AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರಿನಲ್ಲಿ ಬೆಳ್ಳಿ ಆಸೆಗೆ ಕೆಲಸ ಕೊಟ್ಟವನನ್ನೇ ಕೊಲೆಗೈದಿದ್ದ ಆರೋಪಿ ಬಂಧನ! ರಾಮನಗರದಲ್ಲಿ ಅಪಘಾತದಿಂದ ಯುವತಿಯ ಕೊಲೆ ರಹಸ್ಯ ಬಯಲು

ಮೈಸೂರಿನ ಹಳ್ಳದಕೇರಿ ಬಡಾವಣೆಯಲ್ಲಿ ಉಳಿದುಕೊಂಡಿದ್ದರು. ಜೈನಮಂದಿರದ ಕೆಲಸಕ್ಕಾಗಿ 14 ಕೆಜಿ ಬೆಳ್ಳಿ ಗಟ್ಟಿ ನೀಡಲಾಗಿತ್ತು. ಈ ಬೆಳ್ಳಿ ಮೇಲೆ ಕಣ್ಣಿಟ್ಟಿದ್ದ ಆರೋಪಿ ಗೋವಿಂದನನ್ನು ಕೊಂದು ಬೆಳ್ಳಿ ಗಟ್ಟಿ ಜತೆ ಪರಾರಿಯಾಗಿದ್ದ.

ಮೈಸೂರಿನಲ್ಲಿ ಬೆಳ್ಳಿ ಆಸೆಗೆ ಕೆಲಸ ಕೊಟ್ಟವನನ್ನೇ ಕೊಲೆಗೈದಿದ್ದ ಆರೋಪಿ ಬಂಧನ! ರಾಮನಗರದಲ್ಲಿ ಅಪಘಾತದಿಂದ ಯುವತಿಯ ಕೊಲೆ ರಹಸ್ಯ ಬಯಲು
ಬಂಧಿತ ಆರೋಪಿ ಅರ್ಜುನ್, ಕೊಲೆಯಾದ ಗೋವಿಂದ
TV9 Web
| Edited By: |

Updated on:May 11, 2022 | 9:01 AM

Share

ಮೈಸೂರು: ಬೆಳ್ಳಿ (Silver) ಆಸೆಗಾಗಿ ಕೆಲಸ ಕೊಟ್ಟವನನ್ನೇ ಕೊಲೆ (Murder) ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಅರ್ಜುನ್ ಕುಮಾರ(28), ಗೋವಿಂದ(30)ನನ್ನು ಕೊಲೆ ಮಾಡಿ ನಂತರ ರಾಜಸ್ಥಾನಕ್ಕೆ ಪರಾರಿಯಾಗಿದ್ದ. ಮೈಸೂರಿನ ಲಷ್ಕರ್ ಠಾಣೆ ಪೊಲೀಸರು ಬಂಧಿಸಿ, ಲಕ್ಷಾಂತರ ರೂಪಾಯಿ ಮೌಲ್ಯದ ಬೆಳ್ಳಿ ಗಟ್ಟಿಯನ್ನು ವಶಕ್ಕೆ ಪಡೆದಿದ್ದಾರೆ. ಅರ್ಜುನ್ ಕುಮಾರ್, ಗೋವಿಂದ ಮೂಲತಃ ರಾಜಸ್ಥಾನದವರು. ಮೈಸೂರಿನ ಸುಮತಿನಾಥ ಜೈನಮಂದಿರದ ಬೆಳ್ಳಿ ಕೆಲಸಕ್ಕೆ ಬಂದಿದ್ರು. ಸಹಾಯಕ್ಕಾಗಿ ಗೋವಿಂದ ಅರ್ಜುನ್ ಕುಮಾರ್ನ ಕರೆತಂದಿದ್ದ.

