AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವರಾತ್ರಿಯಂದೇ ಮುಸ್ಲಿಂ ವ್ಯಕ್ತಿಗೆ ಲಿಂಗದೀಕ್ಷೆ ನೀಡಿದ ಶ್ರೀಶೈಲ ಪೀಠದ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ವೀರಶೈವ ಲಿಂಗಾಯತ ವಿಧಿ ವಿಧಾನಗಳಂತೆ ಲಿಂಗ ಪೂಜೆ ಮಾಡಿಕೊಳ್ಳಬೇಕೆಂದು ಹಂಬಲವಿದ್ದ ಮೊಹಮ್ಮದ್ ಮಸ್ತಾನ್ ಗೆ ಇಂದು ಮಹಾಶಿವರಾತ್ರಿಯಂದು ಲಿಂಗದೀಕ್ಷೆ ಲಭಿಸಿದಂತಾಗಿದೆ. ಲಿಂಗದೀಕ್ಷೆ ಪಡೆದ ಬಳಿಕ ಮೊಹಮ್ಮದ್ ಮಸ್ತಾನ್ ಶ್ರೀಶೈಲ ಮಲ್ಲಿಕಾರ್ಜುನ ಹಾಗೂ ಭ್ರಮರಾಂಭಿಕಾ ದೇವರ ದರ್ಶನ ಮಾಡಿಕೊಂಡು ವಿಜಯವಾಡದತ್ತ ಪ್ರಯಾಣ ಬೆಳೆಸಿದ್ದಾನೆ.

ಶಿವರಾತ್ರಿಯಂದೇ ಮುಸ್ಲಿಂ ವ್ಯಕ್ತಿಗೆ  ಲಿಂಗದೀಕ್ಷೆ ನೀಡಿದ ಶ್ರೀಶೈಲ ಪೀಠದ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮೊಹಮ್ಮದ್ ಮಸ್ತಾನ್​ಗೆ ದೀಕ್ಷೆ ಕೊಡುತ್ತಿರುವ ದೃಶ್ಯ
preethi shettigar
|

Updated on:Mar 12, 2021 | 5:34 PM

Share

ವಿಜಯಪುರ: ಧರ್ಮದಲ್ಲಿ ಮುಸ್ಲಿಂ ವ್ಯಕ್ತಿಯಾಗಿದ್ದರೂ ಆ ವ್ಯಕ್ತಿಗೆ ವೀರಶೈವ ಲಿಂಗಾಯತ ಧರ್ಮದ ಮೇಲೆ ಸೆಳೆತ ಹೆಚ್ಚಾಗಿತ್ತು. ಲಿಂಗಧಾರಣೆ ಮಾಡಿಕೊಳ್ಳಬೇಕು, ಲಿಂಗ ಪೂಜೆ ಮಾಡಿಕೊಳ್ಳಬೇಕು ಎಂದು ಸದಾ ಕಾಲ ಹವಣಿಸುತ್ತಿದ್ದರು. ಆದರೆ ಕೆಲವು ವರ್ಷಗಳ ಕಾಲ ಇದಕ್ಕಾಗಿ ಪ್ರಯತ್ನ ಪಟ್ಟಿದ್ದರೂ ಆತನಿಗೆ ಲಿಂಗದೀಕ್ಷೆ ಪ್ರಾಪ್ತವಾಗಿರಲಿಲ್ಲ. ಇದಕ್ಕಾಗಿ ಆತ 12 ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಒಂದಾದ ಶ್ರೀಶೈಲ ಕ್ಷೇತ್ರಕ್ಕೆ ಆಗಮಿಸಿ ಜಗದ್ಗುರುಗಳಿಂದ ಲಿಂಗದೀಕ್ಷೆ ಪಡೆಯಬೇಕೆಂದು ಪ್ರಯತ್ನಿಸಿದ್ದರು. ಆದರೆ ಜಗದ್ಗುರುಗಳ ಭೇಟಿ ಸಾಧ್ಯವಾಗಿರಲಿಲ್ಲ. ಪಯತ್ನಕ್ಕೆ ಕೊನೆಯುಂಟೇ ಎಂಬ ಮಾತಿನಂತೆ ಸತತ ಪ್ರಯತ್ನ ಪಟ್ಟು ಗುರುವಾರ ಮಹಾಶಿವರಾತ್ರಿಯಂದು ಶ್ರೀಶೈಲ ಜಗದ್ಗುರುಗಳನ್ನು ಭೇಟಿ ಮಾಡಿದ್ದಾರೆ.

