AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಜನಾ-ರಾಗಿಣಿಗೆ ಇಲ್ಲ ಜಾಮೀನು, ಮುಂದೆ ಸುಪ್ರೀಂಕೋರ್ಟ್​ನಲ್ಲೂ ಬೇಲ್ ಸಿಗದಿದ್ರೆ..?

ಬೆಂಗಳೂರು: ಕನ್ನಡ ಚಿತ್ರೋದ್ಯಮಕ್ಕೆ ಡ್ರಗ್ಸ್​ ನಂಟಿನ ಕೇಸ್​ನಲ್ಲಿ ಆರೋಪ ಹೊತ್ತ ಇಬ್ಬರು ನಟಿಮಣಿಯರು ಸೇರಿದಂತೆ ಇತರೆ ಕೆಲ ಪಾತ್ರಧಾರಿಗಳಿಗೆ ಇಂದೂ ಸಹ ಜಾಮೀನು ಸಿಕ್ಕಿಲ್ಲ. A2 ರಾಗಿಣಿ ದ್ವಿವೇದಿ, A14 ಸಂಜನಾ ಗಲ್ರಾನಿ ಮತ್ತು A4 ಪ್ರಶಾಂತ್ ರಂಕಾ ಅವರುಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಅ.24ರಂದು ವಿಚಾರಣೆ ನಡೆಸಿದ್ದ ರಾಜ್ಯ ಹೈಕೋರ್ಟ್ ಇಂದಿಗೆ ತೀರ್ಪು ಕಾಯ್ದಿರಿಸಿತ್ತು. ಅದರಂತೆ ಹೈಕೋರ್ಟ್ ಈಗ ರಾಗಿಣಿ, ಸಂಜನಾ, ಪ್ರಶಾಂತ್ ರಂಕಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಆರೋಪಿಗಳ ಪರ ವಕೀಲರು ವಿಡಿಯೋ ಕಾನ್ಫರೆನ್ಸ್​ […]

ಸಂಜನಾ-ರಾಗಿಣಿಗೆ ಇಲ್ಲ ಜಾಮೀನು, ಮುಂದೆ ಸುಪ್ರೀಂಕೋರ್ಟ್​ನಲ್ಲೂ ಬೇಲ್ ಸಿಗದಿದ್ರೆ..?
ಸಾಧು ಶ್ರೀನಾಥ್​
|

Updated on:Nov 03, 2020 | 3:08 PM

Share

ಬೆಂಗಳೂರು: ಕನ್ನಡ ಚಿತ್ರೋದ್ಯಮಕ್ಕೆ ಡ್ರಗ್ಸ್​ ನಂಟಿನ ಕೇಸ್​ನಲ್ಲಿ ಆರೋಪ ಹೊತ್ತ ಇಬ್ಬರು ನಟಿಮಣಿಯರು ಸೇರಿದಂತೆ ಇತರೆ ಕೆಲ ಪಾತ್ರಧಾರಿಗಳಿಗೆ ಇಂದೂ ಸಹ ಜಾಮೀನು ಸಿಕ್ಕಿಲ್ಲ.

A2 ರಾಗಿಣಿ ದ್ವಿವೇದಿ, A14 ಸಂಜನಾ ಗಲ್ರಾನಿ ಮತ್ತು A4 ಪ್ರಶಾಂತ್ ರಂಕಾ ಅವರುಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಅ.24ರಂದು ವಿಚಾರಣೆ ನಡೆಸಿದ್ದ ರಾಜ್ಯ ಹೈಕೋರ್ಟ್ ಇಂದಿಗೆ ತೀರ್ಪು ಕಾಯ್ದಿರಿಸಿತ್ತು. ಅದರಂತೆ ಹೈಕೋರ್ಟ್ ಈಗ ರಾಗಿಣಿ, ಸಂಜನಾ, ಪ್ರಶಾಂತ್ ರಂಕಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಆರೋಪಿಗಳ ಪರ ವಕೀಲರು ವಿಡಿಯೋ ಕಾನ್ಫರೆನ್ಸ್​ ಮೂಲಕ ನ್ಯಾಯಾಧೀಶರ ಎದುರು ಹಾಜರಾಗಿದ್ದರು.