ಮೈಸೂರಿನ ಹಳ್ಳದಕೇರಿ ಬಡಾವಣೆಯಲ್ಲಿ ಉಳಿದುಕೊಂಡಿದ್ದರು. ಜೈನಮಂದಿರದ ಕೆಲಸಕ್ಕಾಗಿ 14 ಕೆಜಿ ಬೆಳ್ಳಿ ಗಟ್ಟಿ ನೀಡಲಾಗಿತ್ತು. ಈ ಬೆಳ್ಳಿ ಮೇಲೆ ಕಣ್ಣಿಟ್ಟಿದ್ದ ಆರೋಪಿ ಗೋವಿಂದನನ್ನು ಕೊಂದು ಬೆಳ್ಳಿ ಗಟ್ಟಿ ಜತೆ ಪರಾರಿಯಾಗಿದ್ದ. 8 ಲಕ್ಷ ಮೌಲ್ಯದ 12 ಕೆಜಿ ಬೆಳ್ಳಿ ಗಟ್ಟಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಸ್ತೆ ಅಪಘಾತದಿಂದ ಯುವತಿಯ ಕೊಲೆ ರಹಸ್ಯ ಬಯಲು: ರಾಮನಗರ: ಅಪಘಾತದಿಂದ ಕೊಲೆ ರಹಸ್ಯ ಬಯಲಾಗಿದೆ. ಕೊಲೆಗೈದು ಮೃತದೇಹ ಸಾಗಿಸುವ ವೇಳೆ ಅಪಘಾತ ನಡೆದಿದೆ. ರಾಮನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಈ ಘಟನೆ ನಡೆದಿದೆ. ಹಮ್ಸ್ ಹಾರಿಸುವ ವೇಳೆ ಆರೋಪಿಗಳು ಹಾಗೂ ಮೃತದೇಹ ಕೆಳಗೆ ಬಿದ್ದಿದೆ. ತಕ್ಷಣ ಆಸ್ಪತ್ರೆಗೆ ದಾಖಲು‌ ಮಾಡಿದಾಗ ವೈದ್ಯರು ಮೃತದೇಹವನ್ನು ಗಮನಿಸಿದ್ದಾರೆ.

ಮಹಿಳೆ ಸಾವನ್ನಪ್ಪಿ ಬಹಳ ಸಮಯವಾಗಿದೆ. ಅಪಘಾತದಿಂದ ಸಾವು‌ ಸಂಭವಿಸಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಅನುಮಾನದಿಂದ ಪೊಲೀಸರು ತಪಾಸಣೆಗೆ ಮುಂದಾಗಿದ್ದಾರೆ. ಈ ವೇಳೆ ಕೊಲೆ ರಹಸ್ಯ ಬಯಲಾಗಿದೆ. ಆರೋಪಿಗಳು ಬೆಂಗಳೂರಿನ ಕೆಂಚೇನಹಳ್ಳಿಯ ಬಾಡಿಗೆ ಮನೆಯಲ್ಲಿ ‌ ಸೌಮ್ಯ ಎಂಬ ಯುವತಿಯನ್ನು ಕೊಲೆ ಮಾಡಿದ್ದಾರೆ. ಹಣಕಾಸಿನ‌ ವಿಚಾರವಾಗಿ ಕೊಲೆ ನಡೆದಿದೆ. ರಘು ಹಾಗೂ ಆತನ‌ ಪತ್ನಿ ದುರ್ಗಾ ಎಂಬಾಕೆ ಹತ್ಯೆ ಮಾಡಿದ್ದಾರೆ. ಮೃತದೇಹವನ್ನ ಮಧ್ಯದಲ್ಲಿ ಇಟ್ಟುಕೊಂಡು ನಾಗರಾಜ್ ಹಾಗೂ ವಿನೋದ್ ಹೋಗುತ್ತಿದ್ದರು.  ಅಪಘಾತದಿಂದ ವಿನೋದ್‌ಗೆ ಗಂಭೀರ ಗಾಯವಾಗಿದೆ.

ಇದನ್ನೂ ಓದಿ

Pooja Bedi Birthday: ಪೂಜಾ ಬೇಡಿ ಜನ್ಮದಿನ: ವ್ಯಾಕ್ಸಿನ್​ ಬೇಡವೇ ಬೇಡ ಎಂದು ವಿವಾದ ಎಬ್ಬಿಸಿದ್ದ ಈ ನಟಿಯ ವಯಸ್ಸು ಎಷ್ಟು?

National Technology Day 2022: ಇದನ್ನು ಏಕೆ ಆಚರಿಸಲಾಗುತ್ತದೆ? ಅದರ ಮಹತ್ವ ಮತ್ತು ಈ ವರ್ಷದ ಥೀಮ್​: ಇಲ್ಲಿದೆ ಮಾಹಿತಿ

Published On - 8:33 am, Wed, 11 May 22

ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