AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಲಸಕ್ಕಾಗಿ ಆನ್ಲೈನ್ ಮೊರೆ ಹೋದವನಿಗೆ 48 ಲಕ್ಷ ಹಣ ದೋಖಾ; ಬೆಂಗಳೂರು ಮೂಲದ ಮೂವರು ಆರೋಪಿಗಳು ಅರೆಸ್ಟ್

ಮಹಾಮಾರಿ ಕೊರೊನಾದಿಂದ ಕೆಲಸ ಕಳೆದುಕೊಂಡಿದ್ದ ಮೈಸೂರಿನ ಸಾತಗಳ್ಳಿ ನಿವಾಸಿ, ಮೆಕಾನಿಕಲ್ ಇಂಜಿನಿಯರ್ ಗೆ ಸಂಬಂಧಪಟ್ಟ ಕೆಲಸ ಹುಡುಕಲು ಯತ್ನಿಸುತ್ತಿದ್ದರು. ಈ ವೇಳೆ ಬೇಗ ಕೆಲಸ ಹುಡುಕುವ ಸಲುವಾಗಿ ಆನ್ ಲೈನ್ ಮೊರೆ ಹೋಗಿದ್ದಾರೆ.

ಕೆಲಸಕ್ಕಾಗಿ ಆನ್ಲೈನ್ ಮೊರೆ ಹೋದವನಿಗೆ 48 ಲಕ್ಷ ಹಣ ದೋಖಾ; ಬೆಂಗಳೂರು ಮೂಲದ ಮೂವರು ಆರೋಪಿಗಳು ಅರೆಸ್ಟ್
ಮೈಸೂರು ಪೊಲೀಸರು
Follow us
TV9 Web
| Updated By: ಆಯೇಷಾ ಬಾನು

Updated on: Jul 08, 2022 | 4:47 PM

ಮೈಸೂರು: ಜಿಲ್ಲೆಯಲ್ಲಿ ಮತ್ತೊಂದು ಆನ್ಲೈನ್ ದೋಖಾ(Online Fraud) ಬಯಲಾಗಿದೆ. ಕೆಲಸ ಪಡೆಯುವ ಪ್ರಯತ್ನದಲ್ಲಿ ಯುವಕ 48 ಲಕ್ಷ ಹಣ ಕಳೆದುಕೊಂಡಿದ್ದಾರೆ. ಬರೋಬ್ಬರಿ 48,80,200ರೂ ಹಣ ಪಡೆದು ವಂಚಿಸಿದ್ದ ಬೆಂಗಳೂರಿನ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 24 ಲಕ್ಷ ನಗದು, 7 ಕೀಪ್ಯಾಡ್ ಮೊಬೈಲ್, 4ಸ್ಮಾರ್ಟ್ ಫೋನ್, 11ಸಿಮ್ ಕಾರ್ಡ್ ವಶಕ್ಕೆ ಪಡೆಯಲಾಗಿದೆ.

