AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಪೊಲೀಸ್ ಶ್ವಾನಗಳ ಆರೋಗ್ಯಕ್ಕಾಗಿ ಬೃಹತ್ ಪಾರ್ಕ್​ ಉದ್ಘಾಟನೆ

ಬೆಂಗಳೂರು: ಒತ್ತಡಗಳ ಮಹಾನಗರವಾಗಿ ಮಾರ್ಪಟ್ಟು ಯಾವುದೋ ಕಾಲವಾಯ್ತು. ಇಲ್ಲಿನ ಜನರಂತೂ ಒತ್ತಡಗಳ ಮಧ್ಯೆಯೇ ಧಾವಂತದ ಜೀವನ ನಡೆಸುತ್ತಿದ್ದಾರೆ. ಇನ್ನು, ಪೊಲೀಸರು ಅಷ್ಟೆ. ಭಾರೀ ಒತ್ತಡದ ನಡುವೆಯೇ ಸೇವಾನಿರತರಾಗಿದ್ದಾರೆ. ಇವರಿಗೆ ಸಾಥ್​ ನೀಡುವ ಶ್ವಾನಗಳೂ ಇತ್ತೀಚೆಗೆ ಒತ್ತಡಕ್ಕೆ ಸಿಲುಕಿವೆ ಎಂಬ ದೂರು ಆಗಾಗ ಕೇಳಿಬರುತ್ತಲೇ ಇತ್ತು. ಆದ್ರೆ ಇತ್ತೀಚೆಗೆ ಶ್ವಾನ ಮನೋ ವೈದ್ಯ ತಜ್ಞ, ಡಾಗ್‌ ಗುರು ಅಮೃತ್‌ ಪೊಲೀಸ್ ಡಿಪಾರ್ಟ್​ಮೆಂಟ್​ಗೆ ಉಚಿತ ಸಲಹೆಯೊಂದನ್ನು ನೀಡಿದ್ದು, ಬೆಂಗಳೂರಲ್ಲಿ ಶ್ವಾನಗಳು ಚಟುವಟಿಕೆಯಿಂದ ಇರಬೇಕು ಅಂದ್ರೆ ಮೊದಲು ಅವುಗಳಿಗಾಗಿಯೇ ಒಂದು ಪ್ರತ್ಯೇಕ […]

ಬೆಂಗಳೂರಿನಲ್ಲಿ ಪೊಲೀಸ್ ಶ್ವಾನಗಳ ಆರೋಗ್ಯಕ್ಕಾಗಿ ಬೃಹತ್ ಪಾರ್ಕ್​ ಉದ್ಘಾಟನೆ
Follow us
ಸಾಧು ಶ್ರೀನಾಥ್​
|

Updated on:May 26, 2020 | 2:56 PM

ಬೆಂಗಳೂರು: ಒತ್ತಡಗಳ ಮಹಾನಗರವಾಗಿ ಮಾರ್ಪಟ್ಟು ಯಾವುದೋ ಕಾಲವಾಯ್ತು. ಇಲ್ಲಿನ ಜನರಂತೂ ಒತ್ತಡಗಳ ಮಧ್ಯೆಯೇ ಧಾವಂತದ ಜೀವನ ನಡೆಸುತ್ತಿದ್ದಾರೆ. ಇನ್ನು, ಪೊಲೀಸರು ಅಷ್ಟೆ. ಭಾರೀ ಒತ್ತಡದ ನಡುವೆಯೇ ಸೇವಾನಿರತರಾಗಿದ್ದಾರೆ. ಇವರಿಗೆ ಸಾಥ್​ ನೀಡುವ ಶ್ವಾನಗಳೂ ಇತ್ತೀಚೆಗೆ ಒತ್ತಡಕ್ಕೆ ಸಿಲುಕಿವೆ ಎಂಬ ದೂರು ಆಗಾಗ ಕೇಳಿಬರುತ್ತಲೇ ಇತ್ತು.

ಆದ್ರೆ ಇತ್ತೀಚೆಗೆ ಶ್ವಾನ ಮನೋ ವೈದ್ಯ ತಜ್ಞ, ಡಾಗ್‌ ಗುರು ಅಮೃತ್‌ ಪೊಲೀಸ್ ಡಿಪಾರ್ಟ್​ಮೆಂಟ್​ಗೆ ಉಚಿತ ಸಲಹೆಯೊಂದನ್ನು ನೀಡಿದ್ದು, ಬೆಂಗಳೂರಲ್ಲಿ ಶ್ವಾನಗಳು ಚಟುವಟಿಕೆಯಿಂದ ಇರಬೇಕು ಅಂದ್ರೆ ಮೊದಲು ಅವುಗಳಿಗಾಗಿಯೇ ಒಂದು ಪ್ರತ್ಯೇಕ ಉದ್ಯಾನವನ ನಿರ್ಮಿಸುವ ಅನಿವಾರ್ಯತೆಯಿದೆ ಎಂದಿದ್ದರು. ಅದರಂತೆ “ಶ್ವಾನ ಚಟುವಟಿಕೆ ಉದ್ಯಾನವನ” ನಿರ್ಮಾಣವಾಗಿದ್ದು, ಇಂದು ಉದ್ಘಾಟನೆ ಭಾಗ್ಯವನ್ನೂ ಕಂಡಿದೆ.

