AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚನ್ನಪಟ್ಟಣ ಬೊಂಬೆಗೆ ಅಪ್ಘಾನಿಸ್ತಾನ ಫಿದಾ! ಬೊಂಬೆ ತಯಾರಿಕೆ ನೋಡಲು ಬಂದ ಕೌನ್ಸಿಲರ್

ಗೊಂಬೆಗಳೆಂದರೆ ನೆನಪಾಗುವುದು ಕರ್ನಾಟಕದ ರಾಮನಗರ ಜಿಲ್ಲೆಯ ಚನ್ನಪಟ್ಟಣ. ಇಲ್ಲಿ ತಯಾರಿಸುವ ಗೊಂಬೆಯ ನಯ, ನಾಜೂಕಿಗೆ ಮರುಳಾಗದವರೇ ಇಲ್ಲ. ಅಮೆರಿಕ, ಬ್ರಿಟನ್‌, ಶ್ರೀಲಂಕಾ ದೇಶಗಳ ಪ್ರಧಾನಿಗಳೂ ಇವುಗಳಿಗೆ ಮನಸೋತಿದ್ದಾರೆ. ಹಳ್ಳಿಯಿಂದ ದಿಲ್ಲಿಯವರೆಗೆ ಜನಪ್ರೀತಿ ಗಳಿಸಿರುವ ಈ ಬೊಂಬೆಗಳ ಪರಂಪರೆಯೇ ರೋಚಕವಾಗಿದೆ. ಚನ್ನಪಟ್ಟಣ ಬೊಂಬೆ ಕೇವಲ ನೋಡುವುದಕ್ಕೆ ಮಾತ್ರ ಚಂದವಲ್ಲ. ಮಕ್ಕಳ ಮನ ಬದಲಾಯಿಸುವ ಗುಣ ಈ ಚನ್ನಪಟ್ಟಣಗಳ ಗೊಂಬೆಗಳಲ್ಲಿದೆ. ಅಚ್ಚರಿ ಎನ್ನಿಸಿದರೂ ಸತ್ಯ.

ಚನ್ನಪಟ್ಟಣ ಬೊಂಬೆಗೆ ಅಪ್ಘಾನಿಸ್ತಾನ ಫಿದಾ! ಬೊಂಬೆ ತಯಾರಿಕೆ ನೋಡಲು ಬಂದ ಕೌನ್ಸಿಲರ್
ಬೊಂಬೆ ನಿರ್ಮಾಣ‌ ವೀಕ್ಷಣೆ ಮಾಡುತ್ತಿರುವ ಕೌನ್ಸಿಲರ್ ಜಾಕಿಯಾ ವರ್ದಕ್
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Updated By: ಗಂಗಾಧರ​ ಬ. ಸಾಬೋಜಿ|

Updated on:Feb 28, 2024 | 8:55 PM

Share

ರಾಮನಗರ, ಫೆಬ್ರವರಿ 28: ಚನ್ನಪಟ್ಟಣದ ಗೊಂಬೆ (Channapatna Dolls) ಕೇವಲ ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ಜನಪ್ರೀತಿ ಗಳಿಸಿದೆ. ವಿವಿಧ ದೇಶದ ಗಣ್ಯ ವ್ಯಕ್ತಿಗಳಿಗೆ ಈ ಚನ್ನಪಟ್ಟಣದಲ್ಲಿ ತಯಾರಾದ ಗೊಂಬೆಗಳನ್ನು ಉಡುಗೊರೆಯಾಗಿ ನೀಡದ ಸಾಕಷ್ಟು ಉದಾಹರಣೆಗಳು ಇವೆ. ಇದೀಗ ಚನ್ನಪಟ್ಟಣ ಗೊಂಬೆಗಳ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ. ಚನ್ನಪಟ್ಟಣದ ಗೊಂಬೆಗಳು ಕೇವಲ ಅಂದ-ಚಂದಕ್ಕೆ ಮಾತ್ರ ಸೀಮಿತವಾಗಿಲ್ಲ. ಮಕ್ಕಳ ಮನ ಬದಲಾಯಿಸುವ ಗುಣ ಈ ಚನ್ನಪಟ್ಟಣಗಳ ಗೊಂಬೆಗಳಲ್ಲಿದೆ. ಇತ್ತೀಚೆಗೆ ಅಪಘಾನಿಸ್ತಾನಕ್ಕೆ ಕಳುಹಿಸಲಾಗಿದ್ದ ಚನ್ನಪಟ್ಟಣದ ಗೊಂಬೆಗಳಿಂದ ಅಪರಾಧ ಕೃತ್ಯದ‌ ಮಕ್ಕಳಲ್ಲಿ(ಬಾಲಾಪರಾಧಿಗಳು) ಮನಃಪರಿವರ್ತನೆಯಾಗಿದೆ. ಚನ್ನಪಟ್ಟಣ ಬೊಂಬೆಯೊಂದಿಗೆ ಕಾಲ ಕಳೆದ ಮಕ್ಕಳಲ್ಲಿ ವಿನೋದ ಭಾವನೆ ಕಂಡುಬಂದಿದೆಯಂತೆ. ಈ ಹಿನ್ನೆಲೆಯಲ್ಲಿ ಅಪಘಾನಿಸ್ತಾನದ ಕೌನ್ಸಿಲರ್ ಜನರಲ್ ಜಾಕೀಯಾ ವರ್ದಕ್ ಅವರು ಜಿಲ್ಲೆಯ ಚನ್ನಪಟ್ಟಣ ತಾಲೂಕಿನ‌ ಮುನಿಯಪ್ಪನ ದೊಡ್ಡಿಗೆ ಭೇಟಿ ನೀಡಿ ಗೊಂಬೆ, ಆಟಿಕೆಗಳನ್ನು ಹೇಗೆ ತಯಾರಿಸುತ್ತಾರೆ ಎಂದು ವೀಕ್ಷಣೆ ಮಾಡಿದ್ದಾರೆ.

