ತಾಂತ್ರಿಕ ದೋಷ: ಶಿವಮೊಗ್ಗ-ತಿರುಪತಿ ವಿಮಾನ ಹಾರಾಟ ರದ್ದು, ಕಾದುಕಾದು ಸುಸ್ತಾದ ಪ್ರಯಾಣಿಕರು

ತಾಂತ್ರಿಕ ಕಾರಣ ನೀಡಿ ಶಿವಮೊಗ್ಗ-ತಿರುಪತಿ ನಡುವಿನ ವಿಮಾನ ಹಾರಾಟ ರದ್ದು ಮಾಡಲಾಗಿದ್ದು, ಸುಮಾರು 3 ಗಂಟೆ ಪ್ರಯಾಣಿಕರು ಕಾದುಕಾದು ಸುಸ್ತಾಗಿದ್ದಾರೆ. ತಾಂತ್ರಿಕ ಕಾರಣ ನೀಡಿ ಸ್ಟಾರ್ ಏರ್​​ಲೈನ್ಸ್ ಸಂಸ್ಥೆ ಫ್ಲೈಟ್​ ಕ್ಯಾನ್ಸಲ್​ ಮಾಡಿದೆ. ಇತ್ತ ಫ್ಲೈಟ್​ ರದ್ದಾಗಿದ್ದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಂತ್ರಿಕ ದೋಷ: ಶಿವಮೊಗ್ಗ-ತಿರುಪತಿ ವಿಮಾನ ಹಾರಾಟ ರದ್ದು, ಕಾದುಕಾದು ಸುಸ್ತಾದ ಪ್ರಯಾಣಿಕರು
ಪ್ರಯಾಣಿಕರು
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Jan 03, 2024 | 4:17 PM

ಶಿವಮೊಗ್ಗ, ಜನವರಿ 03: ತಾಂತ್ರಿಕ ಕಾರಣ ನೀಡಿ ಶಿವಮೊಗ್ಗ-ತಿರುಪತಿ (Shivamogga-Tirupati flight) ನಡುವಿನ ವಿಮಾನ ಹಾರಾಟ ರದ್ದು ಮಾಡಲಾಗಿದ್ದು, ಸುಮಾರು 3 ಗಂಟೆ ಪ್ರಯಾಣಿಕರು ಕಾದುಕಾದು ಸುಸ್ತಾಗಿದ್ದಾರೆ. ತಾಂತ್ರಿಕ ಕಾರಣ ನೀಡಿ ಸ್ಟಾರ್ ಏರ್​​ಲೈನ್ಸ್ ಸಂಸ್ಥೆ ಫ್ಲೈಟ್​ ಕ್ಯಾನ್ಸಲ್​ ಮಾಡಿದೆ. ಇತ್ತ ಫ್ಲೈಟ್​ ರದ್ದಾಗಿದ್ದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪದೇಪದೆ ಶಿವಮೊಗ್ಗ-ತಿರುಪತಿ ವಿಮಾನ ರದ್ದಾಗುತ್ತಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯಾಣಿಕರು ಒತ್ತಾಯ ಮಾಡಿದ್ದಾರೆ.

ಪ್ರಯಾಣಿಕರು ತಿರುಪತಿಯಲ್ಲಿ ದರ್ಶನಕ್ಕೆ ಆನ್ ಲೈನ್ ಮೂಲಕ ಬುಕ್ ಮಾಡಿದ್ದರು. ಆದರೆ ತಿರುಪತಿ ಹೋಗಲು ಆಗದೆ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ತಾಂತ್ರಿಕ ಸಮಸ್ಯೆ ನೆಪ: ಶಿವಮೊಗ್ಗದಿಂದ ಗೋವಾಕ್ಕೆ ಹಾರದ ವಿಮಾನ, ಪ್ರಯಾಣಿಕರು ಪರದಾಟ

ಇತ್ತೀಚೆಗೆ ಹವಾಮಾನ ವೈಪರೀತ್ಯ ಹಿನ್ನೆಲೆ ಜಿಲ್ಲೆಯಿಂದ ಹೈದರಾಬಾದ್​ಗೆ ತೆರಳಬೇಕಿದ್ದ ಸ್ಟಾರ್ ಏರ್​ಲೈನ್ಸ್​ ವಿಮಾನ ಹಾರಾಟ ರದ್ದುಗೊಳಿಸಿತ್ತು. ಸಂಜೆ 4.30ಕ್ಕೆ ಶಿವಮೊಗ್ಗದಿಂದ ಹೈದರಾಬಾದ್​ಗೆ ಈ ವಿಮಾನ ತೆರಳಬೇಕಿತ್ತು.

ಶಿವಮೊಗ್ಗದಿಂದ ಹೈದರಾಬಾದ್​ಗೆ ಸ್ಟಾರ್ ಏರ್​ಲೈನ್ಸ್ ವಿಮಾನದಲ್ಲಿ ಸುಮಾರು 70 ಪ್ರಯಾಣಿಕರು ಪ್ರಯಾಣ ಕೈಗೊಳ್ಳಬೇಕಿತ್ತು. ಆದರೆ ಹವಾಮಾನ ವೈಪರೀತ್ಯದಿಂದಾಗಿ ವಿಮಾನ ಹಾರಾಟ ರದ್ದುಗೊಂಡ ಹಿನ್ನೆಲೆ ಸುಮಾರು 3 ಗಂಟೆ ವಿಮಾನ ನಿಲ್ದಾಣದಲ್ಲೇ ಪ್ರಯಾಣಿಕರು ಪರದಾಟ ನಡೆಸಿದ್ದರು. ವಿಮಾನ ಹಾರಾಟಕ್ಕಾಗಿ ಕಾದು ಸುಸ್ತಾಗಿ, ಸ್ಟಾರ್ ಏರ್​ಲೈನ್ಸ್ ಸಂಸ್ಥೆ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಶಿವಮೊಗ್ಗದಿಂದ ತಿರುಪತಿ, ಗೋವಾ, ಹೈದ್ರಾಬಾದ್‌ಗೆ ವಿಮಾನ ಸೇವೆ: ಮೊದಲ ಫ್ಲೈಟ್ ಬರಮಾಡಿಕೊಂಡ ರಾಘವೇಂದ್ರ

ಅದೇ ರೀತಿಯಾಗಿ ಶಿವಮೊಗ್ಗದಿಂದ ಗೋವಾಕ್ಕೆ ತೆರಳಬೇಕಿದ್ದ ವಿಮಾನವನ್ನು ಇತ್ತೀಚೆಗೆ ರದ್ದು ಮಾಡಲಾಗಿತ್ತು. ಹಾಗಾಗಿ 50ಕ್ಕೂ ಹೆಚ್ಚು ಪ್ರಯಾಣಿಕರು ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಪರದಾಡಿದ್ದರು.

ಶಿವಮೊಗ್ಗ ಏರ್​ಪೋರ್ಟ್​ನಲ್ಲಿ ಲ್ಯಾಂಡ್ ಆಗದ ವಿಮಾನ

ಇತ್ತೀಚೆಗಷ್ಟೇ ಬೆಂಗಳೂರಿನಿಂದ ಶಿವಮೊಗ್ಗ ನಿಲ್ದಾಣಕ್ಕೆ ಬಂದಿದ್ದ ವಿಮಾನವೊಂದು ಲ್ಯಾಂಡ್ ಆಗದೇ ಬೆಂಗಳೂರಿಗೆ ವಾಪಸ್ ಆಗಿತ್ತು. ಹವಾಮಾನ ವೈಪರೀತ್ಯದಿಂದಾಗಿ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲಾಗದೇ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೋಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.