AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರವಾಸಿಗರಿಗೆ ಮುದ ನೀಡುತ್ತಿದೆ ವಲಸೆ ಹಕ್ಕಿಗಳು: ಜೋಯಿಡಾ ಕಾನನದಲ್ಲಿ ಬೀಡುಬಿಟ್ಟಿವೆ ಪಕ್ಷಿ ಸಂಕುಲ

ಕಾನನ ನಡುವೆ ವಾಸಕ್ಕೆ ಬರುವ ಪ್ರವಾಸಿಗಗರಿಗೆ ಚಳಿಗಾಲ ಮುಗಿಯುತ್ತಿರುವ ಈ ಹೊತ್ತಿಗೆ ರಾಶಿರಾಶಿ ಪಕ್ಷಿ ಸಂಕುಲವೇ ಬಂದು ಜೋಯ್ಡಾ ಕಾಡು ಸೇರುತ್ತಿದ್ದು, ಸಾಕಷ್ಟು ಜಾತಿಯ ಪಕ್ಷಿಸಂಕುಲ ಈಗ ಕಾಣಿಸಿಗುತ್ತಿವೆ.

ಪ್ರವಾಸಿಗರಿಗೆ ಮುದ ನೀಡುತ್ತಿದೆ ವಲಸೆ ಹಕ್ಕಿಗಳು: ಜೋಯಿಡಾ ಕಾನನದಲ್ಲಿ ಬೀಡುಬಿಟ್ಟಿವೆ ಪಕ್ಷಿ ಸಂಕುಲ
ಜೋಯಿಡಾದಲ್ಲಿ ಕಂಡು ಬಂದ ಪಕ್ಷಿ
preethi shettigar
| Edited By: |

Updated on: Feb 28, 2021 | 7:43 PM

Share

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ಅಂದರೆ ಸಾಕು ಅದು ಪ್ರವಾಸಿಗರ ಪಾಲಿನ ಸ್ವರ್ಗ ಎಂದೇ ಪ್ರಸಿದ್ಧಿ ಪಡೆದ ಜಾಗ. ಇಲ್ಲಿನ ಕಾನನದ ರೆಸಾರ್ಟ್​ಗಳ ಮಧ್ಯೆ ಕಾಡಿನ ಹಕ್ಕಿಗಳಂತೆ ಕಾಲ ಕಳಿಯಬೇಕು ಜೊತೆಗೆ ನಗರ ಜೀವನದ ಜಂಜಾಟದಿಂದ ದೂರವಿರಬೇಕು ಎಂದು ಅದಷ್ಟೋ ಜನ ಇಲ್ಲಿಗೆ ಬರುತ್ತಾರೆ. ಹೀಗೆ ಬರುವ ಪ್ರವಾಸಿಗರಿಗೀಗ ಕಾಡಿನ ಹಕ್ಕಿಗಳು ಮುದ ನೀಡುತ್ತಿದ್ದು, ಪ್ರವಾಸಿಗರನ್ನು ಮತ್ತಷ್ಟು ಖುಷಿಪಡಿಸುತ್ತಿದೆ.

ಉತ್ತರಕನ್ನಡ ಜಿಲ್ಲೆಯ ಜೋಯಿಡಾ ಅರಣ್ಯ ವ್ಯಾಪ್ತಿಯ ಸ್ವಚ್ಛಂದ ಪರಿಸರದಲ್ಲಿ ಬಗೆ ಬಗೆಯ ಹಕ್ಕಿಗಳ ಕಲರವಿದ್ದು, ಅಳಿಲು ಪ್ರಭೇದದ ಪ್ರಾಣಿ ಮತ್ತು ಕಾಡಿನ ಹಕ್ಕಿಗಳನ್ನ ಇಲ್ಲಿಗೆ ಬರುವ ಜನರು ಕುತೂಹಲದಿಂದ ನೋಡುತ್ತಿದ್ದಾರೆ. ಕೊರೊನಾ ಬಳಿಕ ಜೋಯಿಡಾಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮುಗಿಬೀಳುತ್ತಿದ್ದು, ಇಲ್ಲಿನ ಹಕ್ಕಿಗಳ ಫೋಟೋಗ್ರಫಿ ಮಾಡುತ್ತಿದ್ದಾರೆ.

ಐಟಿ ಮಂದಿಯ ವರ್ಕ್ ಫ್ರಂ ಹೋಮ್ ಮುಂದುವರೆದಿರುವುದರಿಂದ ಇಲ್ಲಿನ ರೆಸಾರ್ಟ್ ಮತ್ತು ಹೋಮ್ ಸ್ಟೇಗಳನ್ನೇ ತಿಂಗಳಾನುಗಟ್ಟಲೆ ಬಾಡಿಗೆ ಪಡೆದು ವಾಸವಾಗಿದ್ದಾರೆ. ಚಳಿಗಾಲ ಮುಗಿಯುತ್ತಿರುವ ಈ ಹೊತ್ತಿಗೆ ರಾಶಿರಾಶಿ ಪಕ್ಷಿ ಸಂಕುಲವೇ ಜೋಯಿಡಾ ಕಾಡು ಸೇರುತ್ತಿವೆ. ಹಲವು ಜಾತಿಯ ಪಕ್ಷಿಸಂಕುಲಗಳು ಈಗ ಕಾಣಿಸಿಗುತ್ತಿವೆ.

ಹೊರರಾಜ್ಯ, ದೇಶದಿಂದ ನೂರಾರು ತಳಿಯ ಪಕ್ಷಿ ಸಂಕುಲ ಈ ಸಂದರ್ಭದಲ್ಲಿ ಪ್ರತೀ ವರ್ಷ ಆಹಾರ ಅರಸಿ ಬರುತ್ತಿದ್ದು, ಈ ಸಂದರ್ಭದಲ್ಲಿ ಇಲ್ಲಿಗೆ ಬರುವ ಪ್ರವಾಸಿಗರ ಕಣ್ಮನ ಸೆಳೆಯುತ್ತವೆ. ಅಲ್ಲದೇ ಸ್ಥಳೀಯವಾಗಿಯೂ ಕೂಡ ಫೋಟೋಗ್ರಫಿ ಮತ್ತು ಹಕ್ಕಿಗಳ ಬಗ್ಗೆ ಅಧ್ಯಯನ ಮಾಡುವವರಿಗೂ ಈ ವಲಸೆ ಹಕ್ಕಿಗಳಿಂದ ಅನುಕೂಲವಾಗಲಿದೆ. ಹೀಗೆ ವಲಸೆ ಬರುವ ಹಕ್ಕಿಗಳು ಕೆಲ ಸಮಯ ಮಾತ್ರ ಇಲ್ಲಿ ಇರಲಿದ್ದು, ನಂತರ ಅವುಗಳ ಮೂಲ ಸ್ಥಾನ ತಲುಪುತ್ತವೆ ಎಂದು ಸ್ಥಳೀಯರಾದ ರವಿ ಹೇಳಿದ್ದಾರೆ.

birds in Joida

ಪ್ರವಾಸಿಗರನ್ನು ಸೆಳೆಯುತ್ತಿರುವ ಪಕ್ಷಿಗಳು

birds in Joida

ಆಹಾರವನ್ನು ಅರಸಿ ಜೋಯ್ಡಾಗೆ ಬಂದ ಪಕ್ಷಿ

birds in Joida

ಬಾತುಕೋಳಿಗಳು ನೀರಿನಲ್ಲಿರುವ ದೃಶ್ಯ

birds in Joida

ಪ್ರವಾಸಿಗರು ಖುಷಿಯಿಂದ ಕಾಲ ಕಳೆಯುತ್ತಿರುವ ದೃಶ್ಯ

birds in Joida

ವಿಶೇಷ ತಳಿಯ ಅಳಿಲು

birds in Joida

ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ನವಿಲಿನ ಸೌಂದರ್ಯ

ಇದನ್ನೂ ಓದಿ:ಕಾಫಿನಾಡಲ್ಲಿ ಪಕ್ಷಿ ಪ್ರಿಯರನ್ನ ಸೂಜಿಗಲ್ಲಿನಂತೆ ಸೆಳೆಯುತ್ತಿದೆ ಬೆಳ್ಳಕ್ಕಿಗಳ ವೈಯ್ಯಾರ..!

Follow Us
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್