ಮೈಸೂರು ಜಿಲ್ಲೆಯಲ್ಲಿ ವ್ಯಾಘ್ರನ ಕಾಟ: ಹೊಲ, ತೋಟ, ರಸ್ತೆಯಲ್ಲೆಲ್ಲ ಹುಲಿ ಹೆಜ್ಜೆ ಗುರುತು ಪತ್ತೆ

| Updated By: ಆಯೇಷಾ ಬಾನು

Updated on: Nov 21, 2023 | 8:13 AM

ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಹನಗೋಡು, ಅಣ್ಣೆಗೆರೆ ಸೇರಿ ಅಕ್ಕಪಕ್ಕದ ಗ್ರಾಮದಲ್ಲಿ ಹುಲಿ ಓಡಾಡಿಕೊಂಡಿದ್ದು ಹೊಲ, ತೋಟಗಳಲ್ಲಿ ಹುಲಿ ಹೆಜ್ಜೆ ಗುರುಗಳು ಪತ್ತೆಯಾಗಿವೆ. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಅರಣ್ಯ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಹುಲಿ ಹೆಜ್ಜೆ ಪರಿಶೀಲಿಸಿದ್ದಾರೆ. ಹುಲಿ ಸೆರೆ ಹಿಡಿಯುವಂತೆ ಅರಣ್ಯ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ವ್ಯಾಘ್ರನ ಕಾಟ: ಹೊಲ, ತೋಟ, ರಸ್ತೆಯಲ್ಲೆಲ್ಲ ಹುಲಿ ಹೆಜ್ಜೆ ಗುರುತು ಪತ್ತೆ
ಹುಲಿ ಹೆಜ್ಜೆ ಗುರುತು
Follow us on

ಮೈಸೂರು, ನ.21: ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಹಲವು ಗ್ರಾಮಗಳಲ್ಲಿ ಹುಲಿ (Tiger) ಆತಂಕ ಹೆಚ್ಚಾಗಿದೆ. ಹನಗೋಡು, ಅಣ್ಣೆಗೆರೆ ಸೇರಿ ಅಕ್ಕಪಕ್ಕದ ಗ್ರಾಮದಲ್ಲಿ ಹುಲಿ ಓಡಾಡಿಕೊಂಡಿದ್ದು ಹೊಲ, ತೋಟಗಳಲ್ಲಿ ಹುಲಿ ಹೆಜ್ಜೆ ಗುರುಗಳು (Tiger Footprint) ಪತ್ತೆಯಾಗಿವೆ. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಅಲ್ಲದೆ ಗ್ರಾಮದ ರಸ್ತೆಗಳಲ್ಲೂ ಹುಲಿ ಓಡಾಡಿರುವ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು ಜನ ಒಟ್ಟಿಯಾಗಿ ಓಡಾಡಲು ಹೆದರುವಂತಾಗಿದೆ. ಸದ್ಯ ಅರಣ್ಯ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಹುಲಿ ಹೆಜ್ಜೆ ಪರಿಶೀಲಿಸಿದ್ದಾರೆ.

ಇನ್ನು ನಂಜನಗೂಡು ತಾಲ್ಲೂಕಿನ ಕಾಡಿನ ಅಂಚುಗಳಲ್ಲಿರುವ ಗ್ರಾಮಗಳಲ್ಲಿ ಹುಲಿಗಳ ಹಾವಳಿ ಜಾಸ್ತಿಯಾಗಿದೆ. ಗ್ರಾಮಸ್ಥರು ತಮ್ಮ ಹಸು, ದನ ಮತ್ತು ಕುರಿಗಳನ್ನು ಮೇಯಿಸಲು ಹೊರವಲಯಕ್ಕೆ ಹೋದಾಗ ಹುಲಿಗಳು ಸಾಕು ಪ್ರಾಣಿಗಳ ಮೇಲೆ ಆಕ್ರಮಣ ನಡೆಸಿ ಕೊಂದು ತಿನ್ನುತ್ತಿರುವ ಘಟನೆಗಳು ನಡೆಯುತ್ತಿವೆ.