ನ್ಯಾ. ಶ್ರೀನಿವಾಸ್ ಹರೀಶ್ ಕುಮಾರ್​ರವರ ಪೀಠ ನಟಿಯರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಇದರಿಂದ ಇಬ್ಬರೂ ನಟಿಯರಿಗೆ ಕನಿಷ್ಠ 15 ದಿನ ಜೈಲೇ ಗತಿ ಎಂಬಂತಾಗಿದೆ. ಇದೀಗ ಆರೋಪಿಗಳಿಗೆ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸುವುದೊಂದೇ ದಾರಿ. ಜಾಮೀನು ಸಿಗುವವರೆಗೂ ನಟಿಯರು ಜೈಲಿನಲ್ಲಿರಬೇಕಾಗಿದೆ.

ಇನ್ನು ಕೋರ್ಟ್​ ಆದೇಶ ಕೇಳುತ್ತಿದ್ದಂತೆ ಇಬ್ಬರೂ ನಟಿಯರು ಗಳಗಳನೆ ಅಳುತ್ತಾ ಕುಸಿದುಬಿದ್ದರು ಎಂದು ಸೆಂಟ್ರಲ್ ಜೈಲ್ ಮೂಲಗಳಿಂದ ತಿಳಿದುಬಂದಿದೆ. ಸುಪ್ರೀಂನಲ್ಲೂ ಬೇಲ್ ಸಿಗದಿದ್ರೆ 6 ತಿಂಗಳು ಜೈಲು ಸದ್ಯಕ್ಕೆ ರಾಗಿಣಿ ಮತ್ತು ಸಂಜನಾಗೆ NDPS ಕಾಯ್ದೆಯೇ ಸಂಕಷ್ಟ ತಂದೊಡ್ಡಿರುವುದು. ಅದರ ನೆಲಗಟ್ಟಿನಲ್ಲಿ ಮುಂದೆ ಸುಪ್ರೀಂಕೋರ್ಟ್ ನಲ್ಲಿ ಬೇಲ್ ಸಿಗದಿದ್ದರೆ ಶಾಕ್ ಕಾದಿದೆ. ಏಕೆಂದ್ರೆ ಸುಪ್ರೀಂ ಕೋರ್ಟ್​ ನಲ್ಲೂ ಬೇಲ್ ಸಿಗದಿದ್ರೆ 6 ತಿಂಗಳು ಜೈಲುವಾಸ ಖಂಡಿತವಾಗಲಿದೆ.

ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ತಿರಸ್ಕೃತಗೊಂಡರೆ ಸಿಸಿಬಿಯಿಂದ ಚಾರ್ಜ್ ಶೀಟ್ ಸಲ್ಲಿಕೆ ಬಳಿಕವೇ ಬೇಲ್ ಅರ್ಜಿಗೆ ಸಲ್ಲಿಸಬೇಕಾದೀತು. ಅಲ್ಲಿಯವರೆಗೂ ಅಂದ್ರೆ 6 ತಿಂಗಳು ಜೈಲೇ ಗತಿ. ಇನ್ನು ಅದೇ ವೇಳೆ ಸಿಸಿಬಿ ಪೊಲೀಸರಿಗೂ 6 ತಿಂಗಳು ಸಮಯ ಸಿಗಲಿದೆ.

Published On - 2:43 pm, Tue, 3 November 20

Follow Us
ಅನುಮತಿ ಇಲ್ಲದೆ ಹಾರ್ಮುಜ್ ಮೂಲಕ ಹೋದ ತೈಲ ಟ್ಯಾಂಕರ್​ಗೆ ಬೆಂಕಿ
ಅನುಮತಿ ಇಲ್ಲದೆ ಹಾರ್ಮುಜ್ ಮೂಲಕ ಹೋದ ತೈಲ ಟ್ಯಾಂಕರ್​ಗೆ ಬೆಂಕಿ
‘ಗಂಡ ಮಕ್ಳನ್ನ ಬಿಟ್ಟು ಇವನೇ ಬೇಕಂತ ಯಾಕೆ ಬಂದವ್ಳೇ?’
‘ಗಂಡ ಮಕ್ಳನ್ನ ಬಿಟ್ಟು ಇವನೇ ಬೇಕಂತ ಯಾಕೆ ಬಂದವ್ಳೇ?’
ಪೆಟ್ರೋಲ್ ಡೀಸೆಲ್ ದರ ಏರಿಕೆ: ನಯಾರಾ ಬಂಕ್​ನತ್ತ ಸುಳಿಯದ ವಾಹನ ಸವಾರರು
ಪೆಟ್ರೋಲ್ ಡೀಸೆಲ್ ದರ ಏರಿಕೆ: ನಯಾರಾ ಬಂಕ್​ನತ್ತ ಸುಳಿಯದ ವಾಹನ ಸವಾರರು
ಯಾರಿಗೂ ನೋವಾಗದಂತೆ ಸಿನಿಮಾ ಮಾಡಲಿ; ಬಾಸ್ ಚಿತ್ರದ ಬಗ್ಗೆ ಪ್ರಥಮ್ ರಿಯಾಕ್ಷನ್
ಯಾರಿಗೂ ನೋವಾಗದಂತೆ ಸಿನಿಮಾ ಮಾಡಲಿ; ಬಾಸ್ ಚಿತ್ರದ ಬಗ್ಗೆ ಪ್ರಥಮ್ ರಿಯಾಕ್ಷನ್
ಅಪಾರ್ಟ್​ಮೆಂಟ್ ನಿವಾಸಿಗಳ ಮೇಲೆ ಕಾರು ಹತ್ತಿಸಿದ ವ್ಯಕ್ತಿ, ಮಹಿಳೆ ಸಾವು
ಅಪಾರ್ಟ್​ಮೆಂಟ್ ನಿವಾಸಿಗಳ ಮೇಲೆ ಕಾರು ಹತ್ತಿಸಿದ ವ್ಯಕ್ತಿ, ಮಹಿಳೆ ಸಾವು
ಹಳೆಯ ಟಿವಿಯೊಳಗಿತ್ತು 8 ಅಡಿ ಉದ್ದದ ಬೃಹತ್ ಹಾವು! ವಿಡಿಯೋ ನೋಡಿ
ಹಳೆಯ ಟಿವಿಯೊಳಗಿತ್ತು 8 ಅಡಿ ಉದ್ದದ ಬೃಹತ್ ಹಾವು! ವಿಡಿಯೋ ನೋಡಿ
ಶ್ರೀರಾಮನವಮಿಯನ್ನು ಹೇಗೆ ಆಚರಿಸಬೇಕು? ಇಲ್ಲಿದೆ ಮಾಹಿತಿ
ಶ್ರೀರಾಮನವಮಿಯನ್ನು ಹೇಗೆ ಆಚರಿಸಬೇಕು? ಇಲ್ಲಿದೆ ಮಾಹಿತಿ
ಇಂದು ಈ ರಾಶಿಯವರು ತಮ್ಮ ಖರ್ಚುಗಳ ಬಗ್ಗೆ ಎಚ್ಚರ ವಹಿಸಿ!
ಇಂದು ಈ ರಾಶಿಯವರು ತಮ್ಮ ಖರ್ಚುಗಳ ಬಗ್ಗೆ ಎಚ್ಚರ ವಹಿಸಿ!
‘ಡೆವಿಲ್’ ಎದುರು ‘ಕರ್ನಾಟಕದ ಅಳಿಯ’ ತೆರೆ ಕಾಣಲಿಲ್ಲ: ಕಾರಣ ತಿಳಿಸಿದ ಪ್ರಥಮ್
‘ಡೆವಿಲ್’ ಎದುರು ‘ಕರ್ನಾಟಕದ ಅಳಿಯ’ ತೆರೆ ಕಾಣಲಿಲ್ಲ: ಕಾರಣ ತಿಳಿಸಿದ ಪ್ರಥಮ್
ದಾವಣಗೆರೆ: ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸುವಂತೆ ಶ್ರೀಶೈಲ ಜಗದ್ಗುರು ಕರೆ
ದಾವಣಗೆರೆ: ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸುವಂತೆ ಶ್ರೀಶೈಲ ಜಗದ್ಗುರು ಕರೆ