‘ಹಿಜಾಬಿನ ಮರೆಯಲ್ಲಿ ಕಣ್ಣೀರು ಕರೆಯದಿರು ಮಗಳೇ’; ರಂಗಕರ್ಮಿ ಪ್ರಸನ್ನ ಭಾವನಾತ್ಮಕ ಪತ್ರ

| Updated By: shivaprasad.hs

Updated on: Feb 12, 2022 | 9:03 AM

Hijab Row: ಹಿಜಾಬ್ ವಿವಾದದ ಕುರಿತಂತೆ ರಂಗಕರ್ಮಿ, ನಾಟಕಕಾರ ಪ್ರಸನ್ನ ಭಾವನಾತ್ಮಕ ಪತ್ರ ಬರೆದಿದ್ದಾರೆ. ಅದರಲ್ಲಿ ಅವರು ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ.

‘ಹಿಜಾಬಿನ ಮರೆಯಲ್ಲಿ ಕಣ್ಣೀರು ಕರೆಯದಿರು ಮಗಳೇ’; ರಂಗಕರ್ಮಿ ಪ್ರಸನ್ನ ಭಾವನಾತ್ಮಕ ಪತ್ರ
ರಂಗಕರ್ಮಿ ಪ್ರಸನ್ನ
Follow us on

ಮೈಸೂರು: ಕರ್ನಾಟಕದಲ್ಲಿ ಹಿಜಾಬ್ ವಿವಾದ (Hijab Row) ಜೋರಾಗಿದೆ. ಈ ವಿವಾದದ ಕುರಿತಂತೆ ನಾಡಿನ ಪ್ರಜ್ಞಾವಂತರು, ಚಿಂತಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಇದೀಗ ನಾಟಕಕಾರ, ರಂಗಕರ್ಮಿ ಪ್ರಸನ್ನ (Prasanna Heggodu) ಅವರು ಭಾವನಾತ್ಮಕ ಪತ್ರವನ್ನು ಬರೆದಿದ್ದಾರೆ. ಅದಕ್ಕೆ ಅವರು ‘ಹಿಜಾಬಿನ ಮರೆಯಲ್ಲಿ ಕಣ್ಣೀರು ಕರೆಯದಿರು ಮಗಳೇ’ ಎಂದು ಶೀರ್ಷಿಕೆ ನೀಡಿದ್ದು, ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ‘ಸೀತೆಯಂತೆ ಸೈರಣೆಯಿಂದ ಇರು ಮಗಳೇ, ನೀನೂ ಕೂಡ ಪರಿಸ್ಥಿತಿಯನ್ನು ತಾಳ್ಮೆಯಿಂದ‌ ಎದುರಿಸು. ಹಿಜಾಬಿನ ನೆಪವೊಡ್ಡಿ ಹೆಣ್ಣು ಮಗುವಿಗೆ ತಡೆಯೊಡ್ಡುತ್ತಿದ್ದಾರೆ. ಶಿಕ್ಷಣ, ಉದ್ಯೋಗ ಸೇರಿ ಎಲ್ಲಾ ಕಡೆ ತಡೆಯೊಡ್ಡುವವರಿಗೆ ಧರ್ಮವಿಲ್ಲ‌ ಮಗು’ ಎಂದು ಪ್ರಸನ್ನ ಹೇಳಿದ್ದಾರೆ.

‘ರಾಮನ ಅನುಯಾಯಿ ನಾನು. ಹುಟ್ಟಿನಿಂದ ಹಿಂದೂ, ಹುಟ್ಟಿನಿಂದ ಗಂಡು ನಾನು. ರಾಮನಂತೆ ಗಂಡಸುತನ ಹಾಗೂ ಹಿಂದುತ್ವವನ್ನು ಸಭ್ಯತೆಯಿಂದ ನಿಭಾಯಿಸುವ ಪ್ರಯತ್ನ ನಡೆಸಿದ್ದೇನೆ ಅಷ್ಟೇ. ಕೇಸರಿ ಶಾಲು ಹೊದೆದು ನಿನ್ನನ್ನು ತಡೆಯುತ್ತಿರುವವರದ್ದು ಬಿಸಿರಕ್ತ. ಅವರಿಗೆ ರಾಮನಿಗೆ ಗರ್ವವಿರಲಿಲ್ಲ ಎಂಬುದು ತಿಳಿದಿಲ್ಲ. ಇತರರನ್ನು ಗರ್ವದಿಂದ ತಡೆಯಿರಿ ಎಂದು ರಾಮ ಹೇಳಿಲ್ಲ. ಸಭ್ಯನಾಗಿರು ಎಂದಷ್ಟೇ ರಾಮ ನಮಗೆಲ್ಲರಿಗೂ ಹೇಳಿದ್ದು’

‘ಹಿಂದುತ್ವವಿರಲಿ, ಮುಸಲ್ಮಾನತ್ವವಿರಲಿ, ಸಮಾಜವಾದವಿರಲಿ.. ಎಲ್ಲವೂ ಸಭ್ಯತೆಯ ಪ್ರತಿಪಾದನೆಗಳಲ್ಲವೇ ಮಗು? ಹುಡುಗರೂ ಕೆಟ್ಟವರೇನಲ್ಲ, ತಿಳಿದುಕೊಳ್ಳುತ್ತಾರೆ ಬಿಡು. ಗರ್ವ ರಾವಣನ ಗುಣವೇ ಹೊರತು ರಾಮನ ಗುಣವಲ್ಲ. ನೀನೂ ಗರ್ವ ಮಾಡದಿರು. ನಿನ್ನ ಅಣ್ಣತಮ್ಮಂದಿರೂ ಗರ್ವ ಮಾಡದಿರಲಿ. ಇದು ಸಭ್ಯದೇಶ ಮಗಳೇ. ಇವೆಲ್ಲ ಕ್ಷಣಿಕ ಕಷ್ಟಗಳಷ್ಟೇ..’ ಎಂದು ಪತ್ರದಲ್ಲಿ ಭಾವನಾತ್ಮಕವಾಗಿ ಬರೆದಿದ್ದಾರೆ ಪ್ರಸನ್ನ.

ಪ್ರಸನ್ನ ಬರೆದಿರುವ ಪತ್ರ ಇಲ್ಲಿದೆ:

ಶಾಲಾ ಕಾಲೇಜುಗಳಿಗೆ ಫೆ.16ರವರೆಗೆ ರಜೆ ವಿಸ್ತರಣೆ

ಬೆಂಗಳೂರು: ಹಿಜಾಬ್ ಕೇಸರಿ ಶಾಲು ವಿವಾದದ ಹಿನ್ನೆಲೆ ಕಾಲೇಜುಗಳಿಗೆ ನೀಡಲಾಗಿದ್ದ ರಜೆಯನ್ನು ಮತ್ತೆ ವಿಸ್ತರಣೆ ಮಾಡಿ  ಆದೇಶ ನೀಡಲಾಗಿದೆ. ಫೆಬ್ರವರಿ 16ರ ವರೆಗೆ ರಾಜ್ಯಾದ್ಯಂತ ಕಾಲೇಜುಗಳಿಗೆ ರಜೆ ವಿಸ್ತರಣೆ ಮಾಡಲಾಗಿದೆ. ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ರಜೆ ಮುಂದುವರಿಕೆ ಮಾಡಲಾಗಿದೆ. ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಎಲ್ಲಾ ಕಾಲೇಜುಗಳಿಗೆ ಫೆಬ್ರವರಿ 16ರ ವರೆಗೆ ರಜೆ ವಿಸ್ತರಣೆ ಮಾಡಲಾಗಿದ್ದು ಪರಿಸ್ಥಿತಿ ನೋಡಿಕೊಂಡು ಮುಂದಿನ ನಿರ್ಧಾರ ತಿಳಿಸಲಾಗುವುದು ಎಂದು ಉನ್ನತ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಇದನ್ನೂ ಓದಿ:

ಹಿಜಾಬ್ ವಿವಾದ: ಡಾ.ಎ.ಪಿ.ಜೆ ಅಬ್ದುಲ್ ಕಲಾಂರ ಸಂದೇಶದ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಮುಂದಾದ ಕಲಾವಿದ

Karnataka Hijab Row: ಫೆಬ್ರವರಿ 16ರ ವರೆಗೆ ರಾಜ್ಯಾದ್ಯಂತ ಕಾಲೇಜುಗಳಿಗೆ ರಜೆ ವಿಸ್ತರಣೆ; ಉನ್ನತ ಶಿಕ್ಷಣ ಇಲಾಖೆ ಸುತ್ತೋಲೆ