ಮಹಾಮಾರಿ ಕೊರೊನಾದಿಂದ ಕೆಲಸ ಕಳೆದುಕೊಂಡಿದ್ದ ಮೈಸೂರಿನ ಸಾತಗಳ್ಳಿ ನಿವಾಸಿ, ಮೆಕಾನಿಕಲ್ ಇಂಜಿನಿಯರ್ ಗೆ ಸಂಬಂಧಪಟ್ಟ ಕೆಲಸ ಹುಡುಕಲು ಯತ್ನಿಸುತ್ತಿದ್ದರು. ಈ ವೇಳೆ ಬೇಗ ಕೆಲಸ ಹುಡುಕುವ ಸಲುವಾಗಿ ಆನ್ ಲೈನ್ ಮೊರೆ ಹೋಗಿದ್ದಾರೆ. ಗೂಗಲ್ನಲ್ಲಿ ಎಮಿನೆಂಟ್ ಮೈಂಡ್ ವಿ ಸೋರ್ಸ್ ಹೆಸರಿನ ಕಂಪನಿ ಸಂಪರ್ಕಿಸಿದ್ದಾರೆ. ಆಗ ಆರೋಪಿಗಳು ಮೊದಲ ಬಾರಿ 1ಸಾವಿರ ರೂ ಹಣ ಪಡೆದಿದ್ದಾರೆ. ಬಳಿಕ ಹಂತ ಹಂತವಾಗಿ ಲಕ್ಷಾಂತರರೂ ಹಣ ಪಡೆದಿದ್ದಾರೆ. ಕೆಲಸ ಬೇಡ ಹಣ ವಾಪಸ್ಸು ಕೊಡಿ ಎಂದಾಗ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಆಗ ಅನುಮಾನ ಬಂದು ಅನಿವಾರ್ಯವಾಗಿ ಮೈಸೂರಿನ ಸೆನ್ ಪೊಲೀಸ್ ಠಾಣೆಗೆ ಯುವಕ ದೂರು ನೀಡಿದ್ದಾನೆ.

ದೂರು ಆಧರಿಸಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಇನ್ನಷ್ಟು ಜನರಿಗೆ ಮೋಸ ಮಾಡಿರುವ ಸಾಧ್ಯತೆ ಇದ್ದು ಮೈಸೂರು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಎಸ್ಪಿ ಆರ್ ಚೇತನ್ ಮಾಹಿತಿ ನೀಡಿದ್ದಾರೆ.

ನಕಲಿ ಯಾವ ಕ್ಷೇತ್ರದಲ್ಲಿ ಇಲ್ಲ ಹೇಳಿ? ನಕಲಿ ಕಾಲ್​ಸೆಂಟರ್​​​ ಜಾಲ ಪತ್ತೆಯಾಯ್ತು ಸಿಲಿಕಾನ್ ಸಿಟಿ​ ಬೆಂಗಳೂರಿನಲ್ಲಿ! ಬೆಂಗಳೂರು: ಈಗಂತೂ ನಕಲಿ ಯಾವ ಕ್ಷೇತ್ರದಲ್ಲಿ ಇಲ್ಲ ಹೇಳೀ!? ಎಂದು ಪ್ರಶ್ನಿಸಿಕೊಂಡರೆ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ನಕಲಿ ರಾರಾಜಿಸುತ್ತಿದೆ ಎನ್ನಬಹುದು. ತಾಜಾ ಆಗಿ, ಬೆಂಗಳೂರಿನಲ್ಲಿ ನಕಲಿ ಕಾಲ್​ಸೆಂಟರ್​​​ ಜಾಲ ಪತ್ತೆಯಾಗಿದೆ. ಅದೂ ಸಿಲಿಕಾನ್ ಸಿಟಿ​ಯಲ್ಲಿ ಇಂತಹ ನಕಲಿ ಜಾಲ ಪತ್ತೆಯಾಗಿರುವುದು ಸಖೇದಾಶ್ಚರ್ಯ ಜೊತೆಗೆ, ಆತಂಕದ ವಿಷಯವೂ ಆಗಿದೆ. ಭಾರತದಲ್ಲಿ ಒಂದೆರಡು ಕಡೆ ಇಂತಹ ನಕಲಿ ಕಾಲ್​ಸೆಂಟರ್​​​ ಗಳು ತಲೆ ಎತ್ತಿದ್ದವಾದರೂ, ಬೆಂಗಳೂರಿನಲ್ಲಿ ಇಂತಹ ನಕಲಿ ಜಾಲ ಆಪರೇಟ್ ಮಾಡ್ತಾ ಇದ್ದಿದ್ದು ಇದೇ ಮೊದಲು ಎನ್ನಬಹುದು.