ಭಯೋತ್ಪಾದಕ ಕೃತ್ಯ ವಿಫಲಗೊಳಿಸುವ, ಮಟ್ಟಹಾಕುವ ಬಗ್ಗೆ ತರಬೇತಿ ನೀಡುವ ಮತ್ತು ಸ್ವಯಂ ಅವುಗಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಶ್ವಾನ ಚಟುವಟಿಕೆ ಉದ್ಯಾನವನ ನಿರ್ಮಾಣವಾಗಿದ್ದು, ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್​ ರಾವ್ ಇಂದು ಉದ್ಘಾಟನೆ ಮಾಡಿದ್ದಾರೆ.

₹2.5 ಕೋಟಿ ಅನುದಾನದಲ್ಲಿ ಉದ್ಯಾನವನ ನಿರ್ಮಾಣ: ಒಟ್ಟು 2.5 ಕೋಟಿ ಅನುದಾನದಲ್ಲಿ ಶ್ವಾನ ಚಟುವಟಿಕೆ ಉದ್ಯಾನವನ ನಿರ್ಮಾಣವಾಗಿದ್ದು, ಜರ್ಮನ್ ಶಫರ್ಡ್, ಬೆಲ್ಜಿಯಂ ಶೆಫರ್ಡ್, ಗೋಲ್ಡನ್ ರಿಟ್ರಿವರ್ ಹಾಗೂ ಡಾಬರ್ ಮೆನ್ ತಳಿಯ 50 ಶ್ವಾನಗಳಿಗೆ ಇಲ್ಲಿ ತರಬೇತಿ ನೀಡಲಾಗುತ್ತದೆ. ಇದೇ ಸಂದರ್ಭದಲ್ಲಿ, ಪ್ರಪ್ರಥಮ ಬಾರಿಗೆ ಪೊಲೀಸ್‌ ಶ್ವಾನ ತಂಡದಿಂದ ಭಯೋತ್ಪಾದನಾ ಕೃತ್ಯ ಪತ್ತೆ ಹಚ್ಚುವಿಕೆ ಕುರಿತು ಪ್ರದರ್ಶನ ಏರ್ಪಡಿಸಲಾಗಿತ್ತು.

ಇದೊಂದು ವಿನೂತನ ತರಬೇತಿ ಹೊಂದಿರುವ ಶ್ವಾನದಳವಾಗಿದೆ. ನಗರದಲ್ಲಿ ಯಾವುದೆ ಘಟನೆಗೆ ಈ ಶ್ವಾನಗಳು ಸಿದ್ಧವಾಗಿದೆ. ಮಾದಕ ವಸ್ತುಗಳ ಪತ್ತೆ, ಆರೋಪಿಗಳ ಪತ್ತೆಗೆ ಸಹಕಾರ ಸೇರಿದಂತೆ ಇನ್ನಿತರ ಬಗ್ಗೆಯೂ ತರಬೇತಿ ಪಡೆದ ಶ್ವಾನಗಳನ್ನ ಪ್ರದರ್ಶನ ಮಾಡಲಾಯ್ತು. ದ್ರೋಣ ಪೂಜಾ ಮಿಂಚು ಸೇರಿ ಒಟ್ಟು 10 ಕ್ಕೂ ಹೆಚ್ಚು ಶ್ವಾನಗಳ ಪ್ರದರ್ಶನ ಮಾಡಲಾಯ್ತು.

Published On - 2:07 pm, Tue, 26 May 20

ಇಂದಿನಿಂದ ಚಾರ್​ ಧಾಮ್ ಯಾತ್ರೆ ಆರಂಭ, ಬಾಗಿಲು ತೆರೆದ ಕೇದಾರನಾಥ ದೇವಾಲಯ
ಇಂದಿನಿಂದ ಚಾರ್​ ಧಾಮ್ ಯಾತ್ರೆ ಆರಂಭ, ಬಾಗಿಲು ತೆರೆದ ಕೇದಾರನಾಥ ದೇವಾಲಯ
Daily Devotional: ಅಂಗೈ ಬಣ್ಣ ಬೇರೆ ಬೇರೆಯಾಗಿದ್ದರೆ ಏನೇನು ಅರ್ಥ?
Daily Devotional: ಅಂಗೈ ಬಣ್ಣ ಬೇರೆ ಬೇರೆಯಾಗಿದ್ದರೆ ಏನೇನು ಅರ್ಥ?
Daily horoscope: ಈ ರಾಶಿಯವರಿಗೆ ಇಂದು ಸಂತೋಷದ ದಿನವಾಗಿರುತ್ತದೆ
Daily horoscope: ಈ ರಾಶಿಯವರಿಗೆ ಇಂದು ಸಂತೋಷದ ದಿನವಾಗಿರುತ್ತದೆ
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ: ಸ್ಫೋಟಕ ಅಂಶ ಬಹಿರಂಗ
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ: ಸ್ಫೋಟಕ ಅಂಶ ಬಹಿರಂಗ
ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು