AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಟಾಫಟ್ ಅಂತ ಆನ್​ಲೈನ್​ನಲ್ಲಿ ಲೋನ್ ಸಿಗುತ್ತೆ ಎಂದು ಖುಷಿಯಾಗ್ಬೇಡಿ.. ಸಾಲ ಮಾಡಿದ್ರೆ ಏನಾಗುತ್ತೆ ಅನ್ನೋದನ್ನ ಇಲ್ಲಿ ನೋಡಿ

ಸಾಲ ಸುಲಭವಾಗಿ ಸಿಗುತ್ತದೆ ಅಂದ್ರೆ ಯಾರು ತಾನೇ ಬೇಡ ಅಂತಾರೆ ಹೇಳಿ. ಹೀಗೆ ಆ ಆ್ಯಪ್ ಮೂಲಕ ಮಲೆನಾಡಿನ ಅನೇಕ ಸಣ್ಣ ಪುಟ್ಟ ವ್ಯಾಪಾರಸ್ಥರು ಲೋನ್ ಪಡೆದುಕೊಂಡಿದ್ರು. ಲೋನ್ ಪಡೆದುಕೊಂಡ ಮೇಲೆ ಸಾಲ ತೀರಿಸಿದ್ರೂ ಸಾಲ ಮಾತ್ರ ತೀರುತ್ತಿಲ್ಲ. ಇದರಿಂದ ಸಾಲ ಪಡೆದವರು ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾರೆ.

ಫಟಾಫಟ್ ಅಂತ ಆನ್​ಲೈನ್​ನಲ್ಲಿ ಲೋನ್ ಸಿಗುತ್ತೆ ಎಂದು ಖುಷಿಯಾಗ್ಬೇಡಿ.. ಸಾಲ ಮಾಡಿದ್ರೆ ಏನಾಗುತ್ತೆ ಅನ್ನೋದನ್ನ ಇಲ್ಲಿ ನೋಡಿ
ಸಾಂದರ್ಭಿಕ ಚಿತ್ರ
ಆಯೇಷಾ ಬಾನು
|

Updated on:Apr 13, 2021 | 8:35 AM

Share

ಶಿವಮೊಗ್ಗ: ಅರ್ಜೆಂಟ್‌ ಆಗಿ ದುಡ್ಡು ಸಿಗುತ್ತೆ ಅಂದ್ರೆ ಸಾಕು ಜನ ತಾ ಮುಂದು ನಾ ಮುಂದು ಅಂತ ಬರ್ತಾರೆ. ಅದರಲ್ಲೂ ಈಗೀಗ ಆನ್‌ಲೈನ್ ಲೋನ್ ಆ್ಯಪ್‌ಗಳ ಹಾವಳಿ ಜೋರಾಗಿದೆ. ಒಂದಿಷ್ಟು ಡೀಟೈಲ್ಸ್ ಹಾಕಿದ್ರೆ ಫಟಾ ಫಟ್ ಅಂತ ದುಡ್ಡು ಕೈ ಸೇರುತ್ತೆ. ಹಾಗೇ ಮಲೆನಾಡಿನ ಜನ ಆನ್‌ಲೈನ್‌ ಲೋನ್ ಮಾಡಿ ಈಗ ಹಳ್ಳಕ್ಕೆ ಬಿದ್ದಿದ್ದಾರೆ. ಅಂದಹಾಗೇ ಧನಿ ಎಂಬ ಆ್ಯಪ್‌ ವ್ಯಾಪಾರ ಸಾಲ ಅಂತ 4 ಸಾವಿರದಿಂದ 15 ಲಕ್ಷ ವರಗೆ ಸಾಲ ನೀಡುತ್ತದೆ. ಹಾಗೇ ಶಿವಮೊಗ್ಗದ ಬೊಮ್ಮಕಟ್ಟೆಯ ಸೈಯದ್ ದಾದಾಪೀರ್ ಎಂಬಾತ 2020ರ ಮಾರ್ಚ್​ನಲ್ಲಿ 8000 ಸಾವಿರ ಲೋನ್ ಪಡೆದಿದ್ದ. ಈ ದಾದಾಪೀರ್ ಸಾಲ ಪಡೆದು ಅಸಲು ಬಡ್ಡಿ ಸೇರಿ ಎಲ್ಲವನ್ನೂ ತುಂಬಿದ್ದಾನೆ. ಆದ್ರೂ ಪ್ರತಿ ತಿಂಗಳು ಆತನ ಉಳಿತಾಯ ಖಾತೆಯಿಂದ ಹಣ ಹೋಗುತ್ತಿದೆ. ಧನಿ ಕಂಪನಿಯು ಲೋನ್ ಪಡೆಯುವ ವೇಳೆ ಚೆಕ್ ಮತ್ತು ಇನ್ನಿತರ ದಾಖಲೆಗಳನ್ನು ಇಟ್ಟುಕೊಂಡು ಲೋನ್ ಪಡೆದವರಿಗೆ ಸದ್ಯ ವಂಚನೆ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಶಿವಮೊಗ್ಗ ಬೊಮ್ಮಕಟ್ಟೆ ಬಡಾವಣೆಯಲ್ಲೇ 10 ಕ್ಕೂ ಹೆಚ್ಚು ಜನರು ಧನಿ ಅ್ಯಪ್ ಮೂಲಕ ಸಾಲ ಪಡೆದುಕೊಂಡಿದ್ದಾರೆ. ಹೀಗೆ ನಗರದಲ್ಲಿ ಅನೇಕ ವ್ಯಾಪಾರಸ್ಥರು ಛೋಟಾ ಮತ್ತು ಬಡಾ ಲೋನ್ ಪಡೆದುಕೊಂಡಿದ್ದಾರೆ. ಸಾಲ ಮರುಪಾವತಿ ಮಾಡಿದ್ರೂ ಸಾಲ ಹೊರೆ ಮಾತ್ರ ಕಡಿಮೆಯಾಗುತ್ತಿಲ್ಲ. ಸಾಲ ಪಡೆದಿರುವ ಹಣ ತುಂಬಿದ ಬಳಿಕವು ಸಾಲ ಮುಗಿದಿದೆ ಎನ್ನುವ NOC ಸಾಲಗಾರರಿಗೆ ಧನಿ ಆ್ಯಪ್​ನ ಹಣಕಾಸಿನ ಸಂಸ್ಥೆಯಿಂದ ಸಿಗುತ್ತಿಲ್ಲ. ಇದರಿಂದ ಸಾಲ ಪಡೆದವರಿಗೆ ಸದ್ಯ ದೊಡ್ಡ ತಲೆಬಿಸಿ ಶುರುವಾಗಿದೆ. ಹೀಗೆ ಆನ್ ಲೈನ್ ಮೂಲಕ ಸಾಲದ ವ್ಯವಹಾರ ಮಾಡಿಕೊಂಡು ಅನೇಕರು ಕೈಸುಟ್ಟುಕೊಂಡಿದ್ದಾರೆ.

ಈಗಾಗಲೇ ಮಲೆನಾಡಿನ ಜನ ಆನ್ ಲೈನ್ ಹೆಸರಿನಲ್ಲಿ ಲಕ್ಷ ಲಕ್ಷ ಹಣವನ್ನು ಕಳೆದುಕೊಂಡಿದ್ದಾರೆ. ಈ ನಡುವೆ ಆನ್ ಲೈನ್‌ಲೈನ್‌ ಲೋನ್ ಆ್ಯಪ್‌ ಕಂಪನಿಗಳ ಆಟಕ್ಕೆ ಅಮಾಯಕ ಸಣ್ಣ ಪುಟ್ಟ ವ್ಯಾಪಾರಸ್ಥರು ಬಲಿಪಶುಗಳಾಗುತ್ತಿದ್ದಾರೆ. ಹೀಗಾಗಿ ಈ ಬಗ್ಗೆ ಸೈಬರ್‌ ಕ್ರೈಂ ಪೊಲೀಸರು ಗಮನ ಹರಿಸಬೇಕಿದೆ.

ಇದನ್ನೂ ಓದಿ: ಬ್ಯಾಂಕ್ ನಿಮಗೆ ಲೋನ್ ಕೊಡೋಕೆ ಆಗಲ್ಲ ಅಂತಾ? ಚಿಂತಿಸಬೇಡಿ ಇನ್ನೂ ಒಂದಿಷ್ಟು ದಾರಿಗಳಿವೆ

(Online App Loan Fraud in shivamogga Loan From App Based Lenders Can Hit You Hard)

Published On - 8:35 am, Tue, 13 April 21

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Read More
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?