AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂರು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ, ಆದರೆ ಈಗ ಪತ್ನಿಗೆ ಚಿತ್ರಹಿಂಸೆ ನೀಡ್ತಿದ್ದಾನಂತೆ

Assaulting Wife: 3 ವರ್ಷ ಹಿಂದೆ ಪ್ರೀತಿಸಿ ಮದುವೆಯಾಗಿದ್ದವ ಈಗ ನಿತ್ಯ ಕಿರುಕುಳ ನೀಡುತ್ತಿದ್ದಾನೆಂದು ಪತ್ನಿ ಸುಮಿತ್ರಾ ಆರೋಪಿಸಿದ್ದಾರೆ. ಮದ್ಯಪಾನ ಮಾಡಿ ಸಿಗರೇಟ್ ನಿಂದ ಕೈಗೆ ಮೈಗೆ ಸುಡುವುದು, ಕಚ್ಚುವುದು... ತನ್ನ ಪತಿಯ ಕಾಯಕವಾಗಿದೆ ಎಂದು ತುಮಕೂರಿನ ಪಂಡಿನತಹಳ್ಳಿ‌ ನಿವಾಸಿ ಸುಮಿತ್ರಾ ಎನ್ನುವರು ಪತಿ ಗೋವಿಂದರಾಜು ವಿರುದ್ಧ ಗಂಭೀರ ಆರೋಪ‌ ಮಾಡಿದ್ದಾರೆ.

ಮೂರು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ, ಆದರೆ ಈಗ ಪತ್ನಿಗೆ ಚಿತ್ರಹಿಂಸೆ ನೀಡ್ತಿದ್ದಾನಂತೆ
ಪ್ರೀತಿಸಿ ಮದುವೆಯಾಗಿದ್ದ, ಈಗ ಪತ್ನಿಗೆ ಚಿತ್ರಹಿಂಸೆ ನೀಡ್ತಿದ್ದಾನಂತೆ
ಮಹೇಶ್ ಇ, ಭೂಮನಹಳ್ಳಿ
| Updated By: ಸಾಧು ಶ್ರೀನಾಥ್​|

Updated on: Oct 27, 2023 | 10:22 AM

Share

ತುಮಕೂರು, ಅಕ್ಟೋಬರ್​ 27: ಆತ ವೃತ್ತಿಯಲ್ಲಿ ಚಾಲಕ, ಪ್ರೀತಿಸಿ ‌ಮದುವೆಯೂ (love marriage) ಆಗಿದ್ದ, ಆದ್ರೆ ಪ್ರೀತಿ ಮಾಡಿ ಮದುವೆಯಾದ ಪತ್ನಿಯನ್ನೇ (wife) ಅನುಮಾನಿಸಿ ನಿತ್ಯ ಕಾಟ ಕೊಡುತ್ತಿದ್ದಾನಂತೆ. ಮದ್ಯಪಾನ ಮಾಡಿ ಬಂದು ‌ಸಿಕ್ಕ ಸಿಕ್ಕ ಕಡೆ ಹೊಡೆಯುವುದು, ಸಿಗರೇಟ್ ನಿಂದ ಮೈಯೆಲ್ಲಾ ಸುಟ್ಟು ಚಿತ್ರ ಹಿಂಸೆ (torture) ‌‌ನೀಡುವುದು ಈತನ ಕಾಯಕವಾಗಿದೆ.

ಹೌದು.. ತುಮಕೂರಿನ ಪಂಡಿನತಹಳ್ಳಿ‌ ನಿವಾಸಿಯಾಗಿರುವ ಸುಮಿತ್ರಾ ಎನ್ನುವರು ತನ್ನ ಪತಿ ಗೋವಿಂದರಾಜು ವಿರುದ್ಧ ಗಂಭೀರ ಆರೋಪ‌ ಮಾಡಿದ್ದಾರೆ. ಪ್ರೀತಿಸಿ ಮೂರು ವರ್ಷಗಳ ಹಿಂದೆ ಮದುವೆಯಾಗಿ ದಿನನಿತ್ಯ ಕಿರುಕುಳ ನೀಡುತ್ತಿದ್ದಾನೆಂದು ಪತ್ನಿ ಸುಮಿತ್ರಾ ಆರೋಪಿಸಿದ್ದಾರೆ.

ಮದ್ಯಪಾನ ಮಾಡಿ ಸಿಗರೇಟ್ ನಿಂದ ಕೈಗೆ ಮೈಗೆ ಸುಡುವುದು, ಕಚ್ಚುವುದು ಜೊತೆಗೆ ಕಟ್ಟಿಗೆಯಿಂದ ಹಲ್ಲೆ ಮಾಡುವುದು… ತನ್ನ ಪತಿಯ ಕಾಯಕವಾಗಿದೆ. ತನ್ನ ಪತಿಯ ಕಾಟಕ್ಕೆ ಬೇಸತ್ತು ಪತ್ನಿ ಸುಮಿತ್ರಾ ಹೆಬ್ಬೂರು ಹಾಗೂ ಮಹಿಳಾ ಪೊಲೀಸ್ ಠಾಣೆ ಗೆ ಮೊರೆ ಹೋದರೆ, ಪೊಲೀಸರು ಮಾತ್ರ ದೂರು ದಾಖಲಿಸಿಕೊಳ್ಳದೇ ರಾಜಿಗೆ ಪ್ರಯತ್ನ ಮಾಡುತ್ತಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ.

ತನ್ನ ಪತಿ ಕಿರುಕುಳ ನೀಡಿರುವ ಬಗ್ಗೆ ಗಾಯಗಳು ತೋರಿಸಿದರೂ ಕೂಡ ಅವನ ಜೊತೆ ಹೋಗಿ ಬಾಳಬೇಕೆಂದು ರಾಜಿಗೆ ಯತ್ನ ಮಾಡಿದ್ದಾರೆಂದು ಟಿವಿ9 ಮುಂದೆ ಸುಮಿತ್ರಾ ಹೆಬ್ಬೂರು ಅಳಲು ತೋಡಿಕೊಂಡಿದ್ದಾರೆ. ಇದೇ ವೇಳೆ ಮೂರು ವರ್ಷವಾದರೂ ಮಕ್ಕಳು ಆಗಿಲ್ಲ ಅಂತಾ ಮನ ಬಂದಂತೆ ನಿಂದಿಸಿ ಹಲ್ಲೆ ಮಾಡಿದ್ದಾನೆ ಎಂದು ಬಾಧಿತ ಮಹಿಳೆ ಹಾಗೂ ಅವರ ಸಂಬಂಧಿಕರು ಗಂಭೀರವಾಗಿ ಆರೋಪಿಸಿದ್ದಾರೆ.

Also read: ಪ್ರೇಮ ವಿವಾಹವಾಗಿದ್ದ ವೈದ್ಯೆ ಆತ್ಮಹತ್ಯೆ: ಮಗಳ ಸಾವಿಗೆ ವೈದ್ಯ ಗಂಡನೇ ಕಾರಣ ಅಂತ ಪೋಷಕರ ಆರೋಪ, ನಡೆದಿದ್ದೇನು?

ಸದ್ಯ ತುಮಕೂರು ಮಹಿಳಾ ಪೊಲೀಸರು ಕೂಡ ನಿರ್ಲಕ್ಷ್ಯ ಮಾಡಿದ್ದು ಇದು ಎಲ್ಲಿಗೆ ಮುಟ್ಟುತ್ತೋ ಕಾದು ನೋಡಬೇಕಿದೆ. ಪೊಲೀಸರು ಈಗಲಾದ್ರೂ ದೂರು ದಾಖಲಿಸಿಕೊಂಡು ಮಹಿಳೆಗೆ ನ್ಯಾಯ ಒದಗಿಸಬೇಕು ಎಂಬುದು ಪ್ರಜ್ಞಾವಂತರ ಅಹವಾಲು ಆಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