43 ಕಂಪ್ಯೂಟರ್ ಇಟ್ಟುಕೊಂಡು, ಅಮೆರಿಕದ ಸೇವೆಗೆ ನಕಲಿ ಕಾಲ್​ಸೆಂಟರ್ ಬೆಂಗಳೂರಿನಲ್ಲಿ ಈ ಬೃಹತ್ ನಕಲಿ ಕಾಲ್ ​ಸೆಂಟರ್​​​ ಜಾಲ ಪತ್ತೆಯಾಗಿರುವುದು ವೈಟ್​​ಫೀಲ್ಡ್​, ಮಹದೇವಪುರದಲ್ಲಿ. ಸಿಲಿಕಾನ್ ಸಿಟಿ​ಗೆ ಐಟಿ ಕ್ಷೇತ್ರ ಕಾಲಿಟ್ಟಾಗ ಬೆಂಗಳೂರಿನ ಹೆಗ್ಗುರುತಾಗಿದ್ದ ಟೆಕ್​​ಪಾರ್ಕ್ ಒಳಗಡೆ ಇತ್ತೀಚೆಗೆ ಈ ನಕಲಿ ಕಂಪನಿ ಕಾರ್ಯಾಚಾರಣೆ ನಡೆಸುತ್ತಿತ್ತು. ಇದೀಗ ನಕಲಿ ಕಂಪನಿ ತೆರೆದುಕೂತಿದ್ದ ಅಷ್ಟೂ ಆರೋಪಿಗಳನ್ನು ಬಂಧಿಸಲಾಗಿದೆ. ಗುಜರಾತ್ ಮೂಲದ 11 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ 243 ಕಂಪ್ಯೂಟರ್ ವಶಕ್ಕೆ ಪಡೆದಿದ್ದಾರೆ.

ವೈಟ್​​ಫೀಲ್ಡ್​, ಮಹದೇವಪುರ ಪೊಲೀಸರ ಜಂಟಿ ಕಾರ್ಯಾಚರಣೆ ಫಲವಾಗಿ ಇದೀಗ ಈ ಜಾಲ ಛಿದ್ರವಾಗಿದೆ. ಅಮೆರಿಕ ಪ್ರಜೆಗಳನ್ನು ಗುರಿಯಾಗಿಸಿಕೊಂಡು ಹಣ ಪಡೆದು ವಂಚನೆ ಎಸಗಲಾಗಿದೆ. ಬ್ಯಾಂಕ್​​ ಖಾತೆಯಲ್ಲಿ ಸಮಸ್ಯೆ ಎಂದು ಹೇಳಿ ಹಣ ಪಡೆದು ವಂಚನೆ ನಡೆದಿದೆ. ಅಮೆಜಾನ್​​​ ಅಕೌಂಟ್​ ಮತ್ತು ಶಾಪಿಂಗ್​​ ಮಾಡ್ತಿದ್ದವರ ಡೇಟಾ ಬಳಸಿ ಕೃತ್ಯವೆಸಗಲಾಗಿದೆ.

ಅಮೆರಿಕದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಹೆಸರಲ್ಲಿ ಅಣ್ಣಾಮಲೈ ಪೂಜೆ
ಅಮೆರಿಕದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಹೆಸರಲ್ಲಿ ಅಣ್ಣಾಮಲೈ ಪೂಜೆ
ತಾಯಿಯ ತ್ಯಾಗ... ತಂದೆಯ ಪರಿಶ್ರಮ: ನನ್ನೆಲ್ಲಾ ಸಾಧನೆಗೆ ಹೆತ್ತವರೇ ಕಾರಣ..!
ತಾಯಿಯ ತ್ಯಾಗ... ತಂದೆಯ ಪರಿಶ್ರಮ: ನನ್ನೆಲ್ಲಾ ಸಾಧನೆಗೆ ಹೆತ್ತವರೇ ಕಾರಣ..!
ಯುದ್ಧ ಬೇಡವೆಂಬ ತಮ್ಮ ಮಾತನ್ನು ಮಾಡಿಫೈ ಮಾಡಿ ಹೇಳಿದ ತಿಮ್ಮಾಪುರ
ಯುದ್ಧ ಬೇಡವೆಂಬ ತಮ್ಮ ಮಾತನ್ನು ಮಾಡಿಫೈ ಮಾಡಿ ಹೇಳಿದ ತಿಮ್ಮಾಪುರ
ಸಿಎಂ ಸಿದ್ದರಾಮಯ್ಯ ಯಾವತ್ತೂ ತಾಳ್ಮೆ ಕಳೆದುಕೊಳ್ಳಲ್ಲ: ಸಚಿವ ತಂಗಡಿಗಿ
ಸಿಎಂ ಸಿದ್ದರಾಮಯ್ಯ ಯಾವತ್ತೂ ತಾಳ್ಮೆ ಕಳೆದುಕೊಳ್ಳಲ್ಲ: ಸಚಿವ ತಂಗಡಿಗಿ
ಪಾಕ್ ಪರ ಘೋಷಣೆ ಕೂಗುವವರ ನಿರ್ನಾಮಕ್ಕಾಗಿ ಹೋಮ ಯಜ್ಞ: ಮುತಾಲಿಕ್
ಪಾಕ್ ಪರ ಘೋಷಣೆ ಕೂಗುವವರ ನಿರ್ನಾಮಕ್ಕಾಗಿ ಹೋಮ ಯಜ್ಞ: ಮುತಾಲಿಕ್
ಮಹಿಳೆಯರು ಬಿಜೆಪಿ ಶಾಲು ಹೊದ್ದಿದ್ದರೆ ಭದ್ರತಾ ಲೋಪ ಗೊತ್ತಾಗುತಿತ್ತು: ಸಚಿವ
ಮಹಿಳೆಯರು ಬಿಜೆಪಿ ಶಾಲು ಹೊದ್ದಿದ್ದರೆ ಭದ್ರತಾ ಲೋಪ ಗೊತ್ತಾಗುತಿತ್ತು: ಸಚಿವ
ವ್ಯಾನಿಟಿ ಬ್ಯಾಗ್​ನಲ್ಲಿ ಚೂರಿ ಇರಲಿ: ಕಲ್ಲಡ್ಕ ಪ್ರಭಾಕರ ಭಟ್
ವ್ಯಾನಿಟಿ ಬ್ಯಾಗ್​ನಲ್ಲಿ ಚೂರಿ ಇರಲಿ: ಕಲ್ಲಡ್ಕ ಪ್ರಭಾಕರ ಭಟ್
ಸಿದ್ದರಾಮಯ್ಯ ಏನು ಮಾಡುತ್ತಾರೋ ಎಂಬ ಭಯವಂತೂ ಇದೆ: ನಾಡಗೌಡ
ಸಿದ್ದರಾಮಯ್ಯ ಏನು ಮಾಡುತ್ತಾರೋ ಎಂಬ ಭಯವಂತೂ ಇದೆ: ನಾಡಗೌಡ
ದೆವ್ವದ ಹಾಡಿಗೆ ಭಯಬಿದ್ದ ಸರಿಗಮಪ ಮನೋಜ್; ಇಲ್ಲಿದೆ ಫನ್ನಿ ವಿಡಿಯೋ
ದೆವ್ವದ ಹಾಡಿಗೆ ಭಯಬಿದ್ದ ಸರಿಗಮಪ ಮನೋಜ್; ಇಲ್ಲಿದೆ ಫನ್ನಿ ವಿಡಿಯೋ
ರಾಹುಲ್​ಗೆ ತಿರುಗೇಟು ನೀಡಲು ಪ್ಲ್ಯಾನ್ ರೂಪಿಸಿದ್ದ ವಿರಾಟ್ ಕೊಹ್ಲಿ
ರಾಹುಲ್​ಗೆ ತಿರುಗೇಟು ನೀಡಲು ಪ್ಲ್ಯಾನ್ ರೂಪಿಸಿದ್ದ ವಿರಾಟ್ ಕೊಹ್ಲಿ