AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನ್​ಲೈನ್​ ಲೋನ್ ಪಡೆಯುವವರೇ ಎಚ್ಚರ! ಲೋನ್​ ತೀರಿಸಿದರೂ ಬ್ಲಾಕ್ ಮೇಲ್, ಅಶ್ಲೀಲ ಫೋಟೋ ಕಳುಹಿಸಿ ಬೆದರಿಕೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಓರ್ವ ವ್ಯಕ್ತಿ ಸ್ನೇಹಿತರು ಹೇಳಿದ ಮಾತು ಕೇಳಿ ಮೊಬೈಲ್​ನಿಂದ ಆನ್​ಲೈನ್​ನಲ್ಲಿ ಲೋನ್​ ಪಡೆದುಕೊಂಡು ಇದೀಗ ಮೋಸ ಹೋಗಿರುವಂತಹ ಘಟನೆ ನಡೆದಿದೆ. ಲೋನ್​ ಪಡೆದ ಹಣವನ್ನು ಕಟ್ಟಿದರೂ ಕೂಡ ಹೆಚ್ಚಿಗೆ ಹಣ ನೀಡುವಂತೆ ಅಶ್ಲೀಲ ಫೋಟೋ ಕಳುಹಿಸಿ ಬೆದರಿಕೆ ಹಾಕಿದ್ದಾರೆ.

ಆನ್​ಲೈನ್​ ಲೋನ್ ಪಡೆಯುವವರೇ ಎಚ್ಚರ! ಲೋನ್​ ತೀರಿಸಿದರೂ ಬ್ಲಾಕ್ ಮೇಲ್, ಅಶ್ಲೀಲ ಫೋಟೋ ಕಳುಹಿಸಿ ಬೆದರಿಕೆ
ಆನ್​ಲೈನ್​ ಲೋನ್ ಪಡೆಯುವವರೇ ಎಚ್ಚರ! ಲೋನ್​ ತೀರಿಸಿದರೂ ಬ್ಲಾಕ್ ಮೇಲ್, ಅಶ್ಲೀಲ ಫೋಟೋ ಕಳುಹಿಸಿ ಬೆದರಿಕೆ
ನವೀನ್ ಕುಮಾರ್ ಟಿ
| Edited By: |

Updated on: Sep 04, 2024 | 9:29 PM

Share

ದೇವನಹಳ್ಳಿ, ಸೆಪ್ಟೆಂಬರ್​ 04: ಆನ್​ ಲೈನ್​ನ್ನಲ್ಲಿ (Online loan) ನೀವು ಲೋನ್ ತೆಗೆದುಕೊಂಡಿದ್ದಿರಾ? ಈಗಾಗಲೇ ಆ ಲೋನ್ ಕಟ್ಟಿ ಎಲ್ಲವೂ ಸಾಲ ತಿರಿಸಿದ್ದೇವೆ ಅಂತ ಸುಮ್ಮನಾಗಿದ್ದಿರಾ? ಆಗಾದರೆ ಈ ಸ್ಟೋರಿ ಒಮ್ಮೆ ಓದಿ. ಯಾಕಂದ್ರೆ ನೀವು ಸಾಲವಾಗಿ ಪಡೆದ ಹಣ ಕಟ್ಟಿದ್ದರೂ ಮತ್ತೊಮ್ಮೆ ಹಣ ಕಟ್ಟುವಂತೆ ನಿಮಗೆ ಟಾರ್ಚರ್ ನೀಡಿ ನಿಮ್ಮದೆ ಅಶ್ಲೀಲ ಫೋಟೋಗಳನ್ನ ನಿಮ್ಮವರಿಗೆ ಕಳಿಸಿದರು ಅಚ್ಚರಿಯಿಲ್ಲ. ಇಂತಹದೊಂದು ಘಟನೆ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣ ನಿವಾಸಿಯಾದ ಶ್ರೀಕಾಂತ್​ ತನಗೆ ಕಷ್ಟ ಆಗಿದೆ ಅಂತ ಸ್ನೇಹಿತರು ಹೇಳಿದ ಮಾತು ಕೇಳಿ ಮೊಬೈಲ್​ನಿಂದ ಆನ್​ಲೈನ್​ನಲ್ಲಿ ಲೋನ್ ಮಾಡಿದ್ದಾರೆ. ಜೊತೆಗೆ ಆನ್ ಲೈನ್​ ಪೈನಾನ್ಸ್ ಆ್ಯಪ್ ಪ್ಲಾಶ್ ವಾಲೇಟ್ ಪೈನಾನ್ಸ್ನಿಂದ 10 ಸಾವಿರ ಲೋನ್ ಪಡೆದುಕೊಂಡಿದ್ದು ಈತನ ಕುಟುಂಬದ ಮಾಹಿತಿ ಜೊತೆಗೆ ಎಲ್ಲ ವಿವರಗಳನ್ನ ಆನ್ಲೈನ್ನಲ್ಲಿ ಆ್ಯಪ್ ಕೇಳಿದಂತೆ ಅಪಲೋಡ್ ಮಾಡಿದ್ದಾರೆ. ಹೀಗಾಗಿ ಲೋನ್​ ಎಲ್ಲಾ ಪ್ರೋಸಿಸರ್ ಮಾಡಿ ಆನ್ ಲೈನ್ ನಲ್ಲಿ 10 ಸಾವಿರ ರೂ. ಹಣವನ್ನ ಲೋನ್ ಪಡೆದುಕೊಂಡಿದ್ದು ಲೋನ್ ಪಡೆದ ಕೆಲ ತಿಂಗಳಲ್ಲೇ ಬಡ್ಡಿ ಸಮೇತ 20 ಸಾವಿರ ಹಣವನ್ನ ಕ್ಲಿಯರ್ ಸಹ ಮಾಡಿದ್ದಾರೆ.

ಇದನ್ನೂ ಓದಿ: ಕೊಪ್ಪಳ: ಅಂತರ್ಜಾತಿ ವಿವಾಹ, ದಲಿತ ಯುವತಿಗೆ ವಿಷವುಣಿಸಿ ಹತ್ಯೆ

ಆದರೆ ಆನ್ ಲೈನ್​ನಲ್ಲಿ ಪಡೆದ ಹಣವನ್ನ ಬಡ್ಡಿ ಸಮೇತ ಕ್ಲಿಯರ್ ಮಾಡಿದರು ಇನ್ನೂ ಹೆಚ್ಚಿನ ಹಣವನ್ನ ಕೊಡಬೇಕು ಅಂತ ಫೈನಾನ್ಸ್ ಕಡೆಯಿಂದ ಕಿರುಕುಳ ನೀಡ್ತಿದ್ದಾರಂತೆ. ಜೊತಗೆ ಲೋನ್ ಪಡೆದಿದ್ದ ಶ್ರೀಕಾಂತನ ಫೋಟೋಗಳನ್ನ ಅಶ್ಲೀಲವಾಗಿ ಎಡಿಟ್ ಮಾಡಿ ತನ್ನ ಮೊಬೈಲ್ ಕಾಂಟ್ಯಾಕ್ಟ್ ನಲ್ಲಿರುವವರಿಗೆಲ್ಲ ಕಳಿಸುವುದಾಗಿ ಬೆದರಿಕೆ ಹಾಕ್ತಿದ್ದು ತನ್ನ ಎಡಿಟೆಡ್ ಅಶ್ಲೀಲ ಫೋಟೋ ನೋಡಿದ ಯುವಕ ಬೆಚ್ಚಿ ಬಿದ್ದಿದ್ದಾರೆ.

ಇನ್ನೂ ಕೆಲ ಆನ್ಲೈನ್ ಪೋನ್ಗಳಿಂದ ಕಾಲ್ ಮಾಡ್ತಿದ್ದ ಲೋನ್ ಚಿಟಾರ್ಸ್ ಅಶ್ಲೀಲ ಪೊಟೊ ಕಳಿಸಿದ್ದಲ್ಲದೆ ನೀನು ಇನ್ನಷ್ಟು ಹಣ ಕೊಡದೇ ಹೋದ್ರೆ ನಿಮ್ಮ ಕುಟುಂಬಸ್ಥರಿಗೆ ಸ್ನೇಹಿತರಿಗೂ ಕಳಿಸಬೇಕಾಗುತ್ತೆ ಅಂತ ಬೆದರಿಕೆ ಹಾಕ್ತಿದ್ದಾರಂತೆ. ಅಲ್ಲದೆ ಆನ್ ಲೈನ್​ನಲ್ಲಿ ಪಡೆದುಕೊಂಡಿರುವ ಹಣವನ್ನ ಬಡ್ಡಿ ಸಮೇತ ಕಟ್ಟಿರುವ ಸ್ಕೀನ್ ಸಾಟ್ ಫೋಟೋಗಳನ್ನ ಕಳಿಸಿದರು, ಹೆಚ್ಚುವರಿ ಹಣ ನೀಡುವಂತೆ ಕಿರುಕುಳ ನೀಡ್ತಿದ್ದಾರೆ ಅಂತ ಯುವಕ ತನ್ನ ಅಳಲನ್ನ ತೋಡಿಕೊಳ್ತಿದ್ದಾರೆ.

ಅಲ್ಲದೆ ಆನ್ ಲೈನ್ ಲೋನ್ ಕಿರಕುಳದಿಂದ ನೊಂದ ಶ್ರೀಕಾಂತ್ ವಿಜಯಪುರ ಪೊಲೀಸ್ ಠಾಣೆಯಲ್ಲಿ ಲೋನ್ ನೀಡಿ ಬ್ಲಾಕ್ಮೈಲ್ ಮಾಡಿದ್ದ ಫೈನಾನ್ಸ್ ವಿರುದ್ದ ದೂರು ಸಹ ದಾಖಲು ಮಾಡಿದ್ದು ತನಗೆ ನ್ಯಾಯ ಕೊಡಿಸಿ ಅಂತ ಒತ್ತಾಯಿಸಿದ್ದಾನೆ.