ಇತ್ತೀಚೆಗೆ ಅಪಘಾನಿಸ್ತಾನದ ಕೌನ್ಸಲರ್ ಜನರಲ್ ಜಾಕೀಯಾ ವರ್ದಕ್​ ಚನ್ನಪಟ್ಟಣಕ್ಕೆ ಭೇಟಿ ನೀಡಿದ್ದರು.​ ಈ ವೇಳೆ ಚನ್ನಪಟ್ಟಣ ತಾಲೂಕಿನ‌ ಮುನಿಯಪ್ಪನ ದೊಡ್ಡಿಗೆ ಭೇಟಿ ನೀಡಿ, ಮೂರು ಲಕ್ಷ ರೂ. ಮೌಲ್ಯದ 500 ಬೊಂಬೆ ಒದಗಿಸಲು ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಡಿಸೆಂಬರ್​ 2023‌‌ ರಂದು 150‌ ಆಟಿಕೆಗಳನ್ನು ಯುನೈಟೆಡ್ ನೇಷನ್ಸ್ ಮುಖಾಂತರ ಅಪಘಾನಿಸ್ತಾ‌ನಕ್ಕೆ‌ ಕಳುಹಿಸಲಾಗಿತ್ತು.

ಇದನ್ನೂ ಓದಿ: ಚೇತರಿಕೆ ಹಾದಿಯಲ್ಲಿ ಚನ್ನಪಟ್ಟಣದ ಗೊಂಬೆ ವ್ಯಾಪಾರ: ಕಾರ್ಮಿಕರ ಕೊರತೆಯದ್ದೇ ಚಿಂತೆ

ಚನ್ನಪಟ್ಟಣ ಆಟಿಕೆಗಳ‌ ಜತೆ ರಿಮ್ಯಾಂಡ್ ಹೋಂನ ಮಕ್ಕಳು ಕಾಲ ಕಳೆದಿದ್ದರು. ಮಕ್ಕಳು ಈ ಆಟಿಕೆಗಳಲ್ಲಿ ವಿಶೇಷ ವ್ಯಸ್ತರಾಗಿದ್ದರು. ಹೀಗಾಗಿ‌ ಹೇಗೆ ತಯಾರು ಮಾಡುತ್ತಾರೆ ಅಂತ ನೋಡಲು ಜಾಕೀಯ ವರ್ದಕ್ ಬಂದಿದ್ದರು. ಗೊಂಬೆ ಮಾಡುವ ಸ್ಥಳಕ್ಕೆ ತೆರಳಿ‌ ಆಟಿಕೆ ನಿರ್ಮಾಣ‌ವನ್ನು ಬೆರಗುಗಣ್ಣಿನಿಂದ‌ ಚನ್ನಪಟ್ಟಣ ಬೊಂಬೆ ನಿರ್ಮಾಣ‌ವನ್ನು ನೋಡಿದ್ದರು.

ಇದನ್ನೂ ಓದಿ: ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ..ತನ್ನ ನೋವಿನ ಕಥೆ..

ಚನ್ನಪಟ್ಟಣ ಬೊಂಬೆಗಳು, ರಾಜ್ಯ, ದೇಶವಲ್ಲದೇ ವಿಶ್ವಮಟ್ಟದಲ್ಲೂ ಕೂಡ ಪ್ರಸಿದ್ಧಿ ಪಡೆದಿವೆ. ಮುದ್ದಾದ, ಪುಟಾಣಿ ಬೊಂಬೆಗಳು ಎಂಥವರನ್ನು ಕೂಡ ತನ್ನತ್ತ ಸೆಳೆಯುತ್ತದೆ. ಹೀಗಾಗಿ, ಚನ್ನಪಟ್ಟಣದ ಬಳಿಯಿರುವ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನೂರಾರು ಬೊಂಬೆ ಅಂಗಡಿಗಳನ್ನು ನೋಡಬಹುದು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:48 pm, Wed, 28 February 24