ಜ್ಞಾನವಾಪಿ ಮಸಿದಿ ತೀರ್ಪು: ವಾರಾಣಸಿ ಜಿಲ್ಲಾ ಕೋರ್ಟ್​ನ ನ್ಯಾಯಾಧೀಶರ ವಿರುದ್ಧ ಅವಹೇಳನಕಾರಿ ಪೋಸ್ಟ್​​, ವಕೀಲ ಅರೆಸ್ಟ್​​

| Updated By: ವಿವೇಕ ಬಿರಾದಾರ

Updated on: Feb 13, 2024 | 9:40 AM

ಉತ್ತರ ಪ್ರದೇಶದ ಜ್ಞಾನವಾಪಿ ಮಸೀದಿ ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಲು ವಾರಣಾಸಿ ಜಿಲ್ಲಾ ನ್ಯಾಯಾಲಯ ಕಳೆದ ತಿಂಗಳು ತೀರ್ಪು ನೀಡಿತ್ತು. ಈ ತೀರ್ಪನ್ನು ಎಸ್​ಡಿಪಿಐ ವಿರೋಧಿಸಿದೆ. ಇನ್ನು ಕೋರ್ಟ್​ ತೀರ್ಪನ್ನು ವಿರೋಧಿಸಿ ರಾಮನಗರದ ಎಸ್​ಡಿಪಿಐ ಕಾರ್ಯಕರ್ತ, ವಕೀಲ ಚಾಂದ್ ಪಾಷಾ ನ್ಯಾಯಾಧೀಶರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್​​ ಹಾಕಿದ್ದನು.

ಜ್ಞಾನವಾಪಿ ಮಸಿದಿ ತೀರ್ಪು: ವಾರಾಣಸಿ ಜಿಲ್ಲಾ ಕೋರ್ಟ್​ನ ನ್ಯಾಯಾಧೀಶರ ವಿರುದ್ಧ ಅವಹೇಳನಕಾರಿ ಪೋಸ್ಟ್​​, ವಕೀಲ ಅರೆಸ್ಟ್​​
ಐಜೂರು ಪೊಲೀಸ್​ ಠಾಣೆ
Follow us on

ರಾಮನಗರ, ಫೆಬ್ರವರಿ 13: ಉತ್ತರ ಪ್ರದೇಶದ (Uttar Pradesh) ಜ್ಞಾನವಾಪಿ ಮಸೀದಿ (Gyanvapi Masjid) ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಲು ತೀರ್ಪು ನೀಡಿದ ವಾರಾಣಸಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರ (Varnasi Diristict Court) ವಿರುದ್ಧ ಸಾಮಾಜಿ ಜಾಲತಾಣದಲ್ಲಿ (Social Media) ಅವಹೇಳನಕಾರಿಯಾಗಿ ಪೋಸ್ಟ್​ ಹಾಕಿದ್ದ ಆರೋಪಿಯನ್ನು ಪೊಲೀಸರು (Police) ಬಂಧಿಸಿದ್ದಾರೆ. ಎಸ್​ಡಿಪಿಐ (SDPI) ಕಾರ್ಯಕರ್ತ ಚಾಂದ್ ಪಾಷಾ ಬಂಧಿತ ಆರೋಪಿ.

ರಾಮನಗರ ಎಸ್​ಡಿಪಿಐ ಕಾರ್ಯಕರ್ತ, ವಕೀಲ ಚಂದ್ ಪಾಷ ತನ್ನ ಫೇಸ್​​ಬುಕ್ ಖಾತೆಯಲ್ಲಿ ವಾರಣಾಸಿ ಜಿಲ್ಲಾ ನ್ಯಾಯಾಧೀಶರ ವಿರುದ್ಧ “ನಿವೃತ್ತಿಗೂ ಒಂದು ದಿನ ಮುಂಚೆ ಆದೇಶ ನೀಡಿದ ಹರಾಮ್ ಕೋರ್. ಆರ್​ಎಸ್​ಎಸ್ ಬೂಟು ನೆಕ್ಕುವವ” ಎಂದು ಅವಾಚ್ಯ ಶಬ್ದ ಬಳಕೆ ಮಾಡಿದ್ದನು. ಇದನ್ನು ಕಂಡ ಜಿಲ್ಲಾ ಬಿಜೆಪಿ ಘಟನೆ ಪೊಲೀಸ್​ ಠಾಣೆಗೆ ಮತ್ತು ವಕೀಲರ ಅಸೋಸಿಯೇಷನ್​ಗೂ ದೂರು ನೀಡಿತ್ತು. ಆಗ ರಾಮನಗರ ವಕೀಲರು ನ್ಯಾಯಾಲಯದ ಕಲಾಪ ನಿಲ್ಲಿಸಿ ಪ್ರತಿಭಟನೆ‌ ಮಾಡಿದ್ದರು. ಕೂಡಲೇ ಚಾಂದ್ ಪಾಷ‌ ಬಂಧಿಸುವಂತೆ ದೂರು ನೀಡಿದ್ದರು.

ದೂರು ದಾಖಲಾಗುತ್ತಿದ್ದಂತೆ ಆರೋಪಿ, ವಕೀಲ ಚಂದ್ ಪಾಷ ಪೋಸ್ಟ್​ ಅಳಸಿದ್ದನು. ಇನ್ನು ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯ ಮನೆ ಹೊಕ್ಕು ಬಂಧಿಸಿದ್ದಾರೆ.

ಇದನ್ನೂ ಓದಿ: Gyanvapi mosque: ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಮುಚ್ಚಿದ ಎಲ್ಲಾ ನೆಲಮಾಳಿಗೆಗಳ ಎಎಸ್‌ಐ ಸಮೀಕ್ಷೆ; ಫೆ.15ರಂದು ವಿಚಾರಣೆ

ಎಸ್​ಡಿಪಿಐ ಕಾರ್ಯಕರ್ತರಿಂದ ಪ್ರತಿಭಟನೆ

ಉತ್ತರ ಪ್ರದೇಶದ ಜ್ಞಾನವಾಪಿ ಮಸೀದಿ ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಲು ವಾರಣಾಸಿ ಜಿಲ್ಲಾ ನ್ಯಾಯಾಲಯ ಕಳೆದ ತಿಂಗಳು ತೀರ್ಪು ನೀಡಿತ್ತು. ಈ ತೀರ್ಪನ್ನು ಎಸ್​ಡಿಪಿಐ ವಿರೋಧಿಸಿದೆ. ನ್ಯಾಯಾಧೀಶರು ನೀಡಿದ ತೀರ್ಪನ್ನು ಖಂಡಿಸಿ ಫೆಬ್ರವರಿ 09 ರಂದು ಮಂಗಳೂರಿನಲ್ಲಿ ಎಸ್​ಡಿಪಿಐ ಕಾರ್ಯಕರ್ತರು ‘ಜ್ಞಾನವಾಪಿ ನಮ್ಮದು, ನಮ್ಮದಾಗೆ ಉಳಿಯುವುದು’ ಎಂದು ಪ್ರತಿಭಟನೆ ನಡೆಸಿತ್ತು.

ಜ್ಞಾನವಾಪಿ ಮಸೀದಿಯನ್ನು ಷಡ್ಯಂತ್ರದ ಮೂಲಕ ಮುಸ್ಲಿಮರಿಂದ ಕಸಿಯುವ ಪ್ರಯತ್ನ ನಡೆಯುತ್ತಿದೆ. ಜ್ಞಾನವಾಪಿಯನ್ನು ನಾವೆಂದೂ ಮುಸ್ಲಿಂರಿಂದ ಕಸಿಯಲು ಬಿಟ್ಟು ಕೊಡುವುದಿಲ್ಲ ಎಂದು ಎಸ್‍ಡಿಪಿಐ ಕಾರ್ಯಕರ್ತರು ವಿಜಯಪುರದ ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದರು. ಹಾಗೆ ತೀರ್ಪು ವಿರೋಧಿಸಿ ಎಸ್‌ಡಿಪಿಐ ಕಾರ್ಯಕರ್ತರು ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:39 am, Tue, 13 February 24