ಹುಲಿ ದಾಳಿಗೆ ಎರಡು ಬಲಿ

ಮೈಸೂರು ವ್ಯಾಪ್ತಿಯಲ್ಲಿ ಹುಲಿ ದಾಳಿಗೆ ಎರಡು ಜೀವ ಬಲಿಯಾಗಿದೆ. ಜಿಲ್ಲೆಯ ನಂಜನಗೂಡು ತಾಲೂಕಿನ‌ ಮಹದೇವನಗರದಲ್ಲಿ ಜಾನುವಾರು ಮೇಲೆ ಹುಲಿ ದಾಳಿ ಮಾಡಿತ್ತು. ಆಗ ಜಾನುವಾರು ರಕ್ಷಣೆಗೆ ಹೋದ ವೀರಭದ್ರ ಬೋವಿ ಎಂಬ ರೈತನ ಮೇಲೆ ಹುಲಿ ದಾಳಿ ಮಾಡಿ ಕೊಂದು ಹಾಕಿತ್ತು. ಅದೇ ರೀತಿ ಬಿ.ಮಟಕೆರೆ-ಹೊಸಕೋಟೆ ರಸ್ತೆಯಲ್ಲಿ ದನ ಮೇಯಿಸುವಾಗ ಹುಲಿ ದನಗಳ ಮೇಲೆ ದಾಳಿ ಮಾಡಿ ದನಗಳು ಹುಲಿಗೆ ಸಿಗದೆ ಚೆಲ್ಲಾ ಪಿಲ್ಲಿಯಾಗಿ ಓಡಿದಾಗ ರೈತ ಬಾಲಾಜಿ ನಾಯಕ್ ಮೇಲೆ ಹುಲಿ ದಾಳಿ ಮಾಡಿ ತಿಂದು ಹಾಕಿತ್ತು. ಸದ್ಯ ಮೈಸೂರಿನ ಕಾಡಂಚಿನ ಜನರಿಗೆ ಹುಲಿಗಳ ಕಾಟ ಹೆಚ್ಚಾಗಿದೆ. ಇದರಿಂದ ಪ್ರತಿ ದಿನ ಒಂದಿಲ್ಲ ಒಂದು ಸಮಸ್ಯೆಗಳು, ಆತಂಕ ಎದುರಾಗಿದೆ. ಜೀವ ಭತದಲ್ಲೇ ಜನ ಓಡಾಡುವ ಸ್ಥಿತಿ ಇದೆ.

ಇದನ್ನೂ ಓದಿ: ಮೈಸೂರಿನಲ್ಲಿ ಹುಲಿ ದಾಳಿಗೆ ಮತ್ತೊಂದು ಬಲಿ: ವ್ಯಾಘ್ರನ ಬಂಧನಕ್ಕೆ ಮುಂದುವರೆದ ಶೋಧ ಕಾರ್ಯ

ಬೆಂಗಳೂರಿನಲ್ಲಿ ಚಿರತೆಗಳ ಗಣತಿಗೆ ಮುಂದಾದ ಅರಣ್ಯ ಇಲಾಖೆ

ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ಚಿರತೆಗಳ ಸಂಖ್ಯೆ ಹೆಚ್ಚಾಗುತ್ತಿರುವ ಆತಂಕ ಹಿನ್ನಲೆ ಬೆಂಗಳೂರಿನ ಸುತ್ತಮುತ್ತ ಅರಣ್ಯ ಪ್ರದೇಶದಲ್ಲಿ ಚಿರತೆಗಳ ಗಣತಿಗೆ ಅರಣ್ಯ ಇಲಾಖೆ ಮುಂದಾಗಿದೆ. ಕಳೆದ ಎರಡು ವಾರದ ಹಿಂದೆಯಷ್ಟೇ ಚಿರತೆ ಪ್ರತ್ಯಕ್ಷವಾಗಿ ಸಾಕಷ್ಟು ಆತಂಕ ಸೃಷ್ಟಿಸಿತ್ತು. ಕೊನೆಗೆ ಅರಣ್ಯ ಇಲಾಖೆ ಹಿಡಿಯುವಲ್ಲಿ ವಿಫಲವಾಗಿ ಶೂಟ್ ಕೂಡಾ ಮಾಡಲಾಯ್ತು. ಆದ್ರೆ ಈಗ ಮತ್ತೆ ಮತ್ತೆ ಸಿಲಿಕಾನ್ ಸಿಟಿಗೆ ಚಿರತೆಗಳು ಬರ್ತಿರೋದರಿಂದ ಚಿರತೆಗಳ ಹಾವಳಿ ಸಿಟಿಗೆ ಹೆಚ್ಚಾಗಿರೋದರಿಂದ ಪ್ರತ್ಯೇಕವಾಗಿ ಚಿರತೆಗಳ ಗಣತಿ ಮಾಡಲು ಅರಣ್ಯ ಇಲಾಖೆ ಮುಂದಾಗಿದೆ.

ಮೈಸೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