AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಚಿವ ಮಾಧುಸ್ವಾಮಿ ವಿರುದ್ಧ ಸುದ್ದಿಗೋಷ್ಠಿಯಲ್ಲಿ ಪಿಸುಪಿಸು ಮಾತು! ಸಂಸದ ಜಿಎಸ್ ಬಸವರಾಜ್, ಸಚಿವ ಭೈರತಿ ಬಸವರಾಜ್ ಮಾತಿಗೆ ಮಾಧುಸ್ವಾಮಿ ರಿಯಾಕ್ಷನ್

ಇಂದು ಸಚಿವ ಬೈರತಿ ಬಸವರಾಜ್ ಭೇಟಿ ನೀಡಿದ್ದರು. ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ವತಿಯಿಂದ ಹಲವಾರು ಉದ್ಘಾಟನೆ ಸಮಾರಂಭ ಇತ್ತು. ಇದಕ್ಕೂ ಮುನ್ನ ಸಚಿವ ಭೈರತಿ ಬಸವರಾಜ್ ಸುದ್ದಿಗೋಷ್ಠಿನಡೆಸಿದರು.

ಸಚಿವ ಮಾಧುಸ್ವಾಮಿ ವಿರುದ್ಧ ಸುದ್ದಿಗೋಷ್ಠಿಯಲ್ಲಿ ಪಿಸುಪಿಸು ಮಾತು! ಸಂಸದ ಜಿಎಸ್ ಬಸವರಾಜ್, ಸಚಿವ ಭೈರತಿ ಬಸವರಾಜ್ ಮಾತಿಗೆ ಮಾಧುಸ್ವಾಮಿ ರಿಯಾಕ್ಷನ್
ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಮತ್ತು ಸಂಸದ ಜಿಎಸ್ ಬಸವರಾಜ್
TV9 Web
| Edited By: |

Updated on:Jan 06, 2022 | 12:59 PM

Share

ತುಮಕೂರು: ಸುದ್ದಿಗೋಷ್ಠಿಗೂ ಮುನ್ನ ಸಂಸದ ಜಿಎಸ್ ಬಸವರಾಜ್ ಮತ್ತು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ಸಚಿವ ಮಾಧುಸ್ವಾಮಿ ವಿರುದ್ಧ ಗುಸುಗುಸು ಮಾತನಾಡಿದ್ದಾರೆ. ಹೆಸರು ಹೇಳದೆ ಮಾಧುಸ್ವಾಮಿ ವಿರುದ್ಧ ಪರೋಕ್ಷವಾಗಿ ಬಸವರಾಜ್ ವಾಗ್ದಾಳಿ ನಡೆಸಿದ್ದಾರೆ. ನಮ್ಮ ಜಿಲ್ಲೆಯನ್ನು ಹಾಳು ಮಾಡಿಬಿಟ್ಟಿದ್ದಾನೆಂದು ಸಂಸದ ಕಿಡಿಕಾರಿದ್ದಾರೆ. ಮಾತು ಎತ್ತಿದರೆ ಹೊಡಿ ಬಡಿ ಕಡಿ ಅಂತಾ ಹೇಳುತ್ತಾನೆ. ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಬಿಜೆಪಿಗೆ ಒಂದು ಸೀಟ್ ಬರಲ್ಲ. ಅವನ್ಯಾರೋ ಎಕ್ಸಿಕ್ಯೂಟಿವ್ ಇಂಜಿನಿಯರ್​ಗೆ ಹೇಳುತ್ತಾನೆ. ಮೊನ್ನೆ ಸಾವಿರ ಕೋಟಿ ರೂಪಾಯಿ ಅನುದಾನ ತಂದಿದ್ದಾನೆ. ನಮಗೆ ಯಾರಿಗೂ ಕಾರ್ಯಕ್ರಮಕ್ಕೆ ಆಹ್ವಾನ ನೀಡುವುದಿಲ್ಲ ಅಂತ ಗುಸುಗುಸು ಮಾತನಾಡಿಕೊಂಡಿದ್ದಾರೆ. ಈ ಎಲ್ಲ ಮಾತುಗಳು ಸುದ್ದಿಗೋಷ್ಠಿ ವೇಳೆ ರೆಕಾರ್ಡ್ ಆಗಿದೆ.

ಇಂದು (ಜ.6) ಸಚಿವ ಬೈರತಿ ಬಸವರಾಜ್ ಜಿಲ್ಲೆಗೆ ಭೇಟಿ ನೀಡಿದ್ದರು. ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ವತಿಯಿಂದ ಹಲವಾರು ಉದ್ಘಾಟನೆ ಸಮಾರಂಭ ಇತ್ತು. ಇದಕ್ಕೂ ಮುನ್ನ ಸಚಿವ ಭೈರತಿ ಬಸವರಾಜ್ ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಸಂಸದ ಜಿಎಸ್ ಬಸವರಾಜ್ ಕೂಡ ಭಾಗಿಯಾಗಿದ್ದರು. ಸುದ್ದಿಗೋಷ್ಠಿ ಆರಂಭಕ್ಕೂ ಮುನ್ನ ಜಿಎಸ್ ಬಸವರಾಜ್ ಹಾಗೂ ಭೈರತಿ ಬಸವರಾಜ್ ಗುಸು ಗುಸು ಮಾತನಾಡಿಕೊಂಡಿದ್ದಾರೆ. ಹೆಸರು ಹೇಳದೇ ಸಂಸದ ಬಸವರಾಜ್, ಭೈರತಿ ಬಸವರಾಜ್ ಜೊತೆ ಮಾಧುಸ್ವಾಮಿ ವಿರುದ್ಧ ಮಾತನಾಡಿದ್ದಾರೆ.

ಕೆಟ್ಟ ಮಾತುಗಳಿಂದ ಮಾತನಾಡಿ ಸಾಕಷ್ಟು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ದಕ್ಷಿಣ ಕೋರಿಯಾದ ಕಿಂಗ್ ಪಿನ್ ಕಿಮ್ ಜಾಂಗ್ ಉನ್ನಗೆ ಮಂತ್ರಿಯನ್ನ ಹೋಲಿಕೆ ಮಾಡಿದ್ದಾರೆ. ಇದಕ್ಕೆ ಭೈರತಿ ಬಸವರಾಜ್ ಹು ಅಂತೇಳಿ ಸುಮ್ಮನೆ ಇರಿ ಅಮೇಲೆ ಮಾತನಾಡೋಣ ಅಂತ ಅಂದಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಸದ ಜಿಎಸ್ ಬಸವರಾಜ್, ಸಚಿವ ಬಸವರಾಜ್ ಜತೆ ಅನುದಾನದ ಬಗ್ಗೆ ಮಾತನಾಡಿದೆ. ರಸ್ತೆ, ಅಂಡರ್ಪಾಸ್, ಯುಜಿಡಿಗಳಿಗೆ ಅನುದಾನ ಕೊಡಿಸಿದ್ದೆ. ನಮ್ಮನ್ನ ಸಭೆಗಳಿಗೆ ಕರೆಯಬೇಕು. ಆದರೆ ಮಾಧುಸ್ವಾಮಿ ನಮ್ಮನ್ನ ಕರೆಯಲ್ಲ, ಅದೇ ತಲೆನೋವು. ಇನ್ಯಾರನ್ನ ಬೈಯಲಿ, ನಾನ್ಯಾಕೆ ಬೈಯಲಿ. ನಾನು ಮಾಧುಸ್ವಾಮಿಯವರ ವಿಚಾರವನ್ನೇ ಮಾತನಾಡಿಲ್ಲ. ಅಧಿಕಾರಿಗಳೂ ನಮ್ಮ ಮಾತು ಕೇಳಲ್ಲ ಅಂತ ತಿಳಿಸಿದ್ದಾರೆ.

ಮಾಧುಸ್ವಾಮಿ ತಿರುಗೇಟು ತುಮಕೂರಿನಲ್ಲಿ ಸಚಿವ, ಸಂಸದರ ಪಿಸುಮಾತು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಮಾಧುಸ್ವಾಮಿ, ಅವರ ಹೇಳಿಕೆಗೆ ಸಂತೋಷ ಆಯ್ತು, ನನ್ನ ತೆಗೆದುಹಾಕ್ಲಿಬಿಡಿ. ಅವರೇ ಇರಲಿ ಎಂದು ಸಂಸದ ಬಸವರಾಜ್​ಗೆ ಟಾಂಗ್​​ ಕೊಟ್ಟಿದ್ದಾರೆ. ಈ ವೇಳೆ ಸಚಿವ, ಸಂಸದರ ಪಿಸುಮಾತಿಗೆ ಮಾಧುಸ್ವಾಮಿ ಗರಂ ಆಗಿದ್ದಾರೆ.

ಇದನ್ನೂ ಓದಿ

Brain Fog: ಮೆದುಳಿಗೆ ಮಂಕು ಕವಿದರೆ ಯಾವೆಲ್ಲಾ ಸಮಸ್ಯೆಗಳಾಗುತ್ತವೆ ಗೊತ್ತಾ? ಅದಕ್ಕೆ ಕಾರಣಗಳೇನು?

ಕೊವಿಡ್ 19 ನಕಲಿ ಲಸಿಕೆ ಪಡೆದು ಅಸ್ವಸ್ಥರಾಗಿದ್ದ ಟಿಎಂಸಿ ಸಂಸದೆ ಮಿಮಿ ಚಕ್ರವರ್ತಿಗೆ ಕೊರೊನಾ ಸೋಂಕು; ಎಲ್ಲೂ ಹೋಗದಿದ್ದರೂ ಬಂತು ಎಂದ ನಟಿ

Published On - 12:50 pm, Thu, 6 January 22

Follow Us
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