ಅಮಿತ್ ಶಾ ತುಮಕೂರಿಗೆ ಭೇಟಿ ಹಿನ್ನೆಲೆ, ಮತ್ತೆ ಮುನ್ನೆಲೆಗೆ ಬಂದ ಡಾ. ಶಿವಕುಮಾರ ಶ್ರೀಗಳಿಗೆ ಭಾರತ ರತ್ನ ನೀಡುವ ವಿಚಾರ

| Updated By: ಆಯೇಷಾ ಬಾನು

Updated on: Mar 28, 2022 | 3:32 PM

ಏಪ್ರಿಲ್ 1 ರಂದು ಅಮಿತ್ ಶಾ ತುಮಕೂರಿಗೆ ಬರ್ತಿದ್ದಾರೆ. ಶ್ರೀಗಳ ಗದ್ದುಗೆ ದರ್ಶನ ಪಡೆದು‌ ಬಳಿಕ‌ ಸಾರ್ವಜನಿಕ ಸಭೆಯಲ್ಲಿ‌ ಭಾಗಿಯಾಗ್ತಾರೆ. ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡೋ ವಿಚಾರವನ್ನು ಗೃಹ ಸಚಿವರು ಬಂದಾಗ ಅವರೊಟ್ಟಿಗೆ ಮಾತನಾಡ್ತೇನೆ. ಅವರೇನು ತೀರ್ಮಾನ ತೆಗೆದುಕೊಳ್ತಾರೋ ನೋಡೋಣ ಎಂದು ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ಅಮಿತ್ ಶಾ ತುಮಕೂರಿಗೆ ಭೇಟಿ ಹಿನ್ನೆಲೆ, ಮತ್ತೆ ಮುನ್ನೆಲೆಗೆ ಬಂದ ಡಾ. ಶಿವಕುಮಾರ ಶ್ರೀಗಳಿಗೆ ಭಾರತ ರತ್ನ ನೀಡುವ ವಿಚಾರ
ಶಿವಕುಮಾರ ಶ್ರೀಗಳು
Follow us on

ತುಮಕೂರು: ತ್ರಿವಿಧ ದಾಸೋಹದ ಮೂಲಕ ನಾಡಿನ ಜನರ ಮನಸ್ಸಲ್ಲಿ ಉಳಿದ ನಡೆದಾಡುವ ದೇವರು, ತುಮಕೂರಿನ ಸಿದ್ದಗಂಗಾ ಮಠದ(Siddaganga Math) ಶತಾಯುಷಿ ಡಾ. ಶಿವಕುಮಾರ ಶ್ರೀಗಳಿಗೆ(Dr Shivakumara Swamiji) ಭಾರತ ರತ್ನ ನೀಡಬೇಕೆಂಬ ಕೂಗು ಕೇಳಿ ಬಂದಿತ್ತು. ಸದ್ಯ ಗೃಹ ಸಚಿವ ಅಮಿತ್ ಶಾ(Amit Shah) ತುಮಕೂರಿಗೆ ಬರುತ್ತಾರೆಂಬ ಸುದ್ದಿ ಹೊರ ಬೀಳುತ್ತಿದ್ದಂತೆ ಮತ್ತೆ ಈ ಚರ್ಚೆ ಮುನ್ನೆಲೆಗೆ ಬಂದಿದೆ. ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ(BS Yediyurappa) ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದಾರೆ.

ಏಪ್ರಿಲ್ 1 ರಂದು ಅಮಿತ್ ಶಾ ತುಮಕೂರಿಗೆ ಬರ್ತಿದ್ದಾರೆ. ಶ್ರೀಗಳ ಗದ್ದುಗೆ ದರ್ಶನ ಪಡೆದು‌ ಬಳಿಕ‌ ಸಾರ್ವಜನಿಕ ಸಭೆಯಲ್ಲಿ‌ ಭಾಗಿಯಾಗ್ತಾರೆ. ಎರಡ್ಮೂರು ಲಕ್ಷ ಜನರು ಸೇರೋ ಅಪೇಕ್ಷೆ ಇದೆ. ಅದಕ್ಕೆ ಪೂರ್ವ ಸಿದ್ದತೆ ನಡೆಯುತ್ತಿದೆ. ದೊಡ್ಡ ಪ್ರಮಾಣದಲ್ಲಿ ಜನ ಸೇರಿಸೋ ಪ್ರಯತ್ನವನ್ನ ನಮ್ಮೆಲ್ಲಾ ಶಾಸಕರು, ಸಚಿವರು ಮಾಡ್ತಿದ್ದಾರೆ. ಗೃಹ ಸಚಿವರಾಗಿ ಬಂದು ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡೋದು ಬಹಳ ಪ್ರಮುಖ. ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡೋ ವಿಚಾರವನ್ನು ಗೃಹ ಸಚಿವರು ಬಂದಾಗ ಅವರೊಟ್ಟಿಗೆ ಮಾತನಾಡ್ತೇನೆ. ಅವರೇನು ತೀರ್ಮಾನ ತೆಗೆದುಕೊಳ್ತಾರೋ ನೋಡೋಣ ಎಂದು ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ಏಪ್ರಿಲ್ 1ರಂದು ತುಮಕೂರಿಗೆ ಅಮಿತ್ ಶಾ ಭೇಟಿ
ಏಪ್ರಿಲ್ 1ರಂದು ಡಾ.ಶಿವಕುಮಾರಶ್ರೀಗಳ ಜನ್ಮ ದಿನಾಚರಣೆ ಹಿನ್ನೆಲೆ ಉದ್ಘಾಟನೆಗೆ ಕೇಂದ್ರ ಸಚಿವ ಅಮಿತ್ ಶಾ ಆಗಮಿಸುತ್ತಿದ್ದಾರೆ. ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ವೈ ಬರುತ್ತಿದ್ದಾರೆ. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಭಗವಂತ್ ಖೂಬಾ, ಸಚಿವರಾದ ವಿ.ಸೋಮಣ್ಣ, ಬಿ.ಸಿ.ನಾಗೇಶ್ ಆಗಮಿಸುತ್ತಿದ್ದಾರೆ. ಏ.1ರ ಸಂಜೆ ಹಂಸಲೇಖ, ವಿಜಯ ಪ್ರಕಾಶ್ರಿಂದ ಕಾರ್ಯಕ್ರಮ ನೆರವೇರಲಿದೆ. ಬಸವ ಭಾರತ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. 100 ಜನ ಗಾಯಕರು, 150 ಜನ ಕಲಾವಿದರಿಂದ ಕಾರ್ಯಕ್ರಮದಲ್ಲಿ ಭಾಗಯಾಗಲಿದ್ದು ಪೂಜ್ಯರನ್ನು ಕುರಿತು ರಚನೆ ಮಾಡಿರುವ ಗೀತೆಗಳನ್ನು ಹಾಡುತ್ತಾರೆ ಎಂದು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಸಿದ್ದಲಿಂಗ ಸ್ವಾಮೀಜಿ ಮಾಹಿತಿ ನೀಡಿದ್ದಾರೆ.

ಇನ್ನು ಡಾ.ಶಿವಕುಮಾರಶ್ರೀಗಳಿಗೆ ಭಾರತ ರತ್ನ ನೀಡಿ ಎಂದು ಕೇಳಬಾರದು. ಅದಾಗಿಯೇ ಬಂದ್ರೆ ಅಮೃತಕ್ಕೆ ಸಮ ಕೇಳಿ ಪಡೆದ್ರೆ ವಿಷಕ್ಕೆ ಸಮಾನ ಎಂದು ಸಿದ್ದಗಂಗಾ ಮಠದಲ್ಲಿ ಸಿದ್ದಲಿಂಗ ಸ್ವಾಮೀಜಿ ತಿಳಿಸಿದ್ದಾರೆ. ಡಾ.ಶಿವಕುಮಾರಶ್ರೀಗಳು ಭಾರತ ರತ್ನವನ್ನೂ ಮೀರಿರುವಂತವರು. ಭಾರತ ರತ್ನ ಪ್ರಶಸ್ತಿ ನಿರೀಕ್ಷೆ ಮಾಡಬಾರದು, ಮಾಡಿಯೂ ಇಲ್ಲ ಎಂದರು.

ಮಾರ್ಚ್ 31ರಂದು ತುಮಕೂರಿಗೆ ರಾಹುಲ್ ಗಾಂಧಿ ಆಗಮನ
ಇನ್ನು ಮತ್ತೊಂದೆಡೆ ಮಾರ್ಚ್ 31ರಂದು ಬೆಂಗಳೂರಿಗೆ ರಾಹುಲ್ ಗಾಂಧಿ ಆಗಮಿಸಲಿದ್ದಾರೆ. ಬಳಿಕ ರಸ್ತೆ ಮೂಲಕ ತುಮಕೂರಿಗೆ ತೆರಳುತ್ತಾರೆ. ತುಮಕೂರಿನ ಸಿದ್ದಗಂಗಾ ಮಠದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಏ.1ರ ಬದಲಾಗಿ ಮಾ.31 ರಂದೇ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ. ಏ.1 ರಂದು ತುಮಕೂರಿಗೆ ಅಮಿತ್ ಶಾ ಆಗಮನ ಹಿನ್ನೆಲೆ ಹಿಂದಿನ ದಿನವೇ ಆಗಮಿಸುವಂತೆ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ಹೀಗಾಗಿ ಒಂದು ದಿನ ಮೊದಲೇ ತುಮಕೂರಿಗೆ ಭೇಟಿ ನೀಡಿ ಅದೇ ದಿನ ರಾಹುಲ್ ಗಾಂಧಿ ವಾಪಸ್ ಆಗಲಿದ್ದಾರೆ.

ಇದನ್ನೂ ಓದಿ: ತುಮಕೂರು: ಸಿದ್ದಗಂಗಾ ಮಠದಲ್ಲಿ ಶಿವಕುಮಾರ ಶ್ರೀಗಳ ಸ್ಮರಣಾರ್ಥದ ದಾಸೋಹ ಕಾರ್ಯಕ್ರಮ ರದ್ದು

Siddaganga Mutt: ನಾಳೆ ಶಿವಕುಮಾರ ಸ್ವಾಮೀಜಿ 3ನೇ ವರ್ಷದ ಪುಣ್ಯಸ್ಮರಣೆ: ಸರಳ ಆಚರಣೆಗೆ ಸಿದ್ದಗಂಗೆ ಮಠ ನಿರ್ಧಾರ

Published On - 3:31 pm, Mon, 28 March 22