ನೆರೆಯ ಆಂಧ್ರಪ್ರದೇಶ ರಾಜ್ಯದ ವಿಜಯವಾಡ ನಗರದ ನಿವಾಸಿ ಮೊಹಮ್ಮದ್ ಮಸ್ತಾನ್ ಮಹಾಶಿವರಾತ್ರಿಯಂದೇ ಶ್ರೀಶೈಲ ಪೀಠದ ಜಗದ್ಗುರುಗಳಾದ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರನ್ನು ಭೇಟಿಯಾಗಿದ್ದಾರೆ. ಸ್ವಾಮಿಜಿ ಅವರಲ್ಲಿ ನನಗೆ ಲಿಂಗದೀಕ್ಷೆ ಮಾಡಬೇಕೆಂದು ಪ್ರಾರ್ಥನೆ ಮಾಡಿಕೊಂಡಿದ್ದು, ದೀಕ್ಷೆಯ ನಂತರ ಪಾಲಿಸಬೇಕಾದ ನಿಯಮಗಳನ್ನು ಅನುಸರಿಸಲು ಮೊಹಮ್ಮದ್ ಮಸ್ತಾನ್ ಮಾನಸಿಕವಾಗಿ ಸಿದ್ಧನಾಗಿರುವುದನ್ನು ಜಗದ್ಗುರುಗಳು ಖಾತರಿ ಮಾಡಿಕೊಂಡಿದ್ದಾರೆ.

ಮೊಹಮ್ಮದ್ ಮಸ್ತಾನ್ ಲಿಂಗದೀಕ್ಷೆಯ ಉದ್ದೇಶಗಳನ್ನು ಪರಿಶೀಲಿಸಿದ ಶ್ರೀಶೈಲ ಪೀಠದ ಜಗದ್ಗುರುಗಳಾದ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಮುಸ್ಲಿಂ ಸಮುದಾಯದ ವ್ಯಕ್ತಿ ಮೊಹಮ್ಮದ್ ಮಸ್ತಾನ್​ಗೆ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಲಿಂಗದೀಕ್ಷೆ ಮಾಡಿದ್ದಾರೆ. ಲಿಂಗದೀಕ್ಷೆ ಮಾಡಿದ ಬಳಿಕ ಮಂತ್ರೋಪದೇಶ ಮಾಡಿದ್ದಾರೆ. ಲಿಂಗವನ್ನು ಸದಾ ಧರಿಸುಬೇಕು, ಪ್ರತಿನಿತ್ಯ ತಪ್ಪದೇ ಲಿಂಗ ಪೂಜೆಯನ್ನು ನೆರವೇರಿಸಬೇಕು. ನಿತ್ಯ ಪೂಜೆ ಮಾಡುವಾಗ ಕನಿಷ್ಠ 108 ಬಾರಿ ಪಂಚಾಕ್ಷರಿ ಮಂತ್ರವನ್ನು ಜಪಿಸುವಂತೆ ತಿಳಿಸಿದ್ದಾರೆ. ಭವಿಷ್ಯದಲ್ಲಿ ಯಾವುದೇ ದುಶ್ಚಟಗಳನ್ನು ಮಾಡದಿರುವಂತೆ ಪ್ರತಿಜ್ಞಾವಿಧಿ ಭೋಧಿಸಿದ್ದಾರೆ ಶ್ರೀಶೈಲ ಜಗದ್ಗುರುಗಳು.

linga deekshe

ಮೊಹಮ್ಮದ್ ಮಸ್ತಾನ್ ಲಿಂಗದೀಕ್ಷೆ ಪಡೆದುಕೊಳ್ಳುತ್ತಿರುವ ದೃಶ್ಯ

ವಿಜಯವಾಡ ನಿವಾಸಿಯಾದರೂ ಮಹಾರಾಷ್ಟ್ರದ ಮುಂಬೈನಲ್ಲಿ ಹರ್ಬಲ್ ಉದ್ಯಮ ನಡೆಸುತ್ತಿದ್ದಾರೆ ಮೊಹಮ್ಮದ್ ಮಸ್ತಾನ್. ವೀರಶೈವ ಲಿಂಗಾಯತ ವಿಧಿ ವಿಧಾನಗಳಂತೆ ಲಿಂಗ ಪೂಜೆ ಮಾಡಿಕೊಳ್ಳಬೇಕೆಂದು ಹಂಬಲವಿದ್ದ ಮೊಹಮ್ಮದ್ ಮಸ್ತಾನ್​ಗೆ ಮಹಾಶಿವರಾತ್ರಿಯಂದು ಲಿಂಗದೀಕ್ಷೆ ಲಭಿಸಿದಂತಾಗಿದೆ. ಲಿಂಗದೀಕ್ಷೆ ಪಡೆದ ಬಳಿಕ ಮೊಹಮ್ಮದ್ ಮಸ್ತಾನ್ ಶ್ರೀಶೈಲ ಮಲ್ಲಿಕಾರ್ಜುನ ಹಾಗೂ ಭ್ರಮರಾಂಭಿಕಾ ದೇವರ ದರ್ಶನ ಮಾಡಿಕೊಂಡು ವಿಜಯವಾಡದತ್ತ ಪ್ರಯಾಣ ಬೆಳೆಸಿದ್ದಾರೆ.

linga deekshe

ಲಿಂಗದೀಕ್ಷೆ ಪಡೆಯುತ್ತಿರುವ ಚಿತ್ರಣ

ಈ ಬಾರಿಯ ಶಿವರಾತ್ರಿ ಆಚರಣೆಗಾಗಿ ನಾವು ಶ್ರೀಶೈಲ ಪೀಠದಲ್ಲಿಯೇ ಇದ್ದೆವು. ವಿಯವಾಡದ ಮೊಹಮ್ಮದ್ ಮಸ್ತಾನ್ ನಮ್ಮನ್ನು ಭೇಟಿ ಮಾಡಿ ವ್ಯಾಪಾರ ವಹಿವಾಟಿನ ನಷ್ಟದ ಕುರಿತು ಮಾತನಾಡಿದ. ನಂತರ ನಮ್ಮ ಲಿಂಗಧಾರಿ ಶಿಷ್ಯರನ್ನು ನೋಡಿ ನನಗೂ ಲಿಂಗಬೇಕೆಂದು ಬೇಡಿಕೆ ಇಟ್ಟ. ಲಿಂಗ ಪಡೆಯಲು ನಿಯಮಗಳಿವೆ ಎಂದು ಹೇಳಿದೇವು. ಎಲ್ಲಾ ನಿಯಮ ಪಾಲನೆ ಮಾಡುವೆ ಎಂದು ಮೊಹಮ್ಮದ್ ಹೇಳಿದ. ಮೊದಲಿನಿಂದಲೂ ಶಿವನ ಕುರಿತು ನನಗೆ ಶ್ರದ್ಧೆ ಭಕ್ತಿಯಿದೆ. ನನಗೆ ಲಿಂಗಬೇಕೆಂದು ವಿನಂತಿಸಿಕೊಂಡ. ಲಿಂಗಧಾರಣೆ ನಂತರ ಪಾಲನೆ ಮಾಡಬೇಕಾದ ನಿಮಯ ಪಾಲಿಸೋದಾಗಿ ಹೇಳಿದ ಕಾರಣ ಹಾಗೂ ಆತನ ಇಚ್ಛಾಶಕ್ತಿ ಮತ್ತು ಅಪೇಕ್ಷೆಯನ್ನು ಪರಿಗಣಿಸಿ ಲಿಂಗದೀಕ್ಷೆ ಮಾಡಲಾಗಿದೆ. ಆತ ಶಿವ ಸಂಸ್ಕೃತಿಗೆ ಆಕರ್ಷಿತನಾದ ಕಾರಣ ಶಿವರಾತ್ರಿಯಂದು ಲಿಂಗದೀಕ್ಷೆ ಮಾಡಲಾಗಿದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

linga deekshe

ಶಿವರಾತ್ರಿಯಂದೇ ಲಿಂಗದೀಕ್ಷೆ ಪಡೆದ ಮುಸ್ಲಿಂ ವ್ಯಕ್ತಿ

ಇದನ್ನೂ ಓದಿ: ಆಹ್ವಾನ ಪತ್ರಿಕೆಯಲ್ಲಿ ಸ್ವಾಮೀಜಿ ಹೆಸರಿಲ್ಲ: ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭುಗಿಲೆದ್ದ ಭಿನ್ನಮತ

Published On - 5:17 pm, Fri, 12 March 21

Follow Us
ಟಿವಿ9 ವಾರ್ಷಿಕ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಸ್ಫೂರ್ತಿದಾಯಕ ಭಾಷಣ
ಟಿವಿ9 ವಾರ್ಷಿಕ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಸ್ಫೂರ್ತಿದಾಯಕ ಭಾಷಣ
ಪ್ರಧಾನಿ ಮೋದಿಗೆ ಮೈ ಹೋಮ್ ಗ್ರೂಪ್ ಚೇರ್ಮನ್ ರಾಮೇಶ್ವರ ರಾವ್ ಸನ್ಮಾನ
ಪ್ರಧಾನಿ ಮೋದಿಗೆ ಮೈ ಹೋಮ್ ಗ್ರೂಪ್ ಚೇರ್ಮನ್ ರಾಮೇಶ್ವರ ರಾವ್ ಸನ್ಮಾನ
ಪ್ರಧಾನಿ ಮೋದಿ ನಾಯಕತ್ವದಿಂದ ಇಡೀ ಜಗತ್ತು ಭಾರತವನ್ನ ಗೌರವದಿಂದ ಕಾಣುತ್ತಿದೆ
ಪ್ರಧಾನಿ ಮೋದಿ ನಾಯಕತ್ವದಿಂದ ಇಡೀ ಜಗತ್ತು ಭಾರತವನ್ನ ಗೌರವದಿಂದ ಕಾಣುತ್ತಿದೆ
ಒಂದು ಕ್ಷಿಪಣಿ ಜಾಗತಿಕ ಮಾರುಕಟ್ಟೆಗಳನ್ನೇ ಅಸ್ತವ್ಯಸ್ತಗೊಳಿಸುತ್ತಿದೆ
ಒಂದು ಕ್ಷಿಪಣಿ ಜಾಗತಿಕ ಮಾರುಕಟ್ಟೆಗಳನ್ನೇ ಅಸ್ತವ್ಯಸ್ತಗೊಳಿಸುತ್ತಿದೆ
ಅಥಣಿಯಿಂದ ಶಿವಣ್ಣನ ನೋಡಲು ಬೆಂಗಳೂರಿಗೆ ಬಂದ ವಿಶೇಷ ಚೇತನ ಅಭಿಮಾನಿ
ಅಥಣಿಯಿಂದ ಶಿವಣ್ಣನ ನೋಡಲು ಬೆಂಗಳೂರಿಗೆ ಬಂದ ವಿಶೇಷ ಚೇತನ ಅಭಿಮಾನಿ
ಕುವೈತ್​​ನಲ್ಲಿ ಇರಾನ್​ನಿಂದ ಮತ್ತೊಂದು ಯುದ್ಧವಿಮಾನ ಪತನ; ವಿಡಿಯೋ ವೈರಲ್
ಕುವೈತ್​​ನಲ್ಲಿ ಇರಾನ್​ನಿಂದ ಮತ್ತೊಂದು ಯುದ್ಧವಿಮಾನ ಪತನ; ವಿಡಿಯೋ ವೈರಲ್
PM Modi Speech in WITT Live: ಟಿವಿ9​​ ಶೃಂಗಸಭೆ; ಪ್ರಧಾನಿ ಮೋದಿ ಭಾಷಣ
PM Modi Speech in WITT Live: ಟಿವಿ9​​ ಶೃಂಗಸಭೆ; ಪ್ರಧಾನಿ ಮೋದಿ ಭಾಷಣ
ಮುತ್ತಪ್ಪ ರೈ ಪುತ್ರ ರಿಕ್ಕಿ ರೈನಿಂದಲೇ ಕಾರ್ ಡ್ರೈವಿಂಗ್:
ಮುತ್ತಪ್ಪ ರೈ ಪುತ್ರ ರಿಕ್ಕಿ ರೈನಿಂದಲೇ ಕಾರ್ ಡ್ರೈವಿಂಗ್:
ಚಿನ್ನ-ಬೆಳ್ಳಿ ದರ ಏರಿಳಿತ, ಹೂಡಿಕೆ ಬಗ್ಗೆ ಆರ್ಥಿಕ ತಜ್ಞ ಮಹತ್ವದ ಮಾಹಿತಿ
ಚಿನ್ನ-ಬೆಳ್ಳಿ ದರ ಏರಿಳಿತ, ಹೂಡಿಕೆ ಬಗ್ಗೆ ಆರ್ಥಿಕ ತಜ್ಞ ಮಹತ್ವದ ಮಾಹಿತಿ
ಸಾಲ ಮಾಡಿ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಮಹತ್ವದ ಸಲಹೆ
ಸಾಲ ಮಾಡಿ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಮಹತ್ವದ ಸಲಹೆ