ಹಲವರ ಆರೋಪ.

ವಿವಾದ ಸೃಷ್ಟಿಯಾಗಿದ್ದೇಕೆ?

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಇಲ್ಲಿಯವರೆಗೂ 50-50 ನಿಯಮದಡಿ ಹಂಚಿಕೆ ಮಾಡಿರುವ ಸೈಟ್​​ಗಳನ್ನು 2015 ಕ್ಕೂ ಹಿಂದೆ ಪ್ರಾಧಿಕಾರ ವಶಪಡಿಸಿಕೊಂಡ ಭೂಮಿಗಳಿಗೆ ನೀಡಲಾಗಿದೆ‌. ಅದಕ್ಕೂ ಮೊದಲು ಮುಡಾದಲ್ಲಿ 60-40 ಅನುಪಾತದ ನಿಯಮ ಅಸ್ತಿತ್ವದಲ್ಲಿತ್ತು. ಆಗ ಹಣ ಹಾಗೂ ಪರಿಹಾರವನ್ನು ಲ್ಯಾಂಡ್ ಲೂಸರ್ ನಿಯಮದಲ್ಲಿ ಪರಿಹಾರ ನೀಡಲಾಗುತಿತ್ತು. ಆದರೆ ಅತ್ಯಂತ ಹಳೆಯ, ದಶಕಗಳ ಹಿಂದೆ ಸ್ವಾಧೀನಪಡಿಸಿಕೊಂಡಿದ್ದ ಭೂಮಿಗೂ ಈಗಿನ ನಿಯಮದಡಿ ಪರಿಹಾರ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಮುಡಾ ನಿವೇಶನ ಹಂಚಿಕೆ ಪಟ್ಟಿ ಲಭ್ಯ: ಒಬ್ಬರಿಗೆ 26 ಸೈಟ್​ ಹಂಚಿದ್ದ ಮುಡಾ!

ಇದೀಗಾ 50-50 ಅನುಪಾತದ ನಿಯಮದಡಿಯಲ್ಲಿ 1968 ಇಸವಿಯಲ್ಲಿ ಭೂಮಿ ಕಳೆದುಕೊಂಡವರಿಗೂ ಸೈಟ್ ನೀಡಿರುವುದು ಗೊತ್ತಾಗಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Daily Devotional: ಗುಳಿ ಕೆನ್ನೆಯವರು ನಿಜಕ್ಕೂ ಅದೃಷ್ಟವಂತರಾ ತಿಳಿಯಿರಿ
Daily Devotional: ಗುಳಿ ಕೆನ್ನೆಯವರು ನಿಜಕ್ಕೂ ಅದೃಷ್ಟವಂತರಾ ತಿಳಿಯಿರಿ
Daily Horoscope: ಅನ್ಯರ ಸಮಸ್ಯೆಯನ್ನು ನಿಮ್ಮ ಸಮಸ್ಯೆ ಎಂದುಕೊಳ್ಳುವಿರಿ
Daily Horoscope: ಅನ್ಯರ ಸಮಸ್ಯೆಯನ್ನು ನಿಮ್ಮ ಸಮಸ್ಯೆ ಎಂದುಕೊಳ್ಳುವಿರಿ
2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ
2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?