AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಸ್ರೋ ಕೇಂದ್ರಕ್ಕೆ ಭೇಟಿ ವೇಳೆ ನಯವಾಗಿ ರಾಜಕಾರಣ ದೂರವಿಟ್ಟ ಪ್ರಧಾನಿ ಮೋದಿ; ಗಮನಿಸಲೇಬೇಕಾದ ಅಂಶಗಳು ಇಲ್ಲಿವೆ

PM Modi ISRO Visit; ಹೆಚ್​ಎಎಲ್​ ಏರ್ಪೋರ್ಟ್​ಗೆ ಬಂದಿಳಿದಾಗ ಮೋದಿ ಅವರ ಸ್ವಾಗತಕ್ಕೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಅಧಿಕಾರಿಗಳು ಹಾಗೂ ವಿಜ್ಞಾನಿಗಳಷ್ಟೇ ಇದ್ದರು. ಹೆಚ್​ಎಎಲ್​ ಏರ್ಪೋರ್ಟ್ ಹೊರಭಾಗದಲ್ಲಿ ಬಿಜೆಪಿ ನಾಯಕರು ಕಾದುಕುಳಿತಿದ್ದರೂ ಅವರನ್ನು ಅಧಿಕೃತವಾಗಿ ಭೇಟಿಯಾಗಲಿಲ್ಲ.

ಇಸ್ರೋ ಕೇಂದ್ರಕ್ಕೆ ಭೇಟಿ ವೇಳೆ ನಯವಾಗಿ ರಾಜಕಾರಣ ದೂರವಿಟ್ಟ ಪ್ರಧಾನಿ ಮೋದಿ; ಗಮನಿಸಲೇಬೇಕಾದ ಅಂಶಗಳು ಇಲ್ಲಿವೆ
ಬೆಂಗಳೂರಿನಲ್ಲಿ ಮೋದಿ
TV9 Web
| Edited By: |

Updated on:Aug 26, 2023 | 11:13 AM

Share

ಬೆಂಗಳೂರು, ಆಗಸ್ಟ್ 26: ಚಂದ್ರಯಾನ-3 ರ ಯಶಸ್ಸಿನ ನಿಮಿತ್ತ ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೋ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ (Narendra Modi), ರಾಜಕೀಯದಿಂದ ಬಹಳ ಅಂತರ ಕಾಯ್ದುಕೊಂಡಿದ್ದು ಅವರ ನಡೆ, ನುಡಿಗಳಿಂದ ಸ್ಪಷ್ಟವಾಗಿದೆ. ಒಂದೆಡೆ, ಚಂದ್ರಯಾನ-3 ರ ಯಶಸ್ಸಿನ ಶ್ರೇಯಸ್ಸನ್ನು ತಮ್ಮದಾಗಿಸಿಕೊಳ್ಳಬೇಕು ಎಂಬ ಧಾವಂತ ರಾಜಕೀಯ ಪಕ್ಷಗಳ ನಡುವೆ ಕಂಡುಬಂದಿದೆ. ಸಾಮಾಜಿಕ ಮಾಧ್ಯಮಗಳಲ್ಲಿ, ಜಾಹೀರಾತುಗಳ ಮೂಲಕ ಅದು ವ್ಯಕ್ತವಾಗಿದೆ. ಬೆಂಗಳೂರಿಗೆ ಬರುವ ಪ್ರಧಾನಿ ರಾಜಕೀಯ ಲಾಭಕ್ಕೆ ಅದನ್ನು ಬಳಸಿಕೊಳ್ಳಬಹುದು ಎಂಬ ನಿರೀಕ್ಷೆ ಸಹಜವಾಗಿಯೇ ಕಾಂಗ್ರೆಸ್ಸಿಗರಲ್ಲಿಯೂ ಇತ್ತು. ಆದರೆ, ಸರ್ಕಾರಿ ಕಾರ್ಯಕ್ರಮವಾದದ್ದರಿಂದ ಸಾಕಷ್ಟು ಎಚ್ಚರಿಕೆಯ ಹೆಜ್ಜೆ ಇಟ್ಟ ಪ್ರಧಾನಿ, ಎಲ್ಲಿಯೂ ತಮ್ಮ ಬೆಂಗಳೂರು ಭೇಟಿ ವೇಳೆ ರಾಜಕೀಯಕ್ಕೆ ಆಸ್ಪದ ನೀಡಲೇ ಇಲ್ಲ.

ಹೆಚ್​ಎಎಲ್​ ಏರ್ಪೋರ್ಟ್​ಗೆ ಬಂದಿಳಿದಾಗ ಮೋದಿ ಅವರ ಸ್ವಾಗತಕ್ಕೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಅಧಿಕಾರಿಗಳು ಹಾಗೂ ವಿಜ್ಞಾನಿಗಳಷ್ಟೇ ಇದ್ದರು. ಹೆಚ್​ಎಎಲ್​ ಏರ್ಪೋರ್ಟ್ ಹೊರಭಾಗದಲ್ಲಿ ಬಿಜೆಪಿ ನಾಯಕರು ಕಾದುಕುಳಿತಿದ್ದರೂ ಅವರನ್ನು ಅಧಿಕೃತವಾಗಿ ಭೇಟಿಯಾಗಲಿಲ್ಲ. ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ, ಶಾಸಕರಾದ ಭೈರತಿ ಬಸವರಾಜ, ಮಂಜುಳಾ, ಛಲವಾದಿ ನಾರಾಯಣಸ್ವಾಮಿ ಇವರು ಏರ್​​ಪೋರ್ಟ್ ಮುಂಭಾಗ ಜನರ ಜತೆ ಧ್ವಜ ಹಿಡಿದು ಸ್ವಾಗತಿಸಿದರೆ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಲಹಳ್ಳಿ ಕ್ರಾಸ್​​ನಲ್ಲಿ ರಸ್ತೆ ಬದಿ ನಿಂತು ಸ್ವಾಗತ ಕೋರಿದರು. ಇದೇ ವೇಳೆ, ಶಾಸಕರಾದ ಆರ್.ಅಶೋಕ್, ಡಾ.ಅಶ್ವತ್ಥ್​​ ನಾರಾಯಣ, ಮುನಿರತ್ನ, ಕೆ.ಗೋಪಾಲಯ್ಯ, ಎಂ.ಕೃಷ್ಣಪ್ಪ ಹಾಗೂ ಎಸ್.ಆರ್.ವಿಶ್ವನಾಥ್ ಕೂಡ ಇದ್ದರು. ಇಷ್ಟು ಬಿಟ್ಟರೆ ಯಾವೊಬ್ಬ ಬಿಜೆಪಿ ನಾಯಕನನ್ನೂ ದೆಹಲಿಗೆ ವಾಪಸಾಗುವ ವರೆಗೂ ಮೋದಿ ಭೇಟಿಯಾಗಲೇ ಇಲ್ಲ.

