ಶಿಕ್ಷಕಿ ಮೇಲೆ ಹಲ್ಲೆ ನಡೆಸಿ.. ಮಾಂಗಲ್ಯ ಸರ ಕದ್ದೊಯ್ದ ಕಿರಾತಕರು, ಯಾವೂರಲ್ಲಿ?

ಶಿಕ್ಷಕಿಯೊಬ್ಬರ ಸರ ಕಳ್ಳತನವಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಪಟ್ಟಣದ ಕೋಟೆ ಬೀದಿಯಲ್ಲಿ ನಡೆದಿದೆ. ಶಿಕ್ಷಕಿ ಶಾಂತಕುಮಾರಿ (56) ಮೇಲೆ ಸರಗಳ್ಳರು ಹಲ್ಲೆ ಸಹ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಶಿಕ್ಷಕಿ ಮೇಲೆ ಹಲ್ಲೆ ನಡೆಸಿ.. ಮಾಂಗಲ್ಯ ಸರ ಕದ್ದೊಯ್ದ ಕಿರಾತಕರು, ಯಾವೂರಲ್ಲಿ?
ನೆಲಮಂಗಲ ಪಟ್ಟಣ ಪೊಲೀಸ್ ಠಾಣೆ

Updated on: Dec 15, 2020 | 12:32 PM

ನೆಲಮಂಗಲ: ಶಿಕ್ಷಕಿಯೊಬ್ಬರ ಸರ ಕಳ್ಳತನವಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಪಟ್ಟಣದ ಕೋಟೆ ಬೀದಿಯಲ್ಲಿ ನಡೆದಿದೆ. ಶಿಕ್ಷಕಿ ಶಾಂತಕುಮಾರಿ (56) ಮೇಲೆ ಸರಗಳ್ಳರು ಹಲ್ಲೆ ಸಹ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಶಿಕ್ಷಕಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂಬದಿಯಿಂದ ಬೈಕ್‌ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳಿಂದ ಕೃತ್ಯ ಎಸಗಲಾಗಿದೆ. ಘಟನೆಯಲ್ಲಿ ಶಾಂತಕುಮಾರಿ ತಮ್ಮ 25ಗ್ರಾಂ ಮಾಂಗಲ್ಯ ಸರವನ್ನು ಕಳೆದುಕೊಂಡಿದ್ದಾರೆ. ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಮಕ್ಕಳನ್ನ ಸಾಯಿಸಿ ದಂಪತಿ ಆತ್ಮಹತ್ಯೆ.. ಕೈ ಸಾಲಕ್ಕೆ ಬಲಿಯಾದವು ಅಮಾಯಕ ಐದು ಜೀವಗಳು

Published On - 12:22 pm, Tue, 15 December 20