ಇದನ್ನೂ ಓದಿ: ಚಿಕ್ಕಮಗಳೂರು: ಅನಿವಾಸಿ ಭಾರತೀಯ ವೈದ್ಯೆ ಮೇಲೆ ಯೋಗ ಗುರು ಅತ್ಯಾಚಾರ ಪ್ರಕರಣ, ಎಫ್​ಐಆರ್​ನಲ್ಲಿ ಅಚ್ಚರಿಯ ಮಾಹಿತಿ

ಒಟ್ಟಾರೆ ಸಂಕಷ್ಟದ ಸಮಯದಲ್ಲಿ ಸಹಾಯವಾಗುತ್ತೆ ಅಂತ ಪಡೆದಿದ್ದ ಲೋನ್ ಅನ್ನ ಬಡ್ಡಿ ಸಮೇತ ವಾಪಸ್ ಕಟ್ಟಿದ್ರು ಹೆಚ್ಚಿನ ಹಣಕ್ಕೆ ಕಿಡಿಗೇಡಿಗಳು ಬೇಡಿಕೆಯಿಟ್ಟು ಕಿರುಕುಳ ನೀಡ್ತಿರುವುದು ಆನ್ ಲೈನ್ ಲೋನ್ ಪಡೆದವರಿಗೆ ಸಂಕಷ್ಟವನ್ನ ತಂದೊಡ್ಡಿದೆ. ಇನ್ನೂ ಇತ್ತೀಚೆಗೆ ಈ ರೀತಿಯ ಆನ್ ಲೈನ್ ವಂಚನೆ ಮತ್ತು ಆ್ಯಪ್ ಕಿರುಕುಳದ ಕೇಸ್​ಗಳು ಸಹ ಹೆಚ್ಚಾಗ್ತಿದ್ದು ಪೊಲೀಸರು ಇಂತವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಿದೆ.

ರಾಜ್ಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
Naveen Kumar
Naveen Kumar

ನವೀನ್ ಕುಮಾರ್ ಟಿ ಎಂಬ ನಾನು ಮೂಲತಃಹ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿಯಾಗಿದ್ದು ಕಳೆದ 9 ವರ್ಷಗಳಿಂದ ನಮ್ಮ ಹೆಮ್ಮೆಯ ಟಿವಿನೈನ್ ನ ದೇವನಹಳ್ಳಿ ಬೆಂಗಳೂರು ಗ್ರಾಮಾತರ ಜಿಲ್ಲಾ ವರದಿಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಎಂಎಸ್ಸಿ ಎಲೆಕ್ಟ್ರಾನಿಕ್ ಮೀಡಿಯಾ ವ್ಯಾಸಾಂಗ ಮಾಡಿರುವ ನಾನು ಪದವಿ ಮುಗಿಯುತ್ತಿದ್ದಂತೆ ಟಿವಿನೈನ್ ನಲ್ಲಿ ವರದಿಗಾರನಾಗಿ ಉದ್ಯೋಗಕ್ಕೆ ಸೇರಿದ್ದು ಆರು ತಿಂಗಳ ಕಾಲ ಮುಖ್ಯ ಕಛೇರಿಯಲ್ಲಿ ಕೆಲಸ ಮಾಡಿದ್ದೇನೆ. ಜೊತೆಗೆ ಸಂಸ್ಥೆ ನೀಡಿದ ಮಹತ್ವದ ವರದಿಗಾರನ ಉದ್ದೇಯನ್ನ ಪಡೆದು ಕಳೆದ 9 ವರ್ಷದಿಂದ ಸಿಲಿಕಾನ್ ಸಿಟಿ ಹೊರ ವಲಯದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ದೊಡ್ಡಬಳ್ಳಾಪುರ ಹೊಸಕೋಟೆ ಮತ್ತು ನಗರ ಜಿಲ್ಲೆಯ ಯಲಹಂಕ ಭಾಗದ ಸುದ್ದಿಗಳನ್ನ ವರದಿ ಮಾಡುತ್ತಾ ವರದಿಗಾರನಾಗಿ ಕೆಲಸ ಮಾಡ್ತಿದ್ದೀನಿ. ಪ್ರಮುಖವಾಗಿ ದೇಶದ ಟಾಪ್ 3 ನಲ್ಲಿ ಹೆಸರು ಪಡೆದು ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ಪ್ರಮುಖ ಸುದ್ದಿಗಳು ರಾಜಕೀಯ ಹಾಗೂ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ನಡೆಯುವ ಕ್ರೈಂ ಸೇರಿದಂತೆ ಇತರೆ ಸುದ್ದಿಗಳನ್ನ ವರದಿ ಮಾಡುತ್ತಾ ಎಕ್ಸಕ್ಲೂಸಿವ್ ವರದಿಗಳನ್ನ ನೀಡುತ್ತಾ ಬಂದಿದ್ದೇನೆ.

Read More
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?