ಜೈ ಮೋದಿ ಎಂದಾಗ ಜೈ ವಿಜ್ಞಾನ್ ಎಂದ ಪ್ರಧಾನಿ

ಹೆಚ್​ಎಎಲ್​ ಏರ್ಪೋರ್ಟ್​​ನಿಂದ ಹೊರಬರುತ್ತಿದ್ದಂತೆಯೇ ತುಸು ಹೊತ್ತು ಅಲ್ಲಿದ್ದ ಜನರನ್ನು ಉದ್ದೇಶಿಸಿ ಮಾತನಾಡಲು ಮೋದಿ ಮುಂದಾದರು. ಅಷ್ಟರಲ್ಲಿ ಅಲ್ಲಿದ್ದವರು ಜೈ ಮೋದಿ ಎಂಬ ಘೋಷಣೆ ಕೂಗಲು ಮುಂದಾದರು. ತಕ್ಷಣವೇ ಮಧ್ಯ ಪ್ರವೇಶಿಸಿದ ಮೋದಿ, ‘ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್, ಜೈ ಅನುಸಂಧಾನ್’ ಘೋಷಣೆ ಕೂಗಿದರು. ಅದೇ ರೀತಿ ಹೇಳುವಂತೆ ಜನರನ್ನು ಪ್ರೇರೇಪಿಸಿದರು. ಆ ಮೂಲಕ ‘ನಿಮ್ಮ ಘೋಷಣೆ ನನಗಲ್ಲ, ವಿಜ್ಞಾನಕ್ಕೆ ಹಾಗೂ ವಿಜ್ಞಾನಿಗಳಿಗೆ ಸಲ್ಲಬೇಕಾದ್ದು’ ಎಂದು ಪರೋಕ್ಷವಾಗಿ ಸಾರಿದರು.

ಇದನ್ನೂ ಓದಿ: PM Modi ISRO Visit: ಪ್ರಧಾನಿ ಮೋದಿ ಸ್ವಾಗತಕ್ಕೆ ಸಿಎಂ ಸಿದ್ದರಾಮಯ್ಯ, ರಾಜ್ಯಪಾಲರು ಹೋಗದ್ದೇಕೆ? ಇಲ್ಲಿದೆ ಕಾರಣ

ಇನ್ನು, ಮೋದಿ ಸ್ವಾಗತಕ್ಕೆ ಬಂದ ನಾಯಕರು, ಸಾರ್ವಜನಿಕರ ಬಳಿ ರಾಷ್ಟ್ರಧ್ವಜಗಳೇ ಇರುವಂತೆ ನೋಡಿಕೊಳ್ಳಲಾಗಿತ್ತು. ಬಿಜೆಪಿ ಧ್ವಜ ಯಾರ ಬಳಿಯೂ ಇರದಂತೆ ನೋಡಿಕೊಳ್ಳಲಾಗಿತ್ತು. ಒಂದು ಹಂತದಲ್ಲಿ ಮೋದಿ ಅವರ ಇಸ್ರೋ ಭೇಟಿ ವೇಳೆ ರೋಡ್ ಶೋ ನಡೆಸಲು ಬಿಜೆಪಿ ಉದ್ದೇಶಿಸಿತ್ತಾದರೂ ಅದಕ್ಕೆ ಎಸ್​​ಪಿಜಿ ಅನುಮತಿ ಸಿಗಲಿಲ್ಲ.

ಇಸ್ರೋ ಕೇಂದ್ರದಲ್ಲಿ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಚಂದ್ರಯಾನ-3 ರ ಯಶಸ್ಸಿನ ಸಂಪೂರ್ಣ ಶ್ರೇಯಸ್ಸನ್ನು ವಿಜ್ಞಾನಿಗಳಿಗೆ ನೀಡಿದರು. ಜತೆಗೆ, ನಿಮ್ಮ ಜತೆ ಸರ್ಕಾರ ಇದೆ ಎಂಬ ಭರವಸೆಯ ಮಾತುಗಳನ್ನಾಡಿದರು. ಅಲ್ಲಿಂದ ಹೆಚ್​​ಎಎಲ್​ಗೆ ಹಿಂತಿರುಗಿ ದೆಹಲಿಗೆ ವಾಪಸ್ ಆಗುವ ಮಾರ್ಗದಲ್ಲಿಯೂ ಅಷ್ಟೆ, ಮೋದಿ ಅವರು ಬಿಜೆಪಿ ನಾಯಕರನ್ನು ಭೇಟಿಯಾಗಲಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:09 am, Sat, 26 August 23

Follow Us
Web contact
Web contact

TV9 Kannada

Read More
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?