AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿಯಿಂದ ಬೆಂಗಳೂರಿಗೆ ಯುವತಿ ಅಪಹರಣ ಪ್ರಕರಣ ವರ್ಗಾವಣೆ

ರಮೇಶ್​ ಜಾರಕಿಹೊಳಿ ಸಿಡಿ ಸುದ್ದಿಸ್ಫೋಟ ಪ್ರಕರಣದಲ್ಲಿ ಯುವತಿಯ ತಂದೆ ನೀಡಿದ್ದ ಅಪಹರಣದ ದೂರಿನ ಪ್ರಕರಣವನ್ನು ಬೆಳಗಾವಿಯ ಎಪಿಎಂಸಿ ಠಾಣೆ ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡು ಬೆಂಗಳೂರಿನ ಆರ್​.ಟಿ.ನಗರ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ.

ಬೆಳಗಾವಿಯಿಂದ ಬೆಂಗಳೂರಿಗೆ ಯುವತಿ ಅಪಹರಣ ಪ್ರಕರಣ ವರ್ಗಾವಣೆ
ಪ್ರಾತಿನಿಧಿಕ ಚಿತ್ರ
Ghanashyam D M | ಡಿ.ಎಂ.ಘನಶ್ಯಾಮ
| Updated By: guruganesh bhat|

Updated on: Mar 18, 2021 | 4:21 PM

Share

ಬೆಂಗಳೂರು: ರಮೇಶ್​ ಜಾರಕಿಹೊಳಿ ಸಿಡಿ ಸುದ್ದಿಸ್ಫೋಟ ಪ್ರಕರಣದಲ್ಲಿರುವ ಸಂತ್ರಸ್ತೆ ಎನ್ನಲಾದ ಯುವತಿಯ ತಂದೆ ನೀಡಿದ್ದ ಅಪಹರಣದ ದೂರಿನ ಪ್ರಕರಣವನ್ನು ಬೆಳಗಾವಿಯ ಎಪಿಎಂಸಿ ಠಾಣೆ ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡು ಬೆಂಗಳೂರಿನ ಆರ್​.ಟಿ.ನಗರ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ. ಪೊಲೀಸ್ ಮಹಾನಿರ್ದೇಶಕರ ನಿರ್ದೇಶನದ ಮೇರೆಗೆ ಈ ಕ್ರಮಕೈಗೊಳ್ಳಲಾಗಿದೆ. ಆರ್​.ಟಿ.ನಗರ ಪೊಲೀಸರು ಈ ಪ್ರಕರಣವನ್ನು ಎಸ್​ಐಟಿಗೆ ಹಸ್ತಾಂತರಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ಬೆಳಗಾವಿ ಎಪಿಎಂಸಿ ಠಾಣೆಯಿಂದ ಪ್ರಕರಣದ ಕಡತ ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಅವರ ಕಚೇರಿ ತಲುಪಿತು. ಕಡತವನ್ನು ಪರಿಶೀಲಿಸಿದ ನಂತರ ಆರ್​.ಟಿ.ನಗರ ಠಾಣೆಯ ಇನ್​ಸ್ಪೆಕ್ಟರ್ ಅಶ್ವತ್ಥ ಗೌಡ ಅವರಿಗೆ ಡಿಸಿಪಿ ಕಡತವನ್ನು ಹಸ್ತಾಂತರಿಸಲಿದ್ದಾರೆ.

ಸಂತ್ರಸ್ತೆ ಎನ್ನಲಾದ ಯುವತಿಯ ತಂದೆ ಮಾರ್ಚ್​ 16ರಂದು ಬೆಳಗಾವಿಯ ಎಪಿಎಂಸಿ ಠಾಣೆಗೆ ದೂರು ನೀಡಿದ್ದರು. ಐಪಿಸಿ 363, 368, 343, 346, 354, 506 ಸೆಕ್ಷನ್​ಗಳಡಿ ದೂರು ದಾಖಲಿಸಿಕೊಳ್ಳಲಾಗಿತ್ತು. ಬೆಂಗಳೂರಿನ ಹಾಸ್ಟೆಲ್​ನಲ್ಲಿದ್ದಾಗ ನನ್ನ ಮಗಳನ್ನು ಅಪಹರಿಸಿ, ಹೆದರಿಸಿ, ಕಿರುಕುಳ ಕೊಟ್ಟು ಅಶ್ಲೀಲ ಸಿಡಿ ಮಾಡಲಾಗಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.

ಮಾಜಿ ಪತ್ರಕರ್ತ ನರೇಶ್​ ಗೌಡ ಊರಿನಲ್ಲಿ ಪೊಲೀಸರ ಶೋಧ

ಶಾಸಕ ರಮೇಶ್​ ಜಾರಕಿಹೊಳಿ ಸಿಡಿ ಸುದ್ದಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪತ್ರಕರ್ತ ನರೇಶ್ ಗೌಡ ಪತ್ತೆಹಚ್ಚಲು ಎಸ್​ಐಟಿ ಅಧಿಕಾರಿಗಳು ಶಿರಾ ಹಾಗೂ ಭುವನಹಳ್ಳಿಯಲ್ಲಿ ಎಸ್​ಐಟಿಯಿಂದ ಶೋಧ ನಡೆಸುತ್ತಿದ್ದಾರೆ. ಸ್ಥಳೀಯರು ಹಾಗೂ ಸ್ನೇಹಿತರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. 3 ತಿಂಗಳ ವ್ಯವಹಾರ, ಹಣ ವಹಿವಾಟು ಬಗ್ಗೆ ಮಫ್ತಿಯಲ್ಲಿಯೇ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ:

ರಮೇಶ್​ ಜಾರಕಿಹೊಳಿ ‘ಸಿಡಿ’ ಮಾಸ್ಟರ್​ ಮೈಂಡ್​ ಮನೆ ಮೇಲೆ ಎಸ್​ಐಟಿ ಅಧಿಕಾರಿಗಳ ದಾಳಿ

ರಮೇಶ್​ ಜಾರಕಿಹೊಳಿ ‘ಸಿಡಿ’ ಮಾಸ್ಟರ್​ ಮೈಂಡ್​ ಮನೆ ಮೇಲೆ ಎಸ್​ಐಟಿ ಅಧಿಕಾರಿಗಳ ದಾಳಿ