AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸವರ್ಷ ಆಚರಣೆಗೆ 50-50 ರೂಲ್ಸ್​: ಬ್ಯಸಿನೆಸ್​ಗೆ ಹೊಡೆತ ಬೀಳಲಿದೆ ಎಂದು ಆತಂಕಗೊಂಡ ಪಬ್​ ಮಾಲೀಕರು

ಈಗಾಗಲೇ ಡಿಜೆ ಗೆ ಮುಂಗಡ ಹಣ ಪಾವತಿ ಮಾಡಿಯಾಗಿದೆ. ಆದರೆ ಈಗ ಸರ್ಕಾರ ಬ್ಯಾನ್ ಮಾಡಿರುವ ಕಾರಣ ಬ್ಯುಸಿನೆಸ್ ಗೆ ಹೊಡೆತ ಬೀಳಲಿದೆ. ಶೇ.50 ರಷ್ಟು ಮಾತ್ರ ವಾಪಸ್ ಹಣ ಬರುತ್ತೆ. 50-50 ರೂಲ್ಸ್ ಇದೆ ಜನ ಕೂಡಾ ಬರುವುದಿಲ್ಲ.

ಹೊಸವರ್ಷ ಆಚರಣೆಗೆ 50-50 ರೂಲ್ಸ್​: ಬ್ಯಸಿನೆಸ್​ಗೆ ಹೊಡೆತ ಬೀಳಲಿದೆ ಎಂದು ಆತಂಕಗೊಂಡ ಪಬ್​ ಮಾಲೀಕರು
ಸಾಂಕೇತಿಕ ಚಿತ್ರ
TV9 Web
| Edited By: |

Updated on:Dec 21, 2021 | 6:06 PM

Share

2021 ಮುಗಿದು ಹೊಸವರ್ಷ ಆಗಮಿಸುತ್ತಿದೆ. ಇದರ ನಡುವೆ ಕೊರೋನಾ, ಒಮಿಕ್ರಾನ್​ ಸೋಂಕು ಸಂಭ್ರಮಾಚರಣೆಗೆ ಬ್ರೇಕ್​ ಹಾಕಿದೆ. ಈ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ 50-50ಗೈಡ್​ಲೈನ್ಸ್ ಹೊರಡಿಸಿದೆ. ಹೆಚ್ಚು ಜನರು ಸೇರುವಂತಿಲ್ಲ, ಪಬ್​, ಬಾರ್​ಗಳಲ್ಲಿ ಶೇ.50ರಷ್ಟು ಜನರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಸಿಬ್ಬಂದಿಗೆ 2 ಡೋಸ್​ ವ್ಯಾಕ್ಸಿನೇಷನ್​ ಕಡ್ಡಾಯ ಮಾಡಲಾಗಿದೆ. ಈ ಬಗ್ಗೆ ಪಬ್​ ಮಾಲೀಕರು ಕಂಗಾಲಾಗಿದ್ದಾರೆ. ಈಗಾಗಲೇ ಡಿಜೆ ಗೆ ಮುಂಗಡ ಹಣ ಪಾವತಿ ಮಾಡಿಯಾಗಿದೆ. ಆದರೆ ಈಗ ಸರ್ಕಾರ ಬ್ಯಾನ್ ಮಾಡಿರುವ ಕಾರಣ ಬ್ಯುಸಿನೆಸ್ ಗೆ ಹೊಡೆತ ಬೀಳಲಿದೆ. ಶೇ.50 ರಷ್ಟು ಮಾತ್ರ ವಾಪಸ್ ಹಣ ಬರುತ್ತೆ. 50-50 ರೂಲ್ಸ್ ಇದೆ ಜನ ಕೂಡಾ ಬರುವುದಿಲ್ಲ. ಜತೆಗೆ ಸರ್ಕಾರ ಎಂ.ಜಿ ರೋಡ್ ಬ್ರಿಗೇಡ್ ರೋಡ್ ಎಂದು ಪ್ರಾಮುಖ್ಯತೆ ನೀಡಿ ನಿರ್ಬಂಧ ವಿಧಿಸಿರುವ ಕಾರಣ ಲಾಸ್ ಆಗಲಿದೆ ಎಂದು ಬ್ರಿಗೇಡ್ ರೋಡ್ ನಲ್ಲಿರುವ ಪಬ್ ಮ್ಯಾನೇಜರ್​ ಜಿಸಿಕಾ ಟಿವಿ9 ನೊಂದಿಗೆ ಮಾತನಾಡುವ ವೇಳೆ ಹೇಳಿದ್ದಾರೆ.

ಇನ್ನು ಈ ನಡುವೆ ಸರ್ಕಾರದ ಹೊಸವರ್ಷ ಆಚರಣೆಗೆ ಬ್ರೇಕ್​ ಹಾಕಿರುವ ನಿಯಮಗಳನ್ನು ಹೆಣ್ಣುಮಕ್ಕಳು ಸ್ವಾಗತಿಸಿದ್ದಾರೆ. ನಮ್ಮ ಸೇಫ್ಟಿಗೆ ಸರ್ಕಾರ ಆದೇಶ ಹೊರಡಿಸಿದೆ. ಅಲ್ಲದೆ ಕೊರೊನಾ ಸೋಂಕು ಹರಡುವ ಭಯವಿದೆ ಹೀಗಾಗಿ ಸರ್ಕಾರದ ನಿರ್ಧಾರ ಒಳ್ಳೆಯದಿದೆ. ನಾವು ಕೂಡಾ ಫ್ಯಾಮಿಲಿ ಜತೆ ಸೆಲೆಬ್ರೆಶನ್ ಮಾಡುತ್ತೇವೆ ಎಂದಿದ್ದಾರೆ.

ಹೊಸವರ್ಷದ ಆಚರಣೆ ಕುರಿತು ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಡಿಸೆಂಬರ್ 30ರಿಂದ ಜನವರಿ 02 ರವರೆಗೆ ಸಾಮೂಹಿಕ ಸಮಾರಂಭಗಳಿಗೆ ನಿರ್ಬಂಧ ಹೇರಿ ಆದೆಶ ಹೊರಡಿಸಿದ್ದಾರೆ. ಮುಖ್ಯವಾಗಿ ಬೆಂಗಳೂರಿನ ಎಂ.ಜಿ ರೋಡ್ ಬ್ರಿಗೇಡ್ ರೋಡ್ ಗಳಲ್ಲಿ ಜನರು ಗುಂಪುಗೂಡದಂತೆ ಆದೇಶ ಹೊರಡಿಸಲಾಗಿದೆ. ಆದರೆ ಕ್ರಿಸ್​ಮಸ್​ ಸಮಯದಲ್ಲಿ ಚರ್ಚ್ ಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ:

New Year 2022 Guidelines: ಹೊಸ ವರ್ಷಾಚರಣೆ, ಕ್ರಿಸ್​ಮಸ್​ ಆಚರಣೆಗೆ ಸರ್ಕಾರದ ಮಾರ್ಗಸೂಚಿ ಪ್ರಕಟ

Published On - 6:05 pm, Tue, 21 December 21

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್