ಡ್ರಗ್ಸ್ ಕೇಸ್: ಶಿವಕುಮಾರ್ ಚಿಪ್ಪಿ ಯಾವುದೇ ಕ್ಷಣ CCB ಯಿಂದ ಬಂಧನ
ಬೆಂಗಳೂರು: ಶಿವಕುಮಾರ್ ಚಿಪ್ಪಿ, ಪ್ರಶಾಂತ್ ರಾಜು, ಅಭಿಸ್ವಾಮಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದ್ದು, ಮೂವರಿಗೂ ಸಿಸಿಬಿಯಿಂದ ಬಂಧನದ ಭೀತಿ ಶುರುವಾಗಿದೆ. ಆದರೆ ಸದ್ಯಕ್ಕೆ ಶಿವಪ್ರಕಾಶ್ ಚಿಪ್ಪಿ ಪರಾರಿಯಾಗಿದ್ದಾರೆ. ಇಂದು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಜಾಮೀನು ಅರ್ಜಿ ಕುರಿತು ತೀರ್ಪು ಪ್ರಕಟವಾಗಿದೆ. ರಾಗಿಣಿ, ಸಂಜನಾ, ಪ್ರಶಾಂತ್ ರಂಕಾ, ಜಾಮೀನು ಅರ್ಜಿ ತಿರಸ್ಕಾರಗೊಂಡಿದ್ದು, ನಟಿ ಮಣಿಯರಿಗೆ ಮತ್ತೆ ಜೈಲೇ ಗತಿಯಾಗಿದೆ. ಜೊತೆಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದ ಎ1 ಶಿವಪ್ರಕಾಶ್ ಅಲಿಯಾಸ್ ಚಿಪ್ಪಿ, ಎ8 ಪ್ರಶಾಂತ್ ರಾಜು, […]

ಬೆಂಗಳೂರು: ಶಿವಕುಮಾರ್ ಚಿಪ್ಪಿ, ಪ್ರಶಾಂತ್ ರಾಜು, ಅಭಿಸ್ವಾಮಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದ್ದು, ಮೂವರಿಗೂ ಸಿಸಿಬಿಯಿಂದ ಬಂಧನದ ಭೀತಿ ಶುರುವಾಗಿದೆ. ಆದರೆ ಸದ್ಯಕ್ಕೆ ಶಿವಪ್ರಕಾಶ್ ಚಿಪ್ಪಿ ಪರಾರಿಯಾಗಿದ್ದಾರೆ.
ಇಂದು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಜಾಮೀನು ಅರ್ಜಿ ಕುರಿತು ತೀರ್ಪು ಪ್ರಕಟವಾಗಿದೆ. ರಾಗಿಣಿ, ಸಂಜನಾ, ಪ್ರಶಾಂತ್ ರಂಕಾ, ಜಾಮೀನು ಅರ್ಜಿ ತಿರಸ್ಕಾರಗೊಂಡಿದ್ದು, ನಟಿ ಮಣಿಯರಿಗೆ ಮತ್ತೆ ಜೈಲೇ ಗತಿಯಾಗಿದೆ. ಜೊತೆಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದ ಎ1 ಶಿವಪ್ರಕಾಶ್ ಅಲಿಯಾಸ್ ಚಿಪ್ಪಿ, ಎ8 ಪ್ರಶಾಂತ್ ರಾಜು, ಎ10 ಅಭಿಸ್ವಾಮಿಗೂ ಕೂಡ ಹಿನ್ನೆಡೆಯಾಗಿದೆ. ಹೈಕೋರ್ಟ್ ಮೂವರ ನಿರೀಕ್ಷಣಾ ಜಾಮೀನು ತಿರಸ್ಕರಿಸಿದೆ.
Published On - 2:58 pm, Tue, 3 November 